ಜಪಾನ್‌ : ಥೀಮ್‌ ಪಾರ್ಕಿನಲ್ಲಿ ಕಿರುಚಾಟ ನಿಷೇಧ

ಆರೋಗ್ಯದ ಸುರಕ್ಷೆಗಾಗಿ ಕೆಲವು ಕಟ್ಟುನಿಟ್ಟನ ನಿಯಮಗಳನ್ನು ರೂಪಿಸಲಾಗಿದೆ.

Team Udayavani, Jun 1, 2020, 2:43 PM IST

ಜಪಾನ್‌ : ಥೀಮ್‌ ಪಾರ್ಕಿನಲ್ಲಿ ಕಿರುಚಾಟ ನಿಷೇಧ

ಸಾಂದರ್ಭಿಕ ಚಿತ್ರ

ಟೋಕಿಯೊ: ಸುಮಾರು ಒಂದೂವರೆ ತಿಂಗಳ ತುರ್ತು ಪರಿಸ್ಥಿತಿಯಿಂದ ಬಸವಳಿದಿದ್ದ ಜನರು ಈಗ ಮನೆಯಿಂದ ಹೊರಬಂದು ಥೀಮ್‌ ಪಾರ್ಕ್‌, ಅಮ್ಯೂಸ್‌ಮೆಂಟ್‌ ಪಾರ್ಕ್‌ ಎಂದೆಲ್ಲ ಸುತ್ತಾಡುತ್ತಿದ್ದಾರೆ. ಆದರೆ ಇಲ್ಲಿ ಮನರಂಜನೆಯ ಚಿತ್ರಣ ಮಾತ್ರ ತುಸು ಬದಲಾಗಿದೆ. ಸಾಮಾಜಿಕ ಅಂತರ ಪಾಲನೆ ಒಂದೆಡೆಯಾದರೆ ಥೀಮ್‌ ಪಾರ್ಕ್‌ಗಳಲ್ಲಿ ಸಾಮಾನ್ಯವಾಗಿ ಮಾಡುವ ಮೋಜು ಮಸ್ತಿಗಳಿಗೆ ಕತ್ತರಿ ಬಿದ್ದಿದೆ. ರೋಲರ್‌ ಕೋಸ್ಟರ್‌, ಜಯಂಟ್‌ ವೀಲ್‌ಗ‌ಳಲ್ಲಿ ಕುಳಿತಾಗ ಥ್ರಿಲ್‌ನಿಂದ ಕಿರುಚುವುದು, ಅರಚುವುದು ಇಂಥದ್ದಕ್ಕೆಲ್ಲ ಅವಕಾಶವಿಲ್ಲ. ಈ ವಾರ ತುರ್ತು ಪರಿಸ್ಥಿತಿ ತೆರವಾದ ಬಳಿಕ ಬಹುತೇಕ ಥೀಮ್‌ ಪಾರ್ಕ್‌ಗಳನ್ನು ತೆರೆಯಲಾಗಿದೆ. ಆದರೆ ಇಲ್ಲಿಗೆ ಬರುವವರ ಮತ್ತು ಇಲ್ಲಿನ ಸಿಬಂದಿಗಳ ಆರೋಗ್ಯದ ಸುರಕ್ಷೆಗಾಗಿ ಕೆಲವು ಕಟ್ಟುನಿಟ್ಟನ ನಿಯಮಗಳನ್ನು ರೂಪಿಸಲಾಗಿದೆ.

ರೋಲರ್‌ ಕೋಸ್ಟರ್‌, ಜಯಂಟ್‌ ವೀಲ್‌ ಸೇರಿದಂತೆ ಎಲ್ಲ ಥ್ರಿಲ್ಲಿಂಗ್‌ ಮನರಂಜನೆಯ ಸಾಧನಗಳನ್ನು ಪ್ರತಿಯೊಂದು ಪಾಳಿ ಮುಗಿದ ಸ್ಯಾನಿಟೈಸ್‌ ಮಾಡಲಾಗುತ್ತದೆ. ಪಾರ್ಕ್‌ ಒಳಗೆ ಪ್ರವೇಶಿಸುವಾಗಲೇ ಟೆಂಪರೇಚರ್‌ ಚೆಕ್ಕಿಂಗ್‌, ಮಾಸ್ಕ್, ಗ್ಲೌಸ್‌ ಇತ್ಯಾದಿ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಸಾಮಾಜಿಕ ಅಂತರ ಪಾಲಿಸಬೇಕಾಗಿರುವುದರಿಂದ ಒಂದು ಸೀಟಿನಲ್ಲಿ ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿರುವುದರಿಂದ ಸಹಜವಾಗಿಯೇ ದರಗಳೆಲ್ಲ ಏರಿಕೆಯಾಗಿವೆ. ಇದೇ ವೇಳೆ ಗುಂಪುಗೂಡದೆ ಆಡುವ ಕೆಲವು ಥ್ರಿಲ್ಲಿಂಗ್‌ ಆಟಗಳನ್ನು ಹೊಸದಾಗಿ ಸೇರಿಸಿಕೊಂಡು ಆಕರ್ಷಣೆ ಹೆಚ್ಚಿಸಲಾಗಿದೆ. ಜನರಲ್ಲೂ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿರುವುದರಿಂದ ಇಂಥ ಆಟಗಳನ್ನು ಇಷ್ಟಪಡುತ್ತಿದ್ದಾರೆ.

1 ಮೀಟರ್‌ ಅಂತರ
ಮಾತಿನಲ್ಲಿ ಮನರಂಜನೆ ನೀಡುವವರು, ಹಾಂಟೆಡ್‌ ಹೌಸ್‌ ಸಿಬಂದಿ ಇಂಥವರಿಗೆಲ್ಲ ಮಾಸ್ಕ್ ಧರಿಸಿ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಲ್ಲಿ ಕನಿಷ್ಠ 1 ಮೀಟರ್‌ ಅಂತರದ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲಾಗಿದೆ.

ಕಸ್ಟಮರ್‌ ಸರ್ವಿಸ್‌ ಬದಲಾವಣೆ
ಥೀಮ್‌ ಪಾರ್ಕ್‌ಗಳ ಗ್ರಾಹಕ ಸೇವೆಯಲ್ಲೂ ಭಾರೀ ಬದಲಾವಣೆಗಳಾಗಿವೆ. ಕಸ್ಟಮರ್‌ ಕೇರ್‌ ಕೇಂದ್ರದಲ್ಲಿರುವವರು ಮಾಸ್ಕ್ ಧರಿಸಿರುವುದರಿಂದ ಮಾಮೂಲು ಸುಂದರವಾದ ನಗೆಯೊಂದಿಗೆ ಗ್ರಾಹಕರಿಗೆ ಸ್ವಾಗತ ಕೋರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ಕಣ್ಣಿನಲ್ಲೇ ಸ್ವಾಗತಕೋರುವ ತರಬೇತಿ ನೀಡಲಾಗಿದೆ. ಜತೆಗೆ ಗ್ರಾಹಕರ ಜತೆಗೆ ಸಂವಹನ ನಡೆಸುವ ಹೊಸ ವಿಧಾನವನ್ನು ಕಲಿಸಿಕೊಡಲಾಗಿದೆ. ಇವೆಲ್ಲ ಸರಕಾರಿ ಮಾರ್ಗದರ್ಶನದಲ್ಲಿ ರೂಪಿಸಲಾದ ನಿಯಮಗಳು.

ಇವುಗಳಲ್ಲದೆ ಕೆಲವು ಥೀಮ್‌ಪಾರ್ಕ್‌ಗಳು ತಮ್ಮದೇ ಆದ ಕೆಲವು ನಿಯಮಗಳನ್ನು ಸೇರಿಸಿಕೊಂಡಿವೆ. ಕೆಲವು ಥೀಮ್‌ಪಾರ್ಕ್‌ಗಳಲ್ಲಿ ಪ್ರವೇಶ ದ್ವಾರದಲ್ಲೇ ಗ್ರಾಹಕರಿಗೆ ಸ್ಯಾನಿಟೈಸರ್‌ ಬಾಟಲಿ, ಮಾಸ್ಕ್, ಗ್ಲೌಸ್‌ ಮಾರುವ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಹೊರಾಂಗಣ ಗೇಮ್‌ಗಳಿಗೆ ಮಾತ್ರ ಅವಕಾಶ ಕೊಡಲಾಗಿದೆ.

ನಿಯಮಗಳ ಪಾಲನೆ
ತುರ್ತ ಪರಿಸ್ಥಿತಿಯಿಂದ ಜನರು ಬಿಡುಗಡೆಗೊಂಡರೂ ಕೂಡ ಲಾಕ್‌ಡೌನ್‌ನ ನಿಯಮಗಳನ್ನು ಮರೆಯುವಂತಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಹಿಂದಿನಷ್ಟೇ ಈಗಲೂ ಅಗತ್ಯ. ಮನೋರಂಜನೆಗೆ ತೆರಳುವೆಲ್ಲೆಡೆಗಳಲ್ಲಿ ಆರೋಗ್ಯ ತಪಾಸಣೆಗಳನ್ನು ಮಾಡಲಾಗುತ್ತದೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.