ದಯಾಳ್‌ ಶಾಸನದಲ್ಲಿ ಶಿವಲಿಂಗ ಮಿಂಚು

ಚಿತ್ರ ವಿಮರ್ಶೆ

Team Udayavani, Apr 20, 2019, 3:00 AM IST

Trayambakam

“ಮಗಳೇ ಹುಷಾರು….’ ಮಗಳು ಹೊರಗೆ ಹೊರಟರೆ ಸಾಕು ತಂದೆ ಪ್ರತಿ ಸಲವೂ ಈ ಡೈಲಾಗ್‌ ಹೇಳುತ್ತಲೇ ಇರುತ್ತಾನೆ. ಅದಕ್ಕೆ ಕಾರಣ, ತನ್ನ ಕಣ್ಣೆದುರಲ್ಲೇ ಮಗಳಿಗೆ ಆ್ಯಕ್ಸಿಡೆಂಟ್‌ ಆಗಿ ಆಕೆ ಸಾವನ್ನಪ್ಪುವ “ಕನಸು’ ಪದೇ ಪದೇ ಬೀಳುತ್ತಲೇ ಇರುತ್ತದೆ. ಅಷ್ಟಕ್ಕೂ ಆ ಕನಸು ಬೀಳುವುದೇಕೆ? ಇಂತಹ ಗೊಂದಲ ಪ್ರಶ್ನೆಗಳಿಗೆ ಉತ್ತರ ಕೊಡುತ್ತಲೇ ಹೊಸತನದ ಚಿತ್ರಣ ಕೊಟ್ಟಿದ್ದಾರೆ ನಿರ್ದೇಶಕರು.

ಆರಂಭದಲ್ಲಿ ಕಥೆ ಕೊಂಚ ಗೊಂದಲ ಹುಟ್ಟಿಸುತ್ತದೆ. ಮೊದಲರ್ಧ ಸಣ್ಣ ಸಂಶಯಗಳ ಮಧ್ಯೆ, ಕುತೂಹಲವೂ ಇದೆ. ಹಾಗಂತ ಅದು ಹೆಚ್ಚು ಕಾಲ ಇರುವುದಿಲ್ಲ. ಚಿತ್ರಕಥೆಯಲ್ಲಿ ಹೊಸತನವಿದೆ. ನಿರೂಪಣೆಯಲ್ಲೂ ತಾಕತ್ತು ಇದೆ. ಪ್ರತಿ ಸಲವೂ ಒಂದೊಂದು ರೀತಿಯ ಕಥೆ ಹಿಡಿದು ಹೊಸ ಫೀಲ್‌ ಕಟ್ಟಿಕೊಡುತ್ತಿರುವ ನಿರ್ದೇಶಕ ದಯಾಳ್‌, “ತ್ರಯಂಬಕಂ’ ಚಿತ್ರದಲ್ಲೂ ಅದನ್ನು ಮುಂದುವರೆಸಿದ್ದಾರೆ.

ಒಂದೇ ಮಾತದಲ್ಲಿ ಹೇಳುವುದಾದರೆ, ಇಲ್ಲಿ ಭ್ರಮೆ ಮತ್ತು ವಾಸ್ತವತೆಯ ಚಿತ್ರಣವಿದೆ. ಇಲ್ಲಿ ಕಥೆಯೇ ಜೀವಾಳ. ಚುರುಕುತನದ ಚಿತ್ರಕಥೆ ಚಿತ್ರದ ವೇಗವನ್ನು ಹೆಚ್ಚಿಸಿದೆ. ಆರಂಭದಲ್ಲಿ ಕೊಂಚ ತಾಳ್ಮೆಗೆಡಿಸುತ್ತಾದರೂ, ತೆರೆ ಮೇಲೆ ಆಗುವ ಕೆಲ ಬದಲಾವಣೆಗಳು ಸಮಾಧಾನಕ್ಕೂ ಕಾರಣವಾಗುತ್ತವೆ.

ಇಡೀ ಕಥೆ ಅಪ್ಪ, ಮಗಳ ಸುತ್ತ ಸುತ್ತಿದರೂ, ಅದಕ್ಕೊಂದು ಬಲವಾದ ಕಾರಣವಿದೆ. ನೂರೆಂಟು ಪ್ರಶ್ನೆಗಳೂ ಇವೆ. ಕೆಲವೆಡೆ ಕಥೆ ಹೀಗೆ ಸಾಗಬಹುದಾ ಎಂಬ ಲೆಕ್ಕಾಚಾರ ಹಾಕಿದರೆ, ಅದು ಉಲ್ಟಾ ಆಗುತ್ತದೆ. ಕೊನೆಗೆ ಆ ಲೆಕ್ಕಾಚಾರ ಇನ್ನೊಂದು ತಿರುವು ಪಡೆದುಕೊಳ್ಳುತ್ತದೆ. ಆ “ತಿರುವು’ ಏನು ಎಂಬುದರ ಬಗ್ಗೆ ಕುತೂಹಲವಿದ್ದರೆ “ತ್ರಯಂಬಕಂ’ ನೋಡಲು ಯಾರ ಅಪ್ಪಣೆ ಬೇಡ.

“ತ್ರಯಂಬಕಂ’ ಬೇರೆಯದ್ದೇ ವಿಷಯವನ್ನು ಹೇಳುವ ಮತ್ತು ಹೀಗೂ ಉಂಟು ಎಂಬುದನ್ನು ಸಾರುವ ಚಿತ್ರಣ ಹೊಂದಿದೆ. ಈ ರೀತಿಯ ಚಿತ್ರಗಳನ್ನು ಕಟ್ಟಿಕೊಡುವಾಗ ಅಧ್ಯಯನ ಮುಖ್ಯವಾಗುತ್ತದೆ. ಅದಿಲ್ಲಿ ಸಿನಿಮಾದುದ್ದಕ್ಕೂ ಕಾಣುತ್ತದೆ. ಮನರಂಜನೆಗೆ ಹಾಡು ಬೇಕೆಂಬ ಕಾರಣಕ್ಕೆ ಇಲ್ಲಿ ಎಂಗೇಜ್‌ಮೆಂಟ್‌ ಸನ್ನಿವೇಶದಲ್ಲೊಂದು ಹಾಡು ಇಡಲಾಗಿದೆ.

ಅದು ಇರದಿದ್ದರೂ ಚಿತ್ರಕ್ಕೇನೂ ಪೆಟ್ಟು ಬೀಳುತ್ತಿರಲಿಲ್ಲ. ಆ ಹಾಡೇ ಆ ಕ್ಷಣದ ಅಡಚಣೆ ಎನ್ನಬಹುದು. ಹಿನ್ನೆಲೆ ಸಂಗೀತ ಕಡೆ ಇನ್ನಷ್ಟು ಗಮನಿಸುವ ಅಗತ್ಯವಿತ್ತು. ಅದು ಬಿಟ್ಟರೆ ಕಥೆಗೆ ತಕ್ಕಂತಹ ಪಾತ್ರಗಳ ಆಯ್ಕೆ ಕೂಡ ಚಿತ್ರದ ಪ್ಲಸ್‌ ಎನ್ನಬಹುದು. ಸಾವಿರಾರು ವರ್ಷಗಳ ಹಿಂದಿನ ಸಿದ್ಧಪುರುಷರು ಮಾಡಿದ ಸಾಧನೆಯ ಅಂಶಗಳನ್ನು ಹೊಂದಿದ ಕಥೆಯ ಎಳೆ ಇಲ್ಲಿದೆ.

ಅಷ್ಟೇ ಅಲ್ಲ, ಆಗಿನ ಮತ್ತು ಈಗಿನ ವಿಷಯಗಳನ್ನು ಸೇರಿಸಿಕೊಂಡು ಸಸ್ಪೆನ್ಸ್‌ ರೀತಿಯ ಚಿತ್ರ ಕಟ್ಟಿಕೊಟ್ಟಿರುವ ನಿರ್ದೇಶಕರು, ಸಿದ್ಧಪುರುಷರು ಸಿದ್ಧಪಡಿಸಿದ ಔಷಧಿ ಗುಣವಿರುವ ಒಂದು ವಸ್ತು ಹೇಗೆ ದುಷ್ಟರ ಕೈಗೆ ಸಿಕ್ಕು ಅಲ್ಲೊಂದು ಮಾಫಿಯಾ ಹುಟ್ಟಿಕೊಳ್ಳುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ.

ಕಥೆ ಬಗ್ಗೆ ಹೇಳುವುದಕ್ಕಿಂತ ಒಮ್ಮೆ ಚಿತ್ರ ನೋಡಿದರೆ, ಸಿದ್ಧಪುರುಷರಿಗೂ ಈಗಿನ ಮಾಫಿಯಾಗೂ ಸಂಬಂಧಿಸಿದ ಆ ವಸ್ತು ಯಾವುದೆಂಬುದು ಅರ್ಥವಾಗುತ್ತೆ. ಶಿವರುದ್ರಯ್ಯ (ರಾಘಣ್ಣ)ನಿಗೆ ಮಗಳೆಂದರೆ ಪ್ರಾಣ. ಮಗಳಿಗೂ ಅಪ್ಪನೆಂದರೆ ಪ್ರೀತಿ. ಮಗಳು ಹೊರಗೆ ಹೊರಟರೆ ಸಾಕು ಅವಳಿಗೆ ಏನಾದರೂ ಆಗುತ್ತೆ ಎಂಬ ಭಯ ಆ ತಂದೆಯದ್ದು.

ಅವನ ಕನಸಲ್ಲಿ ಮಗಳ ಸಾವಿನ ದೃಶ್ಯಗಳು ಹೊರತಾಗಿ ಬೇರೇನೂ ಬರಲ್ಲ. ಹಾಗಾಗಿ ಅವನಿಗೆ ಮಗಳ ಮೇಲೆ ಕಾಳಜಿ. ಅದು ಭ್ರಮೆಯೋ, ವಾಸ್ತವವೋ ಎಂಬ ಪ್ರಶ್ನೆಗಳ ಜೊತೆಗೆ ಒಂದು ಘಟನೆ ಬಿಚ್ಚಿಕೊಳ್ಳುತ್ತದೆ. ಅಲ್ಲೊಂದಷ್ಟು ಸತ್ಯಾಂಶಗಳು ಆಚೆ ಬರುತ್ತವೆ. ತಂದೆಗೆ ಇಬ್ಬರು ಅವಳಿ -ಜವಳಿ ಹೆಣ್ಣು ಮಕ್ಕಳು ಆ ಪೈಕಿ ಹಿರಿಯ ಮಗಳು ಅಪಘಾತದಲ್ಲಿ ಮೃತಪಟ್ಟಿರುತ್ತಾಳೆ.

ಆಕೆ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಕೆಲಸ ಮಾಡುವಾಕೆ. ಅಧ್ಯಯನ ಮಾಡುವ ವೇಳೆ ಆಕೆಗೊಂದು ತಾಮ್ರದ ಶಾಸನದಲ್ಲಿ ಬರೆದ ರಹಸ್ಯವೊಂದು ತಿಳಿಯುತ್ತದೆ. ಸಿದ್ಧಪುರುಷರು ಸಾವಿರಾರು ವರ್ಷಗಳ ಹಿಂದೆ ನಾಲ್ಕು ಸಾವಿರ ವಸ್ತುಗಳನ್ನು ಕ್ರೂಢೀಕರಿಸಿ, ಒಂದು ನವಪಾಶಾಣ ಶಿವಲಿಂಗವನ್ನು ಮಾಡಿರುತ್ತಾರೆ.

ಆ ನವಪಾಶಾಣ ಲಿಂಗಕ್ಕೆ ಹಾಲಿನ ಅಭಿಷೇಕ, ನೀರಿನ ಅಭಿಷೇಕ ಮಾಡಿದ್ದನ್ನು ಸೇವಿಸಿದರೆ, ರೋಗ ನಿವಾರಣೆಯಾಗುತ್ತದೆ ಅಂತಹ ಶಕ್ತಿಯ ಲಿಂಗವದು. ಆ ಬಗ್ಗೆ ಆಕೆ, ಇಲಾಖೆಗೆ ತಿಳಿಸುತ್ತಾಳೆ. ಇಲಾಖೆ ಅಧಿಕಾರಿಗಳು ಆಕೆಗೆ ಮೋಸ ಮಾಡಿ, ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಅತ್ತ ತಂದೆಗೆ ಬ್ರೈನ್‌ಸ್ಟೋಕ್‌ ಆಗಿ, ನಿರ್ಧಿಷ್ಟ ನೆನಪಿನ ಶಕ್ತಿಯನ್ನು ಕಳೆದುಕೊಂಡಿರುತ್ತಾನೆ. ಅತ್ತ ದುಷ್ಟರ ಕೈ ಸೇರಿದ ನವಪಾಶಾಣ ಲಿಂಗ ಮೂರನೇ ಕಣ್ಣಿಗೆ ಬೀಳುತ್ತಾ ಇಲ್ಲವಾ ಅನ್ನೋದೇ ಕಥೆ. ರಾಘವೇಂದ್ರ ರಾಜಕುಮಾರ್‌ ಅವರು ಪಾತ್ರಕ್ಕೆ ಸರಿಹೊಂದಿದ್ದಾರೆ. ಮಗಳ ಬಗ್ಗೆ ಕಾಳಜಿ ತೋರುವ, ಪ್ರೀತಿ ಕಾಣುವ ಅಪ್ಪನಾಗಿ ಇಷ್ಟವಾಗುತ್ತಾರೆ.

ಅನುಪಮಾ ಎರಡು ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ. ಪತ್ತೆದಾರಿಯಾಗಿರುವ ರೋಹಿತ್‌ ಗಮನಸೆಳೆಯುತ್ತಾರೆ. ಶಿವಮಣಿ, ಸುಂದರ್‌ ಪಾತ್ರಗಳಿಗೆ ಮೋಸ ಮಾಡಿಲ್ಲ. ಗಣೇಶ್‌ ನಾರಾಯಣನ್‌ ಹಾಡಿನ ಬಗ್ಗೆ ಹೇಳುವಂತಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಹೆಚ್ಚು ಒತ್ತು ಕೊಡಬಹುದಿತ್ತು. ಬಿ.ರಾಕೇಶ್‌ ಅವರ ಛಾಯಾಗ್ರಹಣದ ಬಗ್ಗೆ ದೂರುವಂಥದ್ದೇನೂ ಇಲ್ಲ.

ಚಿತ್ರ: ತ್ರಯಂಬಕಂ
ನಿರ್ಮಾಣ: ಫ್ಯೂಚರ್‌ ಎಂಟರ್‌ಟೈನ್‌ಮೆಂಟ್‌ ಫಿಲಂಸ್‌
ನಿರ್ದೇಶನ: ದಯಾಳ್‌ ಪದ್ಮನಾಭನ್‌
ತಾರಾಗಣ: ರಾಘವೇಂದ್ರ ರಾಜಕುಮಾರ್‌, ರೋಹಿತ್‌, ಅನುಪಮಾ, ವಿಜಯಲಕ್ಷ್ಮೀ ಸಿಂಗ್‌, ಶಿವಮಣಿ, ಸುಂದರ್‌ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

blink kannada movie review

Blink movie review; ಸಮಯದ ಹಿಂದೆ ಸವಾರಿ…

ranganayaka movie review

Ranganayaka Movie Review; ಗುರುವಿನ ಆದಿ ಪುರಾಣ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.