ಪೃಥ್ವಿಯಿಂದ ಅಂಬರಕ್ಕೆ- ‘ದಿಯಾ’ ನಾಯಕನ ಸಿನಿ ಜರ್ನಿ


Team Udayavani, Mar 24, 2021, 7:26 PM IST

pruthvi

ಮಣಿಪಾಲ : ದಿಯಾ ಸಿನಿಮಾ ಮೂಲಕ ಚಂದನವನದಲ್ಲಿ ಹೆಸರು ಗಿಟ್ಟಿಸಿಕೊಂಡ ಹೊಸ ಮೊಗ ಅಂದ್ರೆ ಪೃಥ್ವಿ ಅಂಬಾರ್. ಲಾಕ್ ಡೌನ್ ಸಮಯವೇ ಇವರಿಗೆ ವರವಾಗಿ, ನಂತರ ಹತ್ತಾರು ಅವಕಾಶಗಳು ಸಿಗುವಂತಾಯಿತು. ಈ ಯುವ ನಾಯಕ ಉದಯವಾಣಿ ನಡೆಸಿಕೊಡುವ ‘ತೆರೆದಿದೆ ಮನೆ ಬಾ ಅತಿಥಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಸಿನಿಮಾ ಜರ್ನಿಯನ್ನು ಹಂಚಿಕೊಂಡಿದ್ದಾರೆ.

ತೆರೆಮರೆಯಿಂದ ಮುನ್ನೆಲೆಗೆ ಬಂದ ಕಥೆ ಹೇಳಿ : ಗಾಯನ, ನೃತ್ಯ, ಮಾರ್ಷಲ್ ಆರ್ಟ್, ನಿರೂಪಣೆ ಮಾಡಿಕೊಂಡಿದ್ದ ನನಗೆ ದಿಯಾ ಸಿನಿಮಾ ಹೆಸರು ಕೊಟ್ಟಿತು. ಕೆಲವು ಬಾರಿ ಕೆಲವು ಸಮಯಗಳು ನಮ್ಮನ್ನು ಬೇರೊಂದು ಮಟ್ಟಕ್ಕೆ ಕರೆದೊಯ್ಯುತ್ತವೆ ಎಂಬುದಕ್ಕೆ ನನ್ನ ದಿಯಾ ಸಿನಿಮಾವೇ ಸಾಕ್ಷಿ. ನಮ್ಮದು ಮಿಡ್ಡಲ್ ಕ್ಲಾಸ್ ಜೀವನ. ಇಲ್ಲಿಂದ ಬಂದ ನನಗೆ ಸಿನಿಮಾದಲ್ಲಿ ಹೆಸರು ಮಾಡಲು ಸುಮಾರು 13 ವರ್ಷಗಳೇ ಬೇಕಾಯಿತು.

ದಿಯಾ ಬಗ್ಗೆ ಏನ್ ಹೇಳ್ತೀರಾ : ದಿಯಾ ನನಗೆ ಲೈಫ್ ಕೊಟ್ಟ ಚಿತ್ರ. ಇದಕ್ಕಾಗಿ ನಾವು ಆರು ವರ್ಷ ಕೆಲಸ ಮಾಡಿದ್ದೇವೆ. ಅಶೋಕ್ ಸರ್ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದು, ಲಾಕ್ ಡೌನ್ ವೇಳೆ ರಿಲೀಸ್ ಆಗಿದ್ದೇ ನಮಗೆ ವರವಾಯ್ತು. ಒಟಿಟಿಯಲ್ಲಿ ಭಾರೀ ಪ್ರಮಾಣದ ಮೆಚ್ಚುಗೆ ಸಿಕ್ಕಿತು. ಕನ್ನಡಿಗರು ನಮ್ಮನ್ನ ಕೈ ಹಿಡಿದ್ರು.

ಪೃಥ್ವಿ ಬಾಲಿವುಡ್ ಗೆ ಹಾರಿದ್ರು ಎಂಬ ಮಾತು ಕೇಳ್ತಾ ಇದೆ : ಹೌದು, ದಿಯಾ ಸಿನಿಮಾ ಹಿಂದಿಯಲ್ಲೂ ರಿಮೇಕ್ ಆಗುತ್ತಿದೆ. ಈ ಸಿನಿಮಾದಲ್ಲೂ ನಾನೇ ಹೀರೋ ಆಗಿ ಬಣ್ಣ ಹಚ್ಚುತ್ತಿದ್ದೇನೆ. ದಿಯಾ ಸಿನಿಮಾ ನಿರ್ದೇಶಕ ಅಶೋಕ್ ಅವರಿಂದ ಹಿಂದಿಯ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.

ಶಿವಪ್ಪ ಶೂಟಿಂಗ್ ವೇಳೆ ಶಿವಣ್ಣನ ಜೊತೆ ಇದ್ದ ಅನುಭವ : ಅದೊಂದು ಅದ್ಭುತ ಅನುಭವ. ಅಷ್ಟು ದೊಡ್ಡ ನಟರ ಜೊತೆ ತೆರೆ ಹಂಚಿಕೊಳ್ಳುವುದೇ ಒಂದು ದೊಡ್ಡ ಖುಷಿ. ಇಡೀ ಶಿವಪ್ಪ ಚಿತ್ರದಲ್ಲಿ ಮುಕ್ಕಾಲು ಭಾಗ ಶಿವಣ್ಣ ಜೊತೆಯಲ್ಲೇ ಇರುತ್ತೇನೆ. ಶಿವರಾಜ್ ಕುಮಾರ್ ನಮ್ಮಂತ ಯುವ ನಟರಿಗೆ ಸ್ಪೂರ್ತಿ. ಅವರಲ್ಲಿರುವ ಉತ್ಸುಕತೆ ಮತ್ತು ಹೊಸದನ್ನು ಕಲಿಯುವ ಆಸಕ್ತಿ ತುಂಬಾ ದೊಡ್ಡದು.

6 ವರ್ಷ ಕಾದ ಬಳಿಕ ಯಶಸ್ಸು ತಂದುಕೊಟ್ಟ ಸಿನಿಮಾ ದಿಯಾ: ಪ್ರಥ್ವಿ ಅಂಬಾರ್

ಪುನೀತ್ ಜೊತೆ ಸಿನಿಮಾ ಮಾಡ್ತೀರಂತೆ ನಿಜಾನಾ : ಸದ್ಯಕ್ಕೆ ಮಾಡ್ತಿಲ್ಲ. ಆದ್ರೆ ಮುಂದೊಂದು ದಿನ ಮಾಡುವ ಆಸೆ ಇದೆ. ನನ್ನ ದಿಯಾ ಸಿನಿಮಾವನ್ನು ನೋಡಿ ಅಪ್ಪು ಸರ್ ತುಂಬಾ ಮೆಚ್ಚಿಕೊಂಡಿದ್ರು. ನನಗೆ ಕಾಲ್ ಮಾಡಿ ಖುಷಿ ಪಟ್ಟಿದ್ರು. ಆ ವೇಳೆ ನಡೆದ ಕಾಲ್ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಅದಕ್ಕೆ ಎಲ್ಲರೂ ನನ್ನನ್ನು ಪುನೀತ್ ಜೊತೆ ಸಿನಿಮಾ ಮಾಡ್ತೀಯ ಅಂತ ಕೇಳಿದ್ರು ಅಷ್ಟೆ.

ಮುಂಬರುವ ಸಿನಿಮಾಗಳ ಬಗ್ಗೆ : ಸದ್ಯ ನಾನು ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಲೈಫ್ ಈಸ್ ಬ್ಯೂಟಿಫುಲ್, ಶುಗರ್ ಲೆಸ್, ಶಿವಪ್ಪ ಮತ್ತು ತುಳುವಿನಲ್ಲಿ ಇಂಗ್ಲಿಷ್ ಸಿನಿಮಾದಲ್ಲಿ ನಟಿಸಿದ್ದೇನೆ. ಈ ಸಿನಿಮಾ ಇದೇ 26ಕ್ಕೆ ರಿಲೀಸ್ ಆಗುತ್ತಿದೆ.

ನಿಮ್ಮ ನಟನೆಯ ಹಿಂದಿನ ಸೀಕ್ರೆಟ್ ಹೇಳಿ ; ನಾನು ನಿಜವಾಗಿಯೂ ನಟನೆಯನ್ನು ಯಾವುದೇ ಶಾಲೆಗೆ ಹೋಗಿ ಕಲಿತಿಲ್ಲ. ಅವಕಾಶಗಳು ಸಿಕ್ಕಾಗ ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡೆ. ಅಲ್ಲದೆ ನನ್ನಲ್ಲಿದ್ದ ನಿರೂಪಣೆ, ಡ್ಯಾನ್ಸಿಂಗ್, ಹಾಡುಗಾರಿಕೆಯೇ ನನ್ನನ್ನು ನಟನನ್ನಾಗಿ ಮಾಡಿದೆ. ಅಲ್ಲದೆ ಕನ್ನಡಿಗರ ಪ್ರೋತ್ಸಾಹ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಟಾಪ್ ನ್ಯೂಸ್

Congress ಜಗದೀಶ್‌ ಶೆಟ್ಟರ್‌ಗೆ ಆಪರೇಷನ್‌ ಹಸ್ತದ ಹೊಣೆ

Congress ಜಗದೀಶ್‌ ಶೆಟ್ಟರ್‌ಗೆ ಆಪರೇಷನ್‌ ಹಸ್ತದ ಹೊಣೆ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

1-wsadasd

Asian Games ಇಂದಿನಿಂದ ಆ್ಯತ್ಲೆಟಿಕ್ಸ್‌ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Today ಆರ್ಟ್‌ ಆಫ್ ಲಿವಿಂಗ್‌ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Today ಆರ್ಟ್‌ ಆಫ್ ಲಿವಿಂಗ್‌ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Green revolution ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fighter

Vinod Prabhakar; ಅ.1ರಂದು ‘ಫೈಟರ್’ ಟ್ರೇಲರ್ ಬಿಡುಗಡೆ

Dharma keerthiraj ronnie movie trailer

Ronnie; ಸದ್ದು ಮಾಡುತ್ತಿದೆ ಧರ್ಮ ಕೀರ್ತಿರಾಜ್‌ ರ ‘ರೋನಿ’ ಟ್ರೇಲರ್

nirup-bhandari-in-edagaiye-apaghatakke-karana-movie

Sandalwood; ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ನಿರೂಪ್‌ ಭಂಡಾರಿ

daali dhananjaya spoke about totapuri 2

Sandalwood; ನನ್ನಪಾತ್ರ ತುಂಬಾ ಹೊಸದಾಗಿದೆ: ತೋತಾಪುರಿ 2 ಮೇಲೆ ಧನಂಜಯ್‌ ನಿರೀಕ್ಷೆ

baanadariyalli film

Baana dariyalli ನೂತನ ಭಾವ ಲಹರಿ; ಗಣೇಶ್-ರುಕ್ಮಿಣಿ- ರೀಷ್ಮಾ ನಟನೆಯ ಸಿನಿಮಾ ರಿಲೀಸ್

MUST WATCH

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

ಹೊಸ ಸೇರ್ಪಡೆ

Congress ಜಗದೀಶ್‌ ಶೆಟ್ಟರ್‌ಗೆ ಆಪರೇಷನ್‌ ಹಸ್ತದ ಹೊಣೆ

Congress ಜಗದೀಶ್‌ ಶೆಟ್ಟರ್‌ಗೆ ಆಪರೇಷನ್‌ ಹಸ್ತದ ಹೊಣೆ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

1-wsadasd

Asian Games ಇಂದಿನಿಂದ ಆ್ಯತ್ಲೆಟಿಕ್ಸ್‌ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Today ಆರ್ಟ್‌ ಆಫ್ ಲಿವಿಂಗ್‌ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Today ಆರ್ಟ್‌ ಆಫ್ ಲಿವಿಂಗ್‌ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.