91ನೇ ಆಸ್ಕರ್ ಆವಾರ್ಡ್ ಪ್ರಕಟ: ‘ಗ್ರೀನ್ ಬುಕ್’ ಶ್ರೇಷ್ಠ ಚಿತ್ರ
Team Udayavani, Feb 25, 2019, 5:27 AM IST
ಕ್ಯಾಲಿಫೋರ್ನಿಯ: ಜಾಗತಿಕ ಚಲನಚಿತ್ರ ರಂಗದ ಶ್ರೇಷ್ಠ ‘ಆಸ್ಕರ್’ ಪ್ರಶಸ್ತಿ ಪ್ರಕಟವಾಗಿದ್ದು, ಪೀಟರ್ ಫೆರೈಲಿ ನಿರ್ದೇಶನದ ‘ಗ್ರೀನ್ ಬುಕ್’ ಚಿತ್ರ ಅತ್ಯುನ್ನತ ಪ್ರಶಸ್ತಿ ಪಡೆಯಿತು. ಕ್ಯಾಲಿಫೋರ್ನಿಯದ ಡೊಲ್ಟಿ ಥಿಯೇಟರ್ ನಲ್ಲಿ ನಡೆದ 91ನೇ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬೊಹಿಮಿಯನ್ ರಾಪ್ಸೋಡಿ ಚಿತ್ರದ ನಟನೆಗಾಗಿ ‘ರಾಮಿ ಮಲೆಕ್’ ಉತ್ತಮ ನಟ ಪ್ರಶಸ್ತಿ ಪಡೆದರೆ, ದಿ ಫೆವರೇಟ್ ಚಿತ್ರದ ನಟನೆಗಾಗಿ ‘ಒಲಿವಿಯಾ ಕೋಲ್ಮನ್’ ಅತ್ಯುತ್ತಮ ನಟಿ ಪುರಸ್ಕಾರ ಪಡೆದರು.
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ‘ರೋಮಾ’ ಚಿತ್ರದ ಡೈರೆಕ್ಟರ್ ಅಲ್ಫಾನ್ಸೋ ಕ್ವಾರೋನ್ ಪಾಲಾದರೆ, ಆನಿಮೇಟೆಡ್ ಚಿತ್ರ ಪ್ರಶಸ್ತಿ ‘ಸ್ಪೈಡರ್ ಮ್ಯಾನ್: ಇನ್ ಟು ದಿ ಸ್ಪೈಡರ್ ವರ್ಸ್’ ಚಿತ್ರದ ಪಾಲಾಯಿತು.
ವಿದೇಶಿ ಭಾಷೆಯ ಚಿತ್ರ ಪ್ರಶಸ್ತಿಯನ್ನು ಸ್ಪ್ಯಾನಿಷ್ ಭಾಷೆಯ ‘ರೋಮಾ’ ಪಡೆದರೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ‘ರೆಜಿನಾ ಕಿಂಗ್’ ಪಡೆದರು. ರೆಜಿನಾ ಅವರಿಗೆ ಇಫ್ ಬೀಲ್ ಸ್ಟ್ರೀಟ್ ಕುಡ್ ಟಾಕ್’ ಚಿತ್ರದ ನಟನೆಗಾಗಿ ಈ ಅತ್ಯುನ್ನತ ಗೌರವ ಒಲಿದು ಬಂತು. ಅತ್ಯುತ್ತಮ ಪೋಷಕ ನಟ ಗೌರವ ‘ಮೆಹರ್ಶಾಲಾ ಅಲಿ’ ಅವರಿಗೆ ಗ್ರೀನ್ ಬುಕ್ ಚಿತ್ರಕ್ಕಾಗಿ ಲಭಿಸಿತು.
ಒಟ್ಟಾರೆ ‘ಬ್ರಯಾನ್ ಸಿಂಗರ್’ ನಿರ್ದೇಶನದ ‘ಬೊಹಿಮಿಯನ್ ರಾಪ್ಸೋಡಿ’ ಚಿತ್ರ ನಾಲ್ಕು ಆಸ್ಕರ್ ಪಡೆದರೆ, ‘ರಯಾನ್ ಕಾಗ್ಲರ್’ ನಿರ್ದೇಶನದ ‘ಬ್ಲಾಕ್ ಪ್ಯಾಂಥರ್’ ಚಿತ್ರ ಮೂರು ಆಸ್ಕರ್ ಪ್ರಶಸ್ತಿ ಪಡೆಯಿತು.
ಪ್ರಶಸ್ತಿ ಪಟ್ಟಿ
ಡಾಕ್ಯುಮೆಂಟರಿ: ಪಿರಿಯಡ್- ಎಂಡ್ ಆಫ್ ಸೆಂಟೆನ್ಸ್
ಮೂಲ ಹಾಡು: ಶ್ಯಾಲೋ ( ಎ ಸ್ಟಾರ್ ಈಸ್ ಬಾರ್ನ್)
ಚಿತ್ರಕಥೆ: ಗ್ರೀನ್ ಬುಕ್
ಪ್ರೊಡಕ್ಷನ್ ಡಿಸೈನ್: ಬ್ಲಾಕ್ ಪ್ಯಾಂಥರ್
ಛಾಯಾಗ್ರಹಣ: ರೋಮಾ
ವಸ್ತ್ರ ವಿನ್ಯಾಸ: ಬ್ಲಾಕ್ ಪ್ಯಾಂಥರ್
ಸಂಗೀತ: ಬ್ಲಾಕ್ ಪ್ಯಾಂಥರ್
ಸೌಂಡ್ ಎಡಿಟಿಂಗ್: ಬೊಹಿಮಿಯನ್ ರಾಪ್ಸೋಡಿ
ಸೌಂಡ್ ಮಿಕ್ಸಿಂಗ್: ಬೊಹಿಮಿಯನ್ ರಾಪ್ಸೋಡಿ
ಆನಿಮೇಟೆಡ್ ಕಿರು ಚಿತ್ರ: ಬಾವೊ
ಲೈವ್ ಆಕ್ಷನ್ ಕಿರು ಚಿತ್ರ: ಸ್ಕಿನ್
ವಿಶುವಲ್ ಎಫೆಕ್ಟ್: ಫಸ್ಟ್ ಮ್ಯಾನ್
ಸಂಕಲನ: ಬೊಹಿಮಿಯನ್ ರಾಪ್ಸೋಡಿ
ಮೇಕಪ್ ಮತ್ತು ಕೇಶವಿನ್ಯಾಸ: ವೈಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು