ಜಗತ್ತಿನಲ್ಲಿ ಈಗಿರುವುದು ಹೆಚ್ಚು ತೀವ್ರತೆಯ ಸಾಂಕ್ರಾಮಿಕ ಕೋವಿಡ್‌

ಮನುಷ್ಯರಿಗೆ ದೇಹದ ಮೇಲೆ ದಾಳಿ ಮಾಡಬಹುದಾದ 8 ಮಾದರಿಯ ಕೋವಿಡ್‌ ತಳಿಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ

Team Udayavani, Jul 4, 2020, 9:55 AM IST

ಜಗತ್ತಿನಲ್ಲಿ ಈಗಿರುವುದು ಹೆಚ್ಚು ತೀವ್ರತೆಯ ಸಾಂಕ್ರಾಮಿಕ ಕೋವಿಡ್‌

ಪಾಲ್‌ಝಿಯಾತ್‌: ಸಾಮಾಜಿಕ ಅಂತರ ಗರಿಷ್ಠ ಮಟ್ಟದಲ್ಲಿ ಕಾಪಾಡಲು ಅನುಕೂಲವಾಗುವಂತೆ ಹೊಸ ಹೊಟೇಲ್‌ ಒಂದನ್ನು ಆರಂಭಿಸಲಾಗಿದ್ದು, ಅದರ ವಿನ್ಯಾಸ ಹೀಗಿದೆ..

ವಾಷಿಂಗ್ಟನ್‌: ಜಗತ್ತಿನಲ್ಲಿ ಈಗ ವ್ಯಾಪಕವಾಗಿ ಹಬ್ಬುತ್ತಿರುವುದು ಆರಂಭದಲ್ಲಿ ಹಬ್ಬಿದ ಕೋವಿಡ್‌ ಸೋಂಕಲ್ಲ; ಬದಲಾಗಿ ಈಗ ಹೆಚ್ಚು ತೀವ್ರತೆಯ, ಸಾಂಕ್ರಾಮಿಕವಾದ ಕೋವಿಡ್‌ನ‌ ರೂಪಾಂತರಿತ ತಳಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸೆಲ್‌ ಹೆಸರಿನ ನಿಯತಕಾಲಿಕೆಯಲ್ಲಿ ಕೋವಿಡ್‌ನ‌ ತಳಿಯ ಬಗ್ಗೆ ಬರೆಯಲಾಗಿದೆ. ಇದಕ್ಕೆ ಡಿ614ಜಿ ಎಂದು ಹೆಸರಿಡಲಾಗಿದ್ದು, ಲ್ಯಾಬೊರೇಟರಿ ಸ್ಥಿತಿಯಲ್ಲಿ ಹೆಚ್ಚು ಸಾಂಕ್ರಾಮಿಕವಾಗಿದ್ದುದು ಕಂಡು ಬಂದಿದೆ. ಕೋವಿಡ್‌ ತಳಿ ಡಿ614ಜಿ ಕಳೆದ ಎಪ್ರಿಲ್‌ನಲ್ಲಿಯೇ ಸಂಶೋಧಕರ ಗಮನಕ್ಕೆ ಬಂದಿದ್ದು, ಇದು ಪುನರಾವರ್ತಿತ ಮಾದರಿಯಾಗಿದೆ ಎಂದು ಹೇಳಲಾಗಿದೆ. ಅಮೆರಿಕದ ಲಾಸ್‌ ಆಲ್ಮೋಸ ನ್ಯಾಷನಲ್‌ ಲ್ಯಾಬೋರೇಟರಿಯಲ್ಲಿ ಈ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಆರಂಭದಲ್ಲಿ ಕೋವಿಡ್‌ನ‌ ಸಾಂಪ್ರದಾಯಿಕ ತಳಿ ಹಬ್ಬಲು ಶುರುಮಾಡಿತ್ತು, ಡಿ614ಜಿ ಹಬ್ಬಲು ಶುರುಮಾಡಿದ ಬಳಿಕ ಅದೇ ವ್ಯಾಪಕವಾಗಿ ಹಬ್ಬಿತು ಎಂದು ಸಂಶೋಧಕರು ಹೇಳಿದ್ದಾರೆ. ಇದೂ ಕೂಡ ಸಣ್ಣದಾಗಿದ್ದು, ಮಾನವ ಕೋಶಕ್ಕೆ ಸೇರಿದ ಕೂಡಲೇ ಇದರ ಪ್ರೊಟೀನ್‌ಗಳು ಚಾಚಿಕೊಂಡು ದ್ವಿಗುಣಗೊಳ್ಳಲು ಆರಂಭವಾಗುತ್ತದೆ ಎಂದು ಹೇಳಲಾಗಿದೆ. ಡಿ614ಜಿ ಆರಂಭದಲ್ಲಿ ಹಳೆ ವೈರಸ್‌ನ್ನು ಮೀರಿಸುವಂತೆ ಹಬ್ಬಿತು. ಜಗತ್ತಿನ ಎಲ್ಲ ಕಡೆಗಳಲ್ಲಿ ಜನಸಂಖ್ಯೆಯ ಮೇಲೆ ಇದು ಪರಿಣಾಮ ಬೀರಿದ್ದು ಕಂಡುಬಂದಿದೆ.

ವಿಜ್ಞಾನಿಗಳ ಪ್ರಕಾರ, ಕೋವಿಡ್‌ನ‌ ಹೊಸ ತಳಿ ಮಾನವ ದೇಹ ಹೊಕ್ಕಿದ ಬಳಿಕ ವ್ಯಾಪಕವಾಗಿ ವೃದ್ಧಿಯಾಗುತ್ತದೆ. ಅಲ್ಲದೇ ಇದು ಶ್ವಾಸಕೋಶವನ್ನು ಬಹುವಾಗಿ ಆಕ್ರಮಿಸುತ್ತದೆ. ದೇಹದ ಮೇಲ್ಭಾಗದಲ್ಲೇ ಹೆಚ್ಚು ವ್ಯಾಪಿಸುವುದರಿಂದ ಜನರಿಗೂ ಬಹುಬೇಗನೆ ಹರಡುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಹಂತದಲ್ಲಿ ಡಿ614ಜಿ ಹೆಚ್ಚು ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆ ಎಂದೆನಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದರೊಂದಿಗೆ ಕೋವಿಡ್‌ ಬೆಳವಣಿಗೆಯ ಹಂತಗಳ ಬಗ್ಗೆ ಹಲವು ದತ್ತಾಂಶಗಳನ್ನು ವಿಜ್ಞಾನಿಗಳು ಸಂಗ್ರಹಿಸಿದ್ದಾರೆ. ಜಗತ್ತಿನ ವಿವಿಧ ಪ್ರದೇಶಗಳಲ್ಲಿ, ಜನಸಮುದಾಯದಲ್ಲಿ ಹಬ್ಬಿದ ಸೋಂಕಿನ ಮಾದರಿ ಮತ್ತು ರೀತಿಯನ್ನು ಗಮನಿಸಿಕೊಂಡು ಬೆಳವಣಿಗೆಯಾದ್ದನ್ನು ತಿಳಿಯುವ ಪ್ರಯತ್ನ ಸಾಗಿದೆ. ಡಿ614ಜಿ ಕಂಡ ಬಳಿಕ ಅತಿ ತ್ವರಿತ ರೀತಿಯಲ್ಲಿ ಅದು ಸಮುದಾಯವನ್ನು ಆಕ್ರಮಿಸಿದ್ದು, ಜಗತ್ತಿನ ಪ್ರತಿ ಪ್ರದೇಶದಲ್ಲೂ ಹೀಗೇ ನಡೆದಿರುವುದು ಪತ್ತೆಯಾಗಿದೆ. ರಾಷ್ಟ್ರ, ಉಪರಾಷ್ಟ್ರ, ನಗರಗಳಲ್ಲೂ ಇದರ ಹಬ್ಬುವಿಕೆ ಪ್ರಮಾಣ ಮತ್ತು ರೀತಿ ಸಾಮಾನ್ಯವಾಗಿದೆ.

ಜಗತ್ತಿನಲ್ಲಿ ಕೋವಿಡ್‌ ಹೇಗೆ ಹರಡಿತು ಎಂಬುದನ್ನು ತಿಳಿಯಲು ಈಗ ಹಲವು ಅನುಕ್ರಮಣಿಕೆಗಳು ಸಿದ್ಧವಿವೆ. ಅಲ್ಲದೇ ಯಾವ ಮಾದರಿಯ ವೈರಸ್‌ ತೀವ್ರವಾಗಿ ಹಬ್ಬಿತು ಎಂಬುದನ್ನೂ ತಿಳಿಯಬಹುದು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.