ಪರೀಕ್ಷೆಗಳ ಒಡಲಲ್ಲಿದೆ ವೈರಸ್‌ನ ವೇಗದ ಲೆಕ್ಕ


Team Udayavani, Jun 30, 2020, 6:15 AM IST

ಪರೀಕ್ಷೆಗಳ ಒಡಲಲ್ಲಿದೆ ವೈರಸ್‌ನ ವೇಗದ ಲೆಕ್ಕ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ದೇಶದ ಕೆಲವು ರಾಜ್ಯಗಳಲ್ಲಿ ಕೆಲ ದಿನಗಳಿಂದ ಟೆಸ್ಟ್‌ ಪಾಸಿಟಿವಿಟಿ ದರ ಏರುತ್ತಲೇ ಇದೆ. ಟಿಪಿಆರ್‌ ಹೆಚ್ಚಾದಷ್ಟೂ ಅಪಾಯ ಅಧಿಕ ಎಂದೇ ಅರ್ಥ. ಪರಿಸ್ಥಿತಿ ಹೀಗಿದ್ದರೂ ಕೆಲವು ರಾಜ್ಯಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಪರೀಕ್ಷೆಗಳು ನಡೆಯದೇ ಇರುವುದು ಆತಂಕಕ್ಕೆ ಎಡೆಮಾಡಿಕೊಡುತ್ತಿದೆ. ಇದೆಲ್ಲದರ ನಡುವೆಯೂ ದೇಶದಲ್ಲಿ ಸರಾಸರಿ ಕೋವಿಡ್‌-19 ಮರಣ ಪ್ರಮಾಣ ಕಡಿಮೆಯೇ ಇದೆ ಎನ್ನುವುದು ತುಸು ನೆಮ್ಮದಿಯ ವಿಷಯವಾದರೂ, ನಿತ್ಯ ಸೋಂಕಿತರ ಸಂಖ್ಯೆ ತಗ್ಗದಿದ್ದರೆ ಪರಿಸ್ಥಿತಿ ಬಿಗಡಾಯಿಸಬಹುದು…

ಕೋವಿಡ್‌ ತೀವ್ರತೆಯನ್ನು ತಿಳಿಸುವ ಟಿಪಿಆರ್‌
ಜೂನ್‌ 27ರ ವೇಳೆಗೆ ದೇಶದಲ್ಲಿ ಅತಿಹೆಚ್ಚು ಟೆಸ್ಟ್‌ ಪಾಸಿಟಿವಿಟಿ ದರ (ಟಿಪಿಆರ್‌) ವರದಿಯಾದ ರಾಜ್ಯವೆಂದರೆ ಮಹಾರಾಷ್ಟ್ರ. ಮಹಾರಾಷ್ಟ್ರದಲ್ಲೀಗ ಟಿಪಿಆರ್‌ 18 ಪ್ರತಿಶತದಷ್ಟಿದೆ. ಅಂದರೆ, ಪ್ರತಿ ನೂರು ಕೋವಿಡ್‌-19 ಪರೀಕ್ಷೆಗಳಲ್ಲಿ 18 ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ ಎಂದರ್ಥ. ಟೆಸ್ಟ್‌ ಪಾಸಿಟಿವಿಟಿ ದರವು, ಒಂದು ಪ್ರದೇಶ, ನಗರ, ರಾಜ್ಯ ಅಥವಾ ದೇಶವೊಂದರಲ್ಲಿ ಕೊರೊನಾ ತೀವ್ರತೆ ಎಷ್ಟಿದೆ ಎನ್ನುವುದನ್ನು ತಿಳಿಸುತ್ತದೆ.

ರಾಜ್ಯಗಳ ದೃಷ್ಟಿಯಿಂದ ನೋಡಿದರೆ ಮಹಾರಾಷ್ಟ್ರ ನಂತರದ ಸ್ಥಾನದಲ್ಲೀಗ ತೆಲಂಗಾಣ ಇದ್ದು, 3ನೇ ಸ್ಥಾನದಲ್ಲಿ ದೆಹಲಿ ಇದೆ. ತೆಲಂಗಾಣದಲ್ಲಿ ಇಷ್ಟು ದಿನ ಸರಿಯಾಗಿ ಟೆಸ್ಟಿಂಗ್‌ ಮಾಡದ ಕಾರಣ ಜನರಲ್ಲಿ ಸೋಂಕು ಹೆಚ್ಚಾಗಿ ಹರಡಿದೆ ಎನ್ನುತ್ತಾರೆ ತಜ್ಞರು. ಈ ಕಾರಣಕ್ಕಾಗಿಯೇ, ಅಲ್ಲೀಗ ಪರೀಕ್ಷೆಗೊಳಪಡುತ್ತಿರುವ 100 ಜನರಲ್ಲಿ 17 ಸೋಂಕಿತರು ಪತ್ತೆಯಾಗುತ್ತಿದ್ದಾರೆ.


ದಕ್ಷಿಣ ರಾಜ್ಯಗಳ ಸ್ಥಿತಿ ಹೇಗಿದೆ?
ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದೇಶದ ಎರಡನೇ ಹಾಟ್‌ಸ್ಪಾಟ್‌ ಆಗಿರುವ ತಮಿಳುನಾಡಿನಲ್ಲಿ ಕೋವಿಡ್ 19 ಆರ್ಭಟ ಅಧಿಕವಿದೆ. ಜೂನ್‌ 28ರ ಮಧ್ಯಾಹ್ನದವರೆಗೆ ತಮಿಳುನಾಡಲ್ಲಿ 35 ಸಾವಿರಕ್ಕೂ ಹೆಚ್ಚು  ಸಕ್ರಿಯ ಪ್ರಕರಣಗಳಿವೆಯಾದರೂ, ಆ ರಾಜ್ಯದಲ್ಲಿ ಚೇತರಿಕೆ ಪ್ರಮಾಣದಲ್ಲೂ ಉತ್ತಮ ಸುಧಾರಣೆ ಕಂಡುಬರುತ್ತಿದೆ. ಈವರೆಗೂ ಒಟ್ಟು ಸೋಂಕಿತರಲ್ಲಿ (82,275) ಶೇ.55 ಜನ ಗುಣಮುಖರಾಗಿದ್ದಾರೆ. ಅಂದರೆ, 45 ಸಾವಿರಕ್ಕೂ ಅಧಿಕ ಜನರು ಚೇತರಿಸಿಕೊಂಡಿದ್ದಾರೆ.

ಇನ್ನು ಕೇರಳದಲ್ಲಿ ಈಗಲೂ ಮೃತ್ಯುದರ ಕಡಿಮೆಯೇ ಇದ್ದು, ಇದುವರೆಗೂ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು 23 ಜನರು ಮೃತಪಟ್ಟಿದ್ದಾರೆ. ಇನ್ನೊಂದೆಡೆ, ಕರ್ನಾಟಕ ಹಾಗೂ ಆಂಧ್ರದಲ್ಲಿ ಒಂದೇ ದಿನ ಒಟ್ಟಾರೆ ಪ್ರಕರಣಗಳ ಸಂಖ್ಯೆ 10 ಸಾವಿರ ದಾಟಿತು. ಸಕ್ರಿಯ ಪ್ರಕರಣಗಳಲ್ಲಿ ಆಂಧ್ರ ನಮಗಿಂತ ಮುಂದೆ ಇದೆಯಾದರೂ, ಅಲ್ಲಿ ಟೆಸ್ಟಿಂಗ್‌ಗಳ ಪ್ರಮಾಣವೂ ಅಧಿಕವಿದೆ. ಭಾನುವಾರದ ವೇಳೆಗೆ ಆಂಧ್ರಪ್ರದೇಶ ನಮಗಿಂತ 2 ಲಕ್ಷ 46 ಸಾವಿರಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಿದೆ.


ನೆರೆ ರಾಷ್ಟ್ರಗಳಲ್ಲಿ ಕೋವಿಡ್‌
ನೆರೆಯ ಆಫ್ಘಾನಿಸ್ಥಾನವು ಕೋವಿಡ್ 19 ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ 44ನೇ ಸ್ಥಾನದಲ್ಲಿದೆಯಾದರೂ ಕೆಲ ದಿನಗಳಿಂದ ಅಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣಲಾರಂಭಿಸಿದೆ. 3.89 ಕೋಟಿ ಜನಸಂಖ್ಯೆಯ ಆ ದೇಶದಲ್ಲಿ ಇದುವರೆಗೂ 31 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇಷ್ಟಿದ್ದರೂ ಟೆಸ್ಟಿಂಗ್‌ ಸಂಖ್ಯೆ ಮಾತ್ರ ಅಲ್ಲಿ ಕೇವಲ 71 ಸಾವಿರದಷ್ಟಿದೆ.

ಈಗ ಅಫ್ಘಾನಿಸ್ಥಾನದಲ್ಲಿ ಪ್ರತಿ ನೂರು ಪರೀಕ್ಷೆಗಳಲ್ಲಿ 44 ಸೋಂಕಿತರು ಪತ್ತೆಯಾಗಲಾರಂಭಿಸಿದ್ದಾರೆ. ಇನ್ನೊಂದೆಡೆ ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ಕೋವಿಡ್ 19 ಅಷ್ಟಾಗಿ ಬಾಧಿಸಿಲ್ಲ, ಇದುವರೆಗೂ ಅಲ್ಲಿ 2037 ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ 1678 ಜನ ಚೇತರಿಸಿಕೊಂಡಿದ್ದಾರೆ. ಇನ್ನು, 7 ಲಕ್ಷ ಜನಸಂಖ್ಯೆಯ ಭೂತಾನ್‌ನಲ್ಲಿ  ಇದುವರೆಗೂ 76 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲೂ 44 ಜನ ಚೇತರಿಸಿಕೊಂಡಿದ್ದಾರೆ.


ಬ್ರೆಜಿಲ್‌: 100 ಪರೀಕ್ಷೆಗಳಲ್ಲಿ 45 ಸೋಂಕಿತರು!
ಜಗತ್ತಿನ ಎರಡನೇ ಹಾಟ್‌ಸ್ಪಾಟ್‌ ಆಗಿರುವ ಲ್ಯಾಟಿನ್‌ ಅಮೆರಿಕನ್‌ ರಾಷ್ಟ್ರ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಮಿತಿಮೀರಿ ಏರುತ್ತಿದೆ. ಸೋಂಕು ಯಾವ ಪ್ರಮಾಣದಲ್ಲಿ ಹರಡಿದೆ ಎನ್ನುವುದಕ್ಕೆ ಅಲ್ಲಿನ ಟೆಸ್ಟ್‌ ಪಾಸಿಟಿವಿಟಿ ರೇಟ್‌ ಸಾಕ್ಷಿಯಾಗಿ ನಿಲ್ಲುತ್ತಿದೆ. ಜೂನ್‌ 28ರ ವೇಳೆಗೆ ಬ್ರೆಜಿಲ್‌ನ ಟಿಪಿಆರ್‌ 44.58 ಪ್ರತಿಶತ ದಾಖಲಾಗಿದೆ. ಅಂದರೆ, ಪ್ರತಿ 100 ಪರೀಕ್ಷೆಗಳಲ್ಲಿ 45 ಜನ ಸೋಂಕಿತರು ಪತ್ತೆಯಾಗುತ್ತಿದ್ದಾರೆ!

ಈಗ 11 ನೇ ಹಾಟ್‌ಸ್ಪಾಟ್‌ ಆಗಿರುವ ಮೆಕ್ಸಿಕೋದಲ್ಲೂ ಟಿಪಿಆರ್‌ ಅಧಿಕ ದಾಖಲಾಗುತ್ತಿದ್ದು, ಪ್ರತಿ ನೂರು ಪರೀಕ್ಷೆಗಳಲ್ಲಿ 39 ಸೋಂಕಿತರು ಪತ್ತೆಯಾಗುತ್ತಿದ್ದಾರೆ. ದೊಡ್ಡಣ್ಣ ಅಮೆರಿಕದಲ್ಲಿ ಈಗಲೂ ಅತೀ ಹೆಚ್ಚಿನ ಸೋಂಕಿತರಿದ್ದಾರಾದರೂ, ಅಲ್ಲಿನ ಟಿಪಿಆರ್‌ 8.09 ಪ್ರತಿಶತದಷ್ಟಿದೆ. ಅಮೆರಿಕ ಇದುವರೆಗೂ 3 ಕೋಟಿ 25 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಿದೆ. ಈ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಟಿಪಿಆರ್‌ 6.54 ಪ್ರತಿಶತದಷ್ಟಿದ್ದರೆ, ರಷ್ಯಾದಲ್ಲಿ 3.38 ಪ್ರತಿಶತ ತಲುಪಿದೆ.

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

1-qewqwqewq

Netizens; 10ನೇ ತರಗತಿ ಪರೀಕ್ಷೆ ಟಾಪರ್‌ ಟ್ರೋಲ್‌: ನೆಟ್ಟಿಗರಿಂದ ತರಾಟೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.