ಕೋವಿಡ್ : ಪ್ರವಾಸೋದ್ಯಮಕ್ಕೆ ಶೇ. 80ರಷ್ಟು ಹೊಡೆತ


Team Udayavani, May 8, 2020, 3:20 PM IST

Tourisim

ಸಾಂದರ್ಭಿಕ ಚಿತ್ರ

ಮ್ಯಾಡ್ರಿಡ್‌: ಕೋವಿಡ್ ಕಾರಣದಿಂದ ಈ ವರ್ಷ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಶೇ. 60ರಿಂದ 80ರಷ್ಟು ಇಳಿಕೆಯಾಗಬಹುದು ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಅಭಿಪ್ರಾಯಪಟ್ಟಿದೆ.  ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಗತ್ತಿನಾದ್ಯಂತ ಪ್ರಯಾಣ ನಿರ್ಬಂಧಗಳು, ವಿಮಾನ ನಿಲ್ದಾಣಗಳ ಚಟುವಟಿಕೆಗಳ ಸ್ಥಗಿತ ಹಾಗೂ ಗಡಿಗಳನ್ನೂ ಮುಚ್ಚಲಾಗಿದೆ. ಇಂಥ ಸಂಕಷ್ಟ 1950ರ ಬಳಿಕ ಬಂದಿರಲಿಲ್ಲ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಶೇ. 22ರಷ್ಟು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಮಾರ್ಚ್‌ ಒಂದರಲ್ಲೇ ಶೇ. 57ರಷ್ಟು ಕುಸಿಯಿತು. ಈ ಪೈಕಿ ಏಷ್ಯಾ ಹಾಗೂ ಯುರೋಪ್‌ ಖಂಡಗಳಿಗೆ ಅತ್ಯಂತ ಹೆಚ್ಚು ನಷ್ಟವಾಗಿದೆ ಎಂದು ತಿಳಿಸಲಾಗಿದೆ.

ಇಡೀ ಜಗತ್ತು ಎಂದೂ ಕಾಣದಂಥ ಆರೋಗ್ಯ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಪ್ರವಾಸೋದ್ಯಮಕ್ಕೆ ಇದರಿಂದ ಭಾರೀ ಹೊಡೆತ ಬಿದ್ದಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಸಂಸ್ಥೆಯ ಸೆಕ್ರೆಟರಿ ಜನರಲ್‌ ಜೂರಬ್‌ ಪೊಲೊಲಿಕಶ್ವಿ‌ಲಿ ಹೇಳಿದ್ದಾರೆ. ನಾಗರಿಕ ವಿಮಾನ ಯಾನ ಸಂಸ್ಥೆಗಳು, ವೈಭವೋಪೇತ ಹಡಗುಗಳ ಆಯೋಜಕರು, ಹೋಟೆಲ್‌ ಸಮೂಹಗಳು ಹಾಗೂ ಪ್ರವಾಸ ಆಯೋಜಕರು ಬಹಳ ನಷ್ಟವನ್ನು ಅನುಭವಿಸುವಂತಾಗಿದೆ. ಅಂತಾರಾಷ್ಟ್ರೀಯ ಪ್ರವಾಸೋ ದ್ಯಮ ಕ್ಷೇತ್ರ ಶೇ. 3-4ರಷ್ಟು ಅಭಿವೃದ್ಧಿ ಕಾಣಬಹುದು ಎಂದು ಈ ಮೊದಲು ಅಂದಾಜಿ ಸಲಾಗಿತ್ತಾದರೂ ಪ್ರಸ್ತುತ ಶೇ. 20-30ರಷ್ಟು ಕುಸಿತದ ಭೀತಿ ಎದುರಾಗಿದೆ. ಒಂದುವೇಳೆ ಜುಲೈ ವೇಳೆಗೆ ಪರಿಸ್ಥಿತಿ ಸರಿಯಾದರೆ ಶೇ. 58ರಷ್ಟು ಕುಸಿತಕ್ಕೆ ಒಳಗಾಗಬಹುದು ಎನ್ನಲಾಗಿದೆ.

ಕೋವಿಡ್ ವೈರಸ್‌ಗೆ ಪ್ರೊಟೀನ್‌ ಕಾರಣ?
ವಾಷಿಂಗ್ಟನ್‌: ಜಗತ್ತಿನಾದ್ಯಂತ ಕೋವಿಡ್ ವೈರಸ್‌ ಇಷ್ಟೊಂದು ವೇಗವಾಗಿ ಹರಡಲು ಅದರ ಸಂರಚನೆಯೇ ಕಾರಣ ಎಂದು ಅಮೆರಿಕದ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಇಲ್ಲಿನ ಕಾರ್ನೆಲ್‌ ಯೂನಿವರ್ಸಿಟಿಯ ವಿಜ್ಞಾನಿಗಳ ತಂಡ ಈ ಅಧ್ಯಯನ ನಡೆಸಿದ್ದು, ಕೋವಿಡ್ ವೈರಸ್‌ನ ಹರಡುವಿಕೆಗೆ ಕಡಿವಾಣ ಹಾಕುವ ಸಾಧ್ಯತೆ ಇದೆ. ವೈರಸ್‌ ಹರಡುವ ಕಾರಣ ಮತ್ತು ಮಾರ್ಗದ ಕುರಿತು ವಿಜ್ಞಾನಿಗಳು ಅಧ್ಯಯನಶೀಲರಾಗಿದ್ದು , ಸೋಂಕಿನ  ಮೂಲೋತ್ಪಾಟನೆಗೆ ಪರಿಣಾಮಕಾರಿ ಔಷಧವನ್ನು ಸಿದ್ಧಪಡಿಸಲು ಈ ಅಧ್ಯಯನ ನೆರವಾಗಲಿದೆ.

ಕೋವಿಡ್ ಕುರಿತಾದ ಈ ಅಧ್ಯಯನ ವರದಿಯನ್ನು ಜರ್ನಲ್‌ ಆಫ್ ಮಾಲಿಕ್ಯುಲಾರ್‌ ಬಯಾಲಜಿ’ಯಲ್ಲಿ ಪ್ರಕಟಿಸಲಾಗಿದೆ. ಒಂದು ವಿಧದ ಪ್ರೊಟೀನ್‌ನಿಂದ ರೂಪುಗೊಂಡಿರುವ ಈ ವೈರಸ್‌ನಲ್ಲಿ ಕುಣಿಕೆಯಾಕಾರದ ರಚನೆಗಳಿವೆ. ಇವುಗಳ ನೆರವಿನಿಂದಲೇ ಈ ವೈರಸ್‌ ಮನುಷ್ಯನ ಜೀವಕೋಶ ಪ್ರವೇಶಿಸುತ್ತದೆ ಎಂದು ಅಧ್ಯಯನ ಹೇಳಿದೆ. ಇಂತಹ ಭಿನ್ನ ಸಂರಚನೆಯಿಂದಾಗಿಯೇ ಈ ವೈರಸ್‌ ಹೆಚ್ಚು ವೇಗವಾಗಿ ಪ್ರಸರಣವಾಗುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೊರೊನಾ ಸೊಂಕಿಗೆ ಇದುವರೆಗೆ 38,49,332 ಮಂದಿಗೆ ಸೋಂಕಿದೆ. ಅವರಲ್ಲಿ 2,65,937 ಮಂದಿ ಸಾವನ್ನಪ್ಪಿದ್ದು, 13,17,109 ಮಂದಿ ಚೇತರಿಸಿಕೊಂಡಿದ್ದಾರೆ.

ಬ್ರಿಟಿಷ್‌ ಪ್ರಜೆಗಳನ್ನು ಕರೆತರಲು ಮತ್ತಷ್ಟು ವಿಮಾನ
ಬ್ರಿಟನ್‌ : ಭಾರತದಲ್ಲಿ ಲಾಕ್‌ಡೌನ್‌ನಿಂದ ಸಿಲುಕಿರುವ ಬ್ರಿಟಿಷ್‌ ಪ್ರಜೆಗಳನ್ನು ದೇಶಕ್ಕೆ ವಾಪಸು ಕರೆಸಿಕೊಳ್ಳಲು ಐದು ಹೆಚ್ಚುವರಿ ವಿಮಾನಗಳನ್ನು ಒದಗಿಸುವ ಕುರಿತು ಬ್ರಿಟನ್‌ ಸರಕಾರ ಪ್ರಕಟಿಸಿದೆ. ಮುಂದಿನ ವಾರ ಅಮೃತಸರ ಹಾಗೂ ಅಹಮದಾಬಾದ್‌ ನಿಂದ ಹೊರಡುವ ವಿಮಾನಗಳೂ ಸೇರಿದಂತೆ ಒಟ್ಟು 64 ವಿಮಾನಗಳು ಈ ಕಾರ್ಯದಲ್ಲಿ ತೊಡಗಿದಂತಾಗಲಿದ್ದು, ಒಟ್ಟು 16, 500 ಮಂದಿಯನ್ನು ಕರೆದೊಯ್ದಂತಾಗಲಿದೆ ಎಂದು ಪ್ರಕಟನೆೆ ತಿಳಿಸಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.