ಹೊಸತನವಿಲ್ಲ ಹಳೆಯದೇ ಎಲ್ಲಾ


Team Udayavani, Dec 16, 2018, 11:22 AM IST

viraj.jpg

ಕಾಲೇಜ್‌ನಲ್ಲಿ ಸಭ್ಯವಾಗಿ ಓದಿಕೊಂಡಿರುವ ಹುಡುಗ. ಅದೇ ಕಾಲೇಜಿಗೆ ಅಮೆರಿಕಾದಿಂದ ಬಂದು ಸೇರುವ ಹುಡುಗಿ. ಇಬ್ಬರಿಗೂ ಒಂದೇ ನೋಟದಲ್ಲಿ ಪ್ರೀತಿ. ಇಬ್ಬರ ಪ್ರೀತಿಗೂ ಮೊದಲು ಮನೆಯವರಿಂದ ಗ್ರೀನ್‌ ಸಿಗ್ನಲ್‌. ಇನ್ನೇನು ನಿಶ್ಚಿತಾರ್ಥ ಮುಗಿದು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಸಣ್ಣ ಕಿರಿಕ್‌ನಿಂದಾಗಿ ಮದುವೆ ಮುರಿದು ಬೀಳುತ್ತದೆ. ಮತ್ತೆ ಹೇಗೋ ಎರಡು ಕುಟುಂಬಗಳು ಒಂದಾದವು ಎನ್ನುವಷ್ಟರಲ್ಲಿ ಮತ್ತೂಂದು ಕಿರಿಕ್‌.

ಅದರಿಂದ ಮತ್ತೆ ಮದುವೆ ಮುರಿದು ಬೀಳುತ್ತದೆ. ಮತ್ತೆ ಈ ಕುಟುಂಬಗಳನ್ನು ಒಂದುಗೂಡಿಸಲು ಪಡಬಾರದ ಹರಸಾಹಸ. ಅಷ್ಟರೊಳಗೆ ಎದುರಿಗಿದ್ದ ಪ್ರೇಕ್ಷಕ ಸುಸ್ತೋ ಸುಸ್ತು! ಇದಿಷ್ಟು ಈ ವಾರ ತೆರೆಗೆ ಬಂದಿರುವ “ವಿರಾಜ್‌’ ಚಿತ್ರದ ಕಥಾಹಂದರ. “ವಿರಾಜ್‌’ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಕನ್ನಡದಲ್ಲಿ ಕಳೆದ ನಾಲ್ಕು ದಶಕಗಳಿಂದ ಬಂದಂತಹ  ಹತ್ತಾರು ಚಿತ್ರಗಳ ಒಂದೊಂದು ದೃಶ್ಯಗಳನ್ನು ಭಟ್ಟಿ ಇಳಿಸಿ ಮಾಡಿದ ಚಿತ್ರ.

ಆದರೆ ಇಂಥ ಭಟ್ಟಿ ಇಳಿಸುವ ಕೆಲಸವನ್ನೂ ಕೂಡ ಪ್ರೇಕ್ಷಕರು ರೋಸಿ ಹೋಗುವಂತೆ ಮಾಡಿದ್ದಾರೆ ನಿರ್ದೇಶಕರು. ಹತ್ತು ನಿಮಿಷದಲ್ಲಿ ಹೇಳಿ ಕೈ ತೊಳೆದುಕೊಳ್ಳಬಹುದಾದ ಕಥೆಯನ್ನು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವ ಸಲುವಾಗಿಯೇ ಎರಡೂ ಕಾಲು ಗಂಟೆ ಎಳೆದಂತಿದೆ. ಹೊಸತನದ ಕಥೆ, ಆಕರ್ಷಕ ನಿರೂಪಣೆ, ಚಿತ್ರದ ಮೇಲೆ ಬಿಗಿಯಾದ ಹಿಡಿತವಿಲ್ಲದಿದ್ದರೆ ಒಂದು ಚಿತ್ರ ನಿರ್ದೇಶಕನ, ನಿರ್ಮಾಪಕನ ಹಿಡಿತಕ್ಕೆ ಸಿಗದೆ ಹೇಗೆಲ್ಲ ಹಳಿ ತಪ್ಪಿ ಹೋಗಬಹುದು.

ತೆರೆಮೇಲೆ ಹೇಗೆಲ್ಲ ಅಪಘಾತ ಆಗಬಹುದು. ನೋಡುಗರಿಗೂ ಹೇಗೆ ಆಘಾತ ಮಾಡಬಹುದು ಎಂಬುದಕ್ಕೆ ವಿರಾಜ್‌ ಚಿತ್ರ ಸದ್ಯದ ತಾಜಾ ಉದಾಹರಣೆ. ಇನ್ನು ಚಿತ್ರದ ನಾಯಕ ವಿದ್ಯಾಭರಣ್‌ ಅಭಿನಯ ದೇವರಿಗೇ ಪ್ರೀತಿ! ಆ್ಯಕ್ಷನ್‌, ರೊಮ್ಯಾನ್ಸ್‌, ಎಮೋಷನ್ಸ್‌ ಯಾವ ದೃಶ್ಯಗಳಿಗೂ ಭೇದ-ಭಾವ ಮಾಡದೇ, ಆರಂಭದಿಂದ ಅಂತ್ಯದವರೆಗೂ ಅದೇ ಪೇಲವ ಅಭಿನಯ ಮುಂದುವರೆಸಿಕೊಂಡು ಹೋಗಿದ್ದಾರೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ಚಿತ್ರದ ನಾಯಕ ತೆರೆಮೇಲೆ ನಿರ್ಲಿಪ್ತ – ನಿರ್ಭಾವುಕ. ಇನ್ನು ಚಿತ್ರದ ನಾಯಕಿ ಶಿರಿನ್‌ ತೆರೆಮೇಲೆ ಅಂದವಾಗಿ ಕಂಡರೂ, ಅಂದಕ್ಕೊಪ್ಪುವ ಅಭಿನಯ ನೀಡಲು ಸಾಧ್ಯವಾಗಿಲ್ಲ. ಹಿರಿಯ ನಟ ದೇವರಾಜ್‌, ಜೈಜಗದೀಶ್‌, ವಿನಯಾ ಪ್ರಸಾದ್‌, ಟೆನ್ನಿಸ್‌ ಕೃಷ್ಣ ಮೊದಲಾದ ಕಲಾವಿದರ ದೊಡ್ಡ ತಾರಾಬಳಗವಿದ್ದರೂ, ಯಾರನ್ನೂ ಸಮರ್ಥವಾಗಿ ಬಳಸಿಕೊಂಡಿಲ್ಲ. ಹಾಗಾಗಿ ಯಾರ ಪಾತ್ರಗಳೂ ಮನಸ್ಸಿನಲ್ಲಿ ಉಳಿಯುವುದಿಲ್ಲ. 

ಇನ್ನು ಚಿತ್ರದಲ್ಲಿ ಕೊಂಚ ಸಮಾಧಾನ ತರುವ ಅಂಶವೆಂದರೆ ಛಾಯಾಗ್ರಹಣ. ಚಿತ್ರದ ದೃಶ್ಯಗಳನ್ನು ಮಲ್ಲಿಕಾರ್ಜುನ್‌ ಕ್ಯಾಮರಾದಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಚಿತ್ರದ ಸಂಕಲನ ಕೆಲಸ ಛಾಯಾಗ್ರಹಣಕ್ಕೆ ಪೂರಕವಾಗಿರುವುದಕ್ಕಿಂತ, ಮಾರಕವಾಗಿದ್ದೆ ಹೆಚ್ಚು ಎಂಬಂತೆ ಅನಿಸುತ್ತದೆ. ಇನ್ನು ಚಿತ್ರದ ಹಿನ್ನೆಲೆ ಸಂಗೀತ, ಹಾಡುಗಳು, ಸಾಹಿತ್ಯ, ಸಂಭಾಷಣೆ ಮೊದಲಾದ ಅಂಶಗಳ ಬಗ್ಗೆ ಮಾತನಾಡದಿರುವುದು ಒಳಿತು. 

ಚಿತ್ರ: ವಿರಾಜ್‌
ನಿರ್ದೇಶನ: ನಾಗೇಶ್‌ ನಾರದಾಸಿ
ನಿರ್ಮಾಣ: ಮಂಜುನಾಥ ಸ್ವಾಮಿ. ಎನ್‌
ತಾರಾಗಣ: ವಿದ್ಯಾಭರಣ್‌, ಶಿರಿನ್‌, ನಿಖಿತಾ, ದೇವರಾಜ್‌, ಜೈಜಗದೀಶ್‌, ವಿನಯಾ ಪ್ರಸಾದ್‌, ಸ್ವಾತಿ, ಟೆನ್ನಿಸ್‌ ಕೃಷ್ಣ, ಕಡ್ಡಿಪುಡಿ ಚಂದ್ರು, ಉಗ್ರಂ ಮಂಜು ಮತ್ತಿತರರು. 

* ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.