ಕೆಕೆ ಸಾವಿಗೂ ಮುನ್ನ ಪೋಸ್ಟ್: ಕ್ಷಮೆಯಾಚಿಸಿದ ಬಂಗಾಳಿ ಗಾಯಕ ರೂಪಂಕರ್
ನನ್ನ ವಿರುದ್ಧ ದ್ವೇಷದ ಸುರಿಮಳೆಯಾಗುತ್ತದೆ ಎಂದು ಭಾವಿಸಿರಲಿಲ್ಲ
Team Udayavani, Jun 4, 2022, 1:00 PM IST
ರೂಪಂಕರ್ ಬಾಗ್ಚಿ, ಕೃಷ್ಣಕುಮಾರ್ ಕುನ್ನತ್(ಕೆಕೆ )
ಕೋಲ್ಕತಾ : ಪ್ರಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ ) ಸಾವಿಗೆ ಕೆಲ ಗಂಟೆಗಳ ಮೊದಲು ಅವರ ವಿರುದ್ಧ ಫೇಸ್ಬುಕ್ ಪೋಸ್ಟ್ ಗಾಗಿ ಕೆಟ್ಟದಾಗಿ ಟ್ರೋಲ್ ಮಾಡಲ್ಪಟ್ಟ, ಜನಪ್ರಿಯ ಬಂಗಾಳಿ ಗಾಯಕ ರೂಪಂಕರ್ ಬಾಗ್ಚಿ ಶುಕ್ರವಾರ ದುಃಖಿತ ಕುಟುಂಬದವರಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಕೋಲ್ಕತಾ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಫೋನ್ ಮತ್ತು ಹೊರಗಿನ ಸಾಮಾಜಿಕ ಮಾಧ್ಯಮದಲ್ಲಿ ನನಗೆ ದೈಹಿಕ ಬೆದರಿಕೆಗಳು ಮತ್ತು ಜೀವ ಬೆದರಿಕೆಗಳು ಬರುತ್ತಿವೆ.ಹೇಳಿಕೆಯೊಂದನ್ನು ಓದಿದ ಅವರು, “ಅವರ ಕುಟುಂಬ, ಮುಂಬೈನ ಜನರು ಮತ್ತು ಅವರ ಅಭಿಮಾನಿಗಳು, ಕೋಲ್ಕತಾ ಮತ್ತು ದೇಶದಾದ್ಯಂತ ಅವರನ್ನು ಪ್ರೀತಿಸುವ ಜನರಲ್ಲಿ ನಾನು ಬೇಷರತ್ ಕ್ಷಮೆ ಯಾಚಿಸುತ್ತೇನೆ. ಪ್ರಸ್ತುತ ನಾನು ಫೇಸ್ಬುಕ್ ಪೋಸ್ಟ್ ಅನ್ನು ಅಳಿಸಿದ್ದೇನೆ, ಆದರೆ ಟೀಕೆಗಳು ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲಿಂಗ್ ಮತ್ತು ದಾಳಿಯು “ಆಘಾತಕಾರಿ ಎಂದು ಅವರು ಹೇಳಿದ್ದಾರೆ.
ನನ್ನ ಮೇಲೆ ವರ್ಷಾನುಗಟ್ಟಲೆ ಇಲ್ಲಿನ ಮತ್ತು ವಿದೇಶದ ಪ್ರೇಕ್ಷಕರಿಂದ ಪ್ರೀತಿ, ಪ್ರಶಂಸೆ ಮತ್ತು ಗೌರವದ ಸುರಿಮಳೆಯಾಗಿತ್ತು,ನನ್ನ ಆಲೋಚನೆಗಳನ್ನು ಸರಿಯಾದ ರೀತಿಯಲ್ಲಿ ಸಂವಹನ ಮಾಡಲು ಸಾಧ್ಯವಾಗದ ಮತ್ತು ಜನರಿಗೆ ದುಃಖವನ್ನುಂಟುಮಾಡುವ ಕ್ಷಣಿಕ ಅಚಾತುರ್ಯವನ್ನು ಯಾರು ತಿಳಿದಿದ್ದರು, ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ದ್ವೇಷದ ಸುರಿಮಳೆಯಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದರು.
ಕೆಕೆ…. ಯಾರು? ಮುಂಬೈ ಕಲಾವಿದರ ಬಗ್ಗೆ ಏಕೆ ಇಷ್ಟೊಂದು ಉತ್ಸಾಹ? ಒಡಿಶಾ, ಪಂಜಾಬ್ ಮತ್ತು ದಕ್ಷಿಣ ಉದ್ಯಮದಿಂದ ಕಲಿಯಿರಿ ದಯವಿಟ್ಟು ಮೊದಲು ಬೆಂಗಾಲಿಯಾಗಿರಿ” ಎಂದು ಅವರು ಬಾಲಿವುಡ್ ಗಾಯಕನ ಕೋಲ್ಕತಾ ಭೇಟಿಗೆ ಮುನ್ನ ಪೋಸ್ಟ್ ಮಾಡಿದ್ದರು.
53ರ ಹರೆಯದ ಗಾಯಕ ಮಂಗಳವಾರ ರಾತ್ರಿ ಕೋಲ್ಕತಾದಲ್ಲಿ ಸಂಗೀತ ಕಚೇರಿಯ ನಂತರ ನಿಧನ ಹೊಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
MUST WATCH
ಹೊಸ ಸೇರ್ಪಡೆ
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Dublin; ಆಸೀಸ್ ಸರಣಿ ಮುಂದೂಡಿದ ಐರ್ಲೆಂಡ್
T20 Cricket: “ವಿಂಡೀಸ್ ಪರ ಟಿ20 ವಿಶ್ವಕಪ್ ಆಡಲ್ಲ’: ಸುನೀಲ್ ನಾರಾಯಣ್ ಸ್ಪಷ್ಟ ನುಡಿ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!