ರಣ ರೋಚಕ ಕ್ಷೇತ್ರ ವೈಭವ


Team Udayavani, Aug 10, 2019, 11:03 AM IST

cinema-tdy-01
ಚಿತ್ರ: ಕುರುಕ್ಷೇತ್ರ
•ನಿರ್ಮಾಣ: ಮುನಿರತ್ನ

•ನಿರ್ದೇಶನ: ನಾಗಣ್ಣ

•ತಾರಾಗಣ: ದರ್ಶನ್‌, ಅಂಬರೀಶ್‌, ಅರ್ಜುನ್‌ ಸರ್ಜಾ, ಶಶಿಕುಮಾರ್‌, ರವಿಚಂದ್ರನ್‌, ನಿಖೀಲ್ ಮತ್ತಿತರರು.

ಒಂದು ಕಮರ್ಷಿಯಲ್ ಸಿನಿಮಾವನ್ನು ಸುಲಭವಾಗಿ ಮಾಡಿಬಿಡಬಹುದು. ಅದಕ್ಕೆ ಲಾಜಿಕ್‌ ಆಗಲೀ, ದೊಡ್ಡ ಮಟ್ಟದ ಪೂರ್ವಸಿದ್ಧತೆಯಾಗಲಿ ಬೇಕಾಗಿರುವುದಿಲ್ಲ. ಜನ ಕೂಡಾ ಕಮರ್ಷಿಯಲ್ ಸಿನಿಮಾಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೇ ಮನರಂಜನೆಗಷ್ಟೇ ಸೀಮಿತ ಮಾಡುತ್ತಾರೆ. ಆದರೆ, ಇತಿಹಾಸ ಪುಟದಲ್ಲಿ ದಾಖಲಾಗಿರುವ ಅಂಶಗಳನ್ನು ಸಿನಿಮಾ ಮಾಡೋದು ಸುಲಭವಲ್ಲ. ಅದರಲ್ಲೂ ಪೌರಾಣಿಕ ಸಿನಿಮಾ ಮಾಡಬೇಕಾದರೆ ಸಾಕಷ್ಟು ಸಿದ್ಧತೆ ಬೇಕು. ಆ ನಿಟ್ಟಿನಲ್ಲಿ ಈ ವಾರ ತೆರೆಗೆ ಬಂದಿರುವ ‘ಕುರುಕ್ಷೇತ್ರ’ ಚಿತ್ರದ ಪ್ರಯತ್ನವನ್ನು ಮೆಚ್ಚಲೇಬೇಕು. ತುಂಬಾ ವರ್ಷಗಳ ನಂತರ ಕನ್ನಡದಲ್ಲಿ ಬರುತ್ತಿರುವ ಪೌರಾಣಿಕ ಚಿತ್ರ ‘ಕುರುಕ್ಷೇತ್ರ’ವಾದ್ದರಿಂದ ಸಿನಿಪ್ರೇಮಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಇವತ್ತಿನ ತಂತ್ರಜ್ಞಾನವನ್ನು ಬಳಸಿಕೊಂಡು ಪೌರಾಣಿಕ ಸಿನಿಮಾ ಹೇಗೆ ಮೂಡಿ ಬಂದಿರಬಹುದೆಂಬ ಕುತೂಹಲವೂ ಇತ್ತು. ಆ ಎಲ್ಲಾ ಕುತೂಹಲವನ್ನು ತಣಿಸುವಲ್ಲಿ ‘ಕುರುಕ್ಷೇತ್ರ’ ಯಶಸ್ವಿಯಾಗಿದೆ.

ಇಡೀ ಮಹಾಭಾರತವನ್ನು ಕಟ್ಟಿ ಕೊಡೋದು ಸುಲಭದ ಮಾತಲ್ಲ. ಅದೇ ಕಾರಣದಿಂದ ಈ ಚಿತ್ರದಲ್ಲಿ ಕೇವಲ ದುರ್ಯೋಧನನ್ನು ಮೂಲವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಕುರುವಂಶದ ದೊರೆ ದುರ್ಯೋಧನನ ಸ್ವಾಭಿಮಾನ, ಸೇಡು, ಛಲ, ಸ್ನೇಹ, ಪರಾಕ್ರಮವೇ ‘ಕುರುಕ್ಷೇತ್ರ’ ಚಿತ್ರದ ಹೈಲೈಟ್. ದುರ್ಯೋಧನ ಉದಯ, ಮೆರೆದಾಟ, ಅಂತ್ಯವನ್ನು ಸಾಕಷ್ಟು ಸೂಕ್ಷ್ಮಅಂಶಗಳೊಂದಿಗೆ ಕಟ್ಟಿಕೊಡಲಾಗಿದೆ. ಜೊತೆಗೆ ಇಲ್ಲಿ ಕರ್ಣನ ಹಿನ್ನೆಲೆ, ಸ್ನೇಹ, ಪ್ರಾಮಾಣಿಕತೆ, ದಾನಶೂರ ಗುಣವನ್ನು ಹೈಲೈಟ್ ಮಾಡಲಾಗಿದೆ. ಇಷ್ಟು ಅಂಶಗಳನ್ನು ಮೂಲವಾಗಿಟ್ಟುಕೊಂಡು ಸಿನಿಮಾವನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. ಪೌರಾಣಿಕ ಸಿನಿಮಾಕ್ಕೆ ಮುಖ್ಯವಾಗಿ ಬೇಕಾಗಿರೋದು ಮೂಲ ಅಂಶಗಳಿಗೆ ನಿಷ್ಠೆ ಹಾಗೂ ದೃಶ್ಯ ವೈಭವ. ‘ಕುರುಕ್ಷೇತ್ರ’ ಚಿತ್ರದ ಪ್ರತಿಯೊಂದು ದೃಶ್ಯ ಕೂಡಾ ಅದ್ಧೂರಿ ಹಾಗೂ ಅದ್ಭುತವಾಗಿದೆ. ಕೌರವ-ಪಾಂಡವರ ಸಾಮ್ರಾಜ್ಯ, ಜೂಜು, ಅದ್ಧೂರಿತವನ್ನು ನಿರ್ಮಾಪಕ ಮುನಿರತ್ನ ಹಾಗೂ ನಿರ್ದೇಶಕ ನಾಗಣ್ಣ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸುಯೋಧನನ ಎಂಟ್ರಿ, ಯುದ್ಧ, ಹಾಡು ಎಲ್ಲವೂ ಕಣ್ಣಿಗೆ ಹಬ್ಬದಂತಿದೆ. ಈ ಅಂಶಗಳಲ್ಲಿ ಗ್ರಾಫಿಕ್‌ ಅನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಜೊತೆಗೆ ಸಾಮಾನ್ಯವಾಗಿ ಪೌರಾಣಿಕ ಸಿನಿಮಾಗಳನ್ನು ಮಾಡುವಾಗ ಆಗುವ ಆಭಾಸಗಳಿಂದಲೂ ‘ಕುರುಕ್ಷೇತ್ರ’ ಮುಕ್ತ. ಅಂದಿನ ಕಾಲಘಟ್ಟ ಹೇಗಿತ್ತೋ, ಏನು ಬೇಕಿತ್ತೋ ಅವೆಲ್ಲವೂ ‘ಕುರುಕ್ಷೇತ್ರ’ದಲ್ಲಿದೆ. ಪೌರಾಣಿಕ ಸಿನಿಮಾಗಳಲ್ಲಿ ವೇಷ-ಭೂಷಣದ ಜೊತೆಗೆ ಪ್ರಮುಖ ಪಾತ್ರ ವಹಿಸುವುದು ಸಂಭಾಷಣೆ. ಆ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವಿ.ನಾಗೇಂದ್ರ ಪ್ರಸಾದ್‌ ಎಲ್ಲೂ ಅಪಭ್ರಂಶವಾಗದಂತೆ ನೋಡಿಕೊಂಡಿದ್ದಾರೆ.

 

.ರವಿ ಪ್ರಕಾಶ್ ರೈ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.