ಕೋವಿಡ್ 19 ಸೋಂಕಿತರ ಸಂಪರ್ಕ ಪತ್ತೆ ಆ್ಯಪ್ ಗಳು ಎಷ್ಟು ಸುರಕ್ಷಿತ?


Team Udayavani, Aug 18, 2020, 6:44 PM IST

ಕೋವಿಡ್ 19 ಸೋಂಕಿತರ ಸಂಪರ್ಕ ಪತ್ತೆ ಆ್ಯಪ್ ಗಳು ಎಷ್ಟು ಸುರಕ್ಷಿತ?

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕೋವಿಡ್ 19 ಸೊಂಕಿನ ಈ ಕಾಲಘಟ್ಟದಲ್ಲಿ ಎಲ್ಲರಲ್ಲೂ ಒಂದೇ ಭಯ ಏನೆಂದರೆ ನಾವೆಲ್ಲಾದರೂ ಈ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆಯೇ ಎಂಬುದು.

ಒಂದುವೇಳೆ ಈ ರೀತಿಯಾಗಿ ವ್ಯಕ್ತಿಯೊಬ್ಬ ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾನೆಂದು ಆತನಿಗೆ ತಿಳಿದುಬಿಟ್ಟರೆ ಆ ವ್ಯಕ್ತಿಯು ತನ್ನನ್ನು ತಾನು ಇತರರ ಸಂಪರ್ಕದಿಂದ ದೂರವಿರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಆದರೆ ಈ ರೀತಿಯಾಗಿ ಕೋವಿಡ್ 19 ಸೋಂಕಿಗೆ ಒಳಗಾದ ವ್ಯಕ್ತಿಗಳು ತಮ್ಮ ಮನೆಯಲ್ಲೇ ಕ್ವಾರೆಂಟೈನ್ ನಲ್ಲಿರದೆ ಹೊರಗೆಲ್ಲಾ ತಿರುಗಾಡುತ್ತಿದ್ದರೆ, ತಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಈ ಸೊಂಕನ್ನು ಪುಕ್ಕಟೆಯಾಗಿ ಹರಡುವ ಅಪಾಯ ಇದ್ದೇ ಇರುತ್ತದೆ.

ಹೀಗಾಗಿ ನಾವು ಕೋವಿಡ್ 19 ಸೋಂಕಿನ ಅಪಾಯದಲ್ಲಿದ್ದೇವೆ ಎಂಬುದನ್ನು ನಮಗೇ ಸ್ವತಃ ತಿಳಿದುಕೊಳ್ಳಲು ಸಾಧ್ಯವಾಗುವಂತೆ ಟೆಕ್ ಕಂಪೆನಿಗಳು ಕೋವಿಡ್ 19 ಸೋಂಕಿನ ಅಪಾಯವನ್ನು ಪತ್ತೆ ಹಚ್ಚುವ ಮೊಬೈಲ್ ಅಪ್ಲಿಕೇಷನ್ ಗಳನ್ನು ತಯಾರಿಸಿ ಮೊಬೈಲ್ ಬಳಕೆದಾರರ ಉಪಯೋಗಕ್ಕೆ ಬಿಟ್ಟಿವೆ. ಇವುಗಳ ಮೂಲಕ ನಮ್ಮ ಸುತ್ತಮುತ್ತ ಕೋವಿಡ್ 19 ಸೋಂಕಿತರು ಇರುವ ಮಾಹಿತಿ ನಮಗೆ ಬೆರಳ ತುದಿಯಲ್ಲಿ ಲಭಿಸುತ್ತದೆ.

ತಂತ್ರಜ್ಞಾನ ಬಹಳವಾಗಿ ಮುಂದುವರೆದಿರುವ ಈ ಕಾಲದಲ್ಲಿ ಇದೊಂದು ಅತ್ಯಂತ ಉಪಯುಕ್ತವಾದ ವ್ಯವಸ್ಥೆಯಾಗಿದೆ. ಆದರೆ ಇದೇ ಸಂದರ್ಭದಲ್ಲಿ ಇವುಗಳ ವಿಶ್ವಾಸಾರ್ಹತೆಯ ಕುರಿತಾಗಿಯೂ ಕೆಲವೊಂದು ಪ್ರಶ್ನೆಗಳು ಏಳುತ್ತಿವೆ ಮತ್ತು ಇದು ನಮ್ಮ ಮಾಹಿತಿ ಮತ್ತು ಗೌಪ್ಯತೆಗೆ ಸಂಬಂಧಿಸಿದ ವಿಷಯಗಳದ್ದಾಗಿದೆ.

ಇಂತಹ ಸಾಫ್ಟ್ ವೇರ್ ಗಳು ಅವುಗಳ ರಚನಾ ಸ್ವರೂಪಕ್ಕೆ ಅನುಗುಣವಾಗಿ ಕೆಲವೊಂದು ಮಾಹಿತಿಗಳನ್ನು ಹೊರಗೆಡಹುದು ಅನಿವಾರ್ಯವಾಗಿರುತ್ತದೆ. ಮತ್ತು ಮಾಹಿತಿಗಳನ್ನು ಸಂಗ್ರಹಿಸಿ ಅವುಗಳನ್ನು ರಕ್ಷಿಸುವಲ್ಲಿ ಕೆಲವು ಸಾಫ್ಟ್ ವೇರ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ಕೋವಿಡ್ 19 ವಿಚಾರದಲ್ಲಿ ಹೆಚ್ಚಿನವರ ಕಾಳಜಿ ತಮ್ಮ ಮತ್ತು ತಮ್ಮವರ ಆರೋಗ್ಯ ರಕ್ಷಣೆಯ ವಿಚಾರ ಆಗಿರುವುದರಿಂದ ಅವರು ತಮ್ಮ ಮಾಹಿತಿ ಸುರಕ್ಷತೆಯ ಕುರಿತಾಗಿ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇನ್ನು ಕೆಲವರು ಈ ವಿಚಾರದಲ್ಲಿ ಬಹಳ ಪರ್ಫೆಕ್ಟಾಗಿ ಇರುತ್ತಾರೆ ಮತ್ತು ತಮ್ಮ ಮಾಹಿತಿ ಗೌಪ್ಯತೆಗೆ ಅವರು ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.

ಅಪಾಯಕಾರಿ ಪತ್ರಿಕೋದ್ಯಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಅಥವಾ ರಾಜಕೀಯವಾಗಿ ಪ್ರಕ್ಷುಬ್ಧ ಪ್ರದೇಶಗಳಿಗೆ ತೆರಳುವ ವ್ಯಕ್ತಿಗಳಲ್ಲಿ ಯಾರಾದರೂ https://surfshark.com/servers/india ನಂತಹ ವಿಪಿಎನ್ ಗಳನ್ನು ಬಳಸುತ್ತಿದ್ದಲ್ಲಿ ಈ ಮಾಹಿತಿ ಸುರಕ್ಷತೆಯ ವಿಚಾರದ ಕುರಿತಾಗಿ ಅವರಿಗೆ ಅರಿವದ್ದೇ ಇರುತ್ತದೆ.

ಮೊಬೈಲ್ ಬಳಕೆದಾರರು ತಮಗೆ ಅಗತ್ಯವಿಲ್ಲದಿರುವ ಅಪ್ಲಿಕೇಷನ್ ಗಳನ್ನು ತಮ್ಮ ಮೊಬೈಲ್ ಗಳಿಗೆ ಹಾಕಿಕೊಂಡಲ್ಲಿ ಅದು ಅಪಾಯಕಾರಿ ನಡೆಯೇ ಸರಿ. ಇನ್ನು ಕೆಲವರು ಯಾವುದೇ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೊದಲು ಅವುಗಳ ಸಾಚಾತನವನ್ನು ಖಚಿತಪಡಿಸಿಕೊಳ್ಳುತ್ತಾರೆ.

ಕೆಲವು ಅಪ್ಲಿಕೇಷನ್ ಗಳು ಬ್ಲೂಟೂತ್ ಮೂಲಕ ಸಂಭಾವ್ಯತೆಯ ತಪಾಸಣೆಯನ್ನು ಮಾತ್ರವೇ ನಡೆಸುತ್ತವೆ. ಇನ್ನು ಕೆಲವು ಆ್ಯಪ್ ಗಳು ಜಿಪಿಎಸ್ ಹಾಗೂ ಸೆಲ್ ಟವರ್ ಗಳ ಮೂಲಕ ಜಿಯೋ ಲೊಕೇಷನ್ ಗಳನ್ನು ಬಳಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವು ಆ್ಯಪ್ ಗಳು ಮಾಹಿತಿಗಳನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಶೇಖರಿಸಿಟ್ಟುಕೊಂಡರೆ ಇನ್ನು ಕೆಲವು ತಮ್ಮ ಆ್ಯಪ್ ಬಳಕೆದಾರರಿಗೆ ಸೆಂಟ್ರಲ್ ಡಾಟಾಬೇಸ್ ವ್ಯವಸ್ಥೆಯನ್ನು ರಚಿಸಿಕೊಟ್ಟಿರುತ್ತವೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.