ಕನಸುಗಳ ಬೆನ್ನತ್ತಿ … 


Team Udayavani, Nov 17, 2018, 12:08 PM IST

jeerjimbe.jpg

ಕನಸು ಯಾರ ಆಸ್ತಿಯಲ್ಲ, ನಮ್ಮ ಅಪ್ಪನ ಆಸ್ತಿಯೂ ಅಲ್ಲ … ಹೀಗೆ ಹೇಳುತ್ತಲೇ “ಜೀರ್ಜಿಂಬೆ’ ಚಿತ್ರ ಮಕ್ಕಳ ಬಾಲ್ಯ, ಕನಸು, ನಂಬಿಕೆ, ಆಚರಣೆ, ಮೂಢನಂಬಿಕೆ ಎಲ್ಲವನ್ನು ತೆರೆದುಕೊಳ್ಳುತ್ತಾ ಹೋಗುತ್ತದೆ. ಮೇಲ್ನೋಟಕ್ಕೆ ಚಿತ್ರ ಶಾಲಾ ಮಕ್ಕಳ ಆಟ, ಸೈಕಲ್‌ ಕನಸಿನ ಸುತ್ತ ಸುತ್ತಿದಂತೆ ಭಾಸವಾದರೂ ಅದರಾಚೆಗಿನ ಒಂದು ಲೋಕವನ್ನು ತೆರೆದಿಡುತ್ತಾ ಹೋಗುವ ಮೂಲಕ ಕಥೆಯ ಆಶಯವನ್ನು ಈಡೇರಿಸುವಲ್ಲಿ ನಿರ್ದೇಶಕರ ಯಶಸ್ವಿಯಾಗಿದ್ದಾರೆ.

“ಜೀರ್ಜಿಂಬೆ’ ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ಹೈಸ್ಕೂಲ್‌ ವಿದ್ಯಾರ್ಥಿನಿಯರ ಸುತ್ತ ಸಾಗುವ ಈ ಸಿನಿಮಾದಲ್ಲಿ ಆರಂಭದಲ್ಲಿ ಶಾಲೆಯಲ್ಲಿ ಉಚಿತ ಸೈಕಲ್‌ ವಿತರಣೆ ಹಾಗೂ ಆ ನಂತರ ವಿದ್ಯಾರ್ಥಿನಿಯರ ಜಿದ್ದಾಜಿದ್ದಿ, ಗುಂಪು ರಾಜಕೀಯವನ್ನು ಬಿಂಬಿಸುತ್ತದೆ. ಜೊತೆಗೆ ವಿದ್ಯಾರ್ಥಿನಿಯೊಬ್ಬಳ ಸೈಕಲ್‌ ಪ್ರೀತಿ, ಅದನ್ನು ಕಲಿಯುವ ಬಯಕೆ, ಆಕೆ ಕಾಣುವ ಕನಸನ್ನು ಬಿಚ್ಚಿಡುತ್ತಾ ಸಾಗುವ ಸಿನಿಮಾ ಒಂದು ಹಂತಕ್ಕೆ ತೀವ್ರವಾಗುತ್ತಾ ಹೋಗುತ್ತದೆ. ಅದು ಬಾಲ್ಯವಿವಾಹ ಹಾಗೂ ಅದರ ಪರಿಣಾಮವನ್ನು ಬಿಚ್ಚಿಡುವ ಮೂಲಕ.

ಅನೇಕ ಹಳ್ಳಿಗಳಲ್ಲಿ ಸದ್ದಿಲ್ಲದೇ ನಡೆಯುತ್ತಿರುವ ಬಾಲ್ಯವಿವಾಹ ಹಾಗೂ ಅದರಿಂದ ಹೆಣ್ಣುಮಕ್ಕಳು ಮಾನಸಿಕವಾಗಿ ಕುಗ್ಗುವ ಜೊತೆಗೆ ಅವರ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳಾಗುತ್ತವೆ ಎಂಬುದನ್ನು ತೋರಿಸುತ್ತಲೇ ಬಾಲ್ಯವಿವಾಹದ ಕುರಿತಾದ ಕಾನೂನಿನ ಅರಿವು ಮೂಡಿಸುತ್ತಾ ಚಿತ್ರ ಸಾಗುತ್ತದೆ. ಹೆಣ್ಣುಮಗಳೊಬ್ಬಳು ತನ್ನ ಜೀವನದ ಪ್ರತಿ ಹಂತದಲ್ಲೂ ಎದುರಾಗುವ ಸವಾಲುಗಳನ್ನು ಎದುರಿಸಿ ಹೇಗೆ ತನ್ನ ಗುರಿ ಮುಟ್ಟುತ್ತಾಳೆ ಎಂಬುದು ಇಡೀ ಸಿನಿಮಾದ ಸಾರಾಂಶ.

ನಿರ್ದೇಶಕರು ಕಥೆಯ ಆಶಯ ಬಿಟ್ಟು ಹೋಗಿಲ್ಲ. ಹಾಗಾಗಿಯೇ ನಿಮಗೆ ಇಡೀ ಕಥೆ ಯಾವುದೋ ಪಕ್ಕದ ಹಳ್ಳಿಯಲ್ಲಿ ನಡೆದಂತೆ ಭಾಸವಾಗುತ್ತದೆ. ಆ ತರಹದ ನೈಜವಾದ ಪರಿಸರದಲ್ಲಿ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಅದಕ್ಕೆ ಪೂರಕವಾದ ಪಾತ್ರವರ್ಗ ಕಥೆಗೆ ವೇಗ ಹೆಚ್ಚಿಸಿದೆ. ಮುಖ್ಯವಾಗಿ ಈ ಸಿನಿಮಾದಲ್ಲಿ ಹಳ್ಳಿಯ ಮುಗ್ಧ ಜನರ ಮೂಢನಂಬಿಕೆ, ಅದಕ್ಕೆ ಬಲಿಯಾಗುವ ಮಕ್ಕಳು ಇವೆಲ್ಲವನ್ನು ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ.

ಯಾವುದೇ ಅಬ್ಬರವಿಲ್ಲದೇ ಸಾಗುವ ಈ ಸಿನಿಮಾದಲ್ಲಿ ನಿಮಗಾಗುವ ಕಷ್ಟ, ಅನ್ಯಾಯವನ್ನು ಸಹಿಸಿಕೊಂಡು ಕೂರಬೇಡಿ, ಮುಖ್ಯವಾಹಿನಿಗೆ ಬಂದು ಸಮಸ್ಯೆಯನ್ನು ಹೇಳಿಕೊಂಡು ಪರಿಹಾರ ಪಡೆಯಿರಿ ಎಂಬ ಸಂದೇಶವನ್ನು ಹೇಳಲಾಗಿದೆ. ಜೊತೆಗೆ ದೇಶದಲ್ಲಿ ನಡೆದ ಸಾಕಷ್ಟು ನೈಜ ಘಟನೆಗಳನ್ನು ಉದಾಹರಿಸುತ್ತಲೇ ಸಿನಿಮಾ ಮುಗಿದು ಹೋಗುತ್ತದೆ. ಚಿತ್ರದಲ್ಲಿ ನಟಿಸಿರುವ ಸಿರಿ ವಾನಳ್ಳಿ, ಮಾಸ್ಟರ್‌ ವಿಶ್ವಾಸ್‌, ಸುಮನ್‌ ನಗರ್‌ಕರ್‌ ಸೇರಿದಂತೆ ಪ್ರತಿಯೊಬ್ಬರ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಚರಣ್‌ರಾಜ್‌ ಸಂಗೀತ ಚಿತ್ರದ ಆಶಯಕ್ಕೆ ತಕ್ಕುದಾಗಿದೆ. 

ಚಿತ್ರ: ಜೀರ್ಜಿಂಬೆ
ನಿರ್ಮಾಣ: ಪುಷ್ಕರ್‌ ಫಿಲಂಸ್‌
ನಿರ್ದೇಶನ: ಕಾರ್ತಿಕ್‌ ಸರಗೂರು
ತಾರಾಗಣ: ಸಿರಿ ವಾನಳ್ಳಿ, ಮಾಸ್ಟರ್‌ ವಿಶ್ವಾಸ್‌, ಸುಮನ್‌ ನಗರ್‌ಕರ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.