ರಾಜ್ಯದ 18 ಜಿಲ್ಲೆಗಳಲ್ಲೂ ಕೋವಿಡ್‌ 19 ಅಬ್ಬರ


Team Udayavani, May 22, 2020, 7:21 AM IST

abbara

ಬೆಂಗಳೂರು: ಗುರುವಾರ ಒಂದೇ ದಿನ ರಾಜ್ಯದ 18 ಜಿಲ್ಲೆಗಳಲ್ಲಿಯೂ ಕೋವಿಡ್‌ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 147 ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 1,609ಕ್ಕೆ  ಏರಿಕೆಯಾಗಿದ್ದು, 996 ಸಕ್ರಿಯ ಪ್ರಕರಣಗಳಿವೆ. ಮಂಡ್ಯದಲ್ಲಿ ಮುಂಬೈನಿಂದ ಬಂದ ವಲಸೆ ಕಾರ್ಮಿಕರ ಸೋಂಕು ಪ್ರಕರಣಗಳು ನಿರಂತರ ಏರಿಕೆಯಾಗುತ್ತಿದ್ದು, ಗುರುವಾರ 33 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಂತೆಯೇ  ಮಹಾರಾಷ್ಟ್ರದ ವಿವಿಧ ನಗರದಿಂದ ಬಂದವರಲ್ಲಿ ಉಡುಪಿಯಲ್ಲಿ 21 ಮಂದಿ, ಹಾಸನದಲ್ಲಿ 11 ಮಂದಿ, ಬಳ್ಳಾರಿಯಲ್ಲಿ 11 ಮಂದಿ ಸೋಂಕಿತರಾದ ಹಿನ್ನೆಲೆ ಆಯಾ ಜಿಲ್ಲೆಗಳಲ್ಲಿ ಎರಡಂಕಿ ಪ್ರಕರಣಗಳು ವರದಿಯಾಗಿವೆ.

ದುಬೈನಿಂದ ಬಂದ 7 ಮಂದಿಗೆ ಸೋಂಕು: ದುಬೈನಲ್ಲಿ ಸಿಲುಕಿದ್ದ ಕನ್ನಡಿಗರನ್ನು ಇತ್ತೀಚೆಗೆ ವಿಶೇಷ ವಿಮಾನದಲ್ಲಿ ರಾಜ್ಯಕ್ಕೆ ಕರೆತರಲಾಗಿತ್ತು. ಈ ಪೈಕಿ ಗುರುವಾರ ದಕ್ಷಿಣ ಕನ್ನಡದಲ್ಲಿ 6 ಮಂದಿ ಹಾಗೂ ಉಡುಪಿಯಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟಾರೆ ಲಾಕ್‌ಡೌನ್‌ನಿಂದ ವಿದೇಶದಲ್ಲಿ ಸಿಲುಕಿ ವಂದೇ ಭಾರತ್‌ ಅಭಿಯಾನದಡಿ ಕರ್ನಾಟಕಕ್ಕೆ ಬಂದರಲ್ಲಿ ದಕ್ಷಿಣ ಕನ್ನಡದ 21 ಮಂದಿ, ಉಡುಪಿಯ ಆರು ಮಂದಿ, ಬೆಂಗಳೂರಿನ ಒಬ್ಬ ಸೇರಿ ಒಟ್ಟು 28  ಮಂದಿಗೆ ಸೋಂಕು ತಗುಲಿದಂತಾಗಿದೆ.

ಏಳು ಸಾವಿರಕ್ಕೂ ಹೆಚ್ಚು ಪರೀಕ್ಷೆ: ಗುರುವಾರ ರಾಜ್ಯದಲ್ಲಿ ಒಟ್ಟು 7,516 ಮಂದಿ ಶಂಕಿತರ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ 7,285 ಮಂದಿ ವರದಿ ನೆಗೆಟಿವ್‌, 143 ಮಂದಿ ವರದಿ ಪಾಸಿಟಿವ್‌ ಬಂದಿದ್ದು, ಬಾಕಿ  ವರದಿಗಳ ಫ‌ಲಿತಾಂಶ ಬರಬೇಕಿದೆ. ಒಟ್ಟಾರೆ ಇಲ್ಲಿಯವರೆಗೂ 1,71,484 ಮಂದಿ ಶಂಕಿತರ ವರದಿಗಳು ನೆಗೆಟಿವ್‌ ಬಂದಿದೆ. ಸದ್ಯ ರಾಜ್ಯದಲ್ಲಿ 46 ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿ ನಾಲ್ಕು  ಪ್ರಯೋಗಾಲಯಗಳಿಗೆ ಕೇಂದ್ರದಿಂದ ಅನುಮತಿ ಸಿಕ್ಕಿದೆ.

15 ಮಂದಿ ಗುಣಮುಖ: ಸೋಂಕಿತರ ಪೈಕಿ ಬಾಗಲಕೋಟೆಯಲ್ಲಿ 6 ಮಂದಿ, ದಾವಣಗೆರೆಯಲ್ಲಿ 5, ದಕ್ಷಿಣ ಕನ್ನಡದಲ್ಲಿ ಮೂವರು, ಮಂಡ್ಯದಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಒಟ್ಟಾರೆ ಗುಣಮುಖರಾದವರ ಸಂಖ್ಯೆ 571,  ಸಾವಿಗೀಡಾದವರು 41 ಮಂದಿ.

ಗುರುವಾರ ಜಿಲ್ಲಾವಾರು ಸೋಂಕಿತರು/ ಸೋಂಕಿನ ಹಿನ್ನೆಲೆ
* ಮಂಡ್ಯ- 33. ಮುಂಬೈನಿಂದ ಹಿಂದಿರುಗಿದ್ದ ಸೋಂಕಿತನ ಸಂಪರ್ಕದಿಂದ ನಾಲ್ಕು ಮಂದಿ, ಮಹಾರಾಷ್ಟ್ರ ವಿವಿಧ ನಗರಗಳ ಪ್ರಯಾಣ ಹಿನ್ನೆಲೆ 29 ಮಂದಿ.
* ಉಡುಪಿ – 26. ಮಹಾರಾಷ್ಟ್ರದ ವಿವಿಧ ನಗರಗಳ ಪ್ರಯಾಣ ಹಿನ್ನೆಲೆ 21 ಮಂದಿ, ತೆಲಂಗಾಣ ಪ್ರಯಾಣ ಹಿನ್ನೆಲೆ ನಾಲ್ಕು ಮಂದಿ, ಯುಎಇನಿಂದ ಭಾರತಕ್ಕೆ ಮರಳಿದ್ದ ಓರ್ವ.
* ಹಾಸನ – 13. ಎಲ್ಲಾ ಮುಂಬೈ ನಗರ ಪ್ರಯಾಣ ಹಿನ್ನೆಲೆ.
* ಬಳ್ಳಾರಿ – 11. ಎಲ್ಲಾ ಮುಂಬೈ ನಗರ ಪ್ರಯಾಣ ಹಿನ್ನೆಲೆ.
* ಬೆಳಗಾವಿ – 9, ಜಾರ್ಖಂಡ್‌ ಪ್ರಯಾಣ ಹಿನ್ನೆಲೆ ಮೂವರು, ಅಜ್ಮಿರ್‌ ಧಾರ್ಮಿಕ ಪ್ರವಾಸ ಇಬ್ಬರು, ಮಹಾರಾಷ್ಟ್ರದ ವಿವಿಧ ನಗರಗಳಿಂದ ನಾಲ್ಕು ಮಂದಿ.
* ಬೆಂಗಳೂರು – 6 . ಸೋಂಕಿತರ ಸಂಪರ್ಕದಿಂದ.
* ಉತ್ತರ ಕನ್ನಡ- 7. ಎಲ್ಲಾ ಮುಂಬೈ ಪ್ರಯಾಣ ಹಿನ್ನೆಲೆ.
* ದಕ್ಷಿಣ ಕನ್ನಡ – 6. ಎಲ್ಲಾ ಯುಎಇ ಪ್ರಯಾಣ ಹಿನ್ನೆಲೆ (ವಿದೇಶದಿಂದ ಮರಳಿದವರು).
* ಶಿವಮೊಗ್ಗ – 5 ತಮಿಳುನಾಡು ಪ್ರಯಾಣ ಹಿನ್ನೆಲೆ, ತೀವ್ರ ಉಸಿರಾಟ ಸಮಸ್ಯೆ ಹಿನ್ನೆಲೆ ಒಬ್ಬರು.
* ಧಾರವಾಡ- 5, ಮುಂಬೈ ಪ್ರಯಾಣ ಹಿನ್ನೆಲೆ 3 ಮಂದಿ, ತೆಲಂಗಾಣ ಪ್ರಯಾಣ ಹಿನ್ನೆಲೆ ಇಬ್ಬರು.
* ರಾಯಚೂರು -5 ಎಲ್ಲಾ ಮಹಾರಾಷ್ಟ್ರದ ವಿವಿಧ ನಗರಗಳ ಪ್ರಯಾಣ ಹಿನ್ನೆಲೆ.
* ದಾವಣಗೆರೆ – 3. ಸೋಂಕಿತರ ಸಂಪರ್ಕದಿಂದ ಇಬ್ಬರು, ಒಬ್ಬರ ಸೋಂಕಿನ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
* ಚಿಕ್ಕಬಳ್ಳಾಪುರ – 6. ಸೋಂಕಿತರ ಸಂಪರ್ಕ ಇಬ್ಬರು, ಮುಂಬೈ ಪ್ರಯಾಣ ಹಿನ್ನೆಲೆ ನಾಲ್ಕು.
* ತುಮಕೂರು- ಮೈಸೂರು – ವಿಜಯಪುರ ತಲಾ – 1. ಮುಂಬೈ ಪ್ರಯಾಣ ಹಿನ್ನೆಲೆ.
* ಗದಗ – 2. ಮುಂಬೈ ಓರ್ವ, ಛತ್ತೀಸ್‌ಘಡ ಪ್ರಯಾಣ ಹಿನ್ನೆಲೆ ಓರ್ವ.
* ಕೋಲಾರ – 2, ಮುಂಬೈ ಪ್ರಯಾಣ ಹಿನ್ನೆಲೆ ಒಬ್ಬ, ಸೋಂಕಿತರ ಸಂಪರ್ಕದಿಂದ ಒಬ್ಬ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.