ಹಳೇ ಟ್ರ್ಯಾಕ್‌ ಸ್ಲೋ ರೇಸ್‌

ಚಿತ್ರ ವಿಮರ್ಶೆ

Team Udayavani, May 25, 2019, 3:00 AM IST

race

ಅವನ ಹೆಸರು ಶಿವ. ಅವನೊಬ್ಬ ಅನಾಥ ಹುಡುಗ. ತಾನೊಬ್ಬ ಸಿನಿಮಾದ ಹೀರೋ ಆಗಬೇಕು, ಸೂಪರ್‌ ಸ್ಟಾರ್‌ ಆಗಬೇಕು ಎಂಬುದು ಅವನ ಕನಸು. ಹೀರೋ ಆಗಲು ಬೇಕಾದ ಎಲ್ಲಾ ಲಕ್ಷಣಗಳು ಇದ್ದರೂ, ಲಕ್ಷಗಟ್ಟಲೆ ಹಣ ಕೂಡ ಬೇಕು ಅನ್ನೋ ವಾಸ್ತವ ಅವನಿಗೆ ಗೊತ್ತಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ನಿಲ್ಲಲ್ಲು ನೆಲೆ ಕೂಡ ಇಲ್ಲದ, ಖಾಲಿ ಕೈ ಹುಡುಗ‌ ಏನು ಮಾಡುತ್ತಾನೆ.

ಹೀರೋ ಆಗಲು ಬೇಕಾದ ಹಣವನ್ನು ಹೇಗೆ ವ್ಯವಸ್ಥೆ ಮಾಡುತ್ತಾನೆ. ಹಣ ಮಾಡಲು ಯಾವ ದಾರಿ ಹಿಡಿಯುತ್ತಾನೆ. ಈ ದಾರಿಯಲ್ಲಿ ಅವನಿಗೆ ಯಾರು ಎದುರಾಗುತ್ತಾರೆ. ಇದನ್ನೆಲ್ಲ ಕ್ಲೈಮ್ಯಾಕ್ಸ್‌ನಲ್ಲಿ ನೋಡುವ ಕುತೂಹಲವಿದ್ದರೆ, ಈ ವಾರ ತೆರೆಗೆ ಬಂದಿರುವ “ರೇಸ್‌’ ಚಿತ್ರವನ್ನು ನೋಡಬಹುದು. ಹಣವಿಲ್ಲದವರು ಹಣ ಮಾಡಲು ಶ್ರೀಮಂತರ ಹಿಂದೆ ಬೀಳುವುದು, ಶ್ರೀಮಂತರಾಗಲು ಶಾರ್ಟ್‌ಕಟ್‌ ಹಿಡಿಯುವುದು,

ಅದಕ್ಕಾಗಿ ಇನ್ನಿಲ್ಲದಂತೆ ಗೇಮ್‌ ಪ್ಲಾನ್‌ ಮಾಡುವುದು. ಕೊನೆಗೆ ಈ ಪ್ರಯತ್ನದಲ್ಲಿ ಸಫ‌ಲರಾಗುವುದು ಅಥವಾ ವಿಫ‌ಲರಾಗುವುದು…, ಇಂಥ ನೂರಾರು ಚಿತ್ರಗಳು ಕನ್ನಡದಲ್ಲಿ ಈಗಾಗಲೇ ಬಂದು ಹೋಗಿವೆ. ಇಂಥ ಚಿತ್ರಗಳ ಸಾಲಿಗೆ “ರೇಸ್‌’ ಹೊಸ ಸೇರ್ಪಡೆ ಎನ್ನುವುದನ್ನು ಬಿಟ್ಟರೆ, ಚಿತ್ರದ ಕಥಾವಸ್ತುವಿನಲ್ಲಿ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ.

“ರೇಸ್‌’ ಚಿತ್ರದಲ್ಲಿ ಸಾಮಾನ್ಯ ಕಥಾಹಂದರವನ್ನೇ, ನಿರ್ದೇಶಕ ಹೇಮಂತ್‌ ಕೃಷ್ಣ ಹೊಸಥರದಲ್ಲಿ ಹೇಳುವ ಪ್ರಯತ್ನ ಮಾಡಿದ್ದರೂ, ಆ ಪ್ರಯತ್ನ ಅಷ್ಟಾಗಿ ಫ‌ಲಿಸಲಿಲ್ಲ. ಚಿತ್ರಕಥೆ, ಸಂಭಾಷಣೆ, ನಿರೂಪಣೆ ಎಲ್ಲದರಲ್ಲೂ ಪ್ರೇಕ್ಷಕರು ಅನಾಯಾಸವಾಗಿ ಚಿತ್ರದ ಮುಂದಿನ ದೃಶ್ಯಗಳನ್ನು ನಿರೀಕ್ಷಿಸುವಂತೆ ಇರುವುದರಿಂದ, ಸಸ್ಪೆನ್ಸ್‌-ಕ್ರೈಂ ಶೈಲಿಯ “ರೇಸ್‌’ ಎಲ್ಲೂ ನೋಡುಗರಿಗೆ ಕೌತುಕದ, ರೋಚಕತೆಯ ಅನುಭವವನ್ನೇ ಕೊಡುವುದಿಲ್ಲ.

ಮೊದಲರ್ಧ ಅತ್ಯಂತ ನೀರಸವಾಗಿ ಸಾಗುವ ಚಿತ್ರ, ದ್ವಿತಿಯಾರ್ಧ ಒಂದಷ್ಟು ಟ್ವಿಸ್ಟ್‌ಗಳನ್ನು ಕೊಟ್ಟರೂ ಅದು ಹೆಚ್ಚು ಹೊತ್ತು ಉಳಿಯುವುದಿಲ್ಲ. ಹೆಸರಿನಲ್ಲಿ “ರೇಸ್‌’ ಅಂತಿದ್ದರೂ, ಅದೇ ವೇಗವನ್ನು ಚಿತ್ರದಲ್ಲಿ ನಿರೀಕ್ಷಿಸುವಂತಿಲ್ಲ. ಚಿತ್ರಕಥೆ, ನಿರೂಪಣೆಯಲ್ಲಿ ನಿರ್ದೇಶಕರು ಇನ್ನಷ್ಟು ಕೆಲಸ ಮಾಡಿದ್ದರೆ, “ರೇಸ್‌’ ಅನ್ನು ಇನ್ನಷ್ಟು ಸ್ಪೀಡ್‌ ಆಗಿ ಮುಗಿಸಬಹುದಿತ್ತು.

ಇನ್ನು “ರೇಸ್‌’ ಚಿತ್ರದಲ್ಲಿ ತೆರೆಮೇಲೆ ಬಹುತೇಕ ಹೊಸ ಪ್ರತಿಭೆಗಳೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ದಿವಾಕರ್‌, ಸಂತೋಷ್‌, ರಕ್ಷಾ ಶಣೈ ಹೀಗೆ ಬಹುತೇಕ ಕಲಾವಿದರು ಅಭಿನಯದಲ್ಲಿ ಇನ್ನೂ ಸಾಕಷ್ಟು ಪಳಗಬೇಕಿದೆ. ಉಳಿದಂತೆ ಇತರರು ಅಭಿನಯಿಸಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿನಿರ್ದೇಶಕರು ಹೇಳಿದ ಕೆಲಸವನ್ನು ಕ್ಯಾಮರಾ ಮುಂದೆ ಕಷ್ಟಪಟ್ಟು ನಿರ್ವಹಿಸಿದ್ದಾರೆ ಎನ್ನಬಹುದು.

ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ನಿಭಾಯಿಸಲು ಹೆಣಗಾಡಿರುವುದು ಪ್ರತಿದೃಶ್ಯದಲ್ಲೂ ಕಾಣುತ್ತದೆ. ಇನ್ನು ಚಿತ್ರದ ಛಾಯಾಗ್ರಹಣ ಒಂದಷ್ಟು ಗಮನ ಸೆಳೆಯುತ್ತದೆ. ಅದನ್ನು ಹೊರತುಪಡಿಸಿದರೆ, ಸಂಕಲನ ಚಿತ್ರಕ್ಕೆ ಪೂರಕವಾಗುವುದಕ್ಕಿಂತ ಮಾರಕವಾಗಿರುವುದೇ ಹೆಚ್ಚು. ರಾಜ್‌ ಕಿರಣ್‌ ಸಂಗೀತ ಸಂಯೋಜನೆಯ ಹಾಡುಗಳಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ, ಹೆಚ್ಚು ಹೊತ್ತು ಕಿವಿಯಲ್ಲಿ ಉಳಿಯುವುದಿಲ್ಲ. ಹಿನ್ನೆಲೆ ಸಂಗೀತ, ಧ್ವನಿಗ್ರಹಣ ಬಗ್ಗೆ ನಿರ್ದೇಶಕರು ಹೆಚ್ಚು ಗಮನ ಕೊಟ್ಟಂತೆ ಇಲ್ಲ.

ಚಿತ್ರ: ರೇಸ್‌
ನಿರ್ಮಾಣ: ಎಸ್‌.ವಿ.ಆರ್‌ ಪ್ರೊಡಕ್ಷನ್ಸ್‌
ನಿರ್ದೇಶನ: ಹೇಮಂತ್‌ ಕೃಷ್ಣ
ತಾರಾಗಣ: ದಿವಾಕರ್‌, ಸಂತೋಷ್‌, ನಕುಲ್‌ ಗೋವಿಂದ್‌, ರಕ್ಷಾ ಶೆಣೈ, ಶ್ರುತಿ ಮತ್ತಿತರರು

* ಜಿ.ಎಸ್‌. ಕಾರ್ತಿಕ ಸುಧನ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.