ರಾಕೇಶ್ ರೋಶನ್ಗೆ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ;2 ದಿನದಲ್ಲಿ ಮನೆಗೆ
Team Udayavani, Jan 9, 2019, 9:51 AM IST
ಮುಂಬಯಿ : ಗಂಟಲು ಕ್ಯಾನ್ಸರ್ ಗಾಗಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಿನ್ನೆ ಮಂಗಳವಾರ ಶಸ್ತ್ರಚಿಕಿತ್ಸೆ ಪಡೆದುಕೊಂಡಿರುವ ಹಿರಿಯ ಚಿತ್ರ ನಿರ್ಮಾಪಕ ರಾಕೇಶ್ ರೋಶನ್ ಅವರು “ಎಲ್ಲವೂ ಸರಿಯಾಗಿದೆ’ ಎಂದು ಹೇಳಿದ್ದಾರೆ.
ಇನ್ನೆರಡು ದಿನಗಳಲ್ಲಿ ರಾಕೇಶ್ ರೋಶನ್ ಮನೆಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಬುಧವಾರ ಸಂದೇಶವೊಂದರ ಮೂಲಕ ಉತ್ತರಿಸಿರುವ ರಾಕೇಶ್ ರೋಶನ್ ಅವರು, “ನಾನೀಗ ಆರೋಗ್ಯವಾಗಿದ್ದೇನೆ; ಧನ್ಯವಾದಗಳು. ಶಸ್ತ್ರಚಿಕಿತ್ಸ ನಡೆಸಲಾಗಿದೆ; ಎಲ್ಲವೂ ಸರಿ ಹೋಗಿದೆ; ದೇವರು ದೊಡ್ಡವ; ಶುಕ್ರವಾರ ಅಥವಾ ಶನಿವಾರ ನಾನು ಮನೆಗೆ ಮರಳುತ್ತೇನೆ’ ಎಂದು ಹೇಳಿದ್ದಾರೆ.
ರಾಕೇಶ್ ರೋಶನ್ ಅವರು ಶಸ್ತ್ರಚಿಕಿತ್ಸೆಗೆ ಹೋಗುವಾಗ ಅವರೊಂದಿಗೆ ಪತ್ನಿ, ಸಹೋದರ ರಾಜೇಶ್ ರೋಶನ್, ಪತ್ರ ಹೃತಿಕ್ ರೋಶನ್, ಪುತ್ರಿ ಸುನೈನಾ ಇದ್ದರು. ಶಸ್ತ್ರ ಚಿಕಿತ್ಸೆ ಬಳಿಕ ರಾಕೇಶ್ ಜೀ ಆರಾಮವಾಗಿದ್ದಾರೆ; ಉಲ್ಲಾಸ, ಹುರುಪು, ಚೈತನ್ಯದಿಂದ ಇದ್ದಾರೆ; ಬೇಗನೆ ಅವರು ಮನೆಗೆ ಮರಳಲಿದ್ದಾರೆ ಎಂದು ಕುಟುಂಬ ಮೂಲಗಳು ಹೇಳಿವೆ.
“ದೇವರು ನನ್ನನ್ನು ಮತ್ತು ನನ್ನ ಕುಟುಂಬವನ್ನು ನೋಡುತ್ತಿದ್ದಾನೆ ಎಂದು ನಾನು ನಂಬುತ್ತೇನೆ. ನನಗೆ ಕರ್ಮದಲ್ಲಿ ನಂಬಿಕೆ ಇದೆ; ನಾನೋರ್ವ ಸಾರ್ವಕಾಲಿಕ ಹೋರಾಟಗಾರ; ನಾವು ಮಾಡುವ ಒಳ್ಳೆಯ ಕೆಲಸಗಳೇ ನಮ್ಮ ಜೀವನದಲ್ಲಿ ನಾವು ಒಳ್ಳೆಯದನ್ನು ಪಡೆಯುವುದಕ್ಕೆ ಕಾರಣವಾಗುತ್ತವೆ; ಬದುಕಿನಲ್ಲಿ ಕೆಲವೊಮ್ಮೆ ಹಿನ್ನಡೆಗಳು ಇದ್ದೇ ಇರುತ್ತವೆ; ಆದರೆ ಸದಾ ಕ್ರಿಯಾಶೀಲನಾಗಿರುವುದೇ ಬದುಕಿನ ಗುರಿಯಾಗಬೇಕು’ ಎಂದು ರಾಕೇಶ್ ರೋಶನ್ ಈ ಹಿಂದೆ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ