ದಾರದ ಮೇಲೆ ಹರಿದ ಬದುಕಿನ ನಡಿಗೆ

ಚಿತ್ರ ವಿಮರ್ಶೆ

Team Udayavani, May 11, 2019, 3:00 AM IST

soojidara

ಆಕೆಗೆ ತಾನು ಯಾರು, ಯಾಕಾಗಿ ಇಲ್ಲಿ ಬಂಧಿಯಾಗಿದ್ದೇನೆ, ತನ್ನ ಅಸ್ತಿತ್ವವೇನು ಎಂಬುದೇ ಗೊತ್ತಿರುವುದಿಲ್ಲ. ಆತನಿಗೆ ತಾನು ಸಿದ್ಧಗಂಗಾ ಮಠದಲ್ಲಿ ಬೆಳೆದಿದ್ದು ಅನ್ನೋದು ಬಿಟ್ಟರೆ ಮಿಕ್ಕಂತೆ ಆತನಿಗೆ ತನ್ನ ಯಾವ ವಿವರವೂ ತಿಳಿದಿರುವುದಿಲ್ಲ. ಒಂದರ್ಥದಲ್ಲಿ ಇಬ್ಬರು ಸಮಾನ ಮನಸ್ಕರು. ಅವರಿಬ್ಬರು ಕೋಣೆಯೊಂದರಲ್ಲಿ ಬಂಧಿಯಾಗುತ್ತಾರೆ. ಅಲ್ಲಿ ಅವರಿಬ್ಬರ ಮೂಲ ಅಸ್ತಿತ್ವದ ಹುಡುಕಾಟ ಶುರುವಾಗುತ್ತದೆ. ಒಂದರ್ಥದಲ್ಲಿ ಹರಿದ ಬದುಕಿಗೆ ಹೊಲಿಗೆ …

“ಸೂಜಿದಾರ’ ಚಿತ್ರ ಆರಂಭವಾಗುತ್ತಿದ್ದಂತೆ “ದೇಹದ ಮೇಲಿನ ದೊಡ್ಡ ಗಾಯವೆಂದರೆ ಅದು ಮನಸ್ಸು’ ಎಂಬ ಸಂಭಾಷಣೆ ಬರುತ್ತದೆ. ಅದೇ ಅಂಶದೊಂದಿಗೆ ನಿರ್ದೇಶಕರು “ಸೂಜಿದಾರ’ವನ್ನು ಪೋಣಿಸಿದ್ದಾರೆ. ಮನಸ್ಸಿಗಾಗುವ ಗಾಯ ಹಾಗೂ ಅದರಾಚೆಗಿನ ಪರಿಣಾಮವೇ ಈ ಚಿತ್ರದ ಮೂಲ ಅಂಶ. “ಸೂಜಿದಾರ’ ಒಂದು ಸೂಕ್ಷ್ಮ ಸಂವೇದನೆಯ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವ ಹೊಸ ಬಗೆಯ ಸಿನಿಮಾಗಳ ಸಾಲಿಗೆ ಸೇರುವ ಚಿತ್ರವಿದು.

ಹಾಗಾಗಿ, ಸಿನಿಮಾದ ನಿರೂಪಣೆಯಿಂದ ಹಿಡಿದು, ಪಾತ್ರ ಪೋಷಣೆಯವರಗೆ ಎಲ್ಲದರಲ್ಲೂ ಹೊಸತನ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿರೋದು ಎದ್ದು ಕಾಣುತ್ತದೆ. ನಿರ್ದೇಶಕರು ಚಿತ್ರದುದ್ದಕ್ಕೂ ಸಾಕಷ್ಟು ಸೂಕ್ಷ್ಮ ಅಂಶಗಳನ್ನು ಬಿಚ್ಚಿಡುತ್ತಲೇ ಸಾಗಿದ್ದಾರೆ. ಮುಖ್ಯವಾಗಿ ಈ ಸಿನಿಮಾವನ್ನು ಹೆಣ್ಣೊಬ್ಬಳ ಆಂತಃರ್ಯದ ಕಥೆ ಎನ್ನಬಹುದು.

ಕಾಲನ ಕೈಗೊಂಬೆಯಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು, ಮತ್ತೆ ಅದನ್ನು ಹುಡುಕುವ ಪ್ರಯತ್ನದಲ್ಲಿರುವ ಹಾಗೂ ಆ ಪ್ರಯತ್ನದಲ್ಲಿ ಆಕೆಯನ್ನು ಸಮಾಜ ನೋಡುವ ರೀತಿಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಕೆಲವು ಅಂಶಗಳನ್ನು ನಿರ್ದೇಶಕರು ಪರೋಕ್ಷವಾಗಿ ಹೇಳುತ್ತಾ ಹೋಗಿದ್ದಾರೆ.

ಉದಾಹರಣೆಗೆ ನಾಟಕದಲ್ಲಿ ಶ್ರೀರಾಮನ ಪಾತ್ರ ಮಾಡುವ ವ್ಯಕ್ತಿಯೊಬ್ಬನ ಮೂಲ ವ್ಯಕ್ತಿತ್ವ, ಕಳ್ಳನನ್ನು ಬದಲಿಸುತ್ತೇನೆಂಬ ಧೈರ್ಯದಿಂದ ಪ್ರೀತಿಗೆ ಬೀಳುವ ಕನಸು ಕಂಗಳ ಹುಡುಗಿ, ಒಂದು ದಿನ ಮಗಳು ಮನೆಗೆ ಬಾರದೇ ಹೋದರೆ ಬೇರೆಯೇ ಅರ್ಥ ಕಲ್ಪಿಸುವ ತಾಯಿ, ತನ್ನದಲ್ಲದ ತಪ್ಪಿಗೆ ತಲೆಮರೆಸಿಕೊಂಡಿರಬೇಕಾದ ಹುಡುಗನ ಅಸಹಾಯಕತೆ, ದುಗುಡ, ವೇದನೆ … ಹೀಗೆ ಹಲವು ಪದರಗಳೊಂದಿಗೆ ಕಥೆಯನ್ನು ಬಿಚ್ಚಿಡುತ್ತಾ ಹೋಗಿದ್ದಾರೆ.

ಇಲ್ಲಿ ನಿರ್ದೇಶಕರು ಯಾವ ಅಂಶವನ್ನೂ ತುಂಬಾ ಅತಿಯಾಗಿ, ವಿರಳವಾಗಿ ಹೇಳುವ ಗೋಜಿಗೆ ಹೋಗಿಲ್ಲ. ಆದರೆ, ಸೂಕ್ಷ್ಮ ಅಂಶಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಜವಾಬ್ದಾರಿಯನ್ನು ಪ್ರೇಕ್ಷಕರಿಗೆ ಬಿಟ್ಟಿದ್ದಾರೆ. ಚಿತ್ರದ ಕೆಲವು ದೃಶ್ಯಗಳು ಆಗಾಗ ಮರುಕಳಿಸುತ್ತವೆ. ಆ ತರಹದ ಕೆಲವು ತಪ್ಪುಗಳನ್ನು ಬದಿಗಿಟ್ಟು ನೋಡಬೇಕಾಗುತ್ತದೆ.

ಮುಖ್ಯವಾಗಿ ಈ ತರಹದ ಸಿನಿಮಾಗಳನ್ನು ತುಂಬಾ ಸಾವಧಾನದಿಂದ ನೋಡಬೇಕಾಗುತ್ತದೆ. ಅದಕ್ಕೆ ಕಾರಣ ಕಥೆ ತೆರೆದುಕೊಳ್ಳುವ ರೀತಿ. ಕಮರ್ಷಿಯಲ್‌ ಸಿನಿಮಾಗಳಂತೆ ಹೀರೋ ಅದ್ಧೂರಿ ಎಂಟ್ರಿ, ಕಲರ್‌ಫ‌ುಲ್‌ ಸಾಂಗ್‌, ಬ್ಯೂಟಿಫ‌ುಲ್‌ ಲೊಕೇಶನ್‌ … ಇವೆಲ್ಲವನ್ನು ಬಯಸುವವರಿಗೆ ಮತ್ತು ಕಮರ್ಷಿಯಲ್‌ ಸಿನಿಮಾಗಳಲ್ಲಿನ ಮನರಂಜನೆಯ ನಿರೀಕ್ಷೆಯಲ್ಲಿರುವ ಸಿನಿಪ್ರಿಯರಿಗೆ “ಸೂಜಿದಾರ’ ಹೆಚ್ಚೇನು ರುಚಿಸಲಿಕ್ಕಿಲ್ಲ.

ಬದಲಾಗಿ ಹೊಸ ಜಾನರ್‌ನ, ಸೂಕ್ಷ್ಮ ಅಂಶಗಳಿರುವ ಸಿನಿಮಾ ಕಣ್ತುಂಬಿಕೊಳ್ಳುವ ಮನಸ್ಸುಳ್ಳವರಿಗೆ “ಸೂಜಿ’ ಇಷ್ಟವಾಗಬಹುದು. ಇಲ್ಲಿ ನಿರ್ದೇಶಕರು ಯಾವ ಪಾತ್ರವನ್ನು ಹೆಚ್ಚು ಹೈಲೈಟ್‌ ಮಾಡಿಲ್ಲ. ಹಾಗೆ ಬಂದು ಹೀಗೆ ಹೋಗುತ್ತವೆ. ಆ ಅವಧಿಯಲ್ಲೇ ಹರಿದ ಬದುಕಿನ ಅನಾವರಣ. ಈ ಚಿತ್ರದ ಹೈಲೈಟ್‌ ಎಂದರೆ ಹರಿಪ್ರಿಯಾ. ಈ ಹಿಂದೆ ಅವರು ಮಾಡಿರುವ ಪಾತ್ರಗಳಿಗೆ ಹೋಲಿಸಿದರೆ ಸಂಪೂರ್ಣ ಭಿನ್ನವಾದ ಪಾತ್ರ “ಸೂಜಿದಾರ’ದಲ್ಲಿದೆ.

ಪದ್ಮಾ ಎಂಬ ಅಸಹಾಯಕ ಹೆಣ್ಣುಮಗಳ ಕಥಾನಕವನ್ನು ಹರಿಪ್ರಿಯಾ ನಟನೆಗಿಂತ ಹೆಚ್ಚಾಗಿ ತಮ್ಮ ಹಾವ-ಭಾವಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಮಾತಿಗಿಂತ ಮೌನಕ್ಕೆ ಹೆಚ್ಚು ಅರ್ಥ. ಹರಿಪ್ರಿಯಾ ಪಾತ್ರದಲ್ಲಿ ಮೌನ ಹೆಚ್ಚು ಕೆಲಸ ಮಾಡಿದೆ. ಉಳಿದಂತೆ ಯಶ್‌ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಮಾಯಕನೊಬ್ಬನ ವೇದನೆ, ತೊಳಲಾಟವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಉಳಿದಂತೆ ಅಚ್ಯುತ್‌, ಚೈತ್ರಾ ಕೊಟ್ಟೂರು, ಸುಚೇಂದ್ರ ಪ್ರಸಾದ್‌ ಸೇರಿದಂತೆ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಕಥೆಯ ಆಶಯಕ್ಕೆ ತಕ್ಕುದಾಗಿದೆ.

ಚಿತ್ರ: ಸೂಜಿದಾರ
ನಿರ್ಮಾಣ: ಸಚ್ಚೀಂದ್ರನಾಯಕ್‌-ಅಭಿಜಿತ್‌
ನಿರ್ದೇಶನ: ಮೌನೇಶ್‌ ಬಡಿಗೇರ್‌
ತಾರಾಗಣ: ಹರಿಪ್ರಿಯಾ, ಯಶ್‌ ಶೆಟ್ಟಿ, ಸುಚೇಂದ್ರ ಪ್ರಸಾದ್‌, ಚೈತ್ರಾ ಕೊಟ್ಟೂರು, ಅಚ್ಯುತ್‌ ಕುಮಾರ್‌ ಮತ್ತಿತರರು.

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.