ರಸಭರಿತ ಕೃತಿಯ ರಸರಹಿತ ಕಾವ್ಯ

ಚಿತ್ರ ವಿಮರ್ಶೆ

Team Udayavani, Apr 28, 2019, 3:00 AM IST

Mahakavya

ಕನ್ನಡದಲ್ಲಿ ಐತಿಹಾಸಿಕ, ಪೌರಾಣಿಕ ಕಥಾಹಂದರ ಹೊಂದಿರುವ ಚಿತ್ರಗಳು ಇತ್ತೀಚೆಗೆ ಕಡಿಮೆ ಎಂಬ ಮಾತುಗಳ ನಡುವೆಯೇ ಈ ವಾರ “ಮಹಾಕಾವ್ಯ’ ಚಿತ್ರ ತೆರೆಗೆ ಬಂದಿದೆ. ಹೆಸರೇ ಹೇಳುವಂತೆ “ಮಹಾಕಾವ್ಯ’ ಕನ್ನಡದ ಮೂರು ಕಾವ್ಯಗಳನ್ನು ದೃಶ್ಯ ರೂಪದಲ್ಲಿ ತೆರೆಮೇಲೆ ತಂದಿರುವ ಚಿತ್ರ.

ರನ್ನನ “ಗದಾಯುದ್ಧ’, ಪಂಪನ “ವಿಕ್ರಮಾರ್ಜುನ ವಿಜಯ’ ಮತ್ತು ಪೊನ್ನನ “ಶಾಂತಿಪುರಾಣ’ ಮೂರು ಕಾವ್ಯಗಳ ಒಂದೊಂದು ಕಥೆಯನ್ನು ಆಯ್ದುಕೊಂಡು ಅದನ್ನು ದೃಶ್ಯರೂಪದ ಮೂಲಕ ತೆರೆಮೇಲೆ ತರಲಾಗಿದೆ. ಕನ್ನಡದ ಚಿತ್ರರಂಗದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ “ಮಹಾಕಾವ್ಯ’ ಚಿತ್ರ ಒಂದು ವಿಭಿನ್ನ ಪ್ರಯೋಗ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಾಗಂತ ಅದು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುತ್ತದೆಯಾ ಎಂದರೆ ಅದೂ ಖಂಡಿತಾ ಇಲ್ಲ. ಯಾವುದೇ ಐತಿಹಾಸಿಕ, ಪೌರಾಣಿಕ ಕಥಾನಕವಾಗಲಿ, ಕೃತಿಗಳಾಗಲಿ, ಅದನ್ನು ಸಿನಿಮಾ ರೂಪದಲ್ಲಿ ತೆರೆಮೇಲೆ ತರುವಾಗ ಒಂದಷ್ಟು ಮಾರ್ಪಾಡುಗಳು ಅಗತ್ಯವಾಗಿರುತ್ತವೆ.

ಇಲ್ಲವಾದಲ್ಲಿ, ಆ ಕೃತಿಯ ಸತ್ವ ಎನ್ನುವುದು ದೃಶ್ಯರೂಪದಲ್ಲಿ ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ತಲುಪುವಲ್ಲಿ ವಿಫ‌ಲವಾಗುತ್ತದೆ. “ಮಹಾಕಾವ್ಯ’ ಚಿತ್ರದಲ್ಲೂ ಅಂತಹ ವೈಫ‌ಲ್ಯವನ್ನು ಕಾಣಬಹುದು. ನಿರ್ದೇಶಕರು ಸದುದ್ದೇಶದಿಂದ ಸರ್ವಮಾನ್ಯ ಮತ್ತು ಸಾರ್ವಕಾಲಿಕ ಕೃತಿಗಳ ಕಥಾಹಂದರವನ್ನು ಆಯ್ದುಕೊಂಡರೂ, ಅದನ್ನು ಸಿನಿಮಾದ ಚಿತ್ರಕಥೆಯ ಮೂಲಕ ದೃಶ್ಯರೂಪದಲ್ಲಿ ತೆರೆಮೇಲೆ ತರುವಲ್ಲಿ ಎಡವಿದಂತಿದೆ.

ಸಿನಿಮಾ ಎಂದರೆ ಅದು ದೃಶ್ಯ ಮಾಧ್ಯಮ. ಹಾಗಾಗಿ ಚಿತ್ರದ ಪ್ರತಿ ದೃಶ್ಯಗಳು ನೋಡುಗರನ್ನು ಸೆಳೆಯುವಂತಿರಬೇಕು. ಪ್ರತಿ ದೃಶ್ಯಗಳನ್ನೂ ತೆರೆಮೇಲೆ ಎಷ್ಟು ಸುಂದರವಾಗಿ ಕಟ್ಟಿಕೊಡಲಾಗಿದೆ ಎನ್ನುವುದರ ಮೇಲೆ ಚಿತ್ರದ ನೋಡುಗರ ಆಸಕ್ತಿ ಅವಲಂಭಿಸಿರುತ್ತದೆ.

ಎಷ್ಟೇ ಒಳ್ಳೆಯ ಕೃತಿಗಳಾದರೂ, ಅದನ್ನು ಕುತೂಹಲ ಹುಟ್ಟಿಸುವಂತೆ ದೃಶ್ಯ ರೂಪದಲ್ಲಿ ಹೇಳದಿದ್ದರೆ, ಅದು ನೋಡುಗರಿಗೆ ಪೇಲವವಾಗಿ ಕಾಣುತ್ತದೆ. “ಮಹಾಕಾವ್ಯ’ ಚಿತ್ರ ಕೂಡ ನೋಡುಗರಿಗೆ ಅಂಥದ್ದೇ ಅನುಭವ ನೀಡುತ್ತದೆ. ಚಿತ್ರದ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಸಂಗೀತದಲ್ಲಿ ಬಳಸಿಕೊಂಡಿರುವ ಕಾವ್ಯದ ಸಾಲುಗಳು, ಸಂಭಾಷಣೆ ಚಿತ್ರಕ್ಕೆ ಪ್ಲಸ್‌ ಎನ್ನಬಹುದು. ಅದನ್ನು ಹೊರತುಪಡಿಸಿದರೆ, ಚಿತ್ರದ ನಿರೂಪಣೆ ಮತ್ತು ತಾಂತ್ರಿಕ ವಿಷಯಗಳಲ್ಲಿ ಚಿತ್ರದಲ್ಲಿ ಸಾಕಷ್ಟು ಕೊರತೆ ಎದ್ದು ಕಾಣುತ್ತದೆ. ಚಿತ್ರದ ಹಿನ್ನೆಲೆ ಸಂಗೀತ, ಶಬ್ದಗ್ರಹಣ ಸ್ಪಷ್ಟವಾಗಿಲ್ಲ. ಗ್ರಾಫಿಕ್ಸ್‌ ಕೆಲಸಗಳೂ ಕೂಡ ಅಪೂರ್ಣವೆನಿಸುತ್ತವೆ.

ಇನ್ನು ಚಿತ್ರದ ಛಾಯಾಗ್ರಹಣ, ಸಂಕಲನ, ವಸ್ತ್ರವಿನ್ಯಾಸ, ಕಲಾ ನಿರ್ದೇಶನ ಎಲ್ಲವೂ ನೋಡುತ್ತಿದ್ದರೆ, “ಮಹಾಕಾವ್ಯ’ವನ್ನು ಸಿನಿಮಾಕ್ಕಿಂತ, ನಾಟಕವಾಗಿ ನೋಡುವುದೇ ಹೆಚ್ಚು ಸೂಕ್ತ ಎಂಬ ಭಾವ ಮೂಡಿಸಿದರೂ ಅಚ್ಚರಿ ಇಲ್ಲ.

ಒಂದೊಳ್ಳೆ ರಸಭರಿತ ಕೃತಿಯನ್ನು ಆಯ್ಕೆ ಮಾಡಿಕೊಂಡರೂ, ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಕಲೆ ನಿರ್ದೇಶಕರಿಗೆ ಗೊತ್ತಿಲ್ಲದಿದ್ದರೆ, ಅದು ಹೇಗೆ ರಸರಹಿತವಾಗಿ ಕಾಣಬಹುದು ಎನ್ನುವುದಕ್ಕೆ ಶ್ರೀದರ್ಶನ್‌ ಅವರ “ಮಹಾಕಾವ್ಯ’ ಉತ್ತಮ ನಿದರ್ಶನ.

ಚಿತ್ರ: ಮಹಾಕಾವ್ಯ
ನಿರ್ಮಾಣ: ವಿಜಯ .ಎಸ್‌
ನಿರ್ದೇಶನ: ಶ್ರೀ ದರ್ಶನ್‌
ತಾರಾಗಣ: ಶ್ರೀದರ್ಶನ್‌, ರಶ್ಮಿ ಪ್ರಭಾಕರ್‌, ರಾಮಕೃಷ್ಣ, ಅನಂತವೇಲು, ಲಕ್ಷ್ಮೀ ಭಟ್‌, ವಲ್ಲಭ್‌, ಗಿರೀಶ್‌, ಗಣೇಶ ರಾವ್‌ ಕೇಸರ್ಕರ್‌, ಶಂಖನಾದ ಅರವಿಂದ್‌, ನಾಗರಾಜ್‌ ಭಟ್‌, ರವಿ ಭಟ್‌ ಮತ್ತಿತರರು.

* ಜಿ.ಎಸ್‌.ಕೆ ಸುಧನ್‌

ಟಾಪ್ ನ್ಯೂಸ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.