ಕಾಯಿಲೆಗಳ ವಿರುದ್ಧ ಹೋರಾಡುವುದೇ ಈ ದೇಶದ ಪಾಡು


Team Udayavani, Jun 1, 2020, 3:58 PM IST

ಕಾಯಿಲೆಗಳ ವಿರುದ್ಧ ಹೋರಾಡುವುದೇ ಈ ದೇಶದ ಪಾಡು

ಸಾಂದರ್ಭಿಕ ಚಿತ್ರ

ಹೊಂಡುರಸ್‌ : ಹೊಂಡುರಸ್‌ ಮತ್ತು ಅದರಂತಿರುವ ಇನ್ನೂ ಕೆಲವು ಅಭಿವೃದ್ಧಿ ಹೊಂದದ ದೇಶಗಳ ಪಾಲಿಗೆ ಕೋವಿಡ್‌ ವೈರಸ್‌ ವಿರುದ್ಧ ಹೋರಾಟ ಎಂದರೆ ಇನ್ನೊಂದು ಸಾಂಕ್ರಾಮಿಕ ರೋಗದ ವಿರುದ್ಧ ನಡೆಸುತ್ತಿರುವ ಹೋರಾಟವಷ್ಟೆ. ಪ್ರತಿವರ್ಷ ಈ ದೇಶಗಳು ಒಂದಲ್ಲ ಒಂದು ವೈರಸ್‌ ವಿರುದ್ಧ ಹೋರಾಡುತ್ತಲೇ ಇವೆ. ಕೋವಿಡ್‌ ಈ ಸಾಲಿಗೆ ಇನ್ನೊಂದು ಸೇರ್ಪಡೆಯಷ್ಟೆ.

ಕಳೆದ ವರ್ಷ ಹೊಂಡುರಸ್‌ನಲ್ಲಿ ಡೆಂಗ್ಯೂ ಯಾವ ಪರಿ ಹಾವಳಿ ಇಟ್ಟಿತ್ತು ಎಂದರೆ 1 ಲಕ್ಷಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು ಹಾಗೂ 200 ಮಂದಿ ಅಸುನೀಗಿದ್ದರು. ಈ ವರ್ಷ ಸೊಳ್ಳೆ ಯಿಂದ ಹರಡುವ ಇನ್ನೊಂದು ರೋಗದ ಹಾವಳಿ ಶುರುವಾಗಿತ್ತು. ಅದನ್ನು ನಿಯಂತ್ರಣಕ್ಕೆ ತರುತ್ತಿದ್ದಂತೆಯೇ ಕೋವಿಡ್‌ ವಕ್ಕರಿಸಿತು. ಹಣ ಮತ್ತು ಸುಸಜ್ಜಿತ ವೈದ್ಯಕೀಯ ಸಿಬಂದಿಯ ತೀವ್ರ ಕೊರತೆಯಿರುವ ನಮ್ಮ ದೇಶ ಹೀಗೆ ಸರಣಿಯಾಗಿ ಬರುವ ಸಾಂಕ್ರಾಮಿಕ ಕಾಯಿಲೆಗಳನ್ನು ಹೇಗೆ ಎದುರಿಸುವುದು ಎನ್ನುತ್ತಾರೆ ದೇಶದ ಮುಖ್ಯ ಆರೋಗ್ಯಾಧಿಕಾರಿ ಡಾ| ಡಿನೊರ ನೊಲಸ್ಕೊ. ಕೊರೊನ ವೈರಸ್‌ ಕೆಲವು ದೇಶಗಳ ಬೊಕ್ಕಸವನ್ನು ಬರಿದು ಮಾಡಿರುವುದು ಮಾತ್ರವಲ್ಲ, ಆರೋಗ್ಯ ರಕ್ಷಣಾ ವಲಯವನ್ನೂ ಗುಡಿಸಿ ಗುಂಡಾಂತರ ಮಾಡಿದೆ. ಹಿಂದುಳಿದಿರುವ ಕೆಲವು ದೇಶಗಳು ಔಷಧಿ ಮಾತ್ರವಲ್ಲದೆ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗಳಿಗಾಗಿಯೂ ಬೇರೆ ದೇಶಗಳ ಮುಂದೆ ಅಂಗಲಾಚುವ ಪರಿಸ್ಥಿತಿ ಬಂದಿದೆ.

ಇಂಡೋನೇಷ್ಯಾ, ಆಫ್ರಿಕ ಮತ್ತಿತರ ದೇಶಗಳಲ್ಲಿ ಡೆಂಗೆ, ಕಾಮಾಲೆ, ಕಾಲರಾ, ದಡಾರ, ಎಬೋಲ ಮತ್ತಿತರ ಸಾಂಕ್ರಾಮಿಕ ಕಾಯಿಲೆಗಳು ಪ್ರತಿ ವರ್ಷ ವಕ್ಕರಿಸುವ ಮಾರಿಗಳು. ನೈರ್ಮಲ್ಯದ ಕೊರತೆ, ಸುಸಜ್ಜಿತ ಆರೋಗ್ಯ ಸೇವಾ ಕ್ಷೇತ್ರ ಇಲ್ಲದೆ ಇರುವುದು, ಕುಡಿಯುವ ನೀರಿನ ಅಲಭ್ಯತೆ ಇವೇ ಮುಂತಾದ ಕಾರಣಗಳಿಂದ ದಾರಿದ್ರ್ಯದಲ್ಲಿ ಮುಳುಗಿರುವ ಈ ದೇಶಗಳಿಗೆ ಸಾಂಕ್ರಾಮಿಕ ಕಾಯಿಲೆಗಳು ಶಾಪವಾಗಿ ಪರಿಣಮಿಸಿವೆ.

ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಮತ್ತಿತರ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳು ಒದಗಿಸುತ್ತಿರುವ ನೆರವುಗಳು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಈ ದೇಶಗಳ ಬಹುಪಾಲ ಸಂಪತ್ತು ಪೋಲಿಯೊ, ದಡಾರ, ಟೈಫಾಯ್ಡ, ಕಾಮಾಲೆಯಂಥ ರೋಗಗಳ ವಿರುದ್ಧ ಹೋರಾಡುವುದಕ್ಕೆ ಖರ್ಚಾಗುತ್ತಿದೆ. ಈ ವರ್ಷ ಕೋವಿಡ್‌ ನಿಯಂತ್ರಿಸಲು ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕವಂತೂ ತೃತೀಯ ಜಗತ್ತಿನ ಈ ದೇಶಗಳು ಅಕ್ಷರಶಃ ದಿವಾಳಿಯಾಗಿವೆ. ಯಾವ ದೇಶದಲ್ಲೂ ಸಂಪನ್ಮೂಲ ಇಲ್ಲ. ಎಲ್ಲದಕ್ಕೂ ವಿಶ್ವಸಂಸ್ಥೆಯ ಮತ್ತು ವಿಶ್ವದ ಸಶಕ್ತ ದೇಶಗಳಿಗೆ ಮೊರೆ ಹೋಗುವ ಅನಿವಾರ್ಯತೆ. ”

ಕೆಲವು ಕಡೆಗಳಲ್ಲಿ ಪೋಲಿಯೊ ಲಸಿಕೆ ನೀಡಲು ನಿಯೋಜಿಸಲ್ಪಟ್ಟ ಆರೋಗ್ಯ ಕಾರ್ಯಕರ್ತರೇ ಕೋವಿಡ್‌ ವಿರುದ್ಧ ಹೋರಾಡುವ ಯೋಧರಾಗಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಹೊಂಡುರಸ್‌ನದ್ದು. ಕೋವಿಡ್‌ ಈ ದೇಶಗಳನ್ನು ಯಾವ ರೀತಿಯಲ್ಲೆಲ್ಲ ಕಾಡಬಹುದೋ ಅಷ್ಟು ಕಾಡಿಯಾಗಿದೆ. ಇನ್ನು ಜನರಲ್ಲಿ ಹೋರಾಡುವ ಶಕ್ತಿ ಉಳಿದಿಲ್ಲ. ಎಲ್ಲ ದೇಶಗಳು ಮಂಡಿಯೂರಿಯಾಗಿವೆ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕ ಸಮನ್ವಯಕರಾಗಿರುವ ಡಾ| ರಿಚರ್ಡ್‌ ಮಿಹಿಗೊ.

2019ರಲ್ಲಿ ಮಧ್ಯ ಅಮೆರಿಕದಲ್ಲಿ ಸಂಭವಿಸಿದ ಒಟ್ಟು ಡೆಂಗೆ ಸಾವುಗಳಲ್ಲಿ ಹೊಂಡುರಸ್‌ನಲ್ಲೇ ಶೇ. 61 ಮಂದಿ ಅಸುನೀಗಿದ್ದಾರೆ. ಕ್ರಿಮಿನಲ್‌ ಗ್ಯಾಂಗ್‌ಗಳ ಅಡ್ಡೆ ಯಂತಿರುವ ಕೊರ್ಟೆಸ್‌ನಂಥ ಪ್ರಾಂತ್ಯಗಳಲ್ಲಿ ಜನರು ಹುಳುಗಳಂತೆ ವಿಲಿವಿಲಿ ಒದ್ದಾಡಿ ಸತ್ತಿದ್ದಾರೆ. ಲ್ಯಾಟಿನ್‌ ಅಮೆರಿಕ ಮತ್ತು ಕೆರಿಬಿಯನ್‌ಗೆ 2019ರಲ್ಲಿ ಡೆಂಗೆಯೇ ಒಂದು ಶಾಪವಾಗಿತ್ತು ಎಂದು ವಿವರಿ ಸುತ್ತಾರೆ ಡಾ| ಮಿಹಿಗೊ.

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.