ದೇಶ-ಭಾಷೆ ಮೀರಿದ ಕಥಾನಕ

ಚಿತ್ರ ವಿಮರ್ಶೆ

Team Udayavani, Jan 25, 2020, 7:01 AM IST

India-Vs-England

ಆತ ಹುಟ್ಟಿ ಬೆಳೆದಿದ್ದು ಇಂಗ್ಲೆಂಡ್‌ನ‌ಲ್ಲಿ. ಆದರೆ, ಆತನ ಮೂಲ ಭಾರತದಲ್ಲಿದೆ. ಅದೇ ಕಾರಣದಿಂದ ಆತನಿಗೆ ಭಾರತದ ಮೇಲೆ ಪ್ರೀತಿ ಇದೆ. ಜೊತೆಗೆ ತನ್ನ ದೇಶ ಇಂಗ್ಲೆಂಡ್‌ ಮೇಲೆ ಗೌರವವೂ ಇದೆ. ಭಾರತದ ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿಯುವ ಉದ್ದೇಶದಿಂದ ಆತನ ಭಾರತಕ್ಕೆ ಭೇಟಿ ನೀಡುತ್ತಾನೆ. ಈ ಭೇಟಿ ಆತನ ಕಣ್ಣು ತೆರೆಸುತ್ತದೆ. ಭಾರತವನ್ನು ಬ್ರಿಟಿಷರು ಆಳಿದ್ದರಿಂದ ದೇಶದ ಉದ್ಧಾರವಾಯಿತು ಎಂದೇ ನಂಬಿದ್ದ ಆತ, ಬ್ರಿಟಿಷರಿಂದಾದ ತೊಂದರೆ, ಪ್ರಾಣ ಬಿಟ್ಟವರ ಬಗ್ಗೆಯೂ ತಿಳಿದುಕೊಳ್ಳುತ್ತಾನೆ.

ಆತನ ಕಣ್ಣು ತೆರೆಸೋದು ಭಾರತೀಯ ಸಂಸ್ಕೃತಿಯನ್ನು ಪ್ರೀತಿಸುವ ಅಚ್ಚ ಕನ್ನಡತಿ! ಇಷ್ಟು ಹೇಳಿದ ಮೇಲೆ ಈ ಸಿನಿಮಾ ಬಗ್ಗೆ ಒಂದು ಐಡಿಯಾ ಬಂದಿರುತ್ತದೆ. ಮುಖ್ಯವಾಗಿ ಇಲ್ಲಿ ಎರಡು ಸಂಸ್ಕೃತಿಯನ್ನು ತೋರಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆ, ಬ್ರಿಟಿಷರಿಂದ ಅದರ ಮೇಲಾದ ದಬ್ಟಾಳಿಕೆ, ಪರದೇಶದಲ್ಲಿರುವವರ ದೇಶ ಪ್ರೇಮ, ಜೊತೆಗೊಂದು ಲವ್‌ಸ್ಟೋರಿಯನ್ನು ಹೇಳಿದ್ದಾರೆ. ಹಾಗಂತ ಕಥೆ ಇಷ್ಟಕ್ಕೆ ಸೀಮಿತವಾಗಿಲ್ಲ. ಅದರಾಚೆ ಒಂದು ಸಸ್ಪೆನ್ಸ್‌ ಸ್ಟೋರಿಯನ್ನು ಸೇರಿಸಿದ್ದಾರೆ.

ಅದು ಕೂಡಾ ನಮ್ಮ ದೇಶ, ಪುರಾತನ ದೇವಾಲಯಕ್ಕೆ ಸಂಬಂಧಿಸಿದ್ದು. ಅದೇನೆಂಬುದನ್ನು ನೀವು ಸಿನಿಮಾದಲ್ಲಿ ನೋಡಿ. ಈ ಸಿನಿಮಾ ಹೈಲೈಟ್‌ ಎಂದರೆ ಕಥೆಗೆ ಎರಡು ದೇಶಗಳ ಲಿಂಕ್‌ ಬೆಸೆದಿರುವುದು. ಅದೇ ಕಾರಣದಿಂದ ಸಿನಿಮಾದಲ್ಲಿ ದೇಶ ಪ್ರೇಮ, ನಮ್ಮ ಸಂಸ್ಕೃತಿ, ಪರಂಪರೆಯ ಅಂಶಗಳು ಹೆಚ್ಚಿವೆ. ಜೊತೆಗೆ ಯಾವುದು ಸತ್ಯ, ಯಾವುದು ಸುಳ್ಳು ಎಂಬ ಆರೋಗ್ಯಕರ ಚರ್ಚೆಯೂ ಚಿತ್ರದಲ್ಲಿದೆ. ಮುಖ್ಯವಾಗಿ ಈ ಚಿತ್ರ ಭಾರತದ ಸಾಕಷ್ಟು ಐತಿಹಾಸಿಕ, ಪುರಾತನ ಹಿನ್ನೆಲೆ ಇರುವ ಸ್ಥಳಗಳನ್ನು ತೋರಿಸುತ್ತಲೇ ಮುಂದೆ ಸಾಗುತ್ತದೆ.

ಅದಕ್ಕೆ ಕಾರಣ ಕಥೆ. ಆ ಕಥೆಯೇ ಸಾಕಷ್ಟು ಕಡೆ ಟ್ರಾವೆಲ್‌ ಮಾಡುವುದರಿಂದ ಪ್ರೇಕ್ಷಕರಿಗೂ “ಪ್ರವಾಸ’ದ ಅನುಭವವಾಗುತ್ತದೆ. “ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಒಂದು ಕಮರ್ಷಿಯಲ್‌ ಸಿನಿಮಾ ನಿಜ. ಹಾಗಂತ ಗಾಂಧಿನಗರದ ಟಿಪಿಕಲ್‌ ಕಮರ್ಷಿ ಯಲ್‌ ಸಿನಿಮಾ ಅಲ್ಲ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಸಿನಿಮಾಗಳಲ್ಲಿ ಸಿಗುವ ಸ್ವಾದ ಈ ಚಿತ್ರದಲ್ಲೂ ಇದೆ. ಯಾವುದೇ ಆತುರವಿಲ್ಲದ ಹೇಳುವ ಕಥೆಯನ್ನು ನೀಟಾಗಿ ಹೇಳುತ್ತಾ ಹೋಗಿದ್ದಾರೆ ನಿರ್ದೇಶಕರು.

ಮೊದಲೇ ಹೇಳಿದಂತೆ ಸಾಕಷ್ಟು ಲೊಕೇಶನ್‌ಗಳು ಬರುತ್ತವೆ. ಆದರೆ, ಅವೆಲ್ಲವೂ ಪಾಸಿಂಗ್‌ ಶಾಟ್‌ನಲ್ಲಿ ಬಂದು ಹೋದಂತೆ ಭಾಸವಾಗುತ್ತವೆ ಅನ್ನೋದು ಬಿಟ್ಟರೆ ಮಿಕ್ಕಂತೆ ಇದೊಂದು ಕೂಲ್‌ ಸಿನಿಮಾ. ನಿಧಾನವೇ ಪ್ರಧಾನ ಎಂಬಂತೆ ಸಾಗುವ ಈ ಚಿತ್ರದಲ್ಲಿ ಆಗಾಗ ಒಂದಷ್ಟು ಟ್ವಿಸ್ಟ್‌ಗಳು ಬರುತ್ತವೆ. ಆ ಮೂಲಕ ಆಗಾಗ ಪ್ರೇಕ್ಷಕ ನನ್ನು ಜಾಗೃತಗೊಳಿಸುತ್ತವೆ. ಸಿನಿಮಾದಲ್ಲಿ ಹೆಚ್ಚು ಲಾಜಿಕ್‌ ಹುಡುಕಬಾರದೆಂಬ ಮಾತಿದೆ. ಇಲ್ಲೂ ಅಷ್ಟೇ ಕೆಲವು ಅಂಶಗಳಿಗೆ ಲಾಜಿಕ್‌ ಹುಡುಕಬಾರದು. ಅದು ನಿರ್ದೇಶಕನ ಸ್ವತಂತ್ರ್ಯ ಕೂಡಾ.

ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ವಸಿಷ್ಠ ಸಿಂಹ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರಿಗೆ ಲವರ್‌ಬಾಯ್‌ಗಿಂತ ಆ್ಯಕ್ಷನ್‌ನಲ್ಲಿ ಇಷ್ಟವಾಗುತ್ತಾರೆ. ಮಾನ್ವಿತಾ ಇಲ್ಲಿ ಲವಲವಿಕೆಯ ಹುಡುಗಿಯಾಗಿ ಮಿಂಚಿದ್ದಾರೆ. ಉಳಿದಂತೆ ಅನಂತ್‌ನಾಗ್‌, ಪ್ರಕಾಶ್‌ ಬೆಳವಾಡಿ, ಸುಮಲತಾ ಅಂಬರೀಶ್‌, ಸಾಧುಕೋಕಿಲ, ಶಿವಮಣಿ ತಮ್ಮ ಪಾತ್ರಗಳಲ್ಲಿ ಇಷ್ಟವಾಗುತ್ತಾರೆ. ಚಿತ್ರದ ಎರಡು ಹಾಡು ಇಷ್ಟವಾಗುತ್ತದೆ.

ಚಿತ್ರ: ಇಂಡಿಯಾ ವರ್ಸಸ್‌ ಇಂಗ್ಲೆಂಡ್‌
ನಿರ್ಮಾಣ: ವೈ.ಎನ್‌ ಶಂಕರೇಗೌಡ ಅಂಡ್‌ ಫ್ರೆಂಡ್ಸ್‌
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್‌
ತಾರಾಗಣ: ವಸಿಷ್ಠ ಸಿಂಹ, ಮಾನ್ವಿತಾ ಹರೀಶ್‌, ಸುಮಲತಾ ಅಂಬರೀಶ್‌, ಅನಂತ್‌ನಾಗ್‌, ಪ್ರಕಾಶ್‌ ಬೆಳವಾಡಿ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.