ಹೊಸ ಕೋವಿಡ್‌ 19: ಯುರೋಪ್‌ ಮೂಲದ್ದು !

ಚೀನದಿಂದ ವೈರಸ್‌ನ ಜೀನೋಮ್‌ ಡೇಟಾ ಬಿಡುಗಡೆ

Team Udayavani, Jun 20, 2020, 12:40 PM IST

ಹೊಸ ಕೋವಿಡ್‌ 19: ಯುರೋಪ್‌ ಮೂಲದ್ದು !

ರೋಮ್‌: ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರನ್ನು ಹೊಂದಿರುವ ಇಟಲಿಯಲ್ಲಿ ವೃದ್ಧರೊಬ್ಬರನ್ನು ಅವರ ಮನೆಯಲ್ಲೇ ಪರೀಕ್ಷಿಸುತ್ತಿರುವ ವೈದ್ಯರು.

ಬೀಜಿಂಗ್‌: ಇತ್ತೀಚೆಗೆ ಬೀಜಿಂಗ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಹೊಸ ಕೊರೊನಾ ವೈರಸ್‌ನ ಮೂಲದ ಬಗ್ಗೆ ಅಂಕಿ – ಅಂಶ ಬಿಡುಗಡೆ ಮಾಡಿದೆ. ಪ್ರಾಥಮಿಕ ಅಧ್ಯಯನಗಳ ಆಧಾರದ ಮೇಲೆ ಚೀನ ಅಧಿಕಾರಿಗಳು ಶುಕ್ರವಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಹೊಸ ಕೋವಿಡ್‌ -19ನ ವಂಶವಾಹಿಯು ಯುರೋಪಿಯನ್‌ ಮೂಲದ್ದು ಎಂದು ಗುರುತಿಸಲಾಗಿದೆ ಎಂದಿದ್ದಾರೆ.

ದೇಶದ ರಾಜಧಾನಿಯಲ್ಲಿ ಹೊಸ ಕೋವಿಡ್‌ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೇಗನೆ ದತ್ತಾಂಶವನ್ನು ಸಾರ್ವಜನಿಕರಿಗೆ ತಿಳಿಯ ಪಡಿ ಸಬೇಕಾದ ಒತ್ತಡದಲ್ಲಿದ್ದ ಚೀನವು ಇದೀಗ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದೆ ಎನ್ನಲಾಗಿದೆ. ಚೀನದ ನ್ಯಾಷನಲ್‌ ಮೈಕ್ರೋಬಯಾಲಜಿ ಡಾಟಾ ಸೆಂಟರ್‌ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಜೀನೋಮ್‌ ಸೀಕ್ವೆನ್ಸಿಂಗ್‌ ಡೇಟಾ ವಿವರಗಳನ್ನು ಜೂನ್‌ 11ರಂದು ಸಂಗ್ರಹಿಸಲಾದ ಮೂರು ಮಾದರಿ (ಎರಡು ಮಾನವ ಮೂಲ ಮತ್ತು ಒಂದು ಪರಿಸರ ಮೂಲ)ಗಳ ದಂತ್ತಾಂಶಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.

ಜೂ. 11ರಂದು ಬೀಜಿಂಗ್‌ನಲ್ಲಿ ಮೊದಲ ಹೊಸ ಸ್ಥಳೀಯ ಕೋವಿಡ್‌ -19 ಪ್ರಕರಣ ಪತ್ತೆಯಾಗಿತ್ತು. ಅನಂತರದ ಎಂಟು ದಿನಗಳಲ್ಲಿ ಸುಮಾರು 183 ಪ್ರಕರಣಗಳು ನಗರದಲ್ಲಿ ವರದಿಯಾಗಿವೆ. ಇದು ನಗರದ ನೈಋತ್ಯದಲ್ಲಿರುವ ಕ್ಸಿನ್‌ಫಾಡಿಯದ ಸಗಟು ಆಹಾರ ಮಾರುಕಟ್ಟೆ ಕೇಂದ್ರದ ಮೂಲಕ ಹರಡಿದ ಪ್ರಕರಣಗಳು ಎನ್ನಲಾಗಿವೆ. ಪ್ರಾಥಮಿಕ ಜೀನೋಮಿಕ್‌ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನ ಫಲಿತಾಂಶಗಳ ಪ್ರಕಾರ, ವೈರಸ್‌ ಯುರೋಪಿನಿಂದ ಬಂದಿದೆ, ಆದರೆ ಇದು ಪ್ರಸ್ತುತ ಯುರೋಪಿನಲ್ಲಿ ಹರಡಿರುವ ವೈರಸ್‌ಗಿಂತ ಅದು ಭಿನ್ನವಾಗಿದೆ ಎಂದು ಚೀನದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ (ಸಿಡಿಸಿ) ಅಧಿಕಾರಿ ಜಾಂಗ್‌ ಯೋಂಗ್‌ ಶುಕ್ರವಾರ ಪ್ರಕಟಿಸಿದ ಲೇಖನದಲ್ಲಿ ತಿಳಿಸಿದ್ದಾರೆ. ಆದರೆ ಬೀಜಿಂಗ್‌ನಲ್ಲಿ ಕಾಣಿಸಿಕೊಂಡ ವೈರಸ್‌ ಪ್ರಸ್ತುತ ಯುರೋಪಿನಲ್ಲಿ ಹರಡುವ ವೈರಸ್‌ಗಿಂತ ಹಳೆಯದು ಎಂದಿದ್ದಾರೆ.

ಚೀನಾದಲ್ಲಿ ವೈರಸ್‌ ಹೇಗೆ ಬಂದಿತು ಎಂಬುದಕ್ಕೆ ಹಲವಾರು ಸಾಧ್ಯತೆಗಳಿವೆ ಎಂದು ಜಾಂಗ್‌ ಹೇಳಿದರು. ಆಮದು ಮಾಡಿದ ಹೆಪ್ಪುಗಟ್ಟಿದ ಆಹಾರ ಉತ್ಪನ್ನಗಳಲ್ಲಿ ವೈರಸ್‌ ಮರೆಯಾಗಿದ್ದರಬಹುದು ಅಥವಾ ಕ್ಸಿನ್‌ಫಾಡಿಯದ ಸಗಟು ಮಾರುಕಟ್ಟೆ ತೇವಾಂಶವುಳ್ಳ ವಾತಾವರಣದಿಂದ ಕೂಡಿದ್ದು ಅಲ್ಲಿ ವೈರಸ್‌ ಸುಪ್ತವಾಗಿ ಅಡಗಿರುವ ಸಾಧ್ಯತೆ ಇದೆ. ಆ ಪರಿಸರವನ್ನು ಸೋಂಕುರಹಿತ ಅಥವಾ ಕ್ರಿಮಿನಾಶಕಗಳನ್ನು ಬಳಸಿ ಸ್ವತ್ಛಗೊಳಿಸಿರಲಿಲ್ಲ ಎಂದು ಜಾಂಗ್‌ ಸೆಂಟ್ರಲ್‌ ಕಮಿಷನ್‌ ಫಾರ್‌ಡಿಸಿಪ್ಲಿನ್‌ ಇನ್‌ಸ್ಪೆಕ್ಷನ್‌ನಲ್ಲಿ ಪ್ರಕಟಿಸಿದ ಲೇಖನದಲ್ಲಿ ವಿವರಿಸಿದ್ದಾರೆ.

ಟಾಪ್ ನ್ಯೂಸ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.