ಪಾಗಲ್‌ ಪ್ರೇಮಿಯ ಹಾರರ್‌ ಕಾಮಿಡಿ


Team Udayavani, Aug 12, 2018, 11:20 AM IST

abhisarike.jpg

ಆತ ಪಾಗಲ್‌ ಪ್ರೇಮಿ. ಬೇಡ ಬೇಡವೆಂದರೂ ಆಕೆಯ ಹಿಂದೆ ಸುತ್ತುತ್ತಾನೆ. “ಬಂಗಾರು ನೀ ನನಗೆ ಬೇಕು ಬಂಗಾರು …’ ಎನ್ನುತ್ತಾ ಹುಚ್ಚು ಪ್ರೀತಿ ಮಾಡುತ್ತಾನೆ. ಆದರೆ, ಆಕೆಗೆ ಆತನ ಕಂಡರೆ ಅಲರ್ಜಿ. ಅದಕ್ಕಿಂತ ಹೆಚ್ಚಾಗಿ ಆಕೆ ಇನ್ನೊಬ್ಬನ ಪ್ರೀತಿಯಲ್ಲಿ ಬಿದ್ದಿರುತ್ತಾಳೆ. ಹೀಗಿರುವಾಗ ಒಂದು ಮರ್ಡರ್‌. ದೆವ್ವದ ಕಾಟ ಶುರು. “ಅಭಿಸಾರಿಕೆ’ ಲವ್‌ಸ್ಟೋರಿಯೊಂದಿಗೆ ಆರಂಭವಾಗಿ ಹಾರರ್‌ ಮೂಲಕ ಅಂತ್ಯಗೊಳ್ಳುವ ಕಥೆ. ಪಾಗಲ್‌ ಪ್ರೇಮಿಗಳು, ಅವರ ಪಾಗಲ್‌ ಪ್ರೀತಿ, ತಾನು ಪ್ರೀತಿಸುತ್ತಿರುವ ಹುಡುಗಿಗಾಗಿ ಏನೂ ಬೇಕಾದರೂ ಮಾಡುವಂತಹ ಮನಸ್ಥಿತಿಯ ಸಾಕಷ್ಟು ಸಿನಿಮಾಗಳು ಬಂದಿವೆ.

“ಅಭಿಸಾರಿಕೆ’ ಕೂಡಾ ಅದೇ ಶೈಲಿಯ ಸಿನಿಮಾ. ಆದರೆ, ಇಲ್ಲಿನ ಒಂದು ಸಣ್ಣ ಬದಲಾವಣೆ ಎಂದರೆ ಅದು ಹಾರರ್‌ ಟ್ವಿಸ್ಟ್‌. ಪ್ರೀತಿಗೆ ಹಾರರ್‌ ಸೇರಿಕೊಂಡಾಗ ಏನಾಗುತ್ತದೆ ಎಂಬ ಅಂಶವನ್ನು ಇಲ್ಲಿ ಸೇರಿಸಲಾಗಿದೆ. ಇಡೀ ಸಿನಿಮಾ ಈ ಎರಡು ಅಂಶಗಳ ಸುತ್ತ ಸಾಗುತ್ತದೆ. ಹಾಗಂತ ಈ ಸಿನಿಮಾದಲ್ಲಿ ತುಂಬಾನೇ ಕಾಡುವ ಅಥವಾ ಭಯಬೀಳಿಸುವ ಅಂಶಗಳು ಯಾವುದೂ ಇಲ್ಲ. ಆರಂಭದಲ್ಲಿ ಪಾಗಲ್‌ ಪ್ರೇಮಿಯ ಟ್ರ್ಯಾಕ್‌ ಒಂದು ಕಡೆಯಾದರೆ, ನಾಯಕಿಯ ಲವ್‌ ಮತ್ತೂಂದು ಕಡೆ …ಈ ಎರಡು ಅಂಶಗಳಲ್ಲೇ ಮೊದಲರ್ಧ ಮುಗಿದು ಹೋಗುತ್ತದೆ.

ನಂತರ ಹಾರರ್‌ ಟ್ರ್ಯಾಕ್‌. ಹಾರರ್‌ ಸಿನಿಮಾಗಳಲ್ಲಿ ವಿಕಾರ ರೂಪಗಳು ಕಾಣಿಸಿಕೊಂಡು ಹೆದರಿಸುವುದು ಸಾಮಾನ್ಯ. ಆದರೆ, ಇಲ್ಲಿ ಸತ್ತ ವ್ಯಕ್ತಿಯ ರುಂಡವಷ್ಟೇ ಬಂದು ಕಾಡುತ್ತದೆ. ಅದು ಬಿಟ್ಟರೆ ಕಪ್ಪುಬೇಕು ಭಯಬೀಳಿಸುತ್ತದೆ. ಆ “ಮಟ್ಟಿಗೆ’ ಈ ಚಿತ್ರ ಹೊಸದಾಗಿದೆ. ಪ್ರೇಕ್ಷಕ ತುಂಬಾ ಭಯಬೀಳಬಾರದು, ಆತ ನಗು ನಗುತ್ತಾ ಹಾರರ್‌ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕೆಂಬುದು ನಿರ್ದೇಶಕರ ಉದ್ದೇಶ.

ಅದೇ ಕಾರಣದಿಂದ ನವದಂಪತಿಯ ಎಂಟ್ರಿ ಮೂಲಕ ಚಿತ್ರದಲ್ಲಿ ಕಾಮಿಡಿಯೂ ಕೂಡಾ ಸೇರಿಕೊಳ್ಳುತ್ತದೆ.  ನಿರ್ದೇಶಕರು ಇನ್ನಷ್ಟು ಪೂರ್ವತಯಾರಿಯೊಂದಿಗೆ ಸಿನಿಮಾ ಮಾಡಿದ್ದರೆ, ಚಿತ್ರ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತು. ಆದರೆ, ಕಥೆಗಿಂತ ಹೆಚ್ಚಾಗಿ ಕಥೆಗೆ ಸಂಬಂಧಪಡದ ದೃಶ್ಯಗಳು ತುಂಬಿರುವ ಮೂಲಕ ಸಿನಿಮಾ ತನ್ನ ಗಂಭೀರತೆಯನ್ನು ಕಳೆದುಕೊಂಡಿದೆ. ಬಹುತೇಕ ಸಿನಿಮಾ ಒಂದು ಮನೆಯಲ್ಲಿ ನಡೆದು ಹೋಗುತ್ತದೆ.

ಒಂದು ಮನೆ ಸೇರಿಕೊಳ್ಳುವ ನಾಲ್ಕೈದು ಮಂದಿ, ಅವರಿಗೆ ದೆವ್ವದ ಕಾಟ, ಅದರಿಂದ ಹೊರಬರಲು ಅವರು ಪೇಚಾಡುವ ರೀತಿಯ ಮೂಲಕ ಸಾಗುತ್ತದೆ. ಚಿತ್ರದಲ್ಲಿ ಗಮನ ಸೆಳೆಯೋದು ಯಶವಂತ್‌ ಶೆಟ್ಟಿ. ಆದರೆ, ಅವರನ್ನು ಸಿನಿಮಾದುದ್ದಕ್ಕೂ ಬಳಸಿಕೊಂಡಿಲ್ಲ. ಆದರೂ ಸಿಕ್ಕ ಅವಕಾಶದಲ್ಲಿ ಯಶವಂತ್‌ ಗಮನ ಸೆಳೆಯುತ್ತಾರೆ. ನಾಯಕಿ ಸೋನಾಲ್‌ ಮೊಂತೆರೋ ಇಡೀ ಸಿನಿಮಾದುದ್ದಕ್ಕೂ ಸಾಗಿಬಂದಿದ್ದಾರೆ. ಆದರೆ ನಟನೆಯಲ್ಲಿ ಮತ್ತಷ್ಟು ಪಳಗಬೇಕಿದೆ. ಉಳಿದಂತೆ ಅಶೋಕ್‌, ಗಿರಿ ಇದ್ದಷ್ಟು ಹೊತ್ತು ಇಷ್ಟವಾಗುತ್ತಾರೆ. 

ಚಿತ್ರ: ಅಭಿಸಾರಿಕೆ
ನಿರ್ಮಾಣ: ಭಾಗ್ಯಲಕ್ಷ್ಮೀ ಪ್ರೊಡಕ್ಷನ್ಸ್‌
ನಿರ್ದೇಶನ: ಮಧುಸೂದನ್‌
ತಾರಾಗಣ: ಸೋನಾಲ್‌ ಮೊಂತೆರೋ, ಯಶವಂತ್‌ ಶೆಟ್ಟಿ, ತೇಜ್‌, ಅಶೋಕ್‌, ಗಿರಿ ಮತ್ತಿತರರು. 

* ರವಿ ರೈ

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.