ಜಸ್ಟ್‌ ಮಾತ್‌ ಮಾತಲ್ಲಿ ಮಜ ….

ಚಿತ್ರ ವಿಮರ್ಶೆ

Team Udayavani, Oct 12, 2019, 3:04 AM IST

Yellide-Ellitanaka

“ಮೊದಲ ನೋಟಕ್ಕೆ ಇಷ್ಟವಾಗುವ ಹುಡುಗಿಯೊಬ್ಬಳ ಪ್ರೀತಿ ಪಡೆಯೋಕೆ ಅವನು ಒಂದು ಸುಳ್ಳು ಹೇಳುತ್ತಾನೆ. ಅದು ನೂರಾರು ಸುಳ್ಳುಗಳಾಗುತ್ತವೆ. ಅವನ ಪ್ರೀತಿಯೂ ಸಿಗುತ್ತದೆ. ಇನ್ನೇನು ಮದ್ವೆ ಆಗಬೇಕು ಅನ್ನುವ ಹೊತ್ತಿಗೆ, ಅವನು ಹೇಳಿದ್ದೆಲ್ಲವೂ ಸುಳ್ಳು ಅನ್ನೋದು ಆಕೆಗೆ ಗೊತ್ತಾಗುತ್ತದೆ. ಮುಂದಾ? ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲವೂ ಶುಭಂ..! ಇದರಲ್ಲಿ ವಿಶೇಷವೇನಿದೆ? ಇಂಥದ್ದೊಂದು ಪ್ರಶ್ನೆ ನೋಡುಗರಲ್ಲೂ ಗಿರಕಿ ಹೊಡೆಯುತ್ತೆ.

ಗಾಂಧಿನಗರದ ಸಿದ್ಧಸೂತ್ರ ಬಿಟ್ಟು ಆಚೀಚೆ ಬರದ ಚಿತ್ರವಿದು. ಕನ್ನಡಕ್ಕೆ ಕಥೆ ಹೊಸದಲ್ಲ. ಈಗಾಗಲೇ ಕನ್ನಡದಲ್ಲೇ ಅದೆಷ್ಟೋ ಕಥೆಗಳು ಬಂದು ಹೋಗಿವೆ. ಸೃಜನ್‌ ಲೋಕೇಶ್‌ ನಿರ್ವಹಿಸಿರುವ ಪಾತ್ರವಷ್ಟೇ ಇಲ್ಲಿ ಹೊಸದು. ಕಾಣುವ ಪಾತ್ರಗಳಲ್ಲಷ್ಟೇ ಹೊಸತನವಿದೆ. ಉಳಿದಿದೆಲ್ಲವೂ ಮಾಮೂಲಿ. ಸುಳ್ಳು ಎಷ್ಟು ಮಜ ಕೊಡುತ್ತೆ ಎಂಬುದನ್ನಿಲ್ಲಿ ಅಷ್ಟೇ ಮಜವಾಗಿ ತೋರಿಸಲಾಗಿದೆ. ಅದರಿಂದ ಎಷ್ಟು ಮನಸ್ಸುಗಳಿಗೆ ನೋವಾಗುತ್ತೆ ಅನ್ನೋದನ್ನೂ ಹೇಳಲಾಗಿದೆ.

ಸಿಂಪಲ್‌ ಕಥೆಗೆ ಇನ್ನಷ್ಟು ಚಿತ್ರಕಥೆ ಎಂಬ ಗಟ್ಟಿ ಹೂರಣ ಬೇಕಿತ್ತು. ಅದಿಲ್ಲದ ಕಾರಣ, ಅಲ್ಲಲ್ಲಿ ಸಪ್ಪೆಯೆನಿಸುತ್ತೆ. ಆದರೂ, ಚಿತ್ರ ನೋಡಿಸಿಕೊಂಡು ಹೋಗುತ್ತೆ ಅನ್ನುವುದಾದರೆ, ಅದು ಸಂಭಾಷಣೆ. ತುಂಬಾ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರುವಂತಿಲ್ಲ. ಆದರೆ, ತಕ್ಕಮಟ್ಟಿಗೆ ನಕ್ಕು ಹೊರಬರಲು ಯಾವ ತೊಂದರೆಯೂ ಇಲ್ಲ. ಮೊದಲರ್ಧ ಸುಳ್ಳಿನ ಕಂತೆಯಲ್ಲೇ ಸಾಗುವ ಚಿತ್ರ ಅಲ್ಲಲ್ಲಿ ಸೀಟಿಗೆ ಒರಗಿಕೊಳ್ಳುವಂತೆ ಮಾಡುತ್ತೆ.

ಅಲ್ಲಿ ಹೀಗಾಗಬಹುದು, ಹಾಗೆ ಆಗಬಹುದು ಅಂದುಕೊಂಡವರಿಗೆ ಯಾವ ಪವಾಡವೂ ಆಗಲ್ಲ. ಚಿತ್ರದ ಅದ್ಧೂರಿತನಕ್ಕೆ ಬರವಿಲ್ಲ. ಆದರೆ, ಹೊಸತನವನ್ನು ಹುಡುಕುವಂತಿಲ್ಲ. ಇಲ್ಲಿ ಮಾತೇ ಬಂಡವಾಳ. ಅದು ಬಿಟ್ಟು ಬೇರೇನೂ ಇಲ್ಲ. ಕೆಲವು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಸಿನಿಮಾದುದ್ದಕ್ಕೂ ಒಂದಷ್ಟು ಎಡವಟ್ಟುಗಳಿವೆ. ಆದರೆ, ನಿರ್ದೇಶಕರ ಮೊದಲ ಚಿತ್ರವಾದ್ದರಿಂದ ಆ ತಪ್ಪುಗಳನ್ನು ಬದಿಗೊತ್ತಬಹುದು. ಚಿತ್ರಕ್ಕಿನ್ನೂ ಬಿಗಿಯಾದ ನಿರೂಪಣೆಯ ಅಗತ್ಯವಿತ್ತು.

ಎಲ್ಲವನ್ನೂ ಕ್ರಮವಾಗಿ ಬಳಸಿಕೊಂಡಿದ್ದರೆ, ಇನ್ನಷ್ಟು ಮನಸ್ಸಿಗೆ ಹತ್ತಿರವಾಗುವಂತಹ ಚಿತ್ರ ಕಟ್ಟಿಕೊಡಲು ಸಾಧ್ಯವಿತ್ತು. ವಿನಾಕಾರಣ ಹಾಸ್ಯ ದೃಶ್ಯಗಳನ್ನು ತೂರಿಸಿ, ನೋಡುಗರ ತಾಳ್ಮೆ ಕೆಡಿಸಲಾಗಿದೆ. ಹಾಸ್ಯ ದೃಶ್ಯಗಳಿಗಿಂತ ಮಾತುಗಳ “ಪಂಚ್‌’ ಆಗಾಗ ನಗೆಯ ಅಲೆ ಎಬ್ಬಿಸುತ್ತದೆ. ತುಂಬಾ ಸೀರಿಯಸ್‌ ಆಗಿ ನೋಡುವಂತಹ ಚಿತ್ರವೇನೂ ಅಲ್ಲ, “ಭರಪೂರ’ ಮನರಂಜನೆಯನ್ನು ಬಯಸುವಂತಿಲ್ಲ. ಕೊಂಚ ಕಿರಿಕಿರಿ ನಡುವೆ ಎರಡು ತಾಸು ಸಿನಿಮಾ ನೋಡಿಸಿಕೊಂಡು ಹೋಗುತ್ತೆ ಎಂಬುದೇ ಸಮಾಧಾನ.

ನಾಯಕ ಸೂರ್ಯ ಚಿಕ್ಕವನಿರುವಾಗಲೇ ಅವನ ಅಪ್ಪ, ಅಮ್ಮ ಮಲೇಶಿಯಾಗೆ ಶಿಫ್ಟ್ ಆಗಿರುತ್ತಾರೆ. ದೊಡ್ಡ ಉದ್ಯಮಿ ಪುತ್ರನಾದ ಸೂರ್ಯನಿಗೆ ಇಂಡಿಯಾಗೆ ಬರುವ ಆಸೆ. ತಂದೆ ಮಾಡಿಕೊಟ್ಟ ಬಿಜಿನೆಸ್‌ ನೋಡಿಕೊಳ್ಳೋಕೂ ಸೋಮಾರಿತನ. ಅದರಲ್ಲೂ ಅವನಿಗೆ ಮದ್ವೆ ಅಂದರೆ ಅಲರ್ಜಿ. ಹೀಗಿರುವಾಗಲೇ, ತಂದೆ-ತಾಯಿ ಜೊತೆ ಇಂಡಿಯಾಗೆ ಬರುತ್ತಾನೆ. ಕಾರ್ಯಕ್ರಮವೊಂದರಲ್ಲಿ ನಾಯಕಿಯನ್ನು ನೋಡಿ ಫಿದಾ ಆಗುತ್ತಾನೆ.

ಆಕೆಯನ್ನು ಒಲಿಸಿಕೊಳ್ಳೋಕೆ ಡ್ರಾಮಾ ಶುರುಮಾಡುತ್ತಾನೆ. ಸುಳ್ಳುಗಳ ಮನೆಕಟ್ಟಿ ಆಕೆಯನ್ನು ಒಲಿಸಿಕೊಳ್ತಾನೆ. ಮದ್ವೆ ಆಗಲು ಹೊರಟಾಗ, ಅಲ್ಲೊಂದು ದೊಡ್ಡ ಘಟನೆ ನಡೆಯುತ್ತೆ. ಆ ಘಟನೆ ಏನೆಂಬ ಕುತೂಹಲವಿದ್ದರೆ ಸಿನಿಮಾ ನೋಡಬಹುದು. ಸೃಜನ್‌ ಡೈಲಾಗ್‌ ಹರಿಬಿಡುವುದರಲ್ಲಿ ಇಷ್ಟವಾಗುತ್ತಾರೆ. ಬಿಲ್ಡಪ್‌ಗೆಂದು ಇಟ್ಟಿರುವ ಸ್ಟಂಟ್ಸ್‌ನಲ್ಲಿ ಅಷ್ಟೊಂದು ಗಮನಸೆಳೆಯಲ್ಲ. ಆದರೂ, ನಗಿಸಲು ಹಿಂದುಳಿದಿಲ್ಲ.

ಹರಿಪ್ರಿಯಾ, ಗ್ಲಾಮರ್‌ ಜೊತೆ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ತಾರಾ, ಅವಿನಾಶ್‌, ಸಾಧು, ತಬಲಾನಾಣಿ, “ತರಂಗ’ ವಿಶ್ವ, ಗಿರಿ ಸೇರಿದಂತೆ ಬರುವ ಪಾತ್ರಗಳು ಚಿತ್ರದ ವೇಗಕ್ಕೆ ಸಾಧ್ಯವಾದಷ್ಟು ಹೆಗಲು ಕೊಟ್ಟಿವೆ. ಅರ್ಜುನ್‌ ಜನ್ಯ ಸಂಗೀತದಲ್ಲಿ ಒಂದು ಹಾಡಷ್ಟೇ ಪರವಾಗಿಲ್ಲ. ಹಿನ್ನೆಲೆ ಸಂಗೀತದಲ್ಲೂ ಹೇಳಿಕೊಳ್ಳುವಂತಹ “ಮಜ’ವಿಲ್ಲ. ಹೆಚ್‌.ಸಿ. ವೇಣು ಛಾಯಗ್ರಹಣ ಅಂದವನ್ನು ಹೆಚ್ಚಿಸಿದೆ.

ಚಿತ್ರ: ಎಲ್ಲಿದ್ದೆ ಇಲ್ಲೀ ತನಕ
ನಿರ್ಮಾಣ: ಲೋಕೇಶ್‌ ಪ್ರೊಡಕ್ಷನ್ಸ್‌
ನಿರ್ದೇಶನ: ತೇಜಸ್ವಿ
ತಾರಾಗಣ: ಸೃಜನ್‌ ಲೋಕೇಶ್‌, ಹರಿಪ್ರಿಯಾ, ತಾರಾ, ಅವಿನಾಶ್‌, ಗಿರಿಜಾ ಲೋಕೇಶ್‌, ತಬಲನಾಣಿ, ಸಾಧುಕೋಕಿಲ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.