“ಮೂರ್ಕಲ್‌ ಎಸ್ಟೇಟ್‌’ನಲ್ಲಿ ಹಾರರ್‌ ಸದ್ದು

ಚಿತ್ರ ವಿಮರ್ಶೆ

Team Udayavani, Oct 27, 2019, 5:01 AM IST

Murkal-Estate

ಕನ್ನಡ ಚಿತ್ರರಂಗದಲ್ಲಿ ಹಾರರ್‌-ಥ್ರಿಲ್ಲರ್‌ ಚಿತ್ರಗಳ ಸರದಿ ಮುಂದುವರೆದಿದ್ದು, ಈ ಸಾಲಿಗೆ ಈ ವಾರ “ಮೂರ್ಕಲ್‌ ಎಸ್ಟೇಟ್‌’ ಎನ್ನುವ ಮತ್ತೂಂದು ಚಿತ್ರ ಸೇರ್ಪಡೆಯಾಗಿದೆ. ನಾಲ್ಕಾರು ಹುಡುಗರು ನಿಗೂಢ ಸ್ಥಳಕ್ಕೆ ಹೋಗುವುದು, ಅಲ್ಲಿ ನಡೆಯುವ ಚಿತ್ರ-ವಿಚಿತ್ರ ಘಟನೆಗಳನ್ನು ಎದುರಿಸುವುದು. ಕೊನೆಗೆ ಅವುಗಳಿಂದ ಪಾರಾಗಿ ಹೊರಗೆ ಬರುತ್ತಾರಾ.., ಇಲ್ಲವಾ ಅನ್ನೋದೇ ಬಹುತೇಕ ಚಿತ್ರಗಳ ಕ್ಲೈಮ್ಯಾಕ್ಸ್‌. ಈ ಚಿತ್ರದಲ್ಲೂ ಅದೇ ಕಥೆ ಮುಂದುವರೆದಿರುವುದರಿಂದ ಚಿತ್ರದ ಕಥಾ ಹಂದರದ ಬಗ್ಗೆ ಹೆಚ್ಚೇನು ವಿಶೇಷತೆಗಳಿಲ್ಲ.

ಹಾಗಂತ, “ಮೂರ್ಕಲ್‌ ಎಸ್ಟೇಟ್‌’ನಲ್ಲಿ ಕೆಲ ಹಾರರ್‌-ಥ್ರಿಲ್ಲರ್‌ ಚಿತ್ರಗಳಲ್ಲಿ ಕಾಣುವ ರಕ್ತಪಾತ, ಅಶ್ಲೀಲತೆ, ಕೊಲೆ, ವಿಕೃತ ಸಾವು-ನೋವುಗಳಿಲ್ಲ. ಆದರೆ ಚಿತ್ರದಲ್ಲಿ ಅಲ್ಲಲ್ಲಿ ಬರುವ ಹಿನ್ನೆಲೆ ಸದ್ದು ಕೆಲವೊಮ್ಮೆ ಸಣ್ಣಗೆ ನೋಡುಗರನ್ನು ಬೆಚ್ಚಿ ಬೀಳಿಸುವಂತಿದೆ. ಚಿತ್ರದಲ್ಲಿ ದೆವ್ವ-ಭೂತ, ದ್ವೇಷಿಸುವ ಆತ್ಮ, ಕಾಟ ಕೊಡುವ ಪಿಶಾಚಿ ಕಣ್ಣಿಗೆ ಕಾಣದಿದ್ದರೂ, ಅದೆಲ್ಲವೂ ಎನರ್ಜಿಯಲ್ಲಿ ಅಡಕವಾಗಿದೆ ಎನ್ನುವುದನ್ನು ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ. ಸೌಂಡ್‌ ಎಫೆಕ್ಟ್ ಮತ್ತು ಛಾಯಾಗ್ರಹಣ ಚಿತ್ರದಲ್ಲಿ ಗಮನ ಸೆಳೆಯುವ ಪ್ರಮುಖ ತಾಂತ್ರಿಕ ಅಂಶಗಳು.

ಇನ್ನು ಚಿತ್ರದ ನಾಯಕ ಪ್ರವೀಣ್‌, ನಾಯಕಿ ಪ್ರಕೃತಿ ಅಭಿನಯದಲ್ಲಿ ಸಾಕಷ್ಟು ಪಳಗಬೇಕಿದೆ. ಉಳಿದಂತೆ ಇತರೆ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಭಿನಯ. ಚಿತ್ರದ ಕಥೆ ಮತ್ತು ನಿರೂಪಣೆಯ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ನೀಡಿದ್ದರೆ, “ಮೂರ್ಕಲ್‌ ಎಸ್ಟೇಟ್‌’ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಗಳಿದ್ದವು. ಕೆಲವೊಂದು ಲೋಪಗಳನ್ನು ಬದಿಗಿಟ್ಟು ನೋಡುವ ತಾಳ್ಮೆಯಿದ್ದರೆ, ಹಾರರ್‌-ಥ್ರಿಲ್ಲರ್‌ ಚಿತ್ರಗಳ ಕಡೆಗೆ ಒಲವಿರುವವರು ಒಮ್ಮೆ “ಮೂರ್ಕಲ್‌ ಎಸ್ಟೇಟ್‌’ ನೋಡಿ ಬರಲು ಅಡ್ಡಿಯಿಲ್ಲ.

ಚಿತ್ರ: ಮೂರ್ಕಲ್‌ ಎಸ್ಟೇಟ್‌
ನಿರ್ಮಾಣ: ಕುಮಾರ್‌ ಎನ್‌.ಭದ್ರಾವತಿ
ನಿರ್ದೇಶನ: ಪ್ರಮೋದ್‌ ಕುಮಾರ್‌
ತಾರಾಗಣ: ಪ್ರವೀಣ್‌, ಪ್ರಕೃತಿ, ವಿಜಯ್‌, ಅಭಿಷೇಕ್‌ ಮತ್ತಿತರರು

* ಕಾರ್ತಿಕ್‌

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.