ಚಿತ್ರವಿಮರ್ಶೆ: ಸಂಸಾರದ ‘ರಾಜಿ’ ಸೂತ್ರ


Team Udayavani, Apr 30, 2022, 11:31 AM IST

kannada film raaji review

ಸಂಸಾರ ನೌಕೆ ಎನ್ನುವುದು ಎರಡು ಕೈ ಜೋಡಿಸಿ ನಡೆಸುವ ಪ್ರಯಾಣ. ಈ ಪ್ರಯಾಣದಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ಸಮಾನವಾಗಿ ಹಂಚಿಕೊಂಡು, ಒಬ್ಬರಿಗೊಬ್ಬರು ಹೆಗಲಾಗಿ, ಅರ್ಥೈಸಿಕೊಂಡು ಸಾಗುವುದೇ ಜೀವನದ ಸತ್ಯ. ಇಂತ ಹ ಸುಂದರ ಸಂಸಾರದ ಆಧಾರವೇ “ರಾಜಿ’. ಎರಡು ಮನಸ್ಸುಗಳು ಪರಸ್ಪರ ಅರಿತು ಒಂದು ಸುಂದರ ಒಪ್ಪಂದದಲ್ಲಿ ಜೀವಿಸುವುದೇ ಸಂಸಾರ ಎಂಬ ಈ ಸಾರದೊಂದಿಗೆ ಮೂಡಿಬಂದಿರುವ ಚಿತ್ರ “ರಾಜಿ’.

ಮದುವೆಯಾಗಿ ವರ್ಷಗಳು ಕಳೆದರು ಮಕ್ಕಳಿಲ್ಲ ಎಂಬ ಕೊರಗು ಕಿಂಚಿತ್ತು ಭಾದಿಸದೆ, ಒಬ್ಬರನ್ನು ಒಬ್ಬರು ಮಕ್ಕಳಂತೆ ಕಂಡು ಸುಂದರವಾಗಿ ಸಂಸಾರ ನಡೆಸುತ್ತಿದ್ದ ಜೋಡಿ ರಾಘವ್‌ ಮತ್ತು ಜೀವಿತಾ. ಇವರಿಬ್ಬರ ಈ ತಡೆಯಿಲ್ಲದೆ ಸಾಗುವ

ಪಯಣಕ್ಕೆ ದೊಡ್ಡ ತಿರುವಾಗಿ ಪರಿಣಮಿಸಿದ್ದು ಒಂದು ಘಟನೆ. ನಡೆದ ಆ ಒಂದು ಘಟನೆ ಇವರ ಜೀವನದ ಮಗ್ಗುಲನ್ನೇ ಬದಲಿಸಿತ್ತು. ಈ ಜೋಡಿಗೆ ಎದುರಾದ ಕಷ್ಟಗಳನ್ನು ಹೇಗೆ ನಿಭಾಯಿಸುತ್ತದೆ. ಜೀವಿತಾ ಹೇಗೆ ತನ್ನ ಗಂಡನಿಗೆ ಬೆನ್ನೆಲುಬಾಗಿ, ಬರುವ ಕಷ್ಟಗಳನ್ನು ದಾಟಿ ನಿಲ್ಲುತ್ತಾಳೆ ಎಂದು ಹೇಳುವ ಚಿತ್ರವೇ ರಾಜಿ.

ಕಡಿಮೆ ಸಮಯದಲ್ಲಿ ಒಂದು ಕಥೆಯನ್ನು ಚಿತ್ರಿಸಿದ್ದು, ಚಿತ್ರದ ಮೊದಲ ಭಾಗ ವರ್ತಮಾನ ಹಾಗೂ ಹಳೆ ನೆನಪುಗಳ ಮೆಲುಕಿನಲ್ಲೇ ಕಳೆದು ಹೋಗುತ್ತದೆ. ಕಥೆಯ ನಿಜ ರೂಪ ಎರಡನೇ ಭಾಗದಲ್ಲಿ ತೆರೆದುಕೊಂಡು ಅಷ್ಟೆ ಬೇಗ ಚಿತ್ರಕ್ಕೆ ಒಂದು ಅಂತಿಮ ಘಟ್ಟ ನೀಡುತ್ತದೆ.

ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರೀತಿ ಎಸ್‌ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿ ನಿದೇರ್ಶಿಸಿರುವ ಮೊದಲ ಚಿತ್ರ ಇದಾಗಿದೆ. ಅವರ ಮೊದಲ ಪ್ರಯತ್ನ ಒಪ್ಪುವಂತದ್ದು. ಹೆಣ್ಣು ಸಂಸರಾದ ಕಣ್ಣು ಎನ್ನುವಂತೆ ಕುಟುಂಬ ನಿರ್ವಹಣೆಗೆ ಹೆಣ್ಣು ಪಡುವ ಕಷ್ಟ, ಚುಚ್ಚುಮಾತು, ಅನುಮಾನಗಳನ್ನು ಸಹಿಸಿ ಗಂಡನನ್ನು ಮಗುವಂತೆ ಕಾಣುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ ಎಂದಿನಂತೆ ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಜೀವತುಂಬಿದ್ದು, ಪ್ರತಾಪ್‌ ಸಿಂಹ, ಎಂ ಡಿ ಕೌಶಿಕ್‌ ಅವರ ಪಾತ್ರಗಳು ಕಥೆಗೆ ಸಾಥ್‌ ನೀಡುವಂತಿದೆ.

ಚಿತ್ರದಲ್ಲಿ ಮೂಡಿಬಂದಿರುವ ಎಚ್‌.ಎಸ್‌.ವೆಂಕಟೇಶ್‌ಮೂರ್ತಿ ಅವರ ಸಾಹಿತ್ಯ ಹಾಗೂ ಉಪಾಸನಾ ಮೋಹನ್‌ ಅವರ ಸಂಗೀತ ಕಥೆಗೆ ಪುಷ್ಠಿ ಕೊಡುವಂತಿದ್ದು ಸಂಸಾರದ ನಿಜ ಅರ್ಥ ಸಾರಿದೆ. ಪಿ.ವಿ ಆರ್‌ ಸ್ವಾಮಿ ತಮ್ಮ ಕ್ಯಾಮರಾ ಕೈ ಚಳಕದಲ್ಲಿ “ರಾಜಿ’ಯನ್ನು ಸುಂದರವನ್ನಾಗಿಸಿದ್ದಾರೆ

ವಾಣಿ ಭಟ್ಟ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.