ಎಂಟು ವರ್ಷಗಳ ಹಿಂದಿನ ಸ.ರೆ.ಗ.ಮ.ಪ. ಲಿಟ್ಲ್ ಚಾಂಪ್ ಡ್ರಗ್ ಅಡಿಕ್ಟ್ ಆಗಿದ್ದು ಹೇಗೆ?

ಸಣ್ಣ ಪ್ರಾಯದಲ್ಲೇ ಕೀರ್ತಿಯ ಶಿಖರವೇರಿದ ಅಝ್ಮತ್ ಹುಸೈನ್ ಮತ್ತೆ ಲೈಮ್ ಲೈಟಿನತ್ತ...

Team Udayavani, Oct 14, 2019, 10:33 PM IST

Little-Champ-14-10

ನವದೆಹಲಿ: ಸ.ರೆ.ಗ.ಮ.ಪ ಲಿಟ್ಲ್ ಚಾಂಪ್ ಸಂಗೀತ ಸ್ಪರ್ಧೆಯ 2011ರ ಚಾಂಪಿಯನ್ ಅಝ್ಮತ್ ಹುಸೈನ್ ಇದೀಗ ಎಂಟು ವರ್ಷಗಳ ಬಳಿಕ ಇಂಡಿಯನ್ ಐಡಲ್ ಆಡಿಷನ್ ಗೆ ಆಯ್ಕೆಯಾಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ಹುಸೈನ್ ಬದುಕು ಯಾವೆಲ್ಲಾ ರೀತಿಯಲ್ಲಿ ಏರಿಳಿತಗಳನ್ನು ಕಂಡಿತು ಎಂಬುದನ್ನು ಈ ಆಡಿಷನ್ ಸಂದರ್ಭದಲ್ಲಿ ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

2011ರಲ್ಲಿ ಸ.ರೆ.ಗ.ಮ.ಪ. ಲಿಟ್ಲ್ ಚಾಂಪ್ ಪ್ರಶಸ್ತಿಯನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರಿಂದ ಸ್ವೀಕರಿಸಿದ ಕ್ಷಣದಿಂದ ಅಝ್ಮತ್ ಬದುಕು ಒಂದು ತಿರುವನ್ನು ಪಡೆದುಕೊಂಡಿತು. ಈ ಪುಟ್ಟ ಹುಡುಗನ ಧ್ವನಿಗೆ ಅಪಾರ ಬೇಡಿಕೆ ಬಂತು. ಹೀಗಾಗಿ ಅಝ್ಮತ್ ಈ ಸಮಯದಲ್ಲಿ ಹಲವಾರು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಹೋಗುತ್ತಾರೆ. ಇದರಿಂದ ಒಂದು ಮಟ್ಟದ ಸಂಪಾದನೆಯೂ ಆಗುತ್ತಾ ಅಝ್ಮತ್ ಕುಟುಂಬದ ಬದುಕು ಒಂದು ಹಂತಕ್ಕೆ ಸಾಗುತ್ತಿತ್ತು.

ಆದರೆ ಅಝ್ಮತ್ ಪ್ರಾಯಪ್ರಬುದ್ಧನಾಗುತ್ತಾ ಹೋದಂತೆ ಆತನ ಧ್ವನಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಾರಂಭಿಸಿತು. ಯಾವ ಸಿಹಿ ಧ್ವನಿಗೆ ಜನರು ಫಿದಾ ಆಗುತ್ತಿದ್ದರೋ ಆ ಧ್ವನಿ ಅಝ್ಮತ್ ನಿಂದ ದೂರವಾಗುತ್ತಾ ಹೊಯಿತು. ‘ಆತನ ಧ್ವನಿ ಕೆಟ್ಟದಾಗಿದೆ’ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಮೂಡುತ್ತಾ ಹೋದಂತೆ ಅಝ್ಮತ್ ಧ್ವನಿಗೆ ಬೇಡಿಕೆ ಕಡಿಮೆಯಾಯಿತು ಹಾಗೂ ಇದರಿಂದ ಆತನ ಕುಟುಂಬವೂ ಸಂಕಷ್ಟಕ್ಕೆ ಸಿಲುಕಿತು. ಈ ಎಲ್ಲಾ ಬೆಳವಣಿಗೆಗಳು ಅಝ್ಮತ್ ನನ್ನು ಮಾನಸಿಕವಾಗಿ ಜರ್ಜರಿತಗೊಳಿಸಿತು ಮತ್ತು ಈತ ನಿಧಾನವಾಗಿ ಖಿನ್ನತೆಗೆ ಜಾರತೊಡಗಿದ.

ಮಾತ್ರವಲ್ಲದೇ ಇದೇ ಸಮಯದಲ್ಲಿ ಅಝ್ಮತ್ ಅದು ಹೇಗೋ ಕೆಟ್ಟ ಜನರ ಸಹವಾಸಕ್ಕೆ ಬಿದ್ದ. ಮತ್ತು ಇದರಿಂದಾಗಿ ಆತನಿಗೆ ಮಾದಕ ದ್ರವ್ಯ ಸೇವನೆಯ ಚಟವೂ ಅಂಟಿಕೊಂಡಿತು. ಈ ಎಲ್ಲಾ ವಿಚಾರವನ್ನು ಸ್ವತಃ ಅಝ್ಮತ್ ಹುಸೈನ್ ಅವರೇ ಇಂಡಿಯನ್ ಐಡಲ್ ಆಡಿಷನ್ ಸಂದರ್ಭದಲ್ಲಿ ತೀರ್ಪುಗಾರರಾದ ನೇಹಾ ಮತ್ತು ವಿಶಾಲ್ ದಡ್ಲಾನಿ ಅವರ ಮುಂದೆ ಬಹಿರಂಗಪಡಿಸಿದ್ದಾನೆ.

‘ಕೆಟ್ಟ ಜನರ ಸಂಗ ನನಗೆ ದೊರೆಯುತ್ತಿದ್ದಂತೆ ನಾನು ಡ್ರಗ್ ಅಡಿಕ್ಟ್ ಆದೆ. ನನ್ನ ಜೀವನವನ್ನೇ ಹಾಳು ಮಾಡಬೇಕೆಂದು ಬಯಸಿದ್ದವರು ಸದ್ದಿಲ್ಲದೇ ತಮ್ಮ ಉದ್ದೇಶವನ್ನು ಸಾಧಿಸಿಕೊಂಡು ಬಿಟ್ಟಿದ್ದರು’ ಎಂದು ಅಝ್ಮತ್ ಈ ಸಂದರ್ಭದಲ್ಲಿ ನೋವಿನಿಂದ ನುಡಿದಿದ್ದಾನೆ.

ಜೈಪುರ ಮೂಲದ ಅಝ್ಮತ್ ಹುಸೈನ್ 2011ರ ಸ.ರೆ.ಗ.ಮ.ಪ. ಸೀಸನ್ ನ ಜನಪ್ರಿಯ ಸ್ಪರ್ಧಿಗಳಲ್ಲಿ ಒಬ್ಬನಾಗಿದ್ದ. ಮತ್ತು ಈ ಪುಟ್ಟ ಬಾಲಕನ ಸ್ವರ ಆ ಸಮಯದಲ್ಲಿ ಕೇಳುಗರಿಗೆ ಮೋಡಿ ಮಾಡಿತ್ತು.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ʼಖಲ್‌ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್‌ನಲ್ಲಿ ಬಿಟೌನ್‌ ಸ್ಟಾರ್ಸ್ ಜೊತೆ ಯಶ್‌, ಅಲ್ಲು?

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್‌ ಆದ ಮುನ್ನಿ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.