ಏನೋ ಮಾಡಲು ಹೋಗಿ, ಏನೋ ಆಯಿತಲ್ಲ…

ಚಿತ್ರ ವಿಮರ್ಶೆ

Team Udayavani, Oct 14, 2019, 3:02 AM IST

Gnanam

ಮಕ್ಕಳಿಲ್ಲದ ಬಡ ಕುಟುಂಬ ಮತ್ತು ಶ್ರೀಮಂತ ಕುಟುಂಬ ಎರಡು ಜೋಡಿ ಬಾಬಾ ಮಂದಿರಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದಂತೆ, ದೈವಾನುಗ್ರಹವೆಂಬಂತೆ ಎರಡೂ ಕುಟುಂಬದಲ್ಲೂ ಏಕಕಾಲಕ್ಕೆ ಎರಡು ಗಂಡು ಮಕ್ಕಳು ಹುಟ್ಟುತ್ತವೆ. ಬಡ ಕುಟುಂಬದಲ್ಲಿ ಹುಟ್ಟಿದ ಹುಡುಗ ಬುದ್ದಿವಂತನಾಗಿ ಬೆಳೆದರೆ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಹುಡುಗ ವಿಕಲಚೇತನನಾಗಿ ಬೆಳೆಯುತ್ತಾನೆ. ಬಡ ಕುಟುಂಬದ ಹುಡುಗ ವಯಸ್ಸಿಗೂ ಮೀರಿದ ಬುದ್ದಿವಂತಿಕೆ ಪ್ರದರ್ಶಿಸಿದರೆ, ಶ್ರೀಮಂತ ಕುಟುಂಬದ ಹುಡುಗ ಮನೆಯವರಿಗೆ ಹೊರೆಯಾಗಿ ಬೆಳೆಯುತ್ತಾನೆ.

ಕೊನೆಯಲ್ಲಿ ಬುದ್ದಿವಂತ ಮತ್ತು ವಿಕಲಚೇತನ ಈ ಇಬ್ಬರು ಹುಡುಗರು ಒಂದಾಗುತ್ತಾರೆ. ಇದರ ಮಧ್ಯೆ ಸಂಬಂಧವೇ ಇಲ್ಲದ ಒಂದಷ್ಟು ಪಾತ್ರಗಳು, ಮಾರುದ್ದ ಭಾಷಣಗಳು! ಇದು ಈ ವಾರ ತೆರೆಗೆ ಬಂದಿರುವ “ಜ್ಞಾನಂ’ ಚಿತ್ರದ ಕಥೆಯ ಎಳೆ. ಅದು ಹೇಗೆ ಅನ್ನೋದು ನೋಡಬೇಕಾದರೆ (ಬಿಡುವಿದ್ದರೆ) ನೀವು ಎರಡು ಗಂಟೆ ಸಮಯ ತೆಗೆದಿಡಬೇಕು. ಯಾವುದೇ ಚಿತ್ರವಿರಲಿ ಅದಕ್ಕೆ ಜೀವಾಳ ಅಂದ್ರೆ ಕಥೆ, ಚಿತ್ರಕಥೆ, ಸಂಭಾಷಣೆ.

ಇವಿಷ್ಟು ಮೂಲ ಅಂಶಗಳನ್ನು ಇಟ್ಟುಕೊಂಡು, ನಿರ್ದೇಶಕ ಹೇಗೆ ಪ್ರೇಕ್ಷಕರ ಗಮನ ಸೆಳೆ ತೆರೆಮೇಲೆ ನಿರೂಪಣೆ ಮಾಡುತ್ತಾನೆ, ಅದು ಪ್ರೇಕ್ಷಕ ಪ್ರಭುಗಳಿಗೆ ಎಷ್ಟು ಇಷ್ಟವಾಗುತ್ತದೆ ಅನ್ನೋದರ ಮೇಲೆ ಚಿತ್ರವೊಂದರ ಹಣೆಬರಹ ಅಡಗಿರುತ್ತದೆ. ಹಾಗಾಗಿ ನಿರ್ದೇಶಕನಿಗೆ ತಾನು ಹೇಳಲು ಹೊರಟಿರುವ ವಿಷಯದ ಬಗ್ಗೆ ಸ್ಪಷ್ಟತೆ ಇರಬೇಕಾಗುತ್ತದೆ. ಇಲ್ಲದಿದ್ದರೆ, ತಾನೂ ಗೊಂದಲದಲ್ಲಿ ಬಿದ್ದು, ನೋಡುಗರನ್ನು ಗೊಂದಲದಲ್ಲಿ ಬೀಳಿಸಿ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ. ಬಹುಶಃ “ಜ್ಞಾನಂ’ ಚಿತ್ರದ ವಿಷಯದಲ್ಲೂ ಇದೇ ರೀತಿ ಆದಂತಿದೆ.

ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರೂಪಣೆ ಯಾವುದರಲ್ಲೂ ನೀವು ಏನನ್ನೂ ನಿರೀಕ್ಷಿಸುವಂತಿಲ್ಲ. ಚಿತ್ರದಲ್ಲಿ ಏನಾಗುತ್ತದೆ ಎನ್ನುವುದು ಅರ್ಥವಾಗುವ ಹೊತ್ತಿಗೆ, ಇತ್ತ ಮಕ್ಕಳಿಗೂ ಸಲ್ಲದ, ಅತ್ತ ದೊಡ್ಡವರಿಗೂ ಸಲ್ಲದ “ಜ್ಞಾನಂ’ಗೆ ಪ್ರೇಕ್ಷಕರು ಸುಸ್ತುಬಡಿದಿರುತ್ತಾರೆ. ಸಿನಿಮಾ ಮೇಕಿಂಗ್‌ ಬಗ್ಗೆ ಅಧ್ಯಯನ, ಅನುಭವ ಕೊರತೆಯಿದ್ದರೆ, ಎಂಥ ಚಿತ್ರಗಳು ಹೊರಬಹುದು ಅನ್ನೋದಕ್ಕೆ “ಜ್ಞಾನಂ’ ಇತ್ತೀಚಿನ ತಾಜಾ ಉದಾಹರಣೆ. ಕೇವಲ ಪ್ರಚಾರ, ಪ್ರಶಸ್ತಿಗಳ, ಸರ್ಕಾರದ ಸಬ್ಸಿಡಿ ಬೆನ್ನತ್ತಿ ಹೊರಟರೆ ಅಂಥ ಚಿತ್ರಗಳು ಎಂದಿಗೂ ಜನಮಮಾನಸದಲ್ಲಿ ಉಳಿಯುವುದಿಲ್ಲ.

ಚಿತ್ರ: ಜ್ಞಾನಂ
ನಿರ್ಮಾಣ: ವಸಂತ ಸಿನಿ ಕ್ರಿಯೇಷನ್ಸ್‌
ನಿರ್ದೇಶನ: ವರದರಾಜ್‌ ವೆಂಕಟಸ್ವಾಮಿ
ತಾರಾಗಣ: ಶೈಲಶ್ರೀ ಸುದರ್ಶನ್‌, ಪ್ರಣಯಮೂರ್ತಿ, ಮಾಸ್ಟರ್‌ ಲೋಹಿತ್‌, ಮಾಸ್ಟರ್‌ ಧ್ಯಾನ್‌, ವೇಣು ಭಾರದ್ವಾಜ್‌, ಸಂತೋಷ್‌ ಕುಮಾರ್‌, ರಾಧಿಕಾ ಶೆಟ್ಟಿ, ಆಶಾ ಸುಜಯ್‌, ಅನಿಲ್‌ ಕುಮಾರ್‌ ಮತ್ತಿತರರು.

* ಜಿ.ಎಸ್‌.ಕೆ ಸುಧನ್‌

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

blink kannada movie review

Blink movie review; ಸಮಯದ ಹಿಂದೆ ಸವಾರಿ…

ranganayaka movie review

Ranganayaka Movie Review; ಗುರುವಿನ ಆದಿ ಪುರಾಣ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.