ದಂಗಾದ ಪ್ರೇಕ್ಷಕರು!


Team Udayavani, Dec 15, 2018, 11:36 AM IST

rangadha-hudugaru.jpg

ಮೊದಲಿಗೆ ಒಂದು ಸ್ಪಷ್ಟನೆ - ಈ ಚಿತ್ರದ ಶೀರ್ಷಿಕೆಗೂ ಕಥೆಗೂ ಯಾವುದೇ ಸಂಬಂಧವಿಲ್ಲ. ಹಾಗಂತ, ಸಂಬಂಧವಿರಬೇಕು ಅಂತಾನೂ ಇಲ್ಲ. ಹಾಗಾಗಿಯೇ ಕಥೆಯೇ ಇರದ ಚಿತ್ರಕ್ಕೊಂದಷ್ಟು ಹಳೆಯ ಸಿನಿಮಾಗಳ ದೃಶ್ಯಗಳನ್ನು ನೆನಪಿಸುವಂತಹ ದೃಶ್ಯಗಳನ್ನೇ ಇಲ್ಲಿ ಪೋಣಿಸಿ, ಅಲ್ಲಲ್ಲಿ ಅಪಹಾಸ್ಯ ಎನಿಸುವ ಹಾಸ್ಯದೊಂದಿಗೆ ಮೂವರು ಹುಡುಗರ ಒದ್ದಾಟ, ಪೀಕಲಾಟಗಳನ್ನು ತೋರಿಸುವ ಮೂಲಕ ನೋಡುಗರ ತಾಳ್ಮೆಯನ್ನು ಪರೀಕ್ಷಿಸಲಾಗಿದೆ.

ನಿರ್ದೇಶಕರ ಕಥೆಯಲ್ಲಿ ಗಟ್ಟಿತನವಿಲ್ಲ. ಚಿತ್ರಕಥೆಯಲ್ಲಿ ಯಾವುದೇ ಚುರುಕುತನವೂ ಇಲ್ಲ. ಅಷ್ಟೇ ಅಲ್ಲ, ಒಂದೊಳ್ಳೆಯ ಕಥೆ ಕಟ್ಟಿಕೊಡುವ ಸಾಧ್ಯತೆ ಕೈ ಚೆಲ್ಲುವ ಮೂಲಕ ಹುಡುಗರು ರಂಗಾಗುವುದನ್ನು ತಪ್ಪಿಸಿದ್ದಾರೆ. ಸಿನಿಮಾ ಅಂದರೆ, ಕಚಗುಳಿ ಇಡುವಂತಹ ಮಾತುಗಳಿರಬೇಕು ನಿಜ. ಆದರೆ, ಇಲ್ಲಿ ಡಬ್ಬಲ್‌ ಮೀನಿಂಗ್‌ ಮಾತುಗಳಿಗೇ ಹೆಚ್ಚು ಆದ್ಯತೆ ಕೊಡಲಾಗಿದೆ. ಅಂತಹ ಮಾತುಗಳು ನಾಯಕರಷ್ಟೇ ಅಲ್ಲ, ನಾಯಕಿಯರಿಂದಲೂ ಹೇಳಿಸಿರುವುದು ನಿರ್ದೇಶಕರ ಸಾಧನೆ ಎನ್ನಬಹುದು.

ಅಸಲಿಗೆ, ಇಲ್ಲಿ ಕಥೆ ಎತ್ತ ಸಾಗುತ್ತದೆಂದು ತಿಳಿದುಕೊಳ್ಳುವುದಕ್ಕೆ ಕೊನೆಯ ಇಪ್ಪತ್ತು ನಿಮಿಷಗಳವರೆಗೆ ಕಾಯಲೇಬೇಕು. ಆರಂಭದಲ್ಲೊಂದು ಹಾಡು, ಒಂದಷ್ಟು ದೃಶ್ಯಗಳಲ್ಲೇ ಮಧ್ಯಂತರ ಮುಗಿದು ಹೋಗುತ್ತದೆ. ಅದಕ್ಕೂ ಮುನ್ನ ಸಣ್ಣದ್ದೊಂದು ಟ್ವಿಸ್ಟ್‌ ಕೊಟ್ಟು ಟೆಸ್ಟ್‌ ಇಡುವ ಹೊತ್ತಿಗೆ ಅರ್ಧ ಚಿತ್ರ ಮುಗಿದಿರುತ್ತೆ. ನಿರ್ದೇಶಕರು ಇನ್ನೊಂದಷ್ಟು ಜಾಣತನ ಪ್ರದರ್ಶಿಸಿದ್ದರೆ, ಇದೊಂದು ಒಳ್ಳೆಯ ಸಿನಿಮಾ ಆಗುತ್ತಿತ್ತೇನೋ?

ಆದರೆ, ಅಂತಹ ಒಳ್ಳೆಯ ಕೆಲಸಕ್ಕೆ ಮುಂದಾಗಿಲ್ಲ. ಒಂದೇ ಒಂದು ಅಂಶಕ್ಕಾಗಿ ಇಡೀ ಚಿತ್ರದುದ್ದಕ್ಕೂ ತಾಳ್ಮೆಗೆಡಿಸುವ ದೃಶ್ಯಗಳನ್ನೇ ತೋರಿಸಿ, ನೋಡುಗರನ್ನು ದಂಗುಬಡಿಸಿರುವುದೇ ಹೆಚ್ಚುಗಾರಿಕೆ. ಸಿನಿಮಾವನ್ನ ಸೂಕ್ಷ್ಮವಾಗಿ ಗಮನಿಸಿದರೆ, ಸಾಕಷ್ಟು ತಪ್ಪುಗಳು ಕಾಣಸಿಗುತ್ತವೆ. ಹೊಸಬರು ಎಂಬ ಕಾರಣಕ್ಕೆ ಅವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡಬಹುದಾದರೂ, ಅಷ್ಟೇನೂ “ರಂಗು’ ತುಂಬುವುದಿಲ್ಲ.

ಒಂದು ಸಣ್ಣ ಘಟನೆ ಇಟ್ಟುಕೊಂಡು, ಪದೇ ಪದೇ ಹುಡುಗಿಯೊಬ್ಬಳ ಹಿಂದೆ ಬೀಳುವ ಹುಡುಗರು, ಆಕೆಯನ್ನು ರೇಗಿಸುವ, ಪೀಡಿಸುವ ದೃಶ್ಯಗಳಿಗೆ ಹೆಚ್ಚು ಒತ್ತು ಕೊಡುವ ಬದಲು, ಟೆರರಿಸ್ಟ್‌ ಕಥೆಯನ್ನು ಇನ್ನಷ್ಟು ಬೆಳೆಸಿದ್ದರೆ, ಸಿನಿಮಾ ಗಂಭೀರವಾಗಿರುತ್ತಿತ್ತು. ಶೀರ್ಷಿಕೆಯಂತೆ ರಂಗಾಗಿಯೂ ಇರುತ್ತಿತ್ತು. ಕಥೆಯಲ್ಲಿ ಸಣ್ಣ ಎಳೆ ಚೆನ್ನಾಗಿದೆ. ಆದರೆ, ಅದನ್ನು ಸರಿಯಾಗಿ ಹೆಣೆಯುವಲ್ಲಿ ಸಂಪೂರ್ಣ ವಿಫ‌ಲ ಅಂದರೆ ನಿರ್ದೇಶಕರು ತಪ್ಪು ಭಾವಿಸಬಾರದು.

ವಿನಾಕಾರಣ ಹಾಸ್ಯ ತುರುಕಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇನ್ನು, ಅದೆಷ್ಟೋ ಚಿತ್ರಗಳಲ್ಲಿ ಬಂದುಹೋಗಿರುವ ದೃಶ್ಯಗಳು ಇಲ್ಲಿ ನೆನಪಾದರೆ ಅಚ್ಚರಿಯೂ ಇಲ್ಲ. ಒಂದು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಎಷ್ಟು ಮುಖ್ಯವೋ, ಅದಕ್ಕೆ ಪೂರಕವಾಗಿರುವಂತಹ ಹಿನ್ನೆಲೆ ಸಂಗೀತವೂ ಅಷ್ಟೇ ಮುಖ್ಯವಾಗುತ್ತೆ. ಆದರೆ, ಇಲ್ಲಿ ಅದನ್ನು ನಿರೀಕ್ಷಿಸುವಂತಿಲ್ಲ. ಕಥೆ ಬಗ್ಗೆ ಹೇಳುವುದಾದರೆ, ಎಂಜಿನಿಯರಿಂಗ್‌ ಓದಿರುವ ಮೂವರು ಹುಡುಗರು ಲೈಫ‌ಲ್ಲಿ ಎಂಜಾಯ್‌ ಮಾಡಿದ ಬಳಿಕ ಒಂದೊಳ್ಳೆಯ ಕೆಲಸ ಹಿಡಿಯಬೇಕು ಅನ್ನೋ ಜಾಯಮಾನದವರು.

ಅವರ ಲೈಫ‌ಲ್ಲಿ ಆಕಸ್ಮಿಕವಾಗಿ ಹುಡುಗಿಯರು ಎಂಟ್ರಿಯಾಗುತ್ತಾರೆ. ಕ್ಷುಲ್ಲಕ ಕಾರಣವೊಂದು ಅವರ ನಡುವೆ ಜಗಳ ಉಂಟಾಗಿ, ಅದು ಪ್ರೀತಿಗೂ ತಿರುಗುತ್ತದೆ. ಆ ಹುಡುಗರು ತಮಗೇ ಗೊತ್ತಿಲ್ಲದಂತೆ ಟೆರರಿಸ್ಟ್‌ಗೆ ಸಹಾಯ ಮಾಡುವ ಮೂಲಕ, ಮುಗ್ಧ ಮಕ್ಕಳ ಸಾವಿಗೆ ಕಾರಣರಾಗುತ್ತಾರೆ. ತಮ್ಮ ತಪ್ಪಿನ ಅರಿವಾಗಿ, ಟೆರರಿಸ್ಟ್‌ ವಿರುದ್ಧ ಹೋರಾಡಲು ಟೊಂಕ ಕಟ್ಟಿ ನಿಲ್ಲುತ್ತಾರೆ. ಮುಂದೆ ಏನಾಗುತ್ತೆ ಅನ್ನೋದು ಕಥೆ.

ಇಲ್ಲಿ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿವೆ. ಸಾಗರ್‌, ಪ್ರಖ್ಯಾತ್‌, ಶ್ಯಾಮ್‌ ಪೊನ್ನಪ್ಪ ಡ್ಯಾನ್ಸ್‌, ಫೈಟ್‌ನಲ್ಲಿ ಗಮನಸೆಳೆಯುತ್ತಾರೆ. ನಟನೆಯಲ್ಲಿ ಇನ್ನಷ್ಟು ಪಳಗಬೇಕಿದೆ. ಅಮಿತ, ಸಹನಾ ಅವರು ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಶೋಭರಾಜ್‌, ಗಿರಿ ಮತ್ತಿತರರು ಸಿಕ್ಕ ಪಾತ್ರವನ್ನು ತೂಗಿಸಿಕೊಂಡು ಹೋಗಿದ್ದಾರೆ. ಸೇನಾಪತಿ ಸಂಗೀತದಲ್ಲಿ ಯಾವ ಹಾಡು ನೆನಪಲ್ಲುಳಿಯಲ್ಲ. ಸಿನಿಟೆಕ್‌ ಸೂರಿ ಛಾಯಾಗ್ರಹಣ ರಂಗಾಗಿದೆ.

ಚಿತ್ರ: ರಂಗಾದ ಹುಡುಗರು
ನಿರ್ಮಾಣ: ಸುಮಾ ಬಸವರಾಜ್‌, ಬಸವರಾಜ್‌ ಟಿ.ಎಂ.
ನಿರ್ದೇಶನ: ತೇಜೇಶ್‌ಕುಮಾರ್‌
ತಾರಾಗಣ: ಸಾಗರ್‌, ಪ್ರಖ್ಯಾತ್‌, ಶ್ಯಾಮ್‌ ಪೊನ್ನಪ್ಪ, ಅಮಿತ, ಸಹನಾ ಪೊನ್ನಮ್ಮ, ಜ್ಯೋತಿ, ಮನುಹೆಗಡೆ, ಶೋಭರಾಜ್‌, ಭರತ್‌, ಗಿರಿ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lineman movie review

Lineman movie review; ಜಾಲಿರೈಡ್‌ ನ‌ಲ್ಲಿ ‘ಲೈನ್‌ಮ್ಯಾನ್‌’

Dilkush Movie Review

Dilkush Movie Review; ತ್ರಿಕೋನ ಪ್ರೇಮದಲ್ಲಿ ಹೊಸಬರ ಆಟ

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.