ಪವನ್ ಕಲ್ಯಾಣ್ ಸಿನಿಮಾದಿಂದ ಸಾಯಿ ಪಲ್ಲವಿಯನ್ನ ಕೈ ಬಿಟ್ಟಿದ್ದು ಯಾಕೆ ?
Team Udayavani, May 4, 2021, 3:41 PM IST
ಹೈದರಾಬಾದ್ : ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅವರು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾವೊಂದಕ್ಕೆ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಸ್ಥಾನಕ್ಕೆ ಬೆಂಗಳೂರಿನ ಬೆಡಗಿ ನಿತ್ಯಾ ಮೆನೆನ್ ಅವರನ್ನು ಆಯ್ಕೆ ಮಾಡಲಾಯಿತು.
ಹಾಗೆ ನೋಡಿದರೆ ತೆಲುಗು ಸಿನಿಮಾ ರಂಗದಲ್ಲಿ ಸಾಯಿ ಪಲ್ಲವಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಫಿದಾ ಹಾಗೂ ಎಮ್ಸಿಎ ಸಿನಿಮಾಗಳ ಬಳಿಕ ಪ್ರೇಮಂ ಬೆಡಗಿಗೆ ಡಿಮ್ಯಾಂಡ್ ಕೂಡ ಜಾಸ್ತಿ ಆಯಿತು. ಆದರೆ, ಪವನ್ ಕಲ್ಯಾಣ್ ಚಿತ್ರಕ್ಕೆ ಅವರನ್ನು ಕೈ ಬಿಟ್ಟಿರುವುದು ಯಾಕೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಅಂದುಕೊಂಡಂತಾಗಿದ್ದರೆ ಈಗಾಗಲೇ ಈ ಚಿತ್ರದ ಶೂಟಿಂಗ್ ಶುರುವಾಗಬೇಕಿತ್ತು. ಸಾಯಿ ಪಲ್ಲವಿ ಅವರು ಪವನ್ ಕಲ್ಯಾಣ್ ಅವರ ಪತ್ನಿಯಾಗಿ ನಟಿಸಬೇಕಿತ್ತು. ಎಲ್ಲವೂ ಫೈನಲ್ ಆಯಿತು ಎನ್ನುವಷ್ಟರಲ್ಲಿ ಚಿತ್ರದ ತಾರಾಬಳಗದಿಂದ ಸಾಯಿ ಅವರನ್ನು ಕೈ ಬಿಡಲಾಯಿತು. ಅದಕ್ಕೆ ಕಾರಣ ಸಾಯಿ ಕೇಳಿದ ಸಂಭಾವನೆ.
ಹೌದು, ರಾಣಾ ದಗ್ಗುಬಾಟಿ ಹಾಗೂ ಪವನ್ ಕಲ್ಯಾಣ್ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ನಟಿಸಲು ಸಾಯಿ ಪಲ್ಲವಿ ಅವರಿಗೆ ಆಫರ್ ಮಾಡಲಾಗಿತ್ತು. ಇವರೇ ಈ ಚಿತ್ರದ ನಾಯಕಿ ಎನ್ನುವ ಗುಲ್ಲು ಕೇಳಿ ಬಂದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸಾಯಿ ಪಲ್ಲವಿಯ ಬದಲಾಗಿ ನಿತ್ಯಾ ಮೆನೆನ್ ಅವರು ಈ ಸಿನಿಮಾದ ನಾಯಕಿ ಎನ್ನುವ ಸುದ್ದಿ ಹೊರ ಬಿತ್ತು.
ಅಧಿಕ ಸಂಭಾವನೆ :
ಸಾಯಿ ಪಲ್ಲವಿಯವರು ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಕೇಳಿದ್ದರಂತೆ. ಇದು ಚಿತ್ರತಂಡಕ್ಕೆ ಆಘಾತವನ್ನುಂಟು ಮಾಡಿದೆ. ಇಷ್ಟು ಸಂಭಾವನೆ ನೀಡಲು ಸಾಧ್ಯವಾಗದ ಕಾರಣ ಸಾಯಿ ಪಲ್ಲವಿಯ ಬದಲಾಗಿ ನಿತ್ಯಾ ಮೆನೆನ್ ಅವರನ್ನ ಫೈನಲ್ ಮಾಡಲಾಯಿತಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್