- Wednesday 11 Dec 2019
ಗೋವಾ ಚಿತ್ರೋತ್ಸವ :ಐವತ್ತು ವರ್ಷಗಳ ಸಿನಿಮಾ ಕನ್ನಡದ ಉಯ್ಯಾಲೆ ಪ್ರದರ್ಶನಕ್ಕೆ ಅವಕಾಶ
Team Udayavani, Nov 18, 2019, 3:46 PM IST
ಪಣಜಿ, ನ. 18:ಸುವರ್ಣ ಸಂಭ್ರಮದಲ್ಲಿರುವ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ [ಇಫಿ] ನಲ್ಲಿ ಈ ಬಾರಿಯ ಮತ್ತೊಂದು ವಿಶೇಷವೆಂದರೆ ಐವತ್ತು ವರ್ಷಗಳ ಹಿಂದೆ ಅಂದರೆ 1969ರಲ್ಲಿ ಬಿಡುಗಡೆಯಾದ ಭಾರತೀಯ ಭಾಷೆಯ ಪ್ರಮುಖ ಚಿತ್ರಗಳ ಸಣ್ಣದೊಂದು ಅವಲೋಕನ.
ಇದರ ಭಾಗವಾಗಿ ಒಂಬತ್ತು ದಿನಗಳ ಉತ್ಸವದಲ್ಲಿ ಹನ್ನೊಂದು ಪ್ರಶಸ್ತಿ ಪುರಸ್ಕೃತ ಭಾರತೀಯ ಭಾಷೆಗಳ ಚಲನ ಚಿತ್ರಗಳು ಪ್ರದರ್ಶನವಾಗಲಿವೆ. ಇದು ಇನ್ನೊಂದು ಬಗೆಯಲ್ಲಿ ಭಾರತೀಯ ಭಾಷಾ ಚಿತ್ರರಂಗದ ಹೊಸಅಲೆಯನ್ನು ಗುರುತಿಸುವ ಪ್ರಯತ್ನವೂ ಹೌದು.
ಈ ಗೌರವ ಸಿಕ್ಕಿರುವುದು ಎನ್. ಲಕ್ಷ್ಮೀನಾರಾಯಣರ ಉಯ್ಯಾಲೆ ಚಿತ್ರಕ್ಕೆ. ಉಳಿದಂತೆ ಒಡಿಯಾ, ಬಂಗಾಳಿ, ತಮಿಳು, ತೆಲುಗು, ಮರಾಠಿ, ಹಿಂದಿ, ಅಸ್ಸಾಮಿ ಹಾಗೂ ಮಲಯಾಳಂ ಭಾಷೆಯ ಚಲನಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ.
ಚಿತ್ರಗಳ ವಿವರ:
ಎನ್ ಟಿರಾಮರಾವ್ ಅವರ ವರಕ್ತಂ, ಬ್ರಜೇನ್ ಬರುವಾ ಅವರ ಡಾ. ಬೇಜ್ ಬರುವಾ, ಸತ್ಯಜಿತ್ ರೇ ಅವರ ಅರಗೂಪಿ ಗೈನೆ ಬಾಘಾಬೖನೆ, ಕೆ. ಬಾಲಚಂದರ್ ನಿರ್ದೇಶನದ ಕೋಡುಗಲ್, ರಾಮ್ ಮಹೇಶ್ವರಿಯವರ ನಾನಕ್ ನಾಮ್ ಜಹಾಜ್ ಹೈ, ಹೃಷಿಕೇಶ್ ಮುಖರ್ಜಿಯವರ ಸತ್ಯಕಮ್, ಸಿದ್ಧಾರ್ಥರ ಸ್ತ್ರೀ, ಬಲ್ಜಿಪೆಂಡರಕರ್ ರ ತಂಬ್ದಿ, ಶಕ್ತಿಸಮಂತಾ ರ ಆರಾಧನಾ ಹಾಗೂ ಕೆ.ಎಸ್. ಸೇತು ಮಾಧವನ್ ಆವರ ಆದಿಮಕಲ್ ಸೇರಿವೆ.
ಉಯ್ಯಾಲೆ ಚಿತ್ರದ ಕುರಿತು:
ಈ ಚಿತ್ರತೆರೆ ಕಂಡದ್ದು 1969 ರಲ್ಲಿ. ಡಾ.ರಾಜ್ಕುಮಾರ್ ಮತ್ತು ಕಲ್ಪನಾ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದರು. ಕನ್ನಡದ ಖ್ಯಾತ ಕಾದಂಬರಿಕಾರ ಚದುರಂಗ ಅವರ ಕಾದಂಬರಿಯನ್ನು ಆಧರಿಸಿ ರೂಪಿಸಿದ ಸಿನಿಮಾ.
ಚದುರಂಗರು ಬರೀ ಸಿನಿಮಾಕಥೆ ಕೊಟ್ಟಿರಲಿಲ್ಲ, ಜತೆಗೆ ಸಂಭಾಷಣೆಯನ್ನೂಬರೆದಿದ್ದರು. ಇದಕ್ಕೆ ಸಂಗೀತ ಒದಗಿಸಿದವರು ವಿಜಯಭಾಸ್ಕರ್. ಗೋಪಾಲ್ ಮತ್ತು ಲಕ್ಷ್ಮಣ್ ಈ ಚಿತ್ರದ ನಿರ್ಮಾಪಕರು.
ಎನ್. ಲಕ್ಷ್ಮೀನಾರಾಯಣ್ ಅವರು ತಮ್ಮ ನಾಂದಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಚಿತ್ರಗಳನ್ನು ಶುರು ಮಾಡಿದವರು. ಹಲವಾರು ಸಾಮಾಜಿಕ ಸಂಗತಿಗಳನ್ನು ಅತ್ಯಂತ ಸಮರ್ಪಕವಾಗಿ ಜನಪ್ರಿಯತೆಯ ನೆಲೆಯಲ್ಲೇ ಸಿನಿಮಾ ರೂಪಿಸಿ ಯಶಸ್ವಿಯಾದವರು.
ಈ ವಿಭಾಗದಿಂದ ಇನ್ನಷ್ಟು
-
ಪಣಜಿ(ಉದಯವಾಣಿ ಪ್ರತಿನಿಧಿಯಿಂದ): ಗೋವಾದಪಣಜಿಯಲ್ಲಿ ನ.೨೦ ರಿಂದಆರಂಭವಾಗಿದ್ದ ೫೦ ನೇಭಾರತೀಯಅಂತಾರಾಷ್ಟ್ರೀಯಚಿತ್ರೋತ್ಸವಕ್ಕೆಗುರುವಾರತೆರೆಬಿದ್ದಿದ್ದು,...
-
ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದೊಂದಿಗೆ ನಡೆಯುತ್ತಿರುವ ಎನ್ಎಫ್ ಡಿಸಿ ಯ 13ನೇ ವರ್ಷದ ಫಿಲ್ಮ್ ಬಜಾರ್ ರವಿವಾರ ಸಮಾಪನಗೊಂಡಿದ್ದು, ಕನ್ನಡದ ಯುವ ನಿರ್ದೇಶಕರು...
-
ಪಣಜಿ: ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದೇ ಇಂದಿನ ತುರ್ತು ಅವಶ್ಯ. ಸಾಕ್ಷ್ಯಚಿತ್ರ ರೂಪಿಸುವವರಿಗೆ ಕೊರತೆ ಇಲ್ಲ, ಆದರೆ ಆವುಗಳನ್ನು ಪ್ರೇಕ್ಷಕರಿಗೆ...
-
ಪಣಜಿ: ಕನ್ನಡದಲ್ಲಿ ಸಮಕಾಲೀನ ಸಂಗತಿಗಳನ್ನು ಕಥಾವಸ್ತುವನ್ನಾಗಿ ಸ್ವೀಕರಿಸಿ ಸಿನಿಮಾ ಮಾಡುವ ಪ್ರಯತ್ನಗಳೇ ಬಹಳ ಕಡಿಮೆ. ನನ್ನ ಸಿನಿಮಾ ಅಧುನಿಕ ಬದುಕಿಗೆ ಸಂಬಂಧಿಸಿದ್ದೇ....
-
ಪಣಜಿ: ನಾನು ಯಾವಾಗಲೂ ಬದುಕನ್ನು ಆಶಾವಾದದಿಂದ ಸ್ವೀಕರಿಸಿದವಳು. ಅರ್ಧ ಲೋಟ ತುಂಬಿದೆ ಎಂಬ ದೃಷ್ಟಿಕೋನದಿಂದಲೇ ಬೆಳೆದವಳು, ಎಂದಿಗೂ ನನಗೆ ಅರ್ಧ ಲೋಟ ಖಾಲಿ ಇದೆ...
ಹೊಸ ಸೇರ್ಪಡೆ
-
ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಕೆರೆ ಕೋಡಿ ಒಡೆದಿದ್ದು, ಅಪಾರ ಪ್ರಮಾಣದಲ್ಲಿ ಕೆರೆ ನೀರು ಪೋಲಾಗುತ್ತಿದೆ. ಮಾಚಿಹಳ್ಳಿ ಕೊರಚರಹಟ್ಟಿ...
-
ಸುರಪುರ: ತಾಲೂಕಿನ ಯಕ್ತಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿ ಅಂಕಪಟ್ಟಿ ತಿದ್ದುಪಡಿ ಮಾಡಿದ ಪ್ರಧಾನ ಶಿಕ್ಷಕರ...
-
ದೇಶ ಕಾಯುವ ಯೋಧರು ನಮ್ಮನ್ನು ಶತ್ರುಗಳಿಂದ ರಕ್ಷಿಸಿದರೆ, ಹೊಲ ಉಳುವ ರೈತ ನಮಗೆಲ್ಲಾ ಅನ್ನದಾತ, ಹಸಿವಿನಿಂದ ನಮ್ಮನ್ನು ರಕ್ಷಿಸುವ ದೇವದೂತ. ಅಂತಹ ರೈತರನ್ನು ಸ್ಮರಿಸುವುದು...
-
ಚಂದ್ರಶೇಖರ ಯರದಿಹಾಳ ಸಿಂಧನೂರು: ಸಿಂಧನೂರು ನಗರದ ಪ್ರಮುಖ ರಸ್ತೆಗಳಲ್ಲಿರುವ ವಿವಿಧ ಸರ್ಕಾರಿ ಕಚೇರಿ, ಬ್ಯಾಂಕ್ಗಳ ಎದುರು ಸವಾರರು ಅಡ್ಡಾದಿಡ್ಡಿ ಬೈಕ್ ನಿಲುಗಡೆ...
-
ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ಕರೆ ಮೇರೆಗೆ ಮಂಗಳವಾರ ಜಿಲ್ಲೆಯ ಖಾಸಗಿ ಶಿಕ್ಷಣ...