ಮೆಹರುನ್ನೀಸಾ ಎತ್ತುವ ಪ್ರಶ್ನೆ-> 80 ಆದರೂ ಹೀರೋ ಆಗಬಹುದಾದರೆ ನಟಿಯರಿಗೇಕೆ ವಯಸ್ಸಿನ ಲೆಕ್ಕ?


Team Udayavani, Jan 23, 2021, 1:05 PM IST

meharunnisa

ಪಣಜಿ: ಸಿನಿಮಾ ರಂಗದಲ್ಲಿ ಅದರಲ್ಲೂ ಬಾಲಿವುಡ್‌ನಲ್ಲಿ ನಟನಿಗೆ ಎಂಬತ್ತು ವರ್ಷವಾದರೂ ಮುಖಬೆಲೆ ಇರುವಾಗ ನಟಿಯರಿಗೆ ಏಕಿಲ್ಲ? ವಯಸ್ಸಿನ ಲೆಕ್ಕಾಚಾರ ನಟಿಗೆ ಮಾತ್ರ ಏಕೆ? ಇದು ಪುರುಷ ಪ್ರಧಾನವಾದ ಬಾಲಿವುಡ್ ಸೇರಿದಂತೆ ಒಟ್ಟೂ ಭಾರತೀಯ ಚಿತ್ರರಂಗದ ಮುಖವಲ್ಲದೇ ಮತ್ತೇನು?  ಈ ಪ್ರಶ್ನೆಯನ್ನು ಚರ್ಚೆಗೆ ಒಡ್ಡುವುದೇ ಸಂದೀಪ್‌ ಕುಮಾರ್‌ ನಿರ್ದೇಶನದ ‘ಮೆಹರುನ್ನೀಸಾ’.

ಚಿತ್ರೋತ್ಸವದಲ್ಲಿ ವಿಶ್ವ ಪ್ರೀಮಿಯರ್ ಆಗಿ ಪ್ರದರ್ಶಿತಗೊಂಡ ಮೆಹರುನ್ನೀಸಾ ಬಾಲಿವುಡ್‌ ನಲ್ಲಿದ್ದು, ತೆರೆಮರೆಗೆ ಸರಿದು, ಇತ್ತೀಚಿನ ಮೂರ್ನಾಲ್ಕು ವರ್ಷಗಳಲ್ಲಿ ಒಂದಿಷ್ಟು ಅವಕಾಶಗಳನ್ನು ಪಡೆಯುತ್ತಿರುವ ನಟಿಯ ಕುರಿತಾದ ಚಿತ್ರ. ವಿಶೇಷವೆಂದರೆ ಎಂಬತ್ತೆಂಟು ವರ್ಷದ ಈ ನಟಿಯೇ ಈ ಚಿತ್ರದ ಕಥಾ ನಾಯಕಿ. ನಟಿಯ ಹೆಸರು ಫರೂಖಾ ಜಾಫರ್‌.

1983 ರಲ್ಲಿ ಉಮ್ರಾ ಜಾನ್‌ ಚಿತ್ರದಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದ್ದರು ಫರೂಖಾ. ವಿವಿಧ ಭಾರತಿ ಆಕಾಶವಾಣಿಯ ಉದ್ಘೋಷಕಿಯೂ ಆಗಿದ್ದ ಅವರಿಗೆ ಆ ಬಳಿಕ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ತದನಂತರ ಸ್ವದೇಶ್ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಮತ್ತೆ ಮೋಡ ಆವರಿಸಿಕೊಂಡಿತು. 2009 ರಲ್ಲಿ ಪೀಪ್ಲಿ ಲೈವ್ ನಲ್ಲಿ ಅವಕಾಶ ಸಿಕ್ಕಿತಾದರೂ ಆ ಅವಕಾಶಗಳ ಸರಪಳಿ ಮುಂದುವರಿಯಲು ನಾಲ್ಕು ವರ್ಷಗಳು ಬೇಕಾದವು. 2013 ರಲ್ಲಿ ಅನ್ವರ್‌ ಕಾ ಅಜೂಬ್‌ ಕಿಸ್ಸಾದಲ್ಲಿ ಅವಕಾಶ ಸಿಕ್ಕಿ, 2015 ರ ಬಳಿಕ ನಿರಂತರವಾಗಿ ಅಭಿನಯಿಸುತ್ತಿದ್ದಾರೆ. ಮೆಹರುನ್ನೀಸಾದ ಮೊದಲು ಅವರು ಅಭಿನಯಿಸಿದ ಚಿತ್ರ ಗುಲಾಬೊ ಸಿತಾಬೊ. ಅದರಲ್ಲಿ ಅಮಿತಾಬ್‌ ಬಚ್ಚನ್‌ ಸಹ ಅಭಿನಯಿಸಿದ್ದಾರೆ.

ಇದನ್ನೂ ಓದಿ:  ವರ್ಚುಯಲ್ ವರ್ಸಸ್ ಫಿಸಿಕಲ್: ಚರ್ಚೆ ಹುಟ್ಟುಹಾಕಿದ ಪಣಜಿ ಚಿತ್ರೋತ್ಸವ

ಸಂದೀಪ್‌ ಕುಮಾರ್‌ ಭಾರತೀಯ ಮೂಲದವರಾದರೂ ಆಸ್ಟ್ರಿಯಾದ ಚಿತ್ರ ನಿರ್ದೇಶಕ. ತಮ್ಮ ಸಿನಿಮಾದ ಮೂಲಕ ವಿವರಿಸುತ್ತಾ, ‘ವೃದ್ಧ ನಟರೂ ಹೀರೋಗಳಾಗಬಹುದಾದರೆ, ನಟಿಯರಿಗೆ ಯಾಕೆ ಅವಕಾಶ ಇಲ್ಲ. ಈ ತಾರತಮ್ಯ ಭಾರತೀಯ ಸಿನಿಮಾ ರಂಗದಲ್ಲಿ ಮಾತ್ರ. ಯುರೋಪಿನಲ್ಲಿ ಇಂದಿಗೂ 80ರ ಪ್ರಾಯದವರು ನಾಯಕರಾಗಿ ಅಭಿನಯಿಸುತ್ತಾರೆ. ನಾನು ಹೀಗೇ ಕಥೆಯ ಎಳೆ ಹುಡುಕುವಾಗ ಫರೂಖಾ ಜಾಫರ್ ಕುರಿತು ಓದಿದೆ. ವಿಚಿತ್ರವೆನಿಸಿತು. ಆ ಬಳಿಕ ಅಧ್ಯಯನ ಮಾಡಿ ಕಥೆಯನ್ನು ರೂಪಿಸಿದೆ. ಆದಷ್ಟು ನೈಜ ಲೋಕೇಷನ್‌ಗಳನ್ನೇ ಬಳಸಿದ್ದೇವೆ’ ಎಂದರು.

ಭಾರತೀಯ ಕಥಾವಸ್ತುವಿನ ಚಿತ್ರಕ್ಕೆ ಭಾರತದಲ್ಲೇ (ಇಫಿ) ವಿಶ್ವ ಪ್ರೀಮಿಯರ್‌ ಮಾಡಲು ಅವಕಾಶ ಸಿಕ್ಕಿದ್ದು ಒಂದು ಒಳ್ಳೆಯ ಅವಕಾಶ. 40 ವರ್ಷಗಳಿಂದ ತೆರೆಗೆ ಸರಿದಿದ್ದ ಒಬ್ಬ ನಟಿಯ ಪ್ರಧಾನ ನೆಲೆಗೆ ತಂದ ಖುಷಿ ನಮ್ಮದು ಎಂದರು ಸಂದೀಪ್‌ ಕುಮಾರ್.

ಇದನ್ನೂ ಓದಿ:   ಗೋವಾ ಚಿತ್ರೋತ್ಸವ: ಓಟಿಟಿ ಸಿನಿಮಾ ಮಂದಿರಗಳನ್ನು ಕೊಲ್ಲುತ್ತದೆಯೇ? ಒಂದು ಚರ್ಚೆ

ಇದು ಮೂರು ತಲೆಮಾರುಗಳ ಕಥೆ. ಫರೂಖಾ ಜಾಫರ್‌ ನ ಮಗಳಾಗಿ ಅಭಿನಯಿಸಿರುವ ತುಲಿಕಾ ಬ್ಯಾನರ್ಜಿ, ಹೊಸ ತಲೆಮಾರು (ಯುವಜನರು] ಗ್ಯಾಜೆಟ್ಸ್‌ ಗಳ ಬಗ್ಗೆ ಚೆನ್ನಾಗಿ ತಿಳಿದಿರಬಹುದು. ಆದರೆ ನಮ್ಮ ಹಿರಿಯರು ಬದುಕಿನ ಅನುಭವಗಳನ್ನೇ ಆಸ್ತಿಯಾಗಿಟ್ಟುಕೊಂಡಿದ್ದಾರೆ. ವಯಸ್ಸು ಎಂಬುದು ಬರೀ ಒಂದು ಸಂಖ್ಯೆಯೇ ಹೊರತು ಬೇರೇನೂ ಅಲ್ಲ. ಇದನ್ನು ತಿಳಿಸುವುದೇ ಚಿತ್ರದ ಉದ್ದೇಶ’ ಎಂದರು. ಮೊಮ್ಮಗಳಾಗಿ ಅಭಿನಯಿಸಿರುವ ಅಂಕಿತಾ ದುಬೆ ಸಹ, ‘ಇದರ ಸ್ಕ್ರಿಪ್ಟ್ ಇಷ್ಟವಾಯಿತು. ಹೊಸದು ಎನಿಸಿತು’ ಎಂದರು.

ಮೆಹರುನ್ನೀಸಾ ಚಿತ್ರದಲ್ಲಿ ಬೇಗಂ (ಫ‌ರೂಖಾ ಜಾಫ‌ರ್‌) ಹೀರೋ ಆಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:  ಒಂದು ನಗರದ ಹನ್ನೊಂದು ಕಥೆಗಳಲ್ಲಿ ನಾವೆಲ್ಲಿ ?

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಟೀಕೆ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.