ತೆರೆ ಮೇಲೆ ಬರುತ್ತಿದೆ ಮಿಂಚಿ ಮರೆಯಾದ ರಾನು ಮಂಡಲ್ ಜೀವನ ಚರಿತ್ರೆ:ನಟಿ ಇಶಿಕಾ ಹೇಳಿದ್ದೇನು?
Team Udayavani, Sep 5, 2021, 1:52 PM IST
ಯಾರ ಜೀವನ ಹೇಗೆ ಅಂತ ಯಾರಿಂದಲೂ ಊಹಿಸಿಕೊಳ್ಳಲು ಸಾಧ್ಯ ಇಲ್ಲ. ಇಂದು ಸಾಮಾನ್ಯ ವ್ಯಕ್ತಿಯಾಗಿರುವವರು ನಾಳೆ ಅಸಮಾನ್ಯ ವ್ಯಕ್ತಿಯಾಗಿ ಹೊರಹೊಮ್ಮಬಹುದು. ಅದರಲ್ಲೂ ಸಾಮಾಜೀಕ ಜಾಲತಾಣಗಳ ಸೆಳೆಯಲ್ಲಿ ಸಿಕ್ಕ ಮೇಲಂತೂ ರಾತ್ರೋ ರಾತ್ರಿ ಸಾಮಾನ್ಯರೂ ಸೆಲೆಬ್ರಿಟಿ ಆಗಿ ಬಿಡುತ್ತಾರೆ. ಹಾಗೇಯೇ ಅಷ್ಟೇ ವೇಗವಾಗಿ ಮಿಂಚಿ ಮರೆಯಾಗಿ ಬಿಡುತ್ತಾರೆ. ಅಂತವರ ಸಾಲಿನ ವ್ಯಕ್ತಿಗಳಲ್ಲಿ ರಾನು ಮಂಡಲ್ ಕೂಡಾ ಒಬ್ಬರಾಗಿದ್ದು ಇದೀಗ ಅವರ ಜೀವನ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ.
2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ರಾನು ಮಂಡಲ್ ʼತೆರಿ ಮೇರಿ ಕಹಾನಿʼ ಹಾಡಿನ ಮೂಲಕ ಖ್ಯಾತಿ ಗಳಿಸಿದ್ದು ಇದೀಗ ಮತ್ತೆ ರೈಲ್ವೆ ಸ್ಟೇಷನ್ ನಲ್ಲಿ ಹಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ರಾನು ಮಂಡಲ್ ಹಾಡು ಸಂಚಲನ ಸೃಷ್ಟಿಮಾಡುತ್ತಿದ್ದಂತೆ ಖ್ಯಾತ ಗಾಯಕ ಹಿಮೇಶ್ ರೇಷಮಿಯಾ, ರಾನು ಅವರಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದರು. ಅಷ್ಟೆ ಅಲ್ಲದೆ ಸಿಂಗಿಂಗ್ ರಿಯಾಲಿಟಿ ಶೋನಲ್ಲೂ ಅವಕಾಶ ನೀಡಿದರು. ಕೆಲವು ದಿನಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದ ರಾನು ಮಂಡಲ್ ಅಷ್ಟೆ ವೇಗವಾಗಿ ಮರೆಗೆ ಸರಿದರು.
ಇದೀಗ ರಾನು ಅವರ ಬಯೋಪಿಕ್ ತಯಾರಾಗುತ್ತಿದೆ ಎನ್ನುವ ಸುದ್ದಿ ಕೇಳಿಬರುತ್ತಿದ್ದು, ಅಂದ ಹಾಗೆ ರಾನು ಮಂಡಲ್ ಬಯೋಪಿಕ್ ಸಿನಿಮಾಗೆ ‘ಮಿಸ್ ರಾನು ಮಾರಿಯಾ’ ಎಂದು ಟೈಟಲ್ ಇಡಲಾಗಿಯಂತೆ.
ಕಡಿಮೆ ಅಪಾಯದ ಭೂಕಂಪ, ನಿರ್ಭಯವಾಗಿರಿ: ವಿಜಯಪುರ ಜಿಲ್ಲಾಡಳಿತದ ಅಭಯ
ಇನ್ನು ರಾನು ಮಂಡಲ್ ಪಾತ್ರದಲ್ಲಿ ಇಶಿಕಾ ಡೇ ಕಾಣಿಸಿಕೊಳ್ಳುತ್ತಿದ್ದು. ಚಿತ್ರಕ್ಕಾಗಿ ಇಶಿಕಾ ಸಿಕ್ಕಾಪಟ್ಟೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಈ ಕುರಿತಾಗಿ ನಟಿ ಇಶಿಕಾ ಮಾತನಾಡಿದ್ದು, ನಾನು ಈ ಪಾತ್ರಕ್ಕಾಗಿ ಕಷ್ಟಪಟ್ಟು ಡಯಟ್ ಮಾಡುತ್ತಿದ್ದೇನೆ. ಮೊದಲಿನಿಂದಲೂ ಬಗೆ ಬಗೆಯ ಅಡುಗೆ ಮಾಡುವುದರಲ್ಲಿ ಹಾಗೂ ವಿವಿಧ ಖಾದ್ಯಗಳನ್ನು ಸವಿಯುದರಲ್ಲಿ ತುಂಬಾ ಆಸಕ್ತಿ ಹೊಂದಿರುವ ನಾನು ಈ ಸಿನಿಮಾಕ್ಕಾಗಿ ಎರಡು ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳುವ ಗುರಿ ಹೊಂದಿದ್ದೇನೆ” ಎಂದು ಹೇಳಿದ್ದಾರೆ.
ಈ ನಡುವೆ ಈ ಸಿನಿಮಾ ಮುಂಬರುವ 2022 ರ ಹೊತ್ತಿಗೆ ತೆರೆಮೇಲೆ ಬರಲಿದ್ದು, ಸಿನಿಮಾವನ್ನು ರಣಘಾಟ್, ಕೋಲ್ಕತ್ತಾ, ಮುಂಬೈ ಸೇರಿದಂತೆ ರಾನು ಮಂಡಲ್ ಅವರ ನಿಜ ಜೀವನದ ಸ್ಥಳಗಳಲ್ಲಿಯೇ ಚಿತ್ರೀಕರಿಸಲು ಚಿತ್ರತಂಡ ತಯಾರಿ ನಡೆಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ