ಹಿರಿಯ ನಟ ರಿಷಿ ಕಪೂರ್‌ ಆರೋಗ್ಯ ಏನಾಗಿದೆ ? ಕ್ಯಾನ್ಸರ್‌ ವದಂತಿ


Team Udayavani, Jan 4, 2019, 10:41 AM IST

rishi-kapoor-700.jpg

ಹೊಸದಿಲ್ಲಿ : ಹಿರಿಯ ಬಾಲಿವುಡ್‌ ನಟ ರಿಷಿ ಕಪೂರ್‌ ಆರೋಗ್ಯಕ್ಕೆ  ಏನಾಗಿದೆ ? ಪ್ರಕೃತ ಅಮೆರಿಕದಲ್ಲಿ ರಿಷಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಕ್ಯಾನ್ಸರ್‌ ಪೀಡಿರಾಗಿದ್ದಾರೆಯೇ ಎಂಬ ಶಂಕೆ ಈಗ ಅವರ ಅಭಿಮಾನಿಗಳನ್ನು ಕಾಡುತ್ತಿದೆ. 

ಈ ಶಂಕೆಗೆ ಕಾರಣ ರಿಷಿ ಕಪೂರ್‌ ಪತ್ನಿ ನೀತೂ ಕಪೂರ್‌ (ಮಾಜಿ ಬಾಲಿವುಡ್‌ ನಟಿ ನೀತೂ ಸಿಂಗ್‌) ಅವರು ಇನ್‌ಸ್ಟಾಗ್ರಾಂ ನಲ್ಲಿ  ಹಾಕಿರುವ ಒಂದು ಪೋಸ್ಟ್‌. ಅದರಲ್ಲಿ ಆಕೆ “ಕ್ಯಾನ್ಸರ್‌ ಅನ್ನೋದು ಕೇವಲ zodiac sign (ರಾಶಿ ಚಿಹ್ನೆ) ಮಾತ್ರವೇ ಆಗಿರಲಿ ಅಂತ ನಾನು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ. ನೀತೂ ಅವರ ಈ ಪೋಸ್ಟ್‌ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. 

ನೀತೂ ಹಾಕಿರುವ ಈ ಪೋಸ್ಟ್‌  ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ 
ರಿಷಿ ಕಪೂರ್‌ ಬಗೆಗೋ ಅಥವಾ ಸ್ವತಃ ತನ್ನ ಬಗೆಗೋ ಎಂಬುದೀಗ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಅಂತೆಯೇ ಅವರಲ್ಲಿ ಇದು ತೀವ್ರ ಕಳವಳ ಸೃಷ್ಟಿಸಿದೆ.

ಈ ನಡುವೆ ರಿಷಿ ಕಪೂರ್‌ ಅವರ ಸಹೋದರ, ನಟ ರಣಧೀರ್‌ ಕಪೂರ್‌, ಚಿಂತೂ (ರಿಷಿ) ಆರೋಗ್ಯದ ಬಗ್ಗೆ ಕೆಲವೊಂದು ಅಪ್‌ಡೇಟ್‌ ನೀಡಿದ್ದಾರೆ. 

ಹಿಂದುಸ್ಥಾನ್‌ ಟೈಮ್ಸ್‌ ಜತೆಗೆ ಮಾತನಾಡುತ್ತಾ ರಣಧೀರ್‌ ಕಪೂರ್‌ ಅವರು, “ಇದರ ಬಗ್ಗೆ (ಕ್ಯಾನ್ಸರ್‌) ನನಗೆ ಹೆಚ್ಚೇನೂ ಗೊತ್ತಿಲ್ಲ. ಜನರು ತಮಗೆ ಬೇಕಾದ ರೀತಿಯಲ್ಲಿ ಮಾತನಾಡಿಕೊಳ್ಳುವುದು ಸ್ವಾಭಾವಿಕ. ಆದರೆ ರಿಷಿ ಆರೋಗ್ಯದಿಂದಿದ್ದಾರೆ ಎಂದಷ್ಟೇ ಹೇಳಬಲ್ಲೆ; ಇಲ್ಲಿರುವ ಫೋಟೋ ಅದಕ್ಕೆ ಸಾಕ್ಷಿ. ಎಲ್ಲರೊಂದಿಗೂ ಬೆರೆತು ರಿಷಿ ಮಾತನಾಡುತ್ತಿದ್ದಾರೆ. ಒಳ್ಳೆಯ ಊಟ, ಆಹಾರ ಸೇವಿಸುತ್ತಿದ್ದಾರೆ. ಆತ ಬೇಗನೆ ಭಾರತಕ್ಕೆ ಮರಳಲಿದ್ದಾರೆ. ನಾವದನ್ನೀಗ ಎದುರು ನೋಡುತ್ತಿದ್ದೇವೆ’ ಎಂದು ಹೇಳಿದರು.

 

2018ರ ಸೆಪ್ಟಂಬರ್‌ನಲ್ಲಿ ರಿಷಿ ಕಪೂರ್‌ ‘ನಾನು ಕೆಲವು ವೈದ್ಯಕೀಯ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಹೋಗುತ್ತಿದ್ದೇನೆ; ಯಾರೂ ದಯವಿಟ್ಟು ನನ್ನ ಆರೋಗ್ಯದ ಬಗ್ಗೆ ವದಂತ ಹಬ್ಬಿಸಬಾರದು’ ಎಂದು ಸಾಮಾಜಿಕ ಜಾಲ ತಾಣದಲ್ಲಿ ಮನವಿ ಮಾಡಿಕೊಂಡಿದ್ದರು. 

ತಾಯಿ ಕೃಷ್ಣ ರಾಜ್‌ ಕಪೂರ್‌ ನಿಧನ ಹೊಂದಿದ್ದಾಗ ಅವರ ಅಂತ್ಯಕ್ರಿಯೆಗೂ ರಿಷಿ ಬಂದಿರಲಿಲ್ಲ. ಇದರಿಂದಾಗಿ ಸಾಮಾಜಿಕ ಜಾಲ ತಾಣದಲ್ಲಿ ‘ರಿಷಿ ಕಪೂರ್‌  ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ’ ಎಂಬ ವದಂತಿ ವ್ಯಾಪಕವಾಗಿ ಹರಡಿತ್ತು.

ಈ ವರೆಗೂ ರಿಷಿ ಕಪೂರ್‌ ಯಾವ ವ್ಯಾದಿಯಿಂದ ಬಳಲುತ್ತಿದ್ದಾರೆ ಎಂಬ ಬಗ್ಗೆ ಅವರಿಂದಾಗಲೀ ಅವರ ಕುಟುಂಬದವರಿಂದಾಗಲೀ ಯಾವುದೇ ಮಾಹಿತಿ, ದೃಢೀಕರಣ ಇಲ್ಲ. 

ಇದೇ ವೇಳೆ ರಿಷಿ ಕಪೂರ್‌ ಅವರ ಮಕ್ಕಳಾದ ರಣಬೀರ್‌ ಕಪೂರ್‌ ಮತ್ತು ರಿದ್ಧಿಮಾ ಕಪೂರ್‌ ಸಾಹಿನಿ ಅವರು ನ್ಯೂಯಾರ್ಕ್‌ ನಲ್ಲೇ ಇದ್ದಾರೆ. ಅಲ್ಲಿಯೇ ಎಲ್ಲರೂ ಜತೆಗೂಡಿ ಹೊಸ ವರ್ಷ ಆಚರಿಸಿದ್ದಾರೆ. 

ರಿದ್ಧಿಮಾ ಜತೆಗೆ ಆಕೆಯ ಪತಿ ಭರತ್‌ ಮತ್ತು ಪುತ್ರಿ ಸಮರಾ ಇದ್ದಾರೆ. ರಣಬೀರ್‌ ಜತೆಗೆ ಆತನ ಗರ್ಲ್ ಫ್ರೆಂಡ್‌ ಎಂದು ವದಂತಿಯಾಗಿರುವ ಅಲಿಯಾ ಭಟ್‌ ಇದ್ದಾರೆ.  

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್‌ ಬಿ; ಗಮನ ಸೆಳೆದ ಪಾತ್ರದ ಝಲಕ್

Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್‌ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ

Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್‌ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

3

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.