ಸಾಮಾಜಿಕ ವಿಡಂಬನೆಯಲ್ಲಿ ತಿಳಿಹಾಸ್ಯ!


Team Udayavani, Feb 9, 2020, 10:35 AM IST

cinema-tdy-1

ಜಗತ್ತು ಮತ್ತು ಜನಗಳನ್ನು ದೇವರು ರಕ್ಷಿಸಿ, ಪೋಷಿಸುತ್ತಾನೆ ಎನ್ನುವ ನಂಬಿಕೆ ಬಹುತೇಕ (ಆಸ್ತಿಕ)ರದ್ದು. ಅನೇಕರು ಈ ವಿಷಯದಲ್ಲಿ ಅವರವರ ನೆಚ್ಚಿನ ದೇವರ ಮೊರೆ ಹೋಗುವುದನ್ನು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಅದರಲ್ಲೂ ಜನಗಳ ಸಂಕಷ್ಟದ ವಿಷಯದಲ್ಲಿ ವಿಘ್ನ ವಿನಾಶಕ ಗಣೇಶನಿಗೆ ಮೊದಲ ಆದ್ಯತೆ. ಆದರೆ ಇದೇ ಗಣೇಶನಿಗೇ ಸಂಕಷ್ಟ ಬಂದರೆ ಅವನು ಯಾರ ಮೊರೆ ಹೋಗಬೇಕು? ಇದು “ಮತ್ತೆ ಉದ್ಭವ’ ಚಿತ್ರದ ಕಥಾಹಂದರ.

ಸುಮಾರು 30 ವರ್ಷಗಳ ಹಿಂದೆ ತೆರೆಗೆ ಬಂದಿದ್ದ “ಉದ್ಭವ’ ಚಿತ್ರ ಅನೇಕರಿಗೆ ನೆನಪಿರಬಹುದು. ಅದರಲ್ಲಿ ಗಣೇಶ ಉದ್ಭವಿಸಿ ನೋಡುಗರಿಗೆ ತೆರೆಮೇಲೆ ಬೆರಗು ಮೂಡಿಸಲು ಯಶಸ್ವಿಯಾಗಿದ್ದ. 30 ವರ್ಷಗಳ ನಂತರ ಅದೇ ಉದ್ಭವ ಗಣೇಶ ಮತ್ತೆ ಏನೇನು ಬೆರೆಗು ಮೂಡಿಸುತ್ತಾನೆ ಅನ್ನೊದು “ಮತ್ತೆ ಉದ್ಭವ’ದಲ್ಲಿ ಮುಂದುವರೆದಿದೆ. “ಉದ್ಭವ’ ಚಿತ್ರವನ್ನು ತೆರೆಗೆ ತಂದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರೇ ಮತ್ತೆ ಉದ್ಭವ’ವನ್ನು ತೆರೆಗೆ ತಂದಿರುವುದರಿಂದ, “ಮತ್ತೆ ಉದ್ಭವ’, “ಉದ್ಭವ’ದ ಮುಂದುವರೆದ ಭಾಗ ಎನ್ನಲು ಅಡ್ಡಿಯಿಲ್ಲ. ಇನ್ನು ತಮ್ಮ ಹಿಂದಿನ ಉದ್ಭವ’ ಚಿತ್ರದಲ್ಲಿ ನಿರ್ದೇಶಕ ಕೋಡ್ಲು ರಾಮಕೃಷ್ಣ ಪ್ರಯೋಗಿಸಿದ್ದ ಸಾಮಾಜಿಕ ವಿಡಂಬನೆ, ಧರ್ಮ-ನಂಬಿಕೆಗಳ ವ್ಯಾಖ್ಯಾನ, ಮಠ-ಮಂದಿರಗಳ ಅಧಿಕಾರ ದುರುಪಯೋಗ, ರಾಜಕಾರಣ, ಹಿತಾಸಕ್ತಿಗಳ ಹೋರಾಟ ಮತ್ತೆ ಉದ್ಭದ’ದಲ್ಲಿ ಮುಂದುವರೆದಿದೆ. ಇಡೀ ಚಿತ್ರ ಜನಸಾಮಾನ್ಯರ ಧಾರ್ಮಿಕ ನಂಬಿಕೆ-ಆಚರಣೆಯ ಬಗ್ಗೆ ಗಂಭೀರ ವಿಷಯವನ್ನು ಚರ್ಚಿಸುತ್ತಲೇ, ನೋಡುಗರನ್ನು ನಗುವಿನೊಂದಿಗೆ ಕರೆದುಕೊಂಡು ಹೋಗುತ್ತದೆ. ಕೋಡ್ಲು ಅವರು ಕಥೆ ಕಟ್ಟಿರುವ ರೀತಿ. ಹಳೆಯ ಪಾತ್ರಗಳು ಮತ್ತು ಆಶಯದ ಜೊತೆಗೆ, ಹೊಸದನ್ನೂ ಅವರು ಚೆನ್ನಾಗಿ ಬ್ಲೆಂಡ್‌ ಮಾಡಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಾದ ಕೆಲವು ನೈಜ ಘಟನೆಗಳನ್ನು ಹೆಕ್ಕಿ ತೆಗೆದಿದ್ದಾರೆ. ಆ ಘಟನೆಗಳನ್ನು ಬೇರೆ ಬೇರೆ ಪಾತ್ರಗಳ ಮೂಲಕ ತೋರಿಸುತ್ತಾ ಹೋಗಿದ್ದಾರೆ. ಯಾವುದೇ ವ್ಯಕ್ತಿಯನ್ನು ಅವರು ಪಿನ್‌ ಪಾಯಿಂಟ್‌ ಮಾಡಿ ತೋರಿಸದಿದ್ದರೂ, ಪ್ರೇಕ್ಷಕರಿಗೆ ಎಲ್ಲವೂ ಸ್ಪಷ್ಟವಾಗುತ್ತಾ ಹೋಗುತ್ತದೆ. ಆ ಮಟ್ಟಿಗೆ ಬಹಳ ಬುದ್ಧಿವಂತಿಕೆಯಿಂದ ಕಥೆ ಹಣೆದಿದ್ದಾರೆ. ಇನ್ನು ಅದನ್ನು ತೆರೆಯ ಮೇಲೆ ಅಷ್ಟೇ ನೀಟ್‌ ಆಗಿ ತೋರಿಸಿದ್ದಾರೆ. ಕೆಲವು ದೃಶ್ಯಗಳು ಅನಗತ್ಯವೆನಿಸಿದರೂ, ಒಟ್ಟಾರೆ ಚಿತ್ರ ವೇಗವಾಗಿ ನೋಡಿಸಿಕೊಂಡು ಹೋಗುತ್ತದೆ. ಚಿತ್ರದ ಗುಣಮಟ್ಟದ ಬಗ್ಗೆ ನಿರ್ದೇಶಕರು ಕಾಳಜಿ ವಹಿಸಿದ್ದರೆ ಸಿನಿಮಾ ಮತ್ತಷ್ಟು ಚೆನ್ನಾಗಿ ಮೂಡಿಬರುತ್ತಿತ್ತು. ಕೆಲವು ದೃಶ್ಯಗಳು ಅನಗತ್ಯವೆನಿಸಿದರೂ, ಒಟ್ಟಾರೆ ಚಿತ್ರ ವೇಗವಾಗಿ ನೋಡಿಸಿಕೊಂಡು ಹೋಗುತ್ತದೆ.

ಚಿತ್ರದ ಕಥಾಹಂದರ, ನಿರೂಪಣೆ ಚೆನ್ನಾಗಿದ್ದರೂ, ಪ್ರಬುದ್ಧ ಪ್ರೇಕ್ಷಕರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಿರ್ದೇಶಕರು ಚಿತ್ರವನ್ನು ತೆರೆಗೆ ತಂದಂತಿದೆ. ಇನ್ನು ಇಡೀ ಚಿತ್ರದಲ್ಲಿ ತೆರೆಮೇಲೆ ಗಮನ ಸೆಳೆಯುವುದು ರಂಗಾಯಣ ರಘು, ನಾಯಕ ಪ್ರಮೋದ ಅಭಿನಯ. ಇಬ್ಬರೂ ತಮ್ಮ ಪಾತ್ರವನ್ನು ಪ್ರೇಕ್ಷಕರಿಗೆ ಎಲ್ಲೂ ಬೋರ್‌ ಹೊಡೆಸದಂತೆ ಕರೆದುಕೊಂಡು ಹೋಗುತ್ತಾರೆ. ಉಳಿದಂತೆ ಮಿಲನ ನಾಗರಾಜ, ಅವಿನಾಶ, ಮೋಹನ ಮೊದಲಾದ ಚಿತ್ರದ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಕಲಾವಿದರ ಬೃಹತ್‌ ದಂಡೇ ಇರುವುದರಿಂದ, ಚಿತ್ರದ ಬಹುತೇಕ ಪಾತ್ರಗಳಲ್ಲಿ ಪರಿಚಿತ ಕಲಾವಿದರೆ ಬಂದು ಹೋಗುತ್ತಾರೆ. ಚಿತ್ರದ ಛಾಯಾಗ್ರಹಣ ಮತ್ತು ಸಂಕಲನದ ಕಡೆಗೆ ನಿರ್ದೇಶಕರು ಹೆಚ್ಚಿನ ಗಮನ ಕೊಡಬಹುದಿತ್ತು. ಒಟ್ಟಿನಲ್ಲಿ ಕೆಲವೊಂದು ತರ್ಕ ಹಾಗೂ ತಪ್ಪುಗಳನ್ನು ಬದಿಗಿಟ್ಟು ನೋಡಿದರೆ ಮತ್ತೆ ಉದ್ಭವ’ ನೋಡುಗರಿಗೆ ಮಿನಿಮಮ್‌ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ. „

 

-ಜಿ.ಎಸ್‌. ಕಾರ್ತಿಕ್‌ ಸುಧನ್‌

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.