ನೀತಿಪಾಠದಲ್ಲಿ ಮನರಂಜನೆಯ ತಂತ್ರ

ಚಿತ್ರ ವಿಮರ್ಶೆ

Team Udayavani, Mar 30, 2019, 2:27 PM IST

Panchatantra

ಆಮೆ ಮತ್ತು ಮೊಲ – ಇದು ಯೋಗರಾಜ್‌ ಭಟ್ಟರ “ಪಂಚತಂತ್ರ’ ಚಿತ್ರದ ಮೂಲ ತಿರುಳು. ಇಲ್ಲಿ ಆಮೆ ಎಂದರೆ ಹಿರಿಯರು, ಮೊಲ ಎಂದರೆ ಎಲ್ಲದರಲ್ಲೂ ವೇಗವಾಗಿರುವ ಇಂದಿನ ಯುವಕರು. ಎರಡು ಜನರೇಶನ್‌ನ ಮನಸ್ಥಿತಿಯ ಅನಾವರಣದ ಪ್ರಯತ್ನವಿದು. ಈ ಎರಡು ಅಂಶಗಳನ್ನಿಟ್ಟುಕೊಂಡು ಭಟ್ರಾ “ಪಂಚತಂತ್ರ’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಈ ಚಿತ್ರದೊಳಗೊಂದು ನೀತಿಪಾಠ ಕೂಡಾ ಇದೆ. ಆದರೆ, ಮನರಂಜನೆಯ ಹಾದಿಯಲ್ಲಿ ಅದನ್ನು ಹುಡುಕುವುದು ಪ್ರೇಕ್ಷಕನಿಗೆ ಬಿಟ್ಟ ವಿಚಾರ. ಇಷ್ಟು ದಿನ ಲವ್‌, ಬ್ರೇಕಪ್‌, ಕಲಹದ ಸುತ್ತ ಸಿನಿಮಾ ಮಾಡುತ್ತಿದ್ದ ಭಟ್ರಾ, ಈ ಬಾರಿ “ಪಂಚತಂತ್ರ’ದಲ್ಲಿ ಸಂಪೂರ್ಣ ಹೊಸದನ್ನು ಪ್ರಯತ್ನಿಸಿದ್ದಾರೆ ಮತ್ತು ಅದನ್ನು ನೀಟಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಕೂಡಾ.

ಹಾಗೆ ನೋಡಿದರೆ ಮಾಸ್ತಿ ಹಾಗೂ ಕಾಂತರಾಜ್‌ ಮಾಡಿರುವ ಕಥೆ ಭಟ್ಟರ ಶೈಲಿಗೆ ಸಂಪೂರ್ಣ ಹೊಸದು ಮತ್ತು ಗಂಭೀರವಾದುದು. ಆದರೆ, ಭಟ್ರಾ ಅದನ್ನು ತಮ್ಮದೇ ಶೈಲಿಗೆ ಒಗ್ಗಿಸಿಕೊಂಡು ಸಿನಿಮಾ ಮಾಡಿದ್ದಾರೆ. ಹಾಗಾಗಿ, ಒಂದು ಗಂಭೀರ ವಿಷಯದ ಜೊತೆಗೆ ಪಕ್ಕಾ ಮನರಂಜನೆ ಕೂಡಾ “ಪಂಚತಂತ್ರ’ದಲ್ಲಿ ಸಿಗುತ್ತದೆ.

ಒಂದೇ ಕ್ಯಾಂಪಸ್‌ನಲ್ಲಿರುವ ಹಿರಿಯ ಜೀವಗಳ ಹಾಗೂ ಯುವಕರ ನಡುವಿನ ಜಿದ್ದಾಜಿದ್ದಿಯೊಂದಿಗೆ ಆರಂಭವಾಗುವ ಸಿನಿಮಾ ಮುಂದೆ ಒಂದು ದೊಡ್ಡ ಸ್ಪರ್ಧೆಗೆ ಹಾಗೂ ಮನಸ್ಥಿತಿಯ ಬದಲಾವಣೆಗೆ ಕಾರಣವಾಗುತ್ತಾ ಹೋಗುತ್ತದೆ. ಎರಡು ಜನರೇಶನ್‌ ಮಧ್ಯದ ಭಿನ್ನಾಭಿಪ್ರಾಯದ ಜೊತೆಗೆ ಇಂದಿನ ಯುವಕರ ಪ್ರೇಮ, ಅದರ ಬಗೆಗಿನ ಕುತೂಹಲವನ್ನು ಭಟ್ರಾ ಸಖತ್‌ ರೊಮ್ಯಾಂಟಿಕ್‌ ಆಗಿ ಕಟ್ಟಿಕೊಟ್ಟಿದ್ದಾರೆ.

ಚಿತ್ರದ ಮೊದಲರ್ಧ ಬಹುತೇಕ ಪಾತ್ರ ಪರಿಚಯ, ಜಿದ್ದಾಜಿದ್ದಿಯ ಹಾದಿಗೆ ನಾಂದಿಯಲ್ಲೇ ಮುಗಿದುಹೋಗುತ್ತದೆ. ಈ ದೃಶ್ಯಗಳಲ್ಲಿ ಭಟ್ಟರ ಶೈಲಿ ಎದ್ದು ಕಾಣುತ್ತದೆ. ಪ್ರತಿ ದೃಶ್ಯದಲ್ಲೂ ಮನರಂಜನೆ ತುಂಬಿರಬೇಕೆಂಬ ಭಟ್ರ ಉದ್ದೇಶ ಸ್ಪಷ್ಟವಾಗಿದೆ. ಒನ್‌ಲೈನ್‌ ಕಥೆಗೆ ಭಟ್ರಾ ತಮ್ಮ ಚಿತ್ರಕಥೆ, ಸಂಭಾಷಣೆಯಲ್ಲಿ ಜೀವ ತುಂಬಿದ್ದಾರೆ. ಸಮಯೋಚಿತ ಡೈಲಾಗ್‌ಗಳು ನಗುತರಿಸುತ್ತವೆ.

ಈ ಸಿನಿಮಾದ ಹೈಲೈಟ್‌ ಎಂದರೆ ಅದು ಕಾರ್‌ ರೇಸ್‌. ಹಿರಿಯರ ಹಾಗೂ ಕಿರಿಯರ ನಡುವಿನ ಕಾರು ರೇಸ್‌ ಆರಂಭವಾಗುವ ಮೂಲಕ ಸಿನಿಮಾ ಇನ್ನೊಂದು ಮಗ್ಗುಲಿಗೆ ತೆರೆದುಕೊಳ್ಳುತ್ತದೆ. ಸಿನಿಮಾದ ನಿಜವಾದ ಜೀವಾಳ ಕೂಡಾ ಈ ರೇಸ್‌ ಎಂದರೆ ತಪ್ಲಲ್ಲ. ಕನ್ನಡಕ್ಕೆ ರೇಸ್‌, ಸ್ಫೋರ್ಟ್ಸ್ ಹಿನ್ನೆಲೆಯ ಸಿನಿಮಾಗಳು ಹೊಸದು. ಅದರಲ್ಲೂ ಕಾರ್‌ ರೇಸ್‌ ದೃಶ್ಯಗಳು ದೊಡ್ಡ ಮಟ್ಟದಲ್ಲಿ ಬಂದಂತಿಲ್ಲ.

ಆದರೆ, “ಪಂಚತಂತ್ರ’ ಚಿತ್ರ ಕಾರ್‌ ರೇಸ್‌ಗೆ ಹೆಚ್ಚಿನ ಮಹತ್ವ ನೀಡಿದೆ. ಸುಮಾರು 25 ನಿಮಿಷ ಕಾರು ರೇಸ್‌ ದೃಶ್ಯ ತುಂಬಿಕೊಂಡಿದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವಲ್ಲೂ ಈ ದೃಶ್ಯ ಯಶಸ್ವಿಯಾಗಿದೆ. ಪಕ್ಕಾ ಪ್ರೊಫೆಶನಲ್‌ ಆಗಿ ಈ ರೇಸ್‌ ಅನ್ನು ಚಿತ್ರೀಕರಿಸಿರುವುದು ಕೂಡಾ ಒಂದು ಹೈಲೈಟ್‌. ರೇಸ್‌ ಮಧ್ಯೆಯೂ ಭಟ್ಟರು ಮನರಂಜನೆಯನ್ನು ಬಿಟ್ಟುಕೊಟ್ಟಿಲ್ಲ.

ಹಾಗಾಗಿ, ಅಲ್ಲಲ್ಲಿ ರಂಗಾಯಣ ರಘು ಹಾಗೂ ಟೀಂನವರ ಮಜಾ ಸರಣಿ ಮುಂದುವರೆಯುತ್ತಲೇ ಇರುತ್ತದೆ. ಎಲ್ಲಾ ಓಕೆ, ರೇಸ್‌ ಯಾರು ಗೆಲ್ಲುತ್ತಾರೆ. ಅದೇ ಈ ಸಿನಿಮಾದ ಕುತೂಹಲ. ಅದನ್ನು ನೀವು ತೆರೆಮೇಲೆಯೇ ನೋಡಬೇಕು. ಒಂದು ಕಮರ್ಷಿಯಲ್‌ ಸಿನಿಮಾಕ್ಕೆ ಏನೇನು ಅಂಶಗಳು ಬೇಕೋ, ಅವೆಲ್ಲವನ್ನು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ ಭಟ್ಟರು.

ಹಾಗಂತ ಯಾವುದನ್ನೂ ಅತಿ ಮಾಡಿಲ್ಲ. ಅದೇ ಕಾರಣದಿಂದ “ಪಂಚತಂತ್ರ’ ಮನರಂಜನೆಯಲ್ಲಿ ಹಿಂದೆ ಬೀಳುವುದಿಲ್ಲ. ಚಿತ್ರದಲ್ಲಿ ವಿಹಾನ್‌ ಹಾಗೂ ಸೋನಾಲ್‌ ನಾಯಕ-ನಾಯಕಿಯಾದರೂ, ನಟ ರಂಗಾಯಣ ರಘು ಅವರ ಪಾತ್ರ ಪ್ರಮುಖವಾಗಿದೆ. ಮತ್ತೂಮ್ಮೆ ಅವರಿಗೆ ತುಂಬಾ ಮಾತನಾಡುವ ಹಾಗೂ ಅವರ ಎಂದಿನ ಮ್ಯಾನರೀಸಂ ಅನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿರುವುದರಿಂದ ಪಾತ್ರದಲ್ಲಿ ಮಿಂಚಿದ್ದಾರೆ.

ವಿಹಾನ್‌ ಹಾಗೂ ಸೋನಾಲ್‌ ಕೂಡಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ “ಶೃಂಗಾರದ ಹೊಂಗೆ ಮರ …’ ಹಾಡಲ್ಲಿ ಸಖತ್‌ ರೊಮ್ಯಾಂಟಿಕ್‌ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಲರಾಜುವಾಡಿ, ದೀಪಕ್‌ ರಾಜ್‌, ಅಕ್ಷರ, ಕರಿಸುಬ್ಬು ಸೇರಿದಂತೆ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಹರಿಕೃಷ್ಣ ಸಂಗೀತದ ಹಾಡುಗಳು ಇಷ್ಟವಾದರೆ, ಸುಜ್ಞಾನ್‌ ಛಾಯಾಗ್ರಹಣದಲ್ಲಿ “ಪಂಚತಂತ್ರ’ ಸುಂದರ.

ಚಿತ್ರ: ಪಂಚತಂತ್ರ
ನಿರ್ಮಾಣ: ಹರಿಪ್ರಸಾದ್‌ ಜಯಣ್ಣ ಹಾಗೂ ಹೇಮಂತ್‌ ಪರಾಡ್ಕರ್‌
ನಿರ್ದೇಶನ: ಯೋಗರಾಜ್‌ ಭಟ್‌
ತಾರಾಗಣ: ವಿಹಾನ್‌, ಸೋನಾಲ್‌, ರಂಗಾಯಣ ರಘು, ಅಕ್ಷರ, ದೀಪಕ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

The Very Best Payment Techniques for Online Casinos

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.