ಇಲ್ಲಿ ದೇಹದಾರ್ಢ್ಯವೇ ಜೀವಾಳ

ಚಿತ್ರ ವಿಮರ್ಶೆ

Team Udayavani, Mar 30, 2019, 2:27 PM IST

Rugged

“ನಿಮ್ದು ಸಿಕ್ಸ್‌ ಪ್ಯಾಕ್‌… ನಮ್‌ ಹುಡ್ಗಂದು ಏಯ್ಟ್ ಪ್ಯಾಕು… ಹುಷಾರ್‌!’ ಹೀಗೆ ನಾಯಕಿ ಎದುರಿಗೆ ಸಿಕ್ಸ್‌ ಪ್ಯಾಕ್‌ ದೇಹವನ್ನು ತೋರಿಸುತ್ತಿದ್ದ ಎಂಟತ್ತು ವಿಲನ್‌ಗಳಿಗೆ ವಾರ್ನ್ ಮಾಡುತ್ತಿದ್ದಂತೆ, ಇತ್ತ ನಾಯಕ ತನ್ನ ಅಂಗಿಯನ್ನು ಕಿತ್ತೆಸೆದು ಏಯ್ಟ್ ಪ್ಯಾಕ್‌ ದೇಹವನ್ನು ತೋರಿಸುತ್ತ ಎದುರಾಳಿಗೆ ಮುಖ-ಮೂತಿ ನೋಡದಂತೆ ಚಚ್ಚಿ ಬಿಸಾಕುತ್ತಾನೆ.

ಯಾಕೆ ಈ ಥರ ಹೊಡೆದಾಟ..? ಹಾಗೂ ಹೊಡೆದಾಡುವಂತಿದ್ದರೆ, ಅಂಗಿ ತೆಗೆಯದೆಯೋ ಹೊಡೆದಾಡಬಹುದಿತ್ತಲ್ಲ ಎಂದು ಎದುರಿಗೆ ಕೂತವರು ಲಾಜಿಕ್‌ ಹುಡುಕುವ ಹೊತ್ತಿಗೆ, ನಾಯಕ-ನಾಯಕಿಯ ನಡುವಿನ ಪ್ರೀತಿ-ಪ್ರೇಮದ ದೃಶ್ಯಗಳು, ಹಾಡು ಮತ್ತೆಲ್ಲೋ ಕರೆದುಕೊಂಡು ಹೋಗುತ್ತವೆ. ಇದು “ರಗಡ್‌’ ಚಿತ್ರದಲ್ಲಿ ಪದೇ ಪದೇ ಬರುವ, ಪುನರಾರ್ವನೆಯಾಗುವ ಸಾಮಾನ್ಯ ದೃಶ್ಯಗಳು.

ಒಂದು ಔಟ್‌ ಆ್ಯಂಡ್‌ ಔಟ್‌ ಮಾಸ್‌ ಆ್ಯಕ್ಷನ್‌ ಚಿತ್ರಕ್ಕೆ ಏನೇನು ಇರಬೇಕೆಂಬ ದಶಕಗಳ ಹಿಂದಿನ ಆ ಎಲ್ಲಾ ಸಿದ್ಧ ಸೂತ್ರಗಳನ್ನು ಇಟ್ಟುಕೊಂಡು, ನಿರ್ದೇಶಕ ಶ್ರೀಮಹೇಶ್‌ ಗೌಡ ಈ ಚಿತ್ರವನ್ನು ಹಾಗೇ ತೆರೆಗೆ ತಂದಿದ್ದಾರೆ. ಅದನ್ನು ಬಿಟ್ಟು ಚಿತ್ರದಲ್ಲಿ ಹೊಸದೇನಾದರೂ ಇರಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರಮಂದಿರಕ್ಕೆ ಹೋದರೆ ನಿರಾಸೆ ತಪ್ಪಿದ್ದಲ್ಲ.

ಇಡೀ ಚಿತ್ರದಲ್ಲಿ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಎಲ್ಲದಕ್ಕಿಂತ ಹೆಚ್ಚಾಗಿ ಅಬ್ಬರಿಸಿ, ಕಾಡುವುದು ಮತ್ತು ಕಾಣುವುದು ನಾಯಕ ನಟ ವಿನೋದ್‌ ಪ್ರಭಾಕರ್‌ 8 ಪ್ಯಾಕ್‌. ಒಂದು ಮಾತಿನಲ್ಲಿ ಹೇಳುವುದಾದರೆ, ವಿನೋದ್‌ ಪ್ರಭಾಕರ್‌ 8 ಪ್ಯಾಕ್‌ ತೋರಿಸುವುದಕ್ಕಾಗಿಯೇ ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌ ಹೂರಣ ಸೇರಿಸಿ ಒಂದು ಕಥೆ ಹೆಣೆದು ಚಿತ್ರ ಮಾಡಿದಂತಿದೆ!

ಇನ್ನು ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ 8 ಪ್ಯಾಕ್‌ ಪ್ರದರ್ಶಶಿಸಿರುವುದೇ ಹೆಚ್ಚುಗಾರಿಕೆ. ಆ್ಯಕ್ಷನ್‌ಗೂ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಅದನ್ನು ಹೊರತುಪಡಿಸಿದರೆ, ವಿನೋದ್‌ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ತೆಗೆದುಕೊಂಡು ಹೋಗುತ್ತಾರೆ. ಚಿತ್ರದ ನಾಯಕಿ ಚೈತ್ರಾ ರೆಡ್ಡಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.

ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬದ ಹೆಣ್ಣಾಗಿ, ಚೈತ್ರಾ ಹಾವಭಾವ, ನೋಟ ಎಲ್ಲವೂ ಚೆನ್ನಾಗಿದೆ. ಖಡಕ್‌ ವಿಲನ್‌ಗಳಾಗಿ ಡ್ಯಾನಿ ಕುಟ್ಟಪ್ಪ, ರಾಜ್‌ದೀಪಕ್‌ ಶೆಟ್ಟಿ ಎಂದಿನಂತೆ ಇಲ್ಲೂ ಅದೇ ಅಭಿನಯ ಮುಂದುವರೆಸಿದ್ದಾರೆ. ಉಳಿದಂತೆ ಇತರೆ ಕಲಾವಿದರ ಅಭಿನಯ ಪರವಾಗಿಲ್ಲ ಎನ್ನಬಹುದು. ತಾಂತ್ರಿಕವಾಗಿ ಚಿತ್ರದಲ್ಲಿ ಜೈ ಆನಂದ್‌ ಛಾಯಾಗ್ರಹಣ ಗಮನ ಸೆಳೆಯುತ್ತದೆ.

ಸಂಕಲನ ಕಾರ್ಯ ಕೆಲವೆಡೆ ಶರವೇಗ ಪಡೆದುಕೊಂಡರೆ, ಕೆಲವೆಡೆ ಅಷ್ಟೇ ಮಂದಗತಿಯಲ್ಲಿ ಸಾಗುತ್ತದೆ. ಅಭಿಮಾನ್‌ ರಾಯ್‌ ಸಂಗೀತದಲ್ಲಿ ಸ್ಪಷ್ಟತೆ, ಇಂಪು ಎರಡೂ ಇಲ್ಲದ ಕಾರಣ, ಕಿವಿಯಲ್ಲಿ ಹೆಚ್ಚು ಹೊತ್ತು ಕೂರುವುದಿಲ್ಲ. ಒಟ್ಟಾರೆ “ರಗಡ್‌’ ಅನ್ನೋದು ಪಕ್ಕಾ ಮಾಸ್‌ಗಾಗಿಯೇ ಮಾಡಿದ ಆ್ಯಕ್ಷನ್‌ ಚಿತ್ರ. ಕನ್ನಡದಲ್ಲೂ 8 ಪ್ಯಾಕ್‌ ಲುಕ್‌ ಚಿತ್ರ ತೆರೆಮೇಲೆ ಹೇಗೆ ಬರಬಹುದು ಎನ್ನುವ ಕುತೂಹಲವಿದ್ದರೆ “ರಗಡ್‌’ ನೋಡಲು ಅಡ್ಡಿ ಇಲ್ಲ.

ಚಿತ್ರ: ರಗಡ್‌
ನಿರ್ಮಾಣ: ಎ. ಅರುಣ್‌ಕುಮಾರ್‌
ನಿರ್ದೇಶನ: ಶ್ರೀಮಹೇಶ್‌ ಗೌಡ
ತಾರಾಗಣ: ವಿನೋದ್‌ ಪ್ರಭಾಕರ್‌, ಚೈತ್ರಾ ರೆಡ್ಡಿ, ರಾಜ್‌ದೀಪಕ್‌ ಶೆಟ್ಟಿ, ಡ್ಯಾನಿ ಕುಟ್ಟಪ್ಪ, ಕೃಷ್ಣ ಅಡಿಗ, ಮಾಲತಿ ಸರದೇಶಪಾಂಡೆ, ರಾಜೇಶ್‌ ನಟರಂಗ, ಓಂ ಪ್ರಕಾಶ್‌ ರಾವ್‌ ಇತರರು

* ಜಿ. ಎಸ್‌. ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.