ಶಾಲಾ ಪ್ರವೇಶಾತಿಯಲ್ಲಿ ಭಾರೀ ಕುಸಿತ
Team Udayavani, May 22, 2020, 9:50 AM IST
ಬೀಜಿಂಗ್: ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಬಂತು ಮಾಸ್ಕ್. ನೃತ್ಯ ತಂಡವೊಂದು ಮುಖಗವಸು ಧರಿಸಿ ಕಾರ್ಯಕ್ರಮ ನೀಡಲು ಸಿದ್ಧವಾಗಿರುವುದು.
ವಿಶ್ವಸಂಸ್ಥೆ: ಕೋವಿಡ್ ಮಹಾಮಾರಿ ವಿಶ್ವಾದ್ಯಂತ ಶಿಕ್ಷಣ ವ್ಯವಸ್ಥೆ ಮೇಲೂ ಬಲವಾದ ಪೆಟ್ಟು ಕೊಟ್ಟಿದೆ. ಅನೇಕ ರಾಷ್ಟ್ರಗಳಲ್ಲಿ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಮತ್ತು ಆರ್ಥಿಕ ಕುಸಿತ ಉಂಟಾಗಿರುವುದರಿಂದ ಶಾಲೆಗಳಿಗೆ ಮಕ್ಕಳ ಸೇರ್ಪಡೆ ಪ್ರಮಾಣ ನಾಲ್ಕು ದಶಕಗಳ ಹಿಂದಿನ ಮಟ್ಟಕ್ಕೆ ಜಾರಿದೆ.
ಕೋವಿಡ್ ಪ್ರತ್ಯಕ್ಷವಾಗಿ ವಿಶ್ವಾದ್ಯಂತ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡ ಬಳಿಕ ಶಿಕ್ಷಣ, ಆರೋಗ್ಯ ಮತ್ತು ಆದಾಯ ಮೂಲ ಕ್ಷೇತ್ರಗಳು ತೀವ್ರ ಕುಸಿತಕ್ಕೊಳಗಾಗಿವೆ ಎಂದು ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಕಾರ್ಯಕ್ರಮದ ನಿರ್ದೇಶಕ ಪೆಡ್ರೋ ಕೋನ್ಸಿಕಾವ್ ಹೇಳಿದ್ದಾರೆ.2020ರಲ್ಲಿ ವಿಶ್ವಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಬೃಹತ್ ಹಿನ್ನಡೆಯೊಂದಿಗೆ ಮಾನವ ಅಭಿವೃದ್ಧಿಯಲ್ಲಿ ತೀವ್ರ ಕುಸಿತ ಸಂಭವಿಸಲಿದೆ. ಹೆಚ್ಚಿನ ದೇಶಗಳಲ್ಲಿ ಶಾಲೆಗಳು ಮುಚ್ಚಿರುವುದು ಹಾಗೂ ತೀವ್ರ ಆರ್ಥಿಕ ಹಿಂಜರಿತ ಉಂಟಾಗಿರುವುದು ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
ಮೇ ಮಧ್ಯಭಾಗದ ಸ್ಥಿತಿಯಂತೆ ಆತ್ಮಹತ್ಯೆ, ಮಲೇರಿಯ, ರಸ್ತೆ ಅಪಘಾತಗಳು ಮತ್ತು ಎಚ್ಐವಿ/ಏಡ್ಸ್ನಂಥ ಸಾಮಾನ್ಯ ಕಾರಣಗಳಿಂದ ಸಂಭವಿಸುವ ದೈನಂದಿನ ಸಾವುಗಳಿಗಿಂತ ಕೋವಿಡ್ -19ರಿಂದ ಹೆಚ್ಚು ಸಾವುಗಳು ಸಂಭವಿಸುತ್ತಿವೆ.ಶಿಕ್ಷಣ ಒಂದು ಮಾನವ ಹಕ್ಕಾಗಿರುವುದರಿಂದ ಮತ್ತು ಯಾವುದೇ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ಹೊಂದಿರುವುದರಿಂದ ಶಾಲೆಗಳ ಮುಚ್ಚುಗಡೆಯಂಥ ಪರೋಕ್ಷ ಹಾನಿಗಳ ಕುರಿತಾಗಿಯೂ ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಕಾರ್ಯಕ್ರಮ ಚಿಂತಿತವಾಗಿದೆ.
ಸೋಂಕು ಆರಂಭವಾದ ಬಳಿಕ ಪ್ರಾಥಮಿಕ ಶಾಲೆಗಳಿಗೆ ಮಕ್ಕಳ ಸೇರ್ಪಡೆ 1980ಕ್ಕಿಂತ ಹಿಂದಿನ ಮಟ್ಟಕ್ಕೆ ಕುಸಿದಿದೆ. ವಿಶ್ವಾದ್ಯಂತ ಪ್ರತಿ ಹತ್ತು ಶಾಲೆಗಳಲ್ಲಿ 9 ಶಾಲೆಗಳು ಮುಚ್ಚಿವೆ. ಕುಗ್ರಾಮಗಳಲ್ಲಿರುವ ಅನೇಕ ಮಕ್ಕಳಿಕೆ ಕಲಿಯಲು ಸಾಧ್ಯವಾಗುತ್ತಿಲ್ಲ .
ಜಾಗತಿಕವಾಗಿ ಆರೋಗ್ಯ ವ್ಯವಸ್ಥೆ ಒತ್ತಡದಿಂದ ತತ್ತರಿಸಿರುವಾಗ ಮತ್ತು ರೋಗನಿರೋಧಕ ಲಸಿಕೆಗಳನ್ನು ನೀಡುವ ಪ್ರಮಾಣ ಕುಸಿದಿರುವಾಗ ಕೆಳ ಹಾಗೂ ಮಧ್ಯಮ ಆದಾಯ ಗುಂಪಿಗೆ ಸೇರಿದ ಮಕ್ಕಳಲ್ಲಿ ಮುಂದಿನ ಆರು ತಿಂಗಳ ಕಾಲ ವೈರಸ್ನಿಂದಾಗಿ ಪ್ರತಿದಿನ 6,000 ತಡೆಯಬಹುದಾದ ಸಾವುಗಳು ಸಂಭವಿಸಬಹುದು ಎಂದು ವರದಿಯೊಂದು ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!