ಕೋವಿಡ್ 19 ವೈರಸ್ ಗೆ ಸೆಪ್ಟಂಬರ್ ನಲ್ಲಿ ಸಿದ್ಧಗೊಳ್ಳಿದೆಯೇ ಔಷಧಿ? ತಜ್ಞರು ಹೇಳುವುದೇನು?
Team Udayavani, Apr 14, 2020, 12:02 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಂಡನ್: ಜಗತ್ತನ್ನೇ ಕಂಗೆಡಿಸಿರುವ ಅಗೋಚರ ವೈರಾಣು ಕೋವಿಡ್ 19ಗೆ ಸದ್ಯಕ್ಕಂತೂ ಯಾವುದೇ ಸಿದ್ಧ ಔಷಧವಿಲ್ಲ. ಮನುಷ್ಯನಲ್ಲಿರುವ ಪ್ರತಿರೋಧಕ ಶಕ್ತಿ ಮತ್ತು ಸ್ವಲ್ಪ ಮಟ್ಟಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರವೇ ಕೋವಿಡ್ ವೈರಸ್ ಗೆ ಪ್ರತಿರೋಧ ಒಡ್ಡಲು ಸಾಧ್ಯ ಎನ್ನುವುದು ಗೊತ್ತಾಗಿದೆ.
ಆದರೆ ಈ ಸಾರ್ಸ್ ಮಾದರಿಯ ಭೀಕರ ಸೋಂಕಿಗೆ ಸದ್ಯಕ್ಕೆ ವಿಶ್ವಾದ್ಯಂತ ಔಷಧ ಕಂಡುಹಿಡಿಯಲು ಸುಮಾರು 30 ಪ್ರಾಜೆಕ್ಟ್ ಗಳು ಜಾರಿಯಲ್ಲಿವೆ. ಮುಂಬರುವ ಸೆಪ್ಟಂಬರ್ ವೇಳೆಗೆ ಈ ಮಹಾಮಾರಿ ವೈರಸ್ ಅನ್ನು ಮಣಿಸುವ ಔಷಧಿ ಖಂಡಿತ ಸಿದ್ಧವಾಗಲಿದೆ ಎನ್ನುತ್ತಿದ್ದಾರೆ ಆಕ್ಸ್ ಪರ್ಡ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಕ್ಸಿನಾಲಜಿ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಸಾರಾ ಗಿಲ್ಬರ್ಟ್ ಅವರು.
ಈ ನಿಟ್ಟಿನಲ್ಲಿ ಸಿದ್ಧಗೊಂಡಿರುವ ಕೆಲವೊಂದು ಔಷಧಿಗಳ ಕ್ಲಿನಿಕಲ್ ಟ್ರಯಲ್ ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಸಾರಾ ಅವರು ಹೇಳಿದ್ದಾರೆ. ಮತ್ತು ಇದನ್ನು ಆದ್ಯತೆಯ ಮೇರೆಗೆ ಮುಗಿಸುವ ಇಚ್ಛೆಯನ್ನೂ ಸಹ ಇವರು ವ್ಯಕ್ತಪಡಿಸಿದ್ದು ಈ ಮೂಲಕ ಮಾರಕ ಮಹಾಮಾರಿಯನ್ನು ಮಣಿಸುವ ಔಷಧಿ ಶೀಘ್ರವೇ ವಿಶ್ವಾದ್ಯಂತ ಕೋವಿಡ್ ಸೋಂಕಿತ ರೋಗಿಗಳಿಗೆ ಸಿಗುವಂತಾಗಬೇಕೆಂಬುದು ಇವರೆಲ್ಲರ ಉದ್ದೇಶವಾಗಿದೆ.
ಯುಕೆ ಔಷಧ ನಿಯಂತ್ರಕ ಮತ್ತು ನೈತಿಕ ಪರಿಶೀಲಕರಿಂದ ಈಗಾಗಲೇ ಸಮ್ಮತಿಯನ್ನು ಪಡೆದುಕೊಂಡಿರುವ ChAdOxl nCOV-19 ಎಂಬ ಔಷಧಿಯನ್ನು ತಮ್ಮ ಮೇಲೆ ಪರೀಕ್ಷಿಸಿಕೊಳ್ಳಲು ಈಗಾಗಲೇ 18 ರಿಂದ 55 ವರ್ಷ ಪ್ರಾಯದ 510 ಸ್ವಯಂಸೇವಕರು ಸಿದ್ಧಗೊಂಡಿದ್ದು ಇವರ ಮೇಲೆ ಈ ಔಷಧಿಯ ಪರೀಕ್ಷೆ ಶೀಘ್ರವೇ ನಡೆಯಲಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ