ಗುಂಡಿನ ಮತ್ತೆ ಗಮ್ಮತ್ತು!

ಚಿತ್ರ ವಿಮರ್ಶೆ

Team Udayavani, Jun 22, 2019, 3:00 AM IST

Hafta

ಅವರಿಬ್ಬರೂ ಬಾಲ್ಯದ ಸ್ನೇಹಿತರು. “ಹಫ್ತಾ’ ವಸೂಲಿ, ಸುಫಾರಿ ಕಿಲ್ಲಿಂಗ್‌ ಮೂಲಕವೇ ಅಂಡರ್‌ವರ್ಲ್ಡ್ಗೆ ಎಂಟ್ರಿಯಾದ ಒಬ್ಬನ ಹೆಸರು ಕುಡ್ಲ ಅಲಿಯಾಸ್‌ ಕೃಷ್ಣ. ಮತ್ತೂಬ್ಬನ ಹೆಸರು ಯರವಾಡ ಅಲಿಯಾಸ್‌ ಶಂಕರ್‌ ಯರವಾಡ. ಮಂಗಳೂರಿನಿಂದ ಹಿಡಿದು ಮುಂಬೈವರೆಗಿನ ಕೋಸ್ಟಲ್‌ನಲ್ಲಿ ಅವರದ್ದೇ ಹವಾ.

ಹಾಗಾದ್ರೆ, ಈ ಸ್ನೇಹಿತರು “ಹಫ್ತಾ’ ವಸೂಲಿಗೆ ಇಳಿದಿರುವುದೇಕೆ? “ಹಫ್ತಾ’ ವಸೂಲಿ ಹಿಂದಿನ ಕಾರಣ – ಉದ್ದೇಶವೇನು, “ಹಫ್ತಾ’ ಹೆಸರಿನಲ್ಲಿ ಕರಾವಳಿಯಲ್ಲಿ ಹರಿಯುವ ನೆತ್ತರ ಕಹಾನಿಗೆ ಬ್ರೇಕ್‌ ಬೀಳುತ್ತಾ, ಇಲ್ಲವಾ? ಇವೆಲ್ಲದರ ನಡುವೆಯುವ ಕಥೆಯೇ ಈ ವಾರ ತೆರೆಗೆ ಬಂದಿರುವ “ಹಫ್ತಾ’ ಚಿತ್ರ.

ಹೆಸರೇ ಹೇಳುವಂತೆ “ಹಫ್ತಾ’ ಔಟ್‌ ಆ್ಯಂಡ್‌ ಔಟ್‌ ಮಾಸ್‌ ಎಲಿಮೆಂಟ್‌ ಇಟ್ಟುಕೊಂಡು ಬಂದಿರುವ ಚಿತ್ರ. ಅದರಲ್ಲೂ ಕಳೆದ ಕೆಲ ತಿಂಗಳಿನಿಂದ ಅಂಡರ್‌ವರ್ಲ್ಡ್, ಮಾಫಿಯಾ, ರೌಡಿಸಂ ಕಥಾಹಂದರದ ಚಿತ್ರಗಳಿಂದ ಕೊಂಚ ಬ್ರೇಕ್‌ ತೆಗೆದುಕೊಂಡು ಹಾರರ್‌, ಥ್ರಿಲ್ಲರ್‌ ಚಿತ್ರಗಳ ಹಿಂದೆ ಬಿದ್ದಿದ್ದ ಕನ್ನಡ ಸಿನಿ ಪ್ರಿಯರಿಗೆ “ಹಫ್ತಾ’ ಮತ್ತೂಮ್ಮೆ ಭೂಗತ ಲೋಕನ ದರ್ಶನ ಮಾಡಿಸುವಂತಿದೆ.

“ಹಫ್ತಾ’ದಲ್ಲಿ ಕ್ರೌರ್ಯ – ಅಟ್ಟಹಾಸವಿದೆ. ಲಾಂಗು-ಮಚ್ಚು, ಗುಂಡಿನ ಮೊರೆತವಿದೆ. ಅದರ ಜೊತೆಗೊಂದು ನವಿರಾದ ಲವ್‌ಸ್ಟೋರಿಯೂ ಇದೆ. ಒಂದು ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಚಿತ್ರಕ್ಕೆ ಏನೇನು ಎಲಿಮೆಂಟ್ಸ್‌ ಇರಬೇಕೋ, ಅದೆಲ್ಲವನ್ನೂ ಅರ್ಥೈಸಿಕೊಂಡು, ಚಿತ್ರದಲ್ಲಿ ಅಳವಡಿಸಿದ್ದಾರೆ ನಿರ್ದೇಶಕ ಪ್ರಕಾಶ್‌ ಹೆಬ್ಬಾಳ. ಆದರೆ ಅದೆಷ್ಟು ವರ್ಕೌಟ್‌ ಆಗಿದೆ ಎನ್ನುವುದುದೇ ಮುಂದಿರುವ ಪ್ರಶ್ನೆ.

ಸಂಪೂರ್ಣ ಕರಾವಳಿ ಹಿನ್ನೆಲೆಯಲ್ಲಿ ಸಾಗುವ “ಹಫ್ತಾ’ದಲ್ಲಿ ಕರಾವಳಿಯ ಜನಜೀವನ, ಭೂಗತಲೋಕದ ಕ್ರೌರ್ಯ ಎಲ್ಲವೂ ಅನಾವರಣಗೊಂಡಿದೆ. ಆದರೆ ಭಾಷಾ ಸೊಗಡು ಕಾಣೆಯಾಗಿದೆ. ಕೆಲವೊಮ್ಮೆ ಶರವೇಗದಲ್ಲಿ ಸಾಗುವ ಚಿತ್ರಕಥೆ, ಅಲ್ಲಲ್ಲಿ “ಜರ್ಕ್‌’ ತೆಗೆದುಕೊಳ್ಳುತ್ತದೆ.

ಚಿತ್ರಕಥೆ, ನಿರೂಪಣೆಯಲ್ಲಿ ನಿರ್ದೇಶಕರು ಇನ್ನಷ್ಟು ಎಚ್ಚರ ವಹಿಸಿದ್ದರೆ, “ಹಫ್ತಾ’ದ ಇಂಪ್ಯಾಕ್ಟ್ ಇನ್ನೂ ಹೆಚ್ಚಾಗಿರುತ್ತಿತ್ತು. ಇನ್ನು ಅಭಿನಯದ ವಿಷಯಕ್ಕೆ ಬಂದರೆ, ಮೊದಲ ಬಾರಿಗೆ ನಾಯಕನಾಗಿ ವರ್ಧನ್‌ ತೀರ್ಥಹಳ್ಳಿ ಪಾತ್ರಕ್ಕೆ ಸಾಕಷ್ಟು ಪರಿಶ್ರಮ ಹಾಕಿರುವುದು ಕಾಣುತ್ತದೆ.

ಅಭಿನಯದಲ್ಲಿ ಇನ್ನಷ್ಟು ಮಾಗಿದರೆ, ವರ್ಧನ್‌ ಮಾಸ್‌ ಹೀರೋ ಆಗಬಲ್ಲರು. ರಾಘವ ನಾಗ್‌, ಬಿಂಬಶ್ರೀ ನೀನಾಸಂ, ಸೌಮ್ಯ ಅವರ ಅಭಿನಯ ಪರವಾಗಿಲ್ಲ ಎನ್ನಬಹುದಷ್ಟೇ. ಖಳನಾಯಕನಾಗಿ ಬಲರಾಜವಾಡಿ ಎಂದಿನಂತೆ ಅಬ್ಬರದ ಅಭಿನಯ ನೀಡಿದ್ದಾರೆ.

ಉಳಿದಂತೆ ಇತರ ಕಲಾವಿದರು ಹಾಗೆ ಬಂದು ಹೀಗೆ ಹೋಗುವಂತಿರುವುದರಿಂದ, ಅವರ ಬಗ್ಗೆ ಹೆಚ್ಚೇನು ಮಾತನಾಡುವಂತಿಲ್ಲ. ತಾಂತ್ರಿಕವಾಗಿ “ಹಫ್ತಾ’ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಛಾಯಾಗ್ರಹಣ, ಸಂಕಲನ ಗಮನ ಸೆಳೆಯುತ್ತದೆ.

ಗೌತಮ್‌ ಶ್ರೀವತ್ಸ ಹಿನ್ನೆಲೆ ಸಂಗೀತ ಚೆನ್ನಾಗಿದ್ದರೆ, ಜಿ. ಯಾರ್ಡ್ಲಿ ಸಂಗೀತದ ಹಾಡುಗಳು ಕಿವಿಯಲ್ಲಿ ಹೆಚ್ಚು ಹೊತ್ತು ಉಳಿಯುವುದಿಲ್ಲ. ಒಟ್ಟಾರೆ ಪಕ್ಕಾ ಮಾಸ್‌ ಆಡಿಯನ್ಸ್‌ಗೆಂದೇ ಮಾಡಲಾದ “ಹಫ್ತಾ’ ಆ್ಯಕ್ಷನ್‌ ಪ್ರಿಯರಿಗೆ ಹೆಚ್ಚು ಇಷ್ಟವಾದೀತು.

ಚಿತ್ರ: ಹಫ್ತಾ
ನಿರ್ಮಾಣ: ಮೈತ್ರಿ ಮಂಜುನಾಥ್‌, ಬಾಲರಾಜ್‌
ನಿರ್ದೇಶನ: ಪ್ರಕಾಶ್‌ ಹೆಬ್ಬಾಳ
ತಾರಾಗಣ: ವರ್ಧನ್‌ ತೀರ್ಥಹಳ್ಳಿ, ರಾಘವ್‌ ನಾಗ್‌, ಬಿಂಬಶ್ರೀ ನೀನಾಸಂ, ಸೌಮ್ಯ ತತೀರ, ಬಲ ರಾಜವಾಡಿ, ದಶಾವರ ಚಂದ್ರು, ಉಗ್ರಂ ರವಿ ಮತ್ತಿತರರು

* ಜಿ.ಎಸ್‌ ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.