ಹೇಗಿದೆ ಈ ಸಿನಿಮಾ: ‘ಯುವ ಮನಸ್ಸುಗಳಿಗೊಂದು ‘ಪವರ್ ಫುಲ್‌’ ಮೆಸೇಜ್‌


Team Udayavani, Apr 2, 2021, 8:19 AM IST

yuvaratna movie review

ಸಿನಿಮಾದಲ್ಲೊಂದು ಕಥೆ ಇರಬೇಕು, ಆ ಕಥೆಗೊಂದು ಉದ್ದೇಶವಿರಬೇಕು ಮತ್ತು ಆ ಉದ್ದೇಶ ಇವತ್ತಿನ ಸಮಾಜಕ್ಕೆ ಹತ್ತಿರವಿರಬೇಕು… ಹೀಗೆ ಬಯಸುವ ಸಿನಿಮಾ ಪ್ರೇಮಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಕೇವಲ ಹೊಡಿ ಬಡಿ, ಹಾಡು, ಡ್ಯಾನ್ಸ್‌ ಅಷ್ಟೇ ಇದ್ದರೆ ಸಾಲದು, ಅದರಾಚೆ ಚಿಂತಿಸುವ ವಿಷಯವಿರಬೇಕು ಎಂದು ಬಯಸುವವರಿಗೆ “ಯುವರತ್ನ ’ ಒಂದು ಒಳ್ಳೆಯ ಆಯ್ಕೆಯಾಗಬಹುದು. ಹಾಗಂತ “ಯುವರತ್ನ’ ದಲ್ಲಿ ಇಡೀ ಸಂದೇಶವೇ ತುಂಬಿಕೊಂಡಿದೆಯೇ ಎಂದರೆ ಖಂಡಿತಾ ಇಲ್ಲ. ಇದು ಕೂಡಾ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಆದರೆ, ಅದನ್ನು ಕಟ್ಟಿಕೊಡುವ ಹಿನ್ನೆಲೆಯಲ್ಲಿ ಸಾಗುವ ಕಥೆ ತುಂಬಾ ಗಂಭೀವಾಗಿದೆ. ಎಜುಕೇಶನ್‌ ಮಾಫಿಯಾ ಜೊತೆಗೆ ಸರ್ಕಾರಿ ಶಾಲಾ-ಕಾಲೇಜುಗಳ ಕುರಿತಾದ ಅಂಶವನ್ನಿಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ಒಬ್ಬ ಸ್ಟಾರ್‌ ನಟನನ್ನಿಟ್ಟುಕೊಂಡು ತುಂಬಾ ಗಂಭೀರವಾದ ವಿಚಾರ ಹೇಳುವಾಗ ನಿರ್ದೇಶಕ ತುಂಬಾ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಕಥೆಯ ಜೊತೆಗೆ ಸ್ಟಾರ್‌ ನಟನ ಅಭಿಮಾನಿಗಳನ್ನು ಖುಷಿ ಪಡಿಸುವ ಜವಾಬ್ದಾರಿ ಕೂಡಾ ಆತನಿಗಿರುತ್ತದೆ. ಆ ನಿಟ್ಟಿನಲ್ಲಿ ನಿರ್ದೇಶಕ ಸಂತೋಷ್‌ ಆನಂದರಾಮ್‌ ಒಂದು ಗಂಭೀರ ವಿಚಾರವನ್ನು ಮನಮುಟ್ಟುವಂತೆ ಜೊತೆ ಮಾಸ್‌ ಪ್ರೇಕ್ಷಕರು “ಜೈಕಾರ’ ಹಾಕುವಂತೆಯೂ ಕಟ್ಟಿ ಕೊಟ್ಟಿರೋದು ಅವರ ಹೆಚ್ಚು ಗಾರಿಕೆ. ಚಿತ್ರದಲ್ಲಿ ಸಾಕಷ್ಟು ಸನ್ನಿವೇಶಗಳು, ಘಟನೆಗಳು ಬಂದು ಹೋಗು ತ್ತವೆ. ಆದರೆ, ಅವೆಲ್ಲವನ್ನು ನೀಟಾಗಿ ಜೋಡಿಸುವ ಮೂಲಕ ಚಿತ್ರವನ್ನು ಗೊಂದಲ ಮುಕ್ತವನ್ನಾಗಿಸಿದ್ದಾರೆ. ಮುಖ್ಯವಾಗಿ ಈ ಚಿತ್ರ ಪ್ರೇಕ್ಷ ಕರ ಕುತೂಹಲವನ್ನು ಕ್ಷಣ ಕ್ಷಣಕ್ಕೂ ಹೆಚ್ಚಿಸಿಕೊಂಡು ಹೋಗುತ್ತದೆ. ಪುನೀತ್‌ ಎಂಟ್ರಿಯಿಂದ ಹಿಡಿದು ಅವರ ಮ್ಯಾನರೀಸಂ, ಡೈಲಾಗ್‌ .. ಹೀಗೆ ಪ್ರತಿ ವಿಷಯವೂ ಪ್ರೇಕ್ಷಕರಲ್ಲಿ ಒಂದು ಕುತೂಹಲವನ್ನು ಬಿಟ್ಟೇ ಮುಂದೆ ಸಾಗುತ್ತದೆ.

ಇದನ್ನೂ ಓದಿ:ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಪತ್ನಿಗೆ ಬ್ಲಡ್ ಕ್ಯಾನ್ಸರ್

ಸಿನಿಮಾದ ಹೈಲೈಟ್‌ಗಳಲ್ಲಿ ಸಿನಿಮಾ ನಿರೂಪಣಾ ಶೈಲಿ ಕೂಡಾ ಒಂದು. ಚಿತ್ರದ ಕಥೆ ಗಂಭೀರವಾಗಿದ್ದರೂ ಸಿನಿಮಾ ಮಾತ್ರ ಪದೇ ಪದೇ ಮೂಡ್‌ ಬದಲಿಸುತ್ತಾ ಸಾಗುವ ಮೂಲಕ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ. ಆ್ಯಕ್ಷನ್‌, ಕಾಮಿಡಿ, ಸಾಂಗ್‌, ಫೈಟ್‌, ಫ‌ನ್ನಿ ಡೈಲಾಗ್‌ … ಹೀಗೆ ಅಲ್ಲಲ್ಲಿ ಧುತ್ತನೆ ಬರುವ ಮೂಲಕ ಪ್ರೇಕ್ಷಕನ ಪಾಲಿಗೆ ಇದು “ಸ್ಪೆಷಲ್‌ ಮೀಲ್ಸ್‌’ ಇದ್ದಂತೆ. ಪುನೀತ್‌ ಅಭಿಮಾನಿಗಳಿಗಾಗಿಯೇ ಇಲ್ಲಿ ಒಂದಷ್ಟು ಡೈಲಾಗ್‌ಗಳಿವೆ. “ಓಂ ಸಿನಿಮಾನಾ ನಾವೇ ಪ್ರೊಡ್ನೂಸ್‌ ಮಾಡಿರೋದು, ಧಮ್‌ ಇಲ್ಲಿದೆ ಇಲ್ಲಿ ಬೇಡ, ನನಗೆ ಮತ್ತು ನಮ್ಮಣ್ಣಂಗೆ ವಯಸ್ಸೇ ಆಗಲ್ಲ, ಹೆಗಲ ಮೇಲಿರುವ ಸ್ಟಾರ್‌ ಡ್ನೂಟಿಯಲ್ಲಿರೋ, ಅಭಿಮಾನಿಗಳು ಕೊಟ್ಟಿರೋ ಸ್ಟಾರ್‌ ನಾವು ಇರೋವರೆಗೂ, ದುಡ್ಡು ಕೊಟ್ಟು ವೋಟು ಹಾಕಿಸಿಕೊಂಡಿರೋ ನಿಮಗೆ ಇಷ್ಟ್ ಇರ ಬೇಕಾದರೆ, ಜನರೇ ದುಡ್ಡುಕೊಟ್ಟು ವೋಟ್‌ ಹಾಕಿ ಗೆಲ್ಲಿಸಿರೋ ನಮಗೆ ಎಷ್ಟಿರಬೇಡ, ನನಗೆ ಹೌಸ್‌ ಫ‌ುಲ್‌ ನೋಡಿಯೇ ಅಭ್ಯಾಸ, ಕೋಟ್ಯಾಂತರ ಅಭಿಮಾನಿಗಳು ಆರಾಧಿಸಿರುವ ಬ್ಲಿಡ್‌ ಅದು, ತುಂಬಾ ಪ್ರೇಶಿಯಸ್‌… ಜೋಪಾನ …’ ಹೀಗೆ ಚಿತ್ರದಲ್ಲಿರುವ ಒಂದಷ್ಟು ಡೈಲಾಗ್‌ಗಳು ಮಜ ಕೊಡುತ್ತಾ ಸಾಗುತ್ತವೆ.

ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರುವವರು ಪುನೀತ್‌ ರಾಜ್‌ಕುಮಾರ್‌. ಪ್ರತಿ ದೃಶ್ಯದಲ್ಲೂ ಅವರ ಖದರ್‌, ಪವರ್‌, ಎನ ರ್ಜಿ ಇಷ್ಟವಾಗುತ್ತದೆ. ಹಾಡು, ಫೈಟ್‌ ಜೊತೆಗೆ ಗಂಭೀರ ದೃಶ್ಯದಲ್ಲಿ ಪುನೀತ್‌ ಮಿಂಚಿದ್ದಾರೆ.

ನಾಯಕಿ ಸಯ್ಯೇಶಾ ತೆರೆ ಮೇಲೆ ಮುದ್ದಾದ ಗೊಂಬೆ. ಉಳಿದಂತೆ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಪ್ರಕಾಶ್‌ ರೈ, ಅವಿನಾಶ್‌, ರಂಗಾಯಣ ರಘು, ಸಾಧು ಕೋಕಿಲ, ರಾಜೇಶ್‌ ನಟರಂಗ, ಧನಂಜಯ್‌, ಸಾಯಿಕುಮಾರ್‌, ದಿಗಂತ್‌, ತಾರಕ್‌, ಸೋನು ಗೌಡ, ರವಿಶಂಕರ್‌, ಅಚ್ಯುತ್‌ … ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳು ಸಿನಿಮಾದ ಜೋಶ್‌ ಹೆಚ್ಚಿಸಿವೆ.

 

ರವಿಪ್ರಕಾಶ್ ‌ರೈ

ಟಾಪ್ ನ್ಯೂಸ್

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.