ರಾಮಾಯಣದ ರಭಸಕ್ಕೆ ಕೊಚ್ಚಿಹೋದ ಅಮೆಝಾನ್, ನೆಟ್ ಫ್ಲಿಕ್ಸ್ ; ನೆಟ್ಟಿಜನ್ಸ್ ಭರ್ಜರಿ ಟಾಂಗ್!


Team Udayavani, Apr 2, 2020, 7:23 PM IST

ರಾಮಾಯಣದ ರಭಸಕ್ಕೆ ಕೊಚ್ಚಿಹೋದ ಅಮೆಝಾನ್, ನೆಟ್ ಫ್ಲಿಕ್ಸ್ ; ನೆಟ್ಟಿಜನ್ಸ್ ಭರ್ಜರಿ ಟಾಂಗ್!

ರಾಮಾಯಣ ಧಾರಾವಾಹಿಯಲ್ಲಿ ಬರುವ ಸೀತಾ ಕಲ್ಯಾಣದ ಒಂದು ದೃಶ್ಯ.

ನವದೆಹಲಿ: ಕೋವಿಡ್ 19 ವೈರಸ್ ವಿರುದ್ಧ ಹೋರಾಡಲು ದೇಶಕ್ಕೆ ದೇಶವೇ ಸಂಪೂರ್ಣ ಲಾಕ್ ಡೌನ್ ಆಗಿರುವ ಈ ಸ್ಥಿತಿಯಲ್ಲಿ ಮನೆಯಲ್ಲೇ ಕುಳಿತಿರುವ ಭಾರತೀಯರಿಗೆ ಅವರ ಹಳೆಯ ದಿನಗಳ ನೆನಪುಗಳನ್ನು ಮರುಕಳಿಸುವ ಉದ್ದೇಶದಿಂದ ದೂರದರ್ಶನ ಹಳೆಯ ಕ್ಲಾಸಿಕ್ ಧಾರಾವಾಹಿಗಳ ಮರುಪ್ರಸಾರವನ್ನು ಈಗಾಗಲೇ ಪ್ರಾರಂಭಿಸಿದೆ.

ಭಾರತದ ಮಹಾಪುರಾಣಗಳಾಗಿರುವ ರಾಮಾಯಣ ಮತ್ತು ಮಹಾಭಾರತಗಳನ್ನು ಧಾರಾವಾಹಿ ರೂಪದಲ್ಲಿ ಜನರ ಮುಂದೆ 90ರ ದಶಕದಲ್ಲಿ ಪ್ರಸ್ತುತಪಡಿಸಲಾಗಿತ್ತು. ಮತ್ತು ಆ ಕಾಲಕ್ಕೆ ದೂರದರ್ಶನಕ್ಕೊಂದು ಹೊಸ ಇಮೇಜ್ ತಂದುಕೊಟ್ಟ ಧಾರಾವಾಹಿಗಳಾಗಿ ರಾಮಾಯಣ, ಮಹಾಭಾರತ ದಾಖಲೆಯನ್ನೇ ಸೃಷ್ಟಿಸಿದ್ದವು. ಇದರೊಂದಿಗೆ, ಶಕ್ತಿಮಾನ್, ಫ್ಲಾಪ್ ಶೋ, ಮಾಲ್ಗುಡಿ ಡೇಸ್, ಶ್ರೀಮಾನ್ ಶ್ರೀಮತಿ, ಚಾಣಕ್ಯ ಸೇರಿದಂತೆ ಇನ್ನಷ್ಟು ಕ್ಲಾಸಿಕ್ ಧಾರಾವಾಹಿಗಳು ದೂರದರ್ಶನದ ಟ್ರೇಡ್ ಮಾರ್ಕ್ ಗಳಾಗಿ ಗುರುತಿಸಿಕೊಂಡಿದ್ದವು.

ಇದೀಗ ಲಾಕ್ ಡೌನ್ ಸಂದರ್ಭದಲ್ಲಿ ಹಲವು ವೀಕ್ಷಕರ ಒತ್ತಾಯದ ಮೇರೆಗೆ ಈ ಕ್ಲಾಸಿಕ್ ಧಾರಾವಾಹಿಗಳಲ್ಲಿ ಕೆಲವನ್ನು ಮರು ಪ್ರಸಾರ ಮಾಡಲು ದೂರದರ್ಶನ ನಿರ್ಧರಿಸಿದೆ. ಮಾತ್ರವಲ್ಲದೆ ರಾಮಾಯಣ (ಡಿಡಿ ನ್ಯಾಷನಲ್), ಮಹಾಭಾರತ (ಡಿಡಿ ಭಾರತಿ) ಮತ್ತು ಶಕ್ತಿಮಾನ್ (ಡಿಡಿ ನ್ಯಾಷನಲ್) ಧಾರಾವಾಹಿಗಳು ಈಗಾಗಲೇ ತಮ್ಮ ಪ್ರಸಾರವನ್ನು ಪ್ರಾರಂಭಿಸಿವೆ.

ಅದರಲ್ಲೂ ರಾಮಾಯಣ ಧಾರಾವಾಹಿಯಂತೂ ಮರುಪ್ರಸಾರದ ಮೊದಲ ದಿನವೇ ಸುಮಾರು 50 ಕೋಟಿ ವೀಕ್ಷಕರನ್ನು ತಲುಪಿದೆ ಎಂಬ ಲೆಕ್ಕಾಚಾರ ಇದೀಗ ಹೊರಬಿದ್ದಿದೆ. ಈ ಕ್ಲಾಸಿಕ್ ಗಳನ್ನು ಯುವ ಜನಾಂಗವೂ ಆಸ್ವಾದಿಸುತ್ತಿದ್ದಾರೆ ಮತ್ತು ವಿಶಿಷ್ಟ ಮೀಮ್ ಗಳನ್ನು ಸಿದ್ಧಪಡಿಸಿ ಅವುಗಳನ್ನ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ನೆಟ್ ಫ್ಲಿಕ್ಸ್, ಅಮೆಝಾನ್, ಹಾಟ್ ಸ್ಟಾರ್ ಸೇರಿದಂತೆ ಇತರ ಆನ್ ಲೈನ್ ಸ್ಕ್ರೀನಿಂಗ್ ಪೋರ್ಟಲ್ ಗಳಿಗೆ ದೂರದರ್ಶನ ಟಾಂಗ್ ನೀಡಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂತೂ ಕೋವಿಡ್ 19 ವೈರಸ್ ತಂದೊಡ್ಡಿರುವ ಈ ಲಾಕ್ ಡೌನ್ ಹಳೆಯ ಕ್ಲಾಸಿಕ್ ಟಿವಿ ಶೋಗಳ ಪಾಲಿಗೆ ಮತ್ತೆ ಬಿಡುಗಡೆ ಭಾಗ್ಯ ನೀಡಿರುವುದು ಮಾತ್ರ ಸುಳ್ಳಲ್ಲ.

ಇದಕ್ಕೆ ಸಂಬಂಧಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಕೆಲವೊಂದು ಮೀಮ್ ಗಳು ಹೀಗಿವೆ…

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.