ಲೆಬನಾನ್‌: ಆತಿಥ್ಯೋದ್ಯಮ ಮುಳುಗುತ್ತಿದೆಯೇ?


Team Udayavani, May 8, 2020, 5:06 PM IST

ಲೆಬನಾನ್‌: ಆತಿಥ್ಯೋದ್ಯಮ ಮುಳುಗುತ್ತಿದೆಯೇ?

ಸಾಂದರ್ಭಿಕ ಚಿತ್ರ

ಲೆಬನಾನ್‌: ಕೋವಿಡ್‌-19 ಜಗತ್ತಿನಾದ್ಯಂತ ಹಲವು ಉದ್ಯಮಗಳನ್ನು ಸಂಕಷ್ಟದಲ್ಲಿಟ್ಟಿವೆ. ಇನ್ನು ಕೆಲವು ಉದ್ಯಮಗಳು ಮತ್ತು ಕ್ಷೇತ್ರಗಳನ್ನು ಮರು ರೂಪುಗೊಳಿಸುತ್ತಿದೆ. ವಿಶೇಷವಾಗಿ ಆತಿಥ್ಯೋದ್ಯಮ ಯಾವ ರೀತಿ ಪುನರ್‌ ರೂಪ ಪಡೆಯಬಹುದು ಎಂಬುದು ತಕ್ಷಣಕ್ಕೆ ಗೋಚರಿಸುತ್ತಿಲ್ಲ.

ಹೆಚ್ಚಾಗಿ ಹೋಟೆಲ್‌ಗ‌ಳು, ಪ್ರವಾಸಿ ತಾಣಗಳೂ ಜನಸಂದಣಿ ಪ್ರದೇಶಗಳು. ಹಾಗಾಗಿಯೇ ಅವು ಒಂದು ಬಗೆಯಲ್ಲಿ ಸೋಂಕು ಹರಡಲು ಹೆಚ್ಚಿಗೆ ಅವಕಾಶ ಕೊಡುವ ಕೇಂದ್ರಗಳಾಗಿಯೂ ಈಗ ಪರಿಗಣಿತವಾಗಿರುವುದು. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಭಾರತವೂ ಸೇರಿದಂತೆ ಹಲವು ದೇಶಗಳು ಲಾಕ್‌ಡೌನ್‌ ನಿಯಮ ಸಡಿಲಿಕೆ ಮಾಡಿದರೂ ಹೋಟೆಲ್‌ಗ‌ಳಿಗೆ, ಪ್ರವಾಸಿ ತಾಣಗಳ ಕಾರ್ಯ ನಿರ್ವಹಣೆಗೆ ಇನ್ನೂ ನಿಷೇದ ಮುಂದುವರಿಸಿವೆ.

ಇದೇ ಈಗ ಚರ್ಚೆಗೀಡಾಗುತ್ತಿರುವುದು. ಲೆಬನಾನ್‌ ನಂಥ ಪ್ರದೇಶಗಳಲ್ಲಿ ಇಂದು ಹೋಟೆಲ್‌ ಉದ್ಯಮವು ತೀರಾ ಸಂಕಷ್ಟದಲ್ಲಿದೆ. ಇದುವರೆಗಿನ ಯಾವ ಆರ್ಥಿಕ ಕುಸಿತವೂ ಇಂಥದೊಂದು ಸ್ಥಿತಿ ನಿರ್ಮಿಸಿರಲಿಲ್ಲ. ಈ ಬಾರಿಯ ಪರಿಸ್ಥಿತಿಯೇ ತೀರಾ ಭಿನ್ನವಾದುದು. ಈ ಹೊತ್ತು ಹೊಂದಿಕೊಳ್ಳುವುದು ಹೊರತುಪಡಿಸಿದಂತೆ ಬೇರೆ ಯಾವುದಕ್ಕೂ ಸೂಕ್ತವಲ್ಲ ಎಂಬುದು ಸ್ಥಳೀಯ ಉದ್ಯಮಿಯೊಬ್ಬರ ಅಭಿಪ್ರಾಯ. ಅಲ್‌ಜಜೀರಾ ಈ ಕುರಿತು ವರದಿಯೊಂದನ್ನು ಪ್ರಕಟಿಸಿದ್ದು, ಅದರ ಪ್ರಕಾರ ಇಡೀ ದೇಶ ಇದುವರೆಗೆ ಕಾಣದಂಥ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಲಾಕ್‌ಡೌನ್‌ ಆ ಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸಿದೆ.

ಹಲವಾರು ರೆಸ್ಟೋರೆಂಟ್‌ಗಳು ಪಾರ್ಸೆಲ್‌ ಮೂಲಕ ಹಾಗೂ ಮನೆಗಳಿಗೆ ಆಹಾರ ವಿತರಣೆಯ ಪ್ರಯತ್ನವನ್ನೂ ನಡೆಸಿವೆ. ಎತೆಗೆ ಕೆಲವು ಹೋಟೆಲ್‌ಗ‌ಳು ಕೇವಲ ರಾತ್ರಿಯ ಸೇವೆಗೇ ನಿಯೋಜಿತ ವಾದವೂ ಸಹ ಈಗ ಹಗಲು ಸೇವೆಯನ್ನೂ ಆರಂಭಿಸಿವೆ. ಒಟ್ಟೂ ಖರ್ಚು ನಿರ್ವಹಣೆಗಾಗಿ ಆಹಾರ ವೈವಿಧ್ಯದ ಪಟ್ಟಿಯಲ್ಲೂ ಕೆಲವನ್ನು ಕಡಿತಗೊಳಿಸಲಾಗಿದೆ. ಹೊರಗಿನಿಂದ ಬರುವಂಥ (ಆಮದು) ಆಹಾರ ವಸ್ತುಗಳ ಬೆಲೆ ದುಬಾರಿಯಾದ ಕಾರಣ, ಅವುಗಳಿಗೆೆ ಸ್ಥಳೀಯವಾಗಿಯೇ ಪರ್ಯಾಯ ಮೂಲಗಳನ್ನು ಕಂಡುಕೊಳ್ಳಲಾಗಿದೆ. ಆ ಮೂಲಕ ಖರ್ಚನ್ನು ಮಿತಗೊಳಿಸಲು ಯೋಚಿಸಲಾಗುತ್ತಿದೆ. ಶೇ. 60 ರಷ್ಟು ಸಂಪನ್ಮೂಲಗಳಿಗೆ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿವೆ.

ಬೀರಟ್‌ ನಗರದ ದೃಶ್ಯವನ್ನೇ ತೆಗೆದುಕೊಳ್ಳುವುದಾದರೆ, ಸದಾ ಕಾರುಗಳಿಂದ ತುಂಬಿರುತ್ತಿದ್ದ ನಗರ. ಈಗಿನ್ನೂ ಸಹಜ ಸ್ಥಿತಿಗೆ ಮರಳಲು ಯತ್ನಿಸುತ್ತಿದೆ. ರಸ್ತೆಗಳೆಲ್ಲಾ ಕಾರುಗಳಿಂದ, ಜನರಿಂದ ತುಂಬಿ ತುಳುಕುವುದನ್ನು ನಿರೀಕ್ಷಿಸಲಾಗುತ್ತಿದೆ.  ಮಾರ್ಚ್‌ 15ರಿಂದಲೇ ಆಂಶಿಕ ಲಾಕ್‌ಡೌನ್‌ ಜಾರಿಯಾದ ಕೂಡಲೇ ಎಲ್ಲ ರೆಸ್ಟೋರೆಂಟ್‌ಗಳು ಸರ್ವಿಸ್‌ ವಲಯವನ್ನು ಮುಚ್ಚಿದವು. ಈಗ ಹಲವು ರೆಸ್ಟೋರೆಂಟ್‌ಗಳು ಪುನರಾರಂಭ ಮಾಡುವುದರ ಬಗ್ಗೆಯೇ ಯೋಚಿಸುತ್ತಿವೆ, ಅದಕ್ಕಾಗಿಯೇ ಹರಸಾಹಸ ಪಡುತ್ತಿವೆ. ಇನ್ನು ಕೆಲವು ಶಾಶ್ವತವಾಗಿ ಮುಚ್ಚುವ ಹಂತದಲ್ಲಿವೆ ಎಂಬುದುಉದ್ಯಮವಲಯದ ಅಭಿಪ್ರಾಯ.

ಲೆಬನಾನ್‌ನಲ್ಲಿ ಅಕ್ಟೋಬರ್‌ನಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡವು. ಆ ಸಂದರ್ಭದಲ್ಲೇ ಉಂಟಾದ ಪರಿಸ್ಥಿತಿಯಿಂದ ಆರಂಭವಾದವು. ಅಂದಿನಿಂದ ಇಂದಿನವರೆಗೆ 800 ಕ್ಕೂ ಹೆಚ್ಚು ಹೋಟೆಲ್‌ಗ‌ಳು ಮುಚ್ಚಿವೆ. ಅಕ್ಟೋಬರ್‌ನಿಂದ ಜನವರಿವರೆಗೆ ಸುಮಾರು 25 ಸಾವಿರ ಮಂದಿ ಉದ್ಯೋಗ ಕಳೆದುಕೊಂಡರು. ಸುಮಾರು 1. 50 ಲಕ್ಷ ಮಂದಿಗೆ ಉದ್ಯೋಗ ನೀಡಿರುವ ಈ ವಲಯದಲ್ಲಿ ಇನ್ನಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಕಡಿಮೆ ಲಾಭದ ಪ್ರಶ್ನೆ ಬಿಟ್ಟು ಬಿಡಬೇಕು. ಹೋಟೆಲ್‌ ಉದ್ಯಮದಲ್ಲಿ ಹೆಚ್ಚು ವಹಿವಾಟು ನಡೆದರೆ, ಸ್ವಲ್ಪ ಲಾಭ ಮಾಡಿಕೊಳ್ಳಬಹುದೇ ಹೊರತು, ಸ್ವಲ್ಪ ವ್ಯವಹಾರ ಮಾಡಿ ಲಾಭ ಮಾಡಿಕೊಳ್ಳಲು ಆಗದು. ಅದೇ ನಮ್ಮನ್ನು ಮುಳುಗಿಸುತ್ತಿದೆ ಎನ್ನುತ್ತಾರೆ ಸ್ಥಳೀಯ ಉದ್ಯಮಿಗಳು.

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.