ಕೋವಿಡ್ ಮಣಿಸಲು ಆಯುರ್ವೇದ ಔಷಧ ಪ್ರಯೋಗ ಶೀಘ್ರ ಆರಂಭ
4 ರೀತಿಯ ಗಿಡಮೂಲಿಕೆಗಳ ಬಳಕೆ ; ಅಶ್ವಗಂಧ, ಜೇಷ್ಠಮಧು, ಗುಡುಚಿ - ಹಿಪ್ಪಲಿ ಬಳಕೆ
Team Udayavani, May 15, 2020, 6:07 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕೊವಿಡ್ ವೈರಸ್ ನಿಯಂತ್ರಣಕ್ಕೆ ಭಾರತ ಸಾಂಪ್ರದಾಯಿಕ ಹಾದಿ ತುಳಿದಿದ್ದು, 4 ರೀತಿಯ ಆಯುರ್ವೇದ ಔಷಧಗಳ ಪ್ರಯೋಗ ಸೂತ್ರಕ್ಕೆ ಆಯುಷ್ ಸಚಿವಾಲಯ ಅನುಮತಿ ನೀಡಿದ್ದು ಇನ್ನೊಂದು ವಾರದೊಳಗೆ ಪ್ರಯೋಗಗಳು ಆರಂಭಗೊಳ್ಳಲಿವೆ.
‘ಸ್ಥಳೀಯತೆ ಧ್ವನಿಯಾಗೋಣ’ ಎಂದು ಮೋದಿ ಅವರು ಕರೆಕೊಟ್ಟ ಬೆನ್ನಲ್ಲೇ, ಆಯುಷ್ ಈ ಮಾಹಿತಿ ಪ್ರಕಟಿಸಿದೆ. ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೊಪತಿ ಒಳಗೊಂಡ ಚಿಕಿತ್ಸಾ ಪ್ರಯೋಗದ ಮೂಲಕ ಕೋವಿಡ್ ವೈರಸ್ ನಿರ್ಮೂಲನೆಗೆ ಆಯುಷ್ ಪಣತೊಟ್ಟಿದೆ ಎಂದು ಸಚಿವ ಶ್ರೀಪಾದ್ ವೈ. ನಾಯಕ್ ಟ್ವೀಟ್ನಲ್ಲಿ ಹೇಳಿದ್ದಾರೆ.
4 ಗಿಡಮೂಲಿಕೆಗಳು: ಆಯುಷ್ನ ಈ ಔಷಧ ಪ್ರಯೋಗವು ಪ್ರಮುಖವಾಗಿ 4 ರೀತಿಯ ಗಿಡಮೂಲಿಕೆಗಳನ್ನು ಒಳಗೊಂಡಿರುತ್ತದೆ. ಅಶ್ವಗಂಧ, ಯಷ್ಟಿಮಧು, ಗುಡುಚಿ – ಹಿಪ್ಪಲಿ ಹಾಗೂ ಬಹು ಗಿಡಮೂಲಿಕೆಗಳನ್ನು ಬೆರೆಸಿ, ಪ್ರಯೋಗ ಪರೀಕ್ಷೆ ವೇಳೆ ಬಳಸಲಾಗುತ್ತದೆ.
‘ಈಗಾಗಲೇ ಆಯುರ್ವೇದಿಕ್ ಔಷಧಗಳು ಬೇರೆ ಬೇರೆ ರೋಗಗಳಿಗೆ, ಪರಿಣಾಮಕಾರಿ ಫಲಿತಾಂಶ ನೀಡುತ್ತಾ ಬಂದಿವೆ. ಕೋವಿಡ್ ಮಣಿಸುವಲ್ಲಿಯೂ ಇವು ಯಶಸ್ವಿಯಾಗುತ್ತವೆ ಎನ್ನುವ ನಂಬಿಕೆ ಇದೆ’ ಎಂದು ಹೇಳಿದ್ದಾರೆ. ದೇಶದ ವಿವಿಧ ಸಂಸ್ಥೆಗಳ ಉನ್ನತ ಪರಿಣತರು ಈ ಪರೀಕ್ಷಾ ತಂಡದಲ್ಲಿ ಭಾಗಿಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ