ಹುಡುಕಾಟದಲ್ಲಿ ಸಿಕ್ಕ ಕಳೆದು ಹೋದ ಬದುಕು

ಚಿತ್ರ ವಿಮರ್ಶೆ

Team Udayavani, Jul 7, 2019, 3:03 AM IST

Devaki

ಕಾಯಿಲೆಯ ಕೊನೆ ಹಂತದಲ್ಲಿ ನೀವು ಸಂಪೂರ್ಣವಾಗಿ ನಿಮ್ಮನ್ನೇ ಮರೆತಿರುತ್ತೀರಿ ವೈದ್ಯರು ಹೀಗೆ ಹೇಳುವಾಗ ಆಕೆಗೆ ಇಡೀ ಜಗತ್ತೇ ಕುಸಿದಂತಾಗುತ್ತದೆ. ಮಗಳ ಮುಖ ಕಣ್ಣ ಮುಂದೆ ಬರುತ್ತದೆ. ತಾನು ಬದುಕನ್ನೇ ಮರೆತರೆ ತನಗೆ ಬದುಕಾಗಿರುವ ತನ್ನ ಹತ್ತು ವರುಷದ ಮಗಳನ್ನು ನೋಡಿಕೊಳ್ಳುವವರಾರು, ಆಕೆಯ ಮುಂದಿನ ಭವಿಷ್ಯವೇನು … ದೇವಕಿಯ ತಲೆಯಲ್ಲಿ ನೂರಾರು ಪ್ರಶ್ನೆಗಳು.

ಕೊನೆಗೂ ಒಲ್ಲದ ಮನಸ್ಸಿನಿಮದ ಪರಿಹಾರವೊಂದನ್ನು ಕಂಡುಕೊಂಡು ನಿಟ್ಟುಸಿರು ಬಿಡುವ ವೇಳೆಗೆ ದೊಡ್ಡ ಶಾಕ್‌ ದೇವಕಿಗೆ ಎದುರಾಗುತ್ತದೆ. ಮಗಳನ್ನು ಕಿಡ್ನಾಪ್‌ ಮಾಡಲಾಗಿದೆ ಎಂಬ ಸುದ್ದಿ ಬರಸಿಡಿಲಿನಂತೆ ದೇವಕಿ ಕಿವಿಗಪ್ಪಳಿಸುತ್ತದೆ. ಇಷ್ಟು ಹೇಳಿದ ಮೇಲೆ ಇದೊಂದು ತಾಯಿ-ಮಗಳ ಕಥೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

“ಮಮ್ಮಿ’ ಚಿತ್ರದಲ್ಲಿ ಹಾರರ್‌ ಮೊರೆ ಹೋಗಿದ್ದ ನಿರ್ದೇಶಕ ಲೋಹಿತ್‌, ಈ ಬಾರಿ “ದೇವಕಿ’ ಮೂಲಕ ತಾಯಿಯೊಬ್ಬಳ ತೊಳಲಾಟವನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾ ನೋಡುವಾಗ ಮೇಲ್ನೋಟಕ್ಕೆ ನಿಮಗೆ ತಾಯಿ ಹಾಗೂ ಪೊಲೀಸ್‌ ಅಧಿಕಾರಿಯೊಬ್ಬ ಕಳೆದು ಹೋದ ಮಗುವನ್ನು ಹುಡುಕುವಂತೆ ಕಂಡರೂ,

ಚಿತ್ರದಲ್ಲಿ ಅದರಾಚೆ ಹಲವು ಅಂಶಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಮುಖ್ಯವಾಗಿ ಪತಿಯಿಂದ ದೂರವಾದ ಪತ್ನಿಯೊಬ್ಬಳು ಅನುಭವಿಸುವ ಹಿಂಸೆ, ಮಗಳು ಕಾಣದೇ ಹೋದಾಗ ತಾಯಿ ಹೃದಯ ಪಡುವ ಸಂಕಟ, ಸಹಾಯಕ್ಕೆ ನಿಲ್ಲುವ ಪೊಲೀಸ್‌ ಅಧಿಕಾರಿಯ ಮನದ ನೋವು, ವೇಶ್ಯಾವಾಟಿಕೆ, ಮಕ್ಕಳ ಮಾರಾಟ ಜಾಲದಂತಹ ಸರಿಪಡಿಸಲಾಗದ ಕೊಳಕು ವ್ಯವಸ್ಥೆ …

ಹೀಗೆ ಚಿತ್ರ ಹಲವು ಅಂಶಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ. ಚಿತ್ರ ತುಂಬಾ ಫ್ರೆಶ್‌ ಆಗಿ ಕಾಣುತ್ತದೆ ಎಂದರೆ ಅದಕ್ಕೆ ಕಾರಣ ಕೋಲ್ಕತ್ತಾ. “ದೇವಕಿ’ ಚಿತ್ರ ಸಂಪೂರ್ಣವಾಗಿ ಕೋಲ್ಕತ್ತಾದಲ್ಲಿ ಚಿತ್ರೀಕರಣಗೊಂಡಿದೆ. ಇಡೀ ಕಥೆ ನಡೆಯೋದೇ ಅಲ್ಲಿ. ಹಾಗಾಗಿ, ಅಲ್ಲಿನ ಪರಿಸರವನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ. ಜೊತೆಗೆ ಅಲ್ಲಿನ ಒಂದಷ್ಟು ಕಲಾವಿದರನ್ನು ಕೂಡಾ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ನಿರ್ದೇಶಕ ಲೋಹಿತ್‌ ಯಾವುದೇ ಸಿದ್ಧಸೂತ್ರಗಳಿಗೆ ಅಂಟಿಕೊಳ್ಳದೇ ಸಿನಿಮಾ ಮಾಡಿದ್ದಾರೆ. ಒಂದು ಗಂಭೀರ ವಿಷಯವನ್ನು ಎಷ್ಟು ಗಂಭೀರವಾಗಿ ಕಟ್ಟಿಕೊಡಬಹುದೋ, ಅದನ್ನು ಇಲ್ಲಿ ಮಾಡಲಾಗಿದೆ. ಹಾಗಾಗಿ, ಔಟ್‌ ಅಂಡ್‌ ಔಟ್‌ ಮನರಂಜನೆ ಇಷ್ಟಪಡುವವರಿಗೆ ಈ ಸಿನಿಮಾ ಅಷ್ಟೊಂದು ರುಚಿಸಲಿಕ್ಕಿಲ್ಲ.

ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪ್ರಿಯಾಂಕಾ ಉಪೇಂದ್ರ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ತಾಯಿಯೊಬ್ಬಳ ನೋವು, ಮಗಳು ಸಿಗುತ್ತಾಳೆಂದಾಗಿನ ಖುಷಿ, ಮತ್ತೆ ಕೈ ತಪ್ಪಿದಾಗಿನ ದುಃಖ ಎಲ್ಲವನ್ನು ಪ್ರಿಯಾಂಕಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಪ್ರಿಯಾಂಕಾ ಉಪೇಂದ್ರ ಅವರ ಮಗಳು ಐಶ್ವರ್ಯಾ ಕೂಡಾ ಚಿತ್ರರಂಗಕ್ಕೆ ಬಂದಿದ್ದಾರೆ.

ಐಶ್ವರ್ಯಾ ಆಗಾಗ ಕಾಣಿಸಿಕೊಂಡರೂ, ನಟನೆಯಲ್ಲಿ ಗಮನಸೆಳೆಯುತ್ತಾರೆ. ಉಳಿದಂತೆ ಕಿಶೋರ್‌ ಪೊಲೀಸ್‌ ಅಧಿಕಾರಿಯಾಗಿ ಇಷ್ಟವಾಗುತ್ತಾರೆ. ಛಾಯಾಗ್ರಾಹಕ ವೇಣು ಕೋಲ್ಕತ್ತಾದ ಸೌಂದರ್ಯವನ್ನು ಕಟ್ಟಿಕೊಡುವಲ್ಲಿ ಹಿಂದೆ ಬಿದ್ದಿಲ್ಲ. ಚಿತ್ರದ ಹಿನ್ನೆಲೆ ಸಂಗೀತ ಕಥೆಯ ಆಶಯಕ್ಕೆ ತಕ್ಕುದಾಗಿದೆ.

ಚಿತ್ರ: ದೇವಕಿ
ನಿರ್ಮಾಣ: ರವೀಶ್‌, ಅಕ್ಷಯ್‌
ನಿರ್ದೇಶನ: ಲೋಹಿತ್‌
ತಾರಾಗಣ: ಪ್ರಿಯಾಂಕಾ ಉಪೇಂದ್ರ, ಐಶ್ವರ್ಯಾ, ಕಿಶೋರ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.