ಚಿತ್ರ ವಿಮರ್ಶೆ: ಕಾಮಿಡಿ ಕಿಕ್‌ ಕೊಡುವ ಓಲ್ಡ್‌ ಮಾಂಕ್


Team Udayavani, Feb 26, 2022, 1:23 PM IST

ಚಿತ್ರ ವಿಮರ್ಶೆ: ಕಾಮಿಡಿ ಕಿಕ್‌ ಕೊಡುವ ಓಲ್ಡ್‌ ಮಾಂಕ್

ಪುರಾಣ ಕಥೆಗಳಲ್ಲಿ ನೀವು ನಾರದ ಮುನಿಯ ಪಾತ್ರದ ಬಗ್ಗೆ ಕೇಳಿರುತ್ತೀರಿ. ಸೃಷ್ಟಿಯ ಮೊದಲ ಸನ್ಯಾಸಿ (ಓಲ್ಡ್‌ ಮಾಂಕ್‌) ಎಂದೇ ಕರೆಸಿಕೊಳ್ಳುವ, ಮೂರೂ ಲೋಕಗಳಲ್ಲೂ ಸಂಚರಿಸಿ ಬಹುತೇಕ ಎಲ್ಲ ಯಡವಟ್ಟುಗಳಿಗೂ ಕಾರಣವಾಗುವ, ಈ “ಓಲ್ಡ್‌ ಮಾಂಕ್‌’ ಫಿಟಿಂಗ್‌ ಮಾಸ್ಟರ್‌ ಎಂದೇ ಜನಪ್ರಿಯ! ಇಂಥ “ಓಲ್ಡ್‌ ಮಾಂಕ್‌’ ಏನಾದ್ರೂ ಕಲಿಯುಗದಲ್ಲಿ ಶಾಪಗ್ರಸ್ಥನಾಗಿ ಭೂಮಿಗೆ ಬಂದರೆ ಹೇಗಿರುತ್ತದೆ? ಈ “ಓಲ್ಡ್‌ ಮಾಂಕ್‌’ ಜೊತೆಯಲ್ಲಿದ್ದವರಿಗೆ ಅದಿನ್ಯಾವ ರೀತಿ ಫಿಟಿಂಗ್‌ ಇಟ್ಟು, ಕ್ವಾಟ್ಲೆ ಕೊಟ್ಟು ಕಾಡಬಹುದು? ಇಂಥದ್ದೊಂದು ಕಾಲ್ಪನಿಕ ಕಥೆಯನ್ನು ಕಣ್ತುಂಬಿಕೊಳ್ಳುವ ಕುತೂಹಲವಿದ್ದರೆ, ಖಂಡಿತವಾಗಿಯೂ ಥಿಯೇಟರ್‌ನಲ್ಲಿ ನೀವೊಮ್ಮೆ “ಓಲ್ಡ್‌ ಮಾಂಕ್‌’ ದರ್ಶನ ಮಾಡಲೇಬೇಕು.

ದೇವಲೋಕದಲ್ಲಿ ಭಗವಾನ್‌ ಶ್ರೀಕೃಷ್ಣ ಮತ್ತು ರುಕ್ಮಣಿಗೆ ಫಿಟಿಂಗ್‌ ಇಡುವ (ಕಾಲ್ಪನಿಕವಾಗಿ) ನಾರದ ಮುನಿ ಇಬ್ಬರನ್ನೂ ಬೇರೆ ಬೇರೆಯಾಗುವಂತೆ ಮಾಡುತ್ತಾನೆ. ಇದೇ ಕೋಪದಲ್ಲಿ ಶ್ರೀಕೃಷ್ಣ ಪರಮಾತ್ಮ ನಾರದನಿಗೆ ಶಾಪ ಕೊಟ್ಟು ಭೂಮಿಗೆ ಕಳುಹಿಸುತ್ತಾನೆ. ಭೂಲೋಕದಲ್ಲಿ ಹುಡುಗಿಯನ್ನು ಪ್ರೀತಿಸಿ ಮದುವೆಯಾದರೆ ಮಾತ್ರ ಶಾಪದಿಂದ ವಿಮುಕ್ತಿ ಎಂಬ ಕಂಡೀಷನ್‌ ಕೂಡ ಹಾಕುತ್ತಾನೆ! ಪ್ರೇಮಿಗಳನ್ನೂ ಕಂಡರೆ ಆಗದ ಈ “ಓಲ್ಡ್‌ ಮಾಂಕ್‌’ ತನ್ನ ಶಾಪ ವಿಮುಕ್ತಿಗಾಗಿ ಏನೆಲ್ಲ ಹರ ಸಾಹಸ ಮಾಡುತ್ತಾನೆ ಅನ್ನೋದು “ಓಲ್ಡ್‌ ಮಾಂಕ್‌’ ಕಥಾಹಂದರ. ಈ ಲವ್‌ ಗೇಮ್‌ ಚಾಲೆಂಜ್‌ನಲ್ಲಿ ನಾರದ ಯಶಸ್ವಿಯಾಗುತ್ತಾನಾ ಅನ್ನೋದೇ “ಓಲ್ಡ್‌ ಮಾಂಕ್‌’ ಕ್ಲೈಮ್ಯಾಕ್ಸ್‌. ಅದು ಹೇಗೆ ಅನ್ನೋದನ್ನ ತೆರೆಮೇಲೆ ನೋಡುವುದೇ ಒಳ್ಳೆಯದು.

ಇದನ್ನೂ ಓದಿ:ಏಕ್ ಲವ್ ಯಾ ಚಿತ್ರ ವಿಮರ್ಶೆ: ಪ್ರೇಮ್‌ ಲೋಕದಲ್ಲಿ ಥ್ರಿಲ್ಲಿಂಗ್‌ ಸ್ಟೋರಿ

ಪುರಾಣ, ದೇವರು, ಪ್ರೀತಿ ಎಲ್ಲವನ್ನೂ ಸೇರಿಸಿ ಒಂದು ಸುಂದರ ಕಾಲ್ಪನಿಕ ಕಥೆಯನ್ನು “ಓಲ್ಡ್‌ ಮಾಂಕ್‌’ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಂ ನಾಯಕ ಶ್ರೀನಿ. ಮಾಮೂಲಿ ಲವ್‌ಸ್ಟೋರಿಯಂತೆ ಕಂಡರೂ, ನವಿರಾದ ಚಿತ್ರಕಥೆ, ಕಚಗುಳಿಯಿಡುವ ಸಂಭಾಷಣೆ ಮತ್ತು ಅಲ್ಲಲ್ಲಿ ಸಿಗುವ ಟ್ವಿಸ್ಟ್‌ಗಳು “ಓಲ್ಡ್‌ ಮಾಂಕ್‌’ ಹೈಲೈಟ್ಸ್‌. ಆರಂಭದಿಂದ ಅಂತ್ಯದವರೆಗೂ “ಓಲ್ಡ್‌ ಮಾಂಕ್‌’ ಕಾಮಿಡಿ ಕಿಕ್‌ ಕೊಟ್ಟು ನೋಡುಗರನ್ನು ಹಿಡಿದುಕೂರಿಸುತ್ತಾನೆ.

ಇನ್ನು ಶಾಪಗ್ರಸ್ಥ ನಾರದನಾಗಿ ಶ್ರೀನಿ ತೆರೆಮೇಲೂ ಕಮಾಲ್‌ ಮಾಡಲು ಯಶಸ್ವಿಯಾಗಿದ್ದಾರೆ. ನಾಯಕ ಶ್ರೀನಿ ಮತ್ತು ಸ್ನೇಹಿತನಾಗಿ ಸುಜಯ್‌ ಶಾಸ್ತ್ರೀ ಕಾಂಬಿನೇಶನ್‌ ಪ್ರೇಕ್ಷಕರನ್ನು ನಗೆ ಕಡಲಿನಲ್ಲಿ ತೇಲಿಸುತ್ತದೆ. ಎಸ್‌. ನಾರಾಯಣ್‌, ಅದಿತಿ ಪ್ರಭುದೇವ, ಸಿಹಿಕಹಿ ಚಂದ್ರು, ಸುದೇವ್‌ ನಾಯರ್‌ ಎಲ್ಲರದ್ದೂ ಪಾತ್ರಕ್ಕೊಪ್ಪುವ ಅಚ್ಚುಕಟ್ಟು ಅಭಿನಯ. ಔಟ್‌ ಆ್ಯಂಡ್‌ ಔಟ್‌ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾಗಳನ್ನು ಇಷ್ಟಪಡುವವರಿಗೆ “ಓಲ್ಡ್‌ ಮಾಂಕ್‌’ ಪೈಸ ವಸೂಲ್‌ ಸಿನಿಮಾ ಎನ್ನಲು ಅಡ್ಡಿಯಿಲ್ಲ.

ಜಿ. ಎಸ್‌. ಕಾರ್ತಿಕ ಸುಧನ್‌

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.