ಕಮರ್ಶಿಯಲ್‌ ಪ್ಯಾಕೇಜ್‌ನಲ್ಲಿ ಶಿವ ನರ್ತನ!


Team Udayavani, Mar 14, 2020, 7:01 AM IST

shivarjuna

ರಾಮದುರ್ಗ-ರಾಯದುರ್ಗ ಎಂಬ ಎರಡು ಊರುಗಳು. ಆ ಊರಿನ ಇಬ್ಬರು ಸಾಹುಕಾರರ ದ್ವೇಷಕ್ಕೆ ದೊಡ್ಡ ಇತಿಹಾಸವೇ ಇದೆ. ಈ ದ್ವೇಷದ ಪರಿಣಾಮ 20 ವರ್ಷ ಗಳಿಂದ ಆ ಊರಲ್ಲಿ ಜಾತ್ರೆಯೇ ನಡೆಯುತ್ತಿಲ್ಲ. ಹೀಗಿ ರುವಾಗ ಆ ಊರ ಸಾಹುಕಾರರ ದ್ವೇಷ ತಣಿಸಿ, ಜಾತ್ರೆ ಮಾಡಲು ಒಬ್ಟಾತ ಬರುತ್ತಾನೆ. ಜಾತ್ರೆ ನಡೆಯುತ್ತದೆ. ಜೊತೆಗೆ ರಕ್ತದೋಕುಳಿ ಕೂಡಾ!  ಈ ಕಥೆಯನ್ನು ಕೇಳಿದಾಗ ನಿಮಗೆ ಒಂದಷ್ಟು ತೆಲುಗು ಸಿನಿಮಾಗಳು ಕಣ್ಣಮುಂದೆ ರಪ್‌ ಅಂತ ಪಾಸಾಗಿ ಮರೆಯಾಗಬಹುದು.

ಹಾಗಂತ ಇದು ತೆಲುಗು ಸಿನಿಮಾದ ಕಥೆಯಲ್ಲ. ಈ ವಾರ ತೆರೆಕಂಡಿರುವ “ಶಿವಾರ್ಜುನ’ ಚಿತ್ರದ ಒನ್‌ಲೈನ್‌. “ಶಿವಾರ್ಜುನ’ ಒಂದು ಪಕ್ಕಾ ಕಮರ್ಷಿಯಲ್‌ ಎಂಟರ್‌ಟೈನರ್‌. ಒಂದು ಕಮರ್ಷಿಯಲ್‌ ಸಿನಿಮಾದಲ್ಲಿ ಏನಿರಬೇಕೋ ಆ ಎಲ್ಲಾ ಅಂಶಗಳು ಈ ಚಿತ್ರದಲ್ಲಿ ಸ್ವಲ್ಪ ಹೆಚ್ಚೇ ತುಂಬಿ ತುಳುಕುತ್ತಿವೆ. ಕಾಮಿಡಿ, ರೊಮ್ಯಾನ್ಸ್‌, ಹಾಡು, ಫೈಟ್‌ ಕೊನೆಗೆ ಒನ್‌ಲೈನ್‌ ಕಥೆ. ಇವೆಲ್ಲವನ್ನು ಮಿಶ್ರಮಾಡಿ ಪ್ರೇಕ್ಷಕರ ಮುಂದೆ ಬಡಿಸಲಾಗಿದೆ. ಕಥೆಯ ಹಂಗಿಗೆ ನಿರ್ದೇಶಕರು ಬಿದ್ದಿಲ್ಲ.

ಇಡೀ ಸಿನಿಮಾವನ್ನು ಸನ್ನಿವೇಶಗಳ ಮೂಲಕ ಕಟ್ಟಿಕೊಡಬೇಕೆಂಬ ಅವರ ಉದ್ದೇಶ ತೆರೆಮೇಲೆ ಎದ್ದು ಕಾಣುತ್ತದೆ. ಸಿನಿಮಾ ಆರಂಭವಾಗಿ ಇಂಟರ್‌ವಲ್‌ವರೆಗೆ ಚಿತ್ರದ ಕಥೆ ಏನು ಎಂಬುದನ್ನು ಊಹಿಸಿ ಕೊಳ್ಳೋದೇ ಪ್ರೇಕ್ಷಕರಿಗೆ ಒಂದು ಸವಾಲಿನ ಕೆಲಸ. ಆ ತರಹದ ಒಂದಷ್ಟು ಟ್ವಿಸ್ಟ್‌ಗಳನ್ನು ಸಿನಿಮಾದಲ್ಲಿಟ್ಟಿದ್ದಾರೆ. ಚಿತ್ರದ ದ್ವಿತೀ ಯಾರ್ಧದಲ್ಲಿ ಜಾತ್ರೆ ಸೆಟಪ್‌ನಲ್ಲಿ ನಡೆಯುವ ಫೈಟ್‌, ಗಾಳಿಯಲ್ಲಿ ಹಾರುವ ಕೆಜಿಗಟ್ಟಲೆ.

ಅರಶಿನ, ಕುಂಕುಮವನ್ನು ನೋಡುವ ಮುನ್ನ ಭರ್ಜರಿ ಕಾಮಿಡಿಯನ್ನು ಪ್ರೇಕ್ಷಕರು ಕಣ್ತುಂಬಿ ಕೊಳ್ಳಬೇ ಕೆಂಬುದು ನಿರ್ದೇಶಕರ ಉದ್ದೇಶದಂತಿದೆ. ಅದೇ ಕಾರಣದಿಂದ ಆರಂಭದಿಂದಲೇ ಸಿಕ್ಕಾಪಟ್ಟೆ ಕಾಮಿಡಿ ದೃಶ್ಯಗಳು ಬರುತ್ತವೆ. ಕೇವಲ ಕಾಮಿಡಿಯಲ್ಲ. ಆ ಕಾಮಿಡಿಗೆ ಹಾಟ್‌ ಟಚ್‌ ಕೂಡಾ ಕೊಟ್ಟಿದ್ದಾರೆ. ಒಂದು ಹಂತಕ್ಕೆ ಈ ಚಿತ್ರದ ಹೀರೋ ಸಾಧುಕೋಕಿಲನಾ ಎಂಬ ಸಣ್ಣ ಸಂದೇಹ ಬರುವ ಮಟ್ಟಿಗೆ ಸಾಧು ತೆರೆಮೇಲೆ “ಕುಣಿ’ದಾಡಿದ್ದಾರೆ.

ಚಿತ್ರ ಗಂಭೀರವಾಗೋದು ದ್ವಿತೀಯಾರ್ಧದಲ್ಲಿ. ಈ ಸಿನಿಮಾಕ್ಕೊಂದು ಕಥೆ ಇದೆ ಎಂದು ಗೊತ್ತಾ ಗೋದು ಕೂಡಾ ಅಲ್ಲೇ. ಈ ಚಿತ್ರಕ್ಕೊಂದು ಫ್ಲ್ಯಾಶ್‌ಬ್ಯಾಕ್‌ ಕೂಡಾ ಇದ್ದು, ದ್ವಿತೀಯಾರ್ಧವನ್ನು ಅದೇ ಆವರಿಸಿಕೊಳ್ಳುತ್ತದೆ. ಮೊದಲೇ ಹೇಳಿದಂತೆ ಇದೊಂದು ಕಮರ್ಶಿಯಲ್‌ ಎಂಟರ್‌ಟೈನರ್‌ ಆಗಿರೋದರಿಂದ ಇಲ್ಲಿ ಲಾಜಿಕ್‌ ಹುಡುಕುವಂತಿಲ್ಲ. ಬಂದಿದ್ದನ್ನು ಬಂದಂತೆ ಸ್ವೀಕರಿಸಿಕೊಂಡು ಮುಂದೆ ಸಾಗಬೇಕು.

ಹಾಡು, ಫೈಟ್‌, ರೊಮ್ಯಾನ್ಸ್‌ … ಎಲ್ಲವೂ ಆಗಾಗ ಬರುತ್ತಿರುತ್ತದೆ. ಪಕ್ಕಾ ತೆಲುಗು ಕಮರ್ಷಿಯಲ್‌ ಸಿನಿಮಾ ಇಷ್ಟಪಡುವವರಿಗೆ “ಶಿವಾರ್ಜುನ’ ಖುಷಿ ಕೊಡಬಹುದು. ನಾಯಕ ಚಿರಂಜೀವಿ ಸರ್ಜಾ ಅವರಿಗೆ ಈ ತರಹದ ಪಾತ್ರ ಹೊಸದೇನಲ್ಲ. ಈ ಹಿಂದೆಯೂ “ಸಿಂಗ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪಕ್ಕಾ ಆ್ಯಕ್ಷನ್‌ ಹೀರೋ ಆಗಿ, ರೆಬೆಲ್‌ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲೂ ಅದೇ ಮುಂದುವರೆದಿದೆ.

ತಮ್ಮ ಪಾತ್ರಕ್ಕೆ ಎಂದಿನಂತೆ ಚಿರಂಜೀವಿ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿ ನಾಯಕಿಯರಿಗೆ ಹೆಚ್ಚೇನು ಸ್ಕೋಪ್‌ ಅಲ್ಲ. ಆದರೆ, ಅಕ್ಷತಾ ಶ್ರೀನಿವಾಸ್‌ ಗ್ಲಾಮರ್‌ಗೆ ಸೀಮಿತವಾದರೆ, ಅಮೃತಾ ಬಜಾರಿ ಯಾಗಿ ಕಾಣಿಸಿಕೊಂಡಿದ್ದಾರೆ. ತಾರಾ ಜೊತೆಗೆ ಅವರ ಪುತ್ರ ಕೂಡಾ ತೆರೆಹಂಚಿಕೊಂಡಿದ್ದು, ಬಾಲ ನಟನಾಗಿ ಭರವಸೆ ಮೂಡಿಸಿದ್ದಾರೆ. ಉಳಿದಂತೆ ರವಿಕಿಶನ್‌, ಕಿಶೋರ್‌, ಅವಿನಾಶ್‌, ಸಾಧುಕೋಕಿಲ, ವಿಶ್ವ, ಶಿವರಾಜ್‌ ಕೆ.ಆರ್‌.ಪೇಟೆ ಎಲ್ಲರೂ ನಟಿಸಿದ್ದಾರೆ.

ಚಿತ್ರ: ಶಿವಾರ್ಜುನ
ನಿರ್ಮಾಣ: ಎಂ.ಬಿ.ಮಂಜುಳಾ ಶಿವಾರ್ಜುನ್‌
ನಿರ್ದೇಶನ: ಶಿವತೇಜಸ್‌
ತಾರಾಗಣ: ಚಿರಂಜೀವಿ, ಅಕ್ಷತಾ, ಅಮೃತಾ, ತಾರಾ, ಅವಿನಾಶ್‌, ರವಿಕಿಶನ್‌, ಸಾಧುಕೋಕಿಲ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.