ನಿರ್ಮಲಾ ಅಲಿಯಾಸ್ ಸರೋಜ್ ಖಾನ್;13ನೇ ವಯಸ್ಸಿಗೆ ಮದುವೆ…ನೃತ್ಯ ಸಂಯೋಜಕಿ ಬಣ್ಣದ ಬದುಕು!

ಅದಾಗಲೇ ವಿವಾಹಿತ ಸೋಹನ್ ಲಾಲ್ ಗೆ(43ವರ್ಷ) ನಾಲ್ವರು ಮಕ್ಕಳಿದ್ದರು.

Team Udayavani, Jul 3, 2020, 10:53 AM IST

13ನೇ ವಯಸ್ಸಿಗೆ ಮದುವೆ…ನೃತ್ಯ ಸಂಯೋಜಕಿ ಬಣ್ಣದ ಬದುಕು!

ಮಣಿಪಾಲ್: ಬಾಲಿವುಡ್ ಲೋಕದಲ್ಲಿ “ದ ಮದರ್ ಆಫ್ ಡ್ಯಾನ್ಸ್”…ಮಾಸ್ಟರ್ ಜೀ ಎಂದೇ ಕರೆಯಿಸಿಕೊಂಡಿದ್ದ ನಿರ್ಮಲಾ ನಾಗ್ ಪಾಲ್ ಅಲಿಯಾಸ್ ಸರೋಜ್ ಖಾನ್ ಖ್ಯಾತ ನೃತ್ಯ ಸಂಯೋಜಕಿಯಾಗಿದ್ದರು. ಸತತ ನಾಲ್ಕು ದಶಕಕ್ಕಿಂತಲೂ ಹೆಚ್ಚು ಕಾಲ ಬರೋಬ್ಬರಿ 2000 ಸಾವಿರಕ್ಕೂ ಅಧಿಕ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಕೀರ್ತಿ ಸರೋಜ್ ಅವರದ್ದಾಗಿದೆ.

3ವರ್ಷಕ್ಕೆ ಬಣ್ಣ ಹಚ್ಚಿದ್ದ ಸರೋಜ್ 13ನೇ ವಯಸ್ಸಿಗೆ ವಿವಾಹ!
ಸ್ವಾತಂತ್ರ್ಯ ನಂತರ ಭಾರತ ಇಬ್ಭಾಗಗೊಂಡಾಗ ಪೋಷಕರು ಬಾಂಬೆಗೆ ವಲಸೆ ಬಂದಿದ್ದರು. ನಿರ್ಮಲಾ 1948ರ ನವೆಂಬರ್ 22ರಂದು ಜನಿಸಿದ್ದರು. 1950ರಲ್ಲಿ ತೆರೆಕಂಡಿದ್ದ ನಜರಾನಾ ಸಿನಿಮಾದಲ್ಲಿ ನಿರ್ಮಲಾ ಬಾಲನಟಿಯಾಗಿ ನಟಿಸಿದ್ದರು…ಆಗ ಅವರ ವಯಸ್ಸು ಬರೇ 3 ವರ್ಷ!

ನಂತರ ನೃತ್ಯ ಸಂಯೋಜಕ ಬಿ.ಸೋಹನ್ ಲಾಲ್ ಅವರ ಬಳಿ ನಿರ್ಮಲಾ ಕಾರ್ಯನಿರ್ವಹಿಸುತ್ತ ನೃತ್ಯವನ್ನು ಕಲಿತುಬಿಟ್ಟಿದ್ದರು. ಹೀಗೆ ನೃತ್ಯ ಕಲಿಸುತ್ತಿದ್ದ ಗುರು ಸೋಹನ್ ಲಾಲ್ ಅವರ ಜತೆ ವಿವಾಹವಾಗಿದ್ದರು. ಆಗ ಈಕೆ ವಯಸ್ಸು 13. ಅದಾಗಲೇ ವಿವಾಹಿತ ಸೋಹನ್ ಲಾಲ್ ಗೆ(43ವರ್ಷ) ನಾಲ್ವರು ಮಕ್ಕಳಿದ್ದರು. 14ನೇ ವಯಸ್ಸಿಗೆ ಸರೋಜ್ ಮೊದಲ ಮಗುವಿಗೆ ತಾಯಿಯಾಗಿದ್ದರು.

ಸಂದರ್ಶನವೊಂದರಲ್ಲಿ ಸರೋಜ್ ಹೇಳಿದ್ದು “ನಾನಾಗ ಶಾಲೆಗೆ ಹೋಗುತ್ತಿದ್ದೆ. ಒಂದು ದಿನ ನಮ್ಮ ನೃತ್ಯ ಗುರು ಸೋಹನ್ ಲಾಲ್ ನನ್ನ ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಬಿಟ್ಟಿದ್ದರು..ಹೀಗೆ ನಮ್ಮ ಮದುವೆ ನಡೆದುಬಿಟ್ಟಿತ್ತು” ಎಂದು ನೆನಪಿಸಿಕೊಂಡಿದ್ದರು.

ಕೆಲವು ವರ್ಷಗಳಲ್ಲಿ ಇವರಿಬ್ಬರೂ ಪ್ರತ್ಯೇಕವಾಗಿದ್ದು. ಆದರೂ ಸರೋಜ್ ಸೋಹನ್ ಲಾಲ್ ಜತೆ ಸಹಾಯಕಿಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದ್ದರು. ನಂತರ ಸೋಹನ್ ಲಾಲ್ ಗೆ ಹೃದಯಾಘಾತವಾದಾಗ ಇಬ್ಬರೂ ಮತ್ತೆ ಒಂದಾಗಿದ್ದರು. ಹೀಗೆ ಸರೋಜ್, ಸೋಹನ್ ದಂಪತಿಗೆ ಮಗಳು ಹೀನಾ ಖಾನ್ ಜನಿಸಿದ್ದಳು.1975ರಲ್ಲಿ ಸರೋಜ್ ಮುಂಬೈ ತೊರೆದು ಮಕ್ಕಳೊಂದಿಗೆ ಚೆನ್ನೈಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಉದ್ಯಮಿ ರೋಶನ್ ಖಾನ್ ಅವರನ್ನು ಸರೋಜ್ ವಿವಾಹವಾಗಿದ್ದು, ದಂಪತಿಗೆ ಸುಕೈನಾ ಖಾನ್ ಎಂಬ ಮಗಳು ಜನಿಸಿದ್ದಳು.

ಖ್ಯಾತಿ ತಂದುಕೊಟ್ಟಿದ್ದು ಮಿಸ್ಟರ್ ಇಂಡಿಯಾ ಹಾಡು!

1974ರಲ್ಲಿ ತೆರೆಕಂಡಿದ್ದ ಗೀತಾ ಮೇರಾ ನಾಮ್ ಸಿನಿಮಾದಲ್ಲಿ ಸ್ವತಂತ್ರ ನೃತ್ಯ ಸಂಯೋಜಕಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದರು. ಆದರೆ ಹಲವು ವರ್ಷಗಳವರೆಗೆ ಸರೋಜ್ ಅವರಿಗೆ ಯಶಸ್ಸು ಸಿಕ್ಕಿರಲಿಲ್ಲವಾಗಿತ್ತು. ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ತಂದುಕೊಟ್ಟಿದ್ದು 1987ರ ಮಿಸ್ಟರ್ ಇಂಡಿಯಾ
ಸಿನಿಮಾದಲ ಹವಾ ಹವಾಯೀ. ಇದರಲ್ಲಿ ನಟಿ ಶ್ರೀದೇವಿಗೆ ನೃತ್ಯ ಸಂಯೋಜಿಸಿದ್ದು ಸರೋಜ್ ಖಾನ್!. ಬಳಿಕ ನಗೀನಾ, ಚಾಂದ್ನಿ ಸಿನಿಮಾಕ್ಕೆ ನೃತ್ಯ ಸಂಯೋಜಿಸಿದ್ದ ಸರೋಜ್ ಬಾಲಿವುಡ್ ಮತ್ತೊಬ್ಬ ಚೆಲುವೆ ಮಾಧುರಿ ದೀಕ್ಷಿತ್ ಅವರ ತೇಜಾಬ್ ಚಿತ್ರದ ಏಕ್ ದೋ ತೀನ್ ಹಾಡಿಗೆ ನೃತ್ಯ ಸಂಯೋಜಿಸುವ ಮೂಲಕ ಬಾಲಿವುಡ್ ನ ಯಶಸ್ವಿ ಕೋರಿಯೋಗ್ರಾಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ತಮ್ಮ ಅದ್ಭುತ ಪ್ರತಿಭೆಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ
ಪಡೆದಿದ್ದರು. 71ರ ಹರೆಯದಲ್ಲಿ ಹೃದಯ ಸ್ತಂಭನಕ್ಕೊಳಗಾಗಿ ಇಂದು ಇಹಲೋಕ ತ್ಯಜಿಸಿರುವ ಸರೋಜ್ ಖಾನ್ ಅವರಿಗೆ ಬಾಲಿವುಡ್ ನ ಖ್ಯಾತ ನಟ, ನಟಿಯರು ಕಂಬನಿ ಮಿಡಿದಿದ್ದಾರೆ.

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramayana Movie: ʼರಾವಣʼನ ಪತ್ನಿಯಾಗಿ ಯಶ್‌ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?

Ramayana Movie: ʼರಾವಣʼನ ಪತ್ನಿಯಾಗಿ ಯಶ್‌ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?

9

ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ

12

ಮೀಟಿಂಗ್‌ ಮಾಡೋಕ್ಕೂ ರೇಟ್‌ ಫಿಕ್ಸ್‌: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ

Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್‌ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?

Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್‌ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?

Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕ ಚೋಪ್ರಾ ದಂಪತಿ

Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.