ಒಂದು ಮೊಟ್ಟೆ ಅಲ್ಲ…ರೀಲ್ ಸ್ಟಂಟ್ ನಿಂದ ರಿಯಲ್ “ಮೊಟ್ಟೆ” ಆಗಿ ಬೇಡಿಕೆಯ ನಟನಾದ ಕಥೆ!

ಬಾಲಾ ಅವರು ಮುಂದಿನ ಸಿನಿಮಾದಲ್ಲಿ ಒಂದು ಮುಖ್ಯ ರೋಲ್ ಕೊಡುವುದಾಗಿ ಭರವಸೆ ಕೊಟ್ಟಿದ್ದರು

ನಾಗೇಂದ್ರ ತ್ರಾಸಿ, Jan 4, 2020, 5:37 PM IST

Mottai-Rajendran

ಸಿನಿಮಾರಂಗದಲ್ಲಿ ಮೂಲತಃ ಸ್ಟಂಟ್ ಮ್ಯಾನ್ ಆಗಿ ಗುರುತಿಸಿಕೊಂಡಿದ್ದ ಎ.ರಾಜೇಂದ್ರನ್ ಅಲಿಯಾಸ್ ಮೊಟ್ಟೆ ರಾಜೇಂದ್ರ ಅಥವಾ ನಾನ್ ಕಡಾವುಲ್ ರಾಜೇಂದ್ರನ್ ಈಗ ವಿಲನ್ ಆಗಿ ಚಿರಪರಿಚಿತರಾಗಿದ್ದಾರೆ. ಸುಮಾರು 500 ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದ ರಾಜೇಂದ್ರನ್ ನಿರ್ದೇಶಕ ಬಾಲಾ ಅವರ ಪಿತಾಮಗನ್ ಸಿನಿಮಾದಲ್ಲಿ ಸಾಹಸ ದೃಶ್ಯಗಳಲ್ಲಿ ಸಹಾಯಕರಾಗಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರಂತೆ. ಆದರೆ ಸಿನಿಮಾದಲ್ಲಿ ನನಗೆ ಚಿಕ್ಕ ಪಾತ್ರವನ್ನು ನೀಡಿ, ಈ ವೇಳೆ ನನಗೆ ಬಾಲಾ ಅವರು ಮುಂದಿನ ಸಿನಿಮಾದಲ್ಲಿ ಒಂದು ಮುಖ್ಯ ರೋಲ್ ಕೊಡುವುದಾಗಿ ಭರವಸೆ ಕೊಟ್ಟಿದ್ದರು.

ಕೆಲವು ಸಮಯದ ನಂತರ ಬಾಲಾ ಅವರ ಕಚೇರಿಯಿಂದ ರಾಜೇಂದ್ರನ್ ಗೆ ಕರೆಯೊಂದು ಬಂದಿತ್ತು. ಹೀಗೆ ಬಾಲಾ ಅವರನ್ನು ಭೇಟಿಯಾದಾಗ “ನಾನ್ ಕಡವುಳ್ “ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವಂತೆ ಹೇಳಿದ್ದರು. ನಾನು ಸ್ಟಂಟ್ ಮ್ಯಾನ್ ಆಗಿ ದುಡಿದವ,ವಿಲನ್ ಪಾತ್ರ ಮಾಡಲು ಕಷ್ಟ ಎಂದಿದ್ದೆ. ಆದರೆ ಬಾಲಾ ಅವರು ಈ ರೋಲ್ ಮಾಡಲೇಬೇಕೆಂದು ಹಠ ಹಿಡಿದಿದ್ದರು. ನಂತರ ಏನಾಯ್ತು ಎಂಬುದು ಸಿನಿಮಾದ ನೋಡಿದ ನಿಮಗೆಲ್ಲಾ ಗೊತ್ತೇ ಇದೆಯಲ್ಲಾ ಎಂಬುದು ರಾಜೇಂದ್ರನ್ ಮನದ ಮಾತು!

ಒಬ್ಬ ಸ್ಟಂಟ್ ಮ್ಯಾನ್ ಆಗಿ ಹೇಗೆ ಫೈಟ್ ಮಾಡುತ್ತೇನೆ ಎಂಬುದನ್ನು ಖುದ್ದಾಗಿ ನಾನೇ ಹಲವಾರು ಬಾರಿ ಸಿನಿಮಾ ನೋಡಿ ಸಂತಸಗೊಂಡಿದ್ದೆ. ಆದರೆ ನಾನೊಬ್ಬ ನಟನಾಗಿ, ವಿಲನ್ ಆಗಿ ನನಗೆ ಇದೊಂದು ಬೋನಸ್ ಆಗಿತ್ತು. ಅದಕ್ಕಾಗಿಯೇ ನನ್ನ ವಿಲನ್ ಪಾತ್ರ ಹೇಗಿದೆ ಎಂಬುದನ್ನು ವೀಕ್ಷಿಸಲು ಉದಯಂ ಟಾಕೀಸ್ ಗೆ ಹೋಗಿದ್ದೆ. ಸಿನಿಮಾ ಮುಗಿದ ನಂತರ ಪ್ರೇಕ್ಷಕರು ನನ್ನ ಗುರುತಿಸಿ ಅಭಿನಂದಿಸಿದ್ದರು. ಅದರಲ್ಲಿಯೂ ಕೆಲವು ಮಹಿಳೆಯರು ನನ್ನ ಹತ್ತಿರ ಬರಲು ಹೆದರಿ ದೂರ ನಿಂತಿರುವುದನ್ನು ಗಮನಿಸಿದ್ದರು. ಆಗ ನನಗೆ ನನ್ನ ಪಾತ್ರ ಬೀರಿರುವ ಪರಿಣಾಮದ ಬಗ್ಗೆ ಮನವರಿಕೆಯಾಗಿತ್ತು. ಇದರ ಎಲ್ಲಾ ಶ್ರೇಯಸ್ಸು ಡೈರೆಕ್ಟರ್ ಬಾಲಾ ಅವರಿಗೆ ಸಲ್ಲಬೇಕು ಎಂಬುದು ರಾಜೇಂದ್ರನ್ ಬಿಚ್ಚು ನುಡಿ.

ಸ್ಟಂಟ್ ಮ್ಯಾನ್ ರಾಜೇಂದ್ರನ್ “ಮೊಟ್ಟೆ ರಾಜೇಂದ್ರನ್ ಆಗಿದ್ದು ಹೇಗೆ?

ಸ್ಟಂಟ್ ಮಾಸ್ಟರ್ ಆಗಿ ತೆರೆಮರೆಯಲ್ಲಿದ್ದ ರಾಜೇಂದ್ರನ್ ನಾನ್ ಕಡವುಳ್ ತಮಿಳು ಸಿನಿಮಾದಲ್ಲಿ ವಿಲನ್ ಆಗಿ ಗುರುತಿಸಿಕೊಂಡಿದ್ದರೆ, “ಬಾಸ್ ಎಂಗಿರಾ ಭಾಸ್ಕರನ್” ಸಿನಿಮಾದಲ್ಲಿ ಹಾಸ್ಯ ನಟನಾಗಿ ಮಿಂಚಿದ್ದರು. ರಾಜೇಂದ್ರನ್ ಸ್ಟಂಟ್ ಮಾಸ್ಟರ್ ಗಳಾಗಿದ್ದ ಫೆಪ್ಸಿ ವಿಜಯನ್ ಮತ್ತು ಸ್ಟಂಟ್ ಶಿವ ಜತೆ ಸಹಾಯಕರಾಗಿ ಕೆಲಸ ಮಾಡಿದ್ದರು. ರಾಜೇಂದ್ರನ್ ತಂದೆ ಕೂಡಾ ಸ್ಟಂಟ್ ಮಾಸ್ಟರ್ ಆಗಿದ್ದರು. ಇವರು ಎಂಜಿಆರ್, ಶಿವಾಜಿ ಗಣೇಶನ್ ಸಿನಿಮಾಗಳಲ್ಲಿ ಸ್ಟಂಟ್ ಮಾಸ್ಟರ್ ಆಗಿ ಮಿಂಚಿದ್ದರು.

ರಾಜೇಂದ್ರನ್ ದಿನಂಪ್ರತಿ ಬೆಳಗ್ಗೆ 4ಗಂಟೆಗೆ ಎದ್ದು ದೇಹವನ್ನು ಹುರಿಗೊಳಿಸುತ್ತಿದ್ದರು. ಸ್ಟಂಟ್ ಮ್ಯಾನ್ ಆಗಿ ತಮಿಳು ಸಿನಿಮಾರಂಗದಲ್ಲಿ ಜನಪ್ರಿಯರಾಗಿದ್ದರು. ಮಲಯಾಳಂ ಸಿನಿಮಾಕ್ಕಾಗಿ ರಾಜೇಂದ್ರನ್ ಕಾಲ್ಪೆಟ್ಟಾ ನಗರದಲ್ಲಿ ಸ್ಟಂಟ್ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ದೃಶ್ಯದಲ್ಲಿ ನಟ ವಿಜಯರಾಘವನ್ ರಾಜೇಂದ್ರನ್ ಗೆ ಹೊಡೆದ ಪರಿಣಾಮ ಸೇತುವೆ ಮೇಲೆ ಬೀಳಬೇಕು. ಅಲ್ಲದೇ ನೀರಿನ ಕೆರೆಯೊಳಗೆ ಹಾರಬೇಕಾಗಿತ್ತು.

ಹೀಗೆ ಸ್ಟಂಟ್ ನಲ್ಲಿ ರಾಜೇಂದ್ರನ್ ಬೈಕ್ ಜತೆಗೆ ಕೆರೆಯೊಳಗೆ ಹಾರುವ ದೃಶ್ಯದ ಚಿತ್ರೀಕರಣ ಪೂರ್ಣಗೊಂಡ ನಂತರ …ಆ ಕೆರೆಯೊಳಗೆ ಇರುವ ನೀರು ಸಮೀಪದ ಫ್ಯಾಕ್ಟರಿಯ ಕೆಮಿಕಲ್ ತ್ಯಾಜ್ಯದಿಂದ ನೀರು ಸಂಪೂರ್ಣ ಕಲುಷಿತಗೊಂಡಿರುವುದು ಗೊತ್ತಾಗಿತ್ತು. ಆದರೆ ಅಷ್ಟರಲ್ಲಿ ಆಗಬೇಕಾದ ಹಾನಿ ಆಗಿಹೋಗಿತ್ತು…ಸ್ಟಂಟ್ ಮ್ಯಾನ್ ರಾಜೇಂದ್ರನ್ “ಅಲೋಪೆಸಿಯಾ ಯೂನಿವರ್ಸಲಿಸ್” ಎಂಬ ರೋಗಕ್ಕೆ ತುತ್ತಾಗಿದ್ದರು. ಅಲೋಪೆಸಿಯಾ ಅಂದರೆ ಕೂದಲು ಉದುರುವುದು. ಹೀಗೆ ರಾಜೇಂದ್ರನ್ ಅವರ ತಲೆಕೂದಲು, ಹುಬ್ಬು, ಕಣ್ಣಿನ ರೆಪ್ಪೆಯಲ್ಲಿರುವ ಕೂದಲುಗಳೆಲ್ಲಾ ಉದುರಿಹೋಗಿ ಬೋಳಾಗಿದ್ದವು..ಆ ಬಳಿಕ ಇವರು ಮೊಟ್ಟೆ ರಾಜೇಂದ್ರನ್ ಅಂತಲೇ ಆಗಿದ್ದು!

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramayana Movie: ʼರಾವಣʼನ ಪತ್ನಿಯಾಗಿ ಯಶ್‌ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?

Ramayana Movie: ʼರಾವಣʼನ ಪತ್ನಿಯಾಗಿ ಯಶ್‌ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?

9

ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ

12

ಮೀಟಿಂಗ್‌ ಮಾಡೋಕ್ಕೂ ರೇಟ್‌ ಫಿಕ್ಸ್‌: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ

Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್‌ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?

Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್‌ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?

Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕ ಚೋಪ್ರಾ ದಂಪತಿ

Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.