ಮಾಮೂಲಿ ಕಥೆಗೆ ಮನರಂಜನೆಯ ಸ್ಪರ್ಶ

ಚಿತ್ರ ವಿಮರ್ಶೆ

Team Udayavani, Feb 15, 2020, 7:00 AM IST

demo-piece

ಆ ಹುಡುಗನ ಹೆಸರು ಹರ್ಷ. ಹೆಸರಿನಲ್ಲಿ ಹರ್ಷ ಅಂತಿದ್ದರೂ, ಅವನ ಪಾಲಿಗೆ ನಿಜವಾದ ಹರ್ಷ, ಖುಷಿ ಅನ್ನೋದು ಮರೀಚಿಕೆಯಂತೆ. ಇರೋದಕ್ಕೆ ದೊಡ್ಡ ಮನೆ, ಓದೋದಕ್ಕೆ ಒಳ್ಳೆಯ ಕಾಲೇಜು, ಪ್ರೀತಿಯಿಂದ ನೋಡಿಕೊಳ್ಳುವ ಅಪ್ಪ-ಅಮ್ಮ, ಕಷ್ಟ-ಸುಖ ಹಂಚಿಕೊಳ್ಳಲು ಒಂದಷ್ಟು ಸ್ನೇಹಿತರು… ಹೀಗೆ ಎಲ್ಲ ಇದ್ದರೂ, ಈ ಹರ್ಷ ಇದ್ದಕ್ಕಿದ್ದಂತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗುತ್ತಾನೆ. ಹಾಗಾದರೆ, ಹರ್ಷನಿಗೆ ಖುಷಿಯಾಗಿರಲು ಸಾಧ್ಯವಾಗದೆ ಇರುವುದಾದರೂ ಯಾಕೆ?

ಅಂದ್ರೆ ಅದಕ್ಕೆ ಕಾರಣ ಹುಡುಗಿಯರ ಮೇಲಿನ ಮೋಹ, ಹಣದ ಮೇಲಿನ ವ್ಯಾಮೋಹ! ಇದು ಇಂದಿನ ಅನೇಕ ಕಾಲೇಜು ಹುಡುಗರ ಕಥೆ-ವ್ಯಥೆ. ಇದೇ ಎಳೆಯನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ಡೆಮೊ ಪೀಸ್‌’ ಚಿತ್ರದ ಆರಂಭದಲ್ಲಿಯೇ ಹೀರೋ ಹರ್ಷ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ಇಂಟರ್‌ವಲ್‌ ಹೊತ್ತಿಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಹೀರೋ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ದೃಢೀಕರಿಸುತ್ತಾರೆ.

ಇನ್ನೂ ಒಂದಷ್ಟು ಹೊತ್ತು ಬಾಳಿ-ಬದುಕಿ ನೋಡುಗರಿಗೆ ಮನರಂಜಿಸಬೇಕಾದ ಹೀರೋ, ಹೀಗೆ ಸಿನಿಮಾವನ್ನ ಅರ್ಧಕ್ಕೆ ಬಿಟ್ಟು ಹೋದರೆ, ಮುಂದೆ ಸಿನಿಮಾದಲ್ಲಿ ನೋಡುವುದೇನಿದೆ ಎಂದು ಪ್ರೇಕ್ಷಕರು ಬ್ರೇಕ್‌ ತೆಗೆದುಕೊಂಡು ವಾಪಾಸ್‌ ಬಂದು ಕೂತರೆ, ಕಥೆ ಮತ್ತೂಂದು ಟ್ವಿಸ್ಟ್‌ ತೆಗೆದುಕೊಂಡು ಮತ್ತೆಲ್ಲೋ ಕರೆದುಕೊಂಡು ಹೋಗುತ್ತದೆ. ಇದೆಲ್ಲವನ್ನು ಕಣ್ತುಂಬಿಕೊಳ್ಳಬೇಕೆಂದರೆ, “ಡೆಮೊ ಪೀಸ್‌’ ಚಿತ್ರ ನೋಡಲು ಅಡ್ಡಿಯಿಲ್ಲ. “ಡೆಮೊ ಪೀಸ್‌’ ಚಿತ್ರದ ಕಥೆಯಲ್ಲಿ ಹೊಸದೇನು ನಿರೀಕ್ಷಿಸುವಂತಿಲ್ಲ.

ಹಾಗಂತ ಚಿತ್ರದಲ್ಲಿ ಬೇರೇನೂ ಇಲ್ಲ ಅಂತಲೂ ಹೇಳುವಂತಿಲ್ಲ. ನಮ್ಮ ನಡುವೆ ನಡೆಯಬಹುದಾದ ಕಂಡು-ಕೇಳಿದ ಕಥೆಯ ಎಳೆಯನ್ನು ಇಟ್ಟುಕೊಂಡು, ಅದಕ್ಕೊಂದಷ್ಟು ಅನಿರೀಕ್ಷಿತ, ಅಚ್ಚರಿಯ ತಿರುವುಗಳನ್ನು ಕೊಟ್ಟು ಕುತೂಹಲ ಮೂಡಿಸುತ್ತ ಚಿತ್ರದ ನಿರೂಪಣೆ ಕೊನೆವರೆಗೂ ಕರೆದುಕೊಂಡು ಹೋಗುತ್ತದೆ. ಮಾಮೂಲಿ ಕಥೆಯನ್ನೇ ಎಲ್ಲೂ ಬೋರ್‌ ಆಗದಂತೆ ತೆಗೆದುಕೊಂಡು ಹೋಗುವುದರಲ್ಲಿ ನಿರ್ದೇಶಕ ವಿವೇಕ್‌ ಜಾಣ್ಮೆ ಕಾಣುತ್ತದೆ.

ಚಿತ್ರದ ಮೊದಲರ್ಧ ಕೊಂಚ ಮಂದಗತಿಯಲ್ಲಿ, ಕಾಮಿಡಿಯಾಗಿ ಸಾಗುವ ಚಿತ್ರದ ಕಥೆ, ದ್ವಿತೀಯರ್ಧದಲ್ಲಿ ಒಂದಷ್ಟು ಟ್ವಿಸ್ಟ್‌ ತೆಗೆದುಕೊಂಡು ಅಷ್ಟೇ ಸೀರಿಯಸ್‌ ಆಗಿ ಸಾಗುತ್ತದೆ. ಅಲ್ಲಲ್ಲಿ ಬರುವ ಸಾಂಗ್ಸ್‌, ಫೈಟ್ಸ್‌ ಮಾಸ್‌ ಆಡಿಯನ್ಸ್‌ನ ಗಮನದಲ್ಲಿಟ್ಟುಕೊಂಡು ಮಾಡಿದಂತಿದೆ. ಚಿತ್ರದ ಛಾಯಾಗ್ರಹಣ, ಲೈಟ್ಸ್‌, ಲೊಕೇಶನ್ಸ್‌ ಕಡೆಗೆ ಇನ್ನಷ್ಟು ಗಮನ ಕೊಡಬಹುದಿತ್ತು. ಉಳಿದಂತೆ ಕಲರಿಂಗ್‌, ಕಾಸ್ಟೂಮ್ಸ್‌, ಸಂಕಲನ ಕಾರ್ಯ, ಹಿನ್ನೆಲೆ ಸಂಗೀತ ಚೆನ್ನಾಗಿದೆ. ಇನ್ನು ಚಿತ್ರದ ನಾಯಕ ಭರತ್‌ ಮೊದಲ ಚಿತ್ರದಲ್ಲೇ ಗಮನ ಸೆಳೆಯುತ್ತಾರೆ.

ಡೈಲಾಗ್‌ ಡೆಲಿವರಿ, ಡ್ಯಾನ್ಸ್‌, ಆ್ಯಕ್ಷನ್ಸ್‌ ಎಲ್ಲದರಲ್ಲೂ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. ಹೋಮ್ಲಿಲುಕ್‌ನಲ್ಲಿ ಕಾಣುವ ನಾಯಕಿ ಸೋನಾಲ್‌ ಅವರದ್ದು ಕೂಡ ಅಂದಕ್ಕೊಪ್ಪುವಂತೆ ಅಭಿನಯವಿದೆ. ಪೋಷಕರಾಗಿ ಸ್ಪರ್ಶರೇಖಾ, ಶ್ರೀಕಾಂತ್‌ ಹೆಬ್ಳೀಕರ್‌ ಅಭಿನಯ ಗಮನ ಸೆಳೆಯುತ್ತದೆ. ಉಳಿದ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಭಿನಯ. ಒಟ್ಟಾರೆ ತೀರಾ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಥಿಯೇಟರ್‌ಗೆ ಹೋದರೆ, “ಡೆಮೊ ಪೀಸ್‌’ ಕೊಟ್ಟ ಕಾಸಿಗೆ ಮನರಂಜಿಸುವಲ್ಲಿ ಮೋಸ ಮಾಡಲಾರದು ಎನ್ನಲು ಅಡ್ಡಿಯಿಲ್ಲ.

ಚಿತ್ರ: ಡೆಮೊ ಪೀಸ್‌
ನಿರ್ದೇಶನ: ವಿವೇಕ್‌. ಎ
ನಿರ್ಮಾಣ: ಸ್ಪರ್ಶ ರೇಖಾ
ತಾರಾಗಣ: ಭರತ್‌, ಸೋನಾಲ್‌ ಮಾಂತೆರೋ, ಸ್ಪರ್ಶ ರೇಖಾ, ಶ್ರೀಕಾಂತ್‌ ಹೆಬ್ಳೀಕರ್‌, ರೂಪೇಶ್‌, ಚಂದ್ರಚೂಡ್‌, ರೋಹಿತ್‌ ಮತ್ತಿತರರು.

* ಜಿ.ಎಸ್‌ ಕಾರ್ತಿಕ ಸುಧನ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.