ನಿರ್ಭಯಾ ಪ್ರಕರಣದ Delhi Crime ವೆಬ್ ಸಿರೀಸ್ಗೆ “ಎಮ್ಮಿ ಬೆಸ್ಟ್ ಡ್ರಾಮಾ” ಪುರಸ್ಕಾರ
Team Udayavani, Nov 24, 2020, 3:40 PM IST
ಮಣಿಪಾಲ: ನೆಟ್ಫ್ಲಿಕ್ಸ್ನಲ್ಲಿ ಹೆಸರು ಮಾಡಿದ್ದ ವೆಬ್ ಸರಣಿ “ದಿಲ್ಲಿ ಕ್ರೈಮ್ʼ 48ನೇ ಅಂತಾರಾಷ್ಟ್ರೀಯ ಎಮ್ಮಿ ಅವಾರ್ಡ್ ಪುರಸ್ಕಾರದಲ್ಲಿ “ಬೆಸ್ಟ್ ಡ್ರಾಮಾʼ ವಿಭಾಗಕ್ಕೆ ಆಯ್ಕೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಎಮ್ಮಿ ಪ್ರಶಸ್ತಿ ಪಡೆದ ಮೊದಲ ವೆಬ್ ಸರಣಿ ಎಂಬ ಕೀರ್ತಿಗೆ ಭಾಜನವಾಗಿದೆ.
2012ರಲ್ಲಿ ದಿಲ್ಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಕುರಿತಾಗಿರುವ ಈ ಸರಣಿಯನ್ನು ರಿಚೀ ಮೆಹ್ತಾ ನಿರ್ದೇಶಿಸಿದ್ದಾರೆ. ಇದರಲ್ಲಿ ಶೆಫಾಲಿ ಷಾ ಮುಖ್ಯ ಪಾತ್ರದಲ್ಲಿದ್ದು, ಪೊಲೀಸ್ ಉಪ ಆಯುಕ್ತರ ಪಾತ್ರವನ್ನು ನಿರ್ವಹಿಸಿದ್ದಾರೆ.
ಈ ವರ್ಷದ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ಭಾರತದಿಂದ ಮೂರು ನಾಮನಿರ್ದೇಶನಗೊಳಿಸಲಾಗಿತ್ತು. ʼದಿಲ್ಲಿ ಕ್ರೈಂʼ ಹೊರತಾಗಿ ಅಮೆಜಾನ್ ಪ್ರೈಮ್ ವೀಡಿಯೋದ ವೆಬ್ ಸರಣಿ “ಮೇಡ್ ಇನ್ ಹೆವನ್ʼ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅರ್ಜುನ್ ಮಾಥುರ್ ಅವರನ್ನು ಎಮ್ಮಿ ಅತ್ಯುತ್ತಮ ನಟ ವಿಭಾಗಕ್ಕೆ ನಾಮನಿರ್ದೇಶನಗೊಳಿಸಲಾಗಿತ್ತು. ಆದರೆ ಈ ಪ್ರಶಸ್ತಿಯನ್ನು ಯುಕೆ ಟಿವಿ ಸರಣಿಯ “ರೆಸ್ಪಾನ್ಸಿಬಲ್ ಚೈಲ್ಡ್ʼ ನ ನಟ ಬಿಲ್ಲಿ ಬ್ಯಾರಟ್ ಅವರಿಗೆ ನೀಡಲಾಗಿದೆ.
The International Emmy for Drama Series goes to “Delhi Crime” produced by @GoldenKaravan / @skglobalent / @NetflixIndia, #India!#iemmys #iemmyWIN pic.twitter.com/kA5pHCuTC4
— International Emmy Awards (@iemmys) November 23, 2020
ಪ್ರೈಮ್ ವೀಡಿಯೋದ “Four More Shots Pleaseʼ ಅನ್ನು ಭಾರತ ಅತ್ಯುತ್ತಮ ಹಾಸ್ಯ ಸರಣಿ ವಿಭಾಗಕ್ಕೆ ಸೂಚಿಸಿತ್ತು. ಆದರೆ ಈ ಪ್ರಶಸ್ತಿಯನ್ನು ಬ್ರೆಜಿಲ್ನ ಹಾಸ್ಯ ಸರಣಿ ನೋ-ಬಾಡಿ ಲುಕಿಂಗ್ (Ningmu Ta Olhando) ಗೆದ್ದುಕೊಂಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಪುರಸ್ಕಾರಗಳನ್ನು ಮೊದಲ ಬಾರಿ ಆನ್ಲೈನ್ನಲ್ಲಿ ಘೋಷಿಸಲಾಗಿದೆ. ನವೆಂಬರ್ 23 ರಂದು, ನ್ಯೂಯಾರ್ಕ್ ನಗರದ ಹ್ಯಾಮರ್ಸ್ಟೈನ್ ಬಾಲ್ ರೂಂನಿಂದ ನೇರ ಪ್ರಸಾರವಾದ ಈ ಪ್ರಶಸ್ತಿಗಳನ್ನು ರಿಚರ್ಡ್ ಕೈಂಡ್ ಆಯೋಜಿಸಿದ್ದರು.
ಟಿವಿ ಮತ್ತು ವೆಬ್ ಶೋ ಮತ್ತು ಕಲಾವಿದರನ್ನು ಗೌರವಿಸುವ ಸಲುವಾಗಿ 1973 ರಿಂದ ಪ್ರತಿ ವರ್ಷ ನವೆಂಬರ್ನಲ್ಲಿ ಈ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಕಳೆದ ವರ್ಷ ಭಾರತದಿಂದ ಕೇವಲ ಒಂದು ನಾಮನಿರ್ದೇಶನಗೊಂಡಿತ್ತು. Lust Stories ಎಂಬ ಸರಣಿಯ ರಾಧಿಕಾ ಆಪ್ಟೆ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು.
Congratulations to the 48th International Emmy Award Winners! https://t.co/FjEiVXDQcE#iemmys pic.twitter.com/ZiKLr86arM
— International Emmy Awards (@iemmys) November 23, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
MUST WATCH
ಹೊಸ ಸೇರ್ಪಡೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು