ಮೊದಲು ಕೊವಿಶೀಲ್ಡ್‌ ಪಡೆದು, 2ನೇ ಬಾರಿ ಕೊವ್ಯಾಕ್ಸಿನ್‌ ಪಡೆಯಬಹುದೇ? ಇಲ್ಲಿದೆ ಪರಿಹಾರ

ಇದುವರೆಗೆ ವರದಿಯಾದ ಎಲ್ಲ ರೂಪಾಂತರಗಳ ಮೇಲೆ ಇದು ಪರಿಣಾಮಕಾರಿ

Team Udayavani, Apr 29, 2021, 9:02 AM IST

ಮೊದಲು ಕೊವಿಶೀಲ್ಡ್‌ ಪಡೆದು, 2ನೇ ಬಾರಿ ಕೊವ್ಯಾಕ್ಸಿನ್‌ ಪಡೆಯಬಹುದೇ? ಇಲ್ಲಿದೆ ಪರಿಹಾರ

ಎಲ್ಲ ವಯಸ್ಕರು ಮೇ 1ರಿಂದ ದೇಶದಲ್ಲಿ ಲಸಿಕೆ ಪಡೆಯಲಿದ್ದಾರೆ. ಇದರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಇದು ಕೋವಿಡ್‌ನ‌ ಎರಡನೇ ಅಲೆಯನ್ನು ತಡೆಯಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಅಲ್ಲದೆ ದೇಶದಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿಗೂ ಪರಿಹಾರ ಒದಗಿಸಲಿದೆ ಎಂಬ ನಿರೀಕ್ಷೆ ಸರಕಾರದ್ದು. ಆದರೆ ಲಸಿಕೆ ಸ್ವೀಕಾರ ಕುರಿತು ಜನರಲ್ಲಿ ಇನ್ನೂ ಗೊಂದಲವಿದೆ. ಈ ಗೊಂದಲಗನ್ನು ಬಗೆಹರಿಸಲು ತಜ್ಞರು ಈಗಾಗಲೇ ಪ್ರಯತ್ನಿಸಿದ್ದಾರೆ. ಆದರೂ ಸಂಪೂರ್ಣ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆ ಪ್ರಕ್ರಿಯೆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.

ಆಸ್ಪತ್ರೆಯಿಂದ ನೇರ ಲಸಿಕೆ ಪಡೆಯಬಹುದೇ?
ಇಲ್ಲ. ಇದಕ್ಕಾಗಿ ಕೇಂದ್ರ ಸರಕಾರ ನೋಂದಣಿಯನ್ನು ಕಡ್ಡಾಯಗೊಳಿ ಸಿದೆ. ಆರೋಗ್ಯ ಸೇತು ಆ್ಯಪ್ಲಿಕೇಶನ್‌ ಅಥವಾ ಕೋವಿನ್‌ ಪೋರ್ಟಲ್‌ನಲ್ಲಿ (<https://selfregistration.cowin.gov.in/) ನೋಂದಾಯಿಸಿ ಕೊಂಡವರು ಮಾತ್ರ ಲಸಿಕೆ ಪಡೆಯಬಹು ದಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿಯೂ ಲಸಿಕೆ ಪಡೆಯ ಬಹುದು. ಕೆಲವು ಖಾಸಗಿ ಆಸ್ಪತ್ರೆ ಗಳಲ್ಲಿಯೂ ಲಸಿಕೆ ಪಡೆಯ ಬಹುದು. ಆದರೆ ನೋಂದಣಿ ಅಗತ್ಯ.

ನೋಂದಣಿಗೆ ಬೇಕಾಗುವ ದಾಖಲೆ
ನಿಮ್ಮ ಫೋಟೋ ಇರುವ ಕೆಳಗೆ ನೀಡಲಾದ ಯಾವುದೇ ಗುರುತಿನ ಪತ್ರ(ಐಡಿ) ದೊಂದಿಗೆ ನೋಂದಣಿ ಮಾಡಿ ಕೊಳ್ಳಬಹುದು. -ಆಧಾರ್‌ ಕಾರ್ಡ್‌/ವೋಟರ್‌ ಐಡಿ/ಚಾಲನಾ ಪರವಾನಿಗೆ/ಕಾರ್ಮಿಕ ಸಚಿವಾಲಯದ ಆರೋಗ್ಯ ವಿಮೆ ಸ್ಮಾರ್ಟ್‌ ಕಾರ್ಡ್‌/ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಉದ್ಯೋಗ ಕಾರ್ಡ್‌/ಪ್ಯಾನ್‌ ಕಾರ್ಡ್‌/ಬ್ಯಾಂಕ್‌/ಅಂಚೆ ಕಚೇರಿಯ ಪಾಸ್‌ಬುಕ್‌/ ಪಾಸ್‌ಪೋರ್ಟ್‌/ಪಿಂಚಣಿ ದಾಖಲೆ/ಕೇಂದ್ರ / ರಾಜ್ಯ ಸರಕಾರ / ಸಾರ್ವಜನಿಕ ಲಿಮಿಟೆಡ್‌ ಕಂಪೆನಿ ಗಳು ಉದ್ಯೋಗಿಗಳಿಗೆ ನೀಡುವ ಸೇವಾ ಗುರುತಿನ ಚೀಟಿಗಳು.

ಲಸಿಕೆ ಉಚಿತ ಎಲ್ಲೆಲ್ಲಿ ?
ಕರ್ನಾಟಕ, ಮಧ್ಯಪ್ರದೇಶ, ಹರಿಯಾಣ, ದಿಲ್ಲಿ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಸಹಿತ 24 ರಾಜ್ಯಗಳು 18-44 ವರ್ಷ ವಯಸ್ಸಿನವರಿಗೆ ಉಚಿತ ಲಸಿಕೆ ನೀಡುವುದಾಗಿ ಹೇಳಿವೆ. ಆದರೆ ಸ್ಥಳೀಯರಿಗೆ ಮಾತ್ರ ಅನ್ವಯವೋ ಅಥವಾ ಹೊರ ರಾಜ್ಯಗಳ ನಿವಾಸಿಗಳಾಗಿದ್ದರೂ ಈ ಸೌಲಭ್ಯ ಆನ್ವಯವಾದೀತೇ ಎಂಬುದು ಸ್ಪಷ್ಟವಾಗಬೇಕು. ಇದಕ್ಕೆ ಸಂಬಂಧಿಸಿದ ಅಧಿಸೂಚನೆಗಳು ಪ್ರಕಟವಾಗಬೇಕಿದೆ.

ಬಳಿಕ ಏನು ಮಾಡಬೇಕು?
ನೋಂದಣಿ ಸಂದರ್ಭದಲ್ಲೇ ನಿಮ್ಮ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಲಸಿಕೆ ಪಡೆಯಲಿಚ್ಛಿಸುವ ಆಸ್ಪತ್ರೆ, ಲಭ್ಯವಿರುವ ದಿನಾಂಕ ಮತ್ತು ಲಸಿಕೆ ಪಡೆಯುವ ಸಮಯವನ್ನು ಆಯ್ದುಕೊಳ್ಳಬೇಕು. ಬಳಿಕ ಅಪಾಯಿಂಟೆ¾ಂಟ್‌ ಕಾಯ್ದಿರಿಸುವ ಸಂದೇಶ ನಿಮ್ಮ ಮೊಬೈಲ್‌ ಗೆ ಬರುತ್ತದೆ. ಆ ಪ್ರಕಾರ ನಿಗದಿತ ಸಮಯಕ್ಕೆ ಲಸಿಕೆ ಪಡೆಯಲು ಹೋಗಬೇಕು. ನೋಂದಣಿಗೆ ಬಳಸಿದ ಐಡಿಯನ್ನೇ ಲಸಿಕೆ ಪಡೆಯಲು ಕೊಂಡೊಯ್ಯಬೇಕು.

ಮಕ್ಕಳಿಗೂ ಲಸಿಕೆ ನೀಡಬಹುದಾ?
ಇಲ್ಲ. ಈ ಸಮಯದಲ್ಲಿ ಮಕ್ಕಳ ಮೇಲೆ ಯಾವುದೇ ಲಸಿಕೆ ಪ್ರಯೋಗಗಳು ನಡೆದಿಲ್ಲ. ಹಾಗಾಗಿ ಅವರಿಗೆ ಲಸಿಕೆ ನೀಡಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಲಭ್ಯವಾಗಬಹುದು.

ಮುಟ್ಟಾದರೂ ಲಸಿಕೆ ಪಡೆಯಬಹುದೇ?
ಹೌದು. ಲಸಿಕೆ ತೆಗೆದುಕೊಳ್ಳುವುದಕ್ಕೂ, ಮಹಿಳೆಯರ ಪೀರಿಯಡ್ಸ್‌ಗೂ ಸಂಬಂಧವಿಲ್ಲ. ಹೀಗಾಗಿ ಮಹಿಳೆಯರು ಯಾವುದೇ ಹಿಂಜರಿಕೆ ಇಲ್ಲದೇ ಲಸಿಕೆ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಹೊರರಾಜ್ಯಗಳಲ್ಲಿ ಪಡೆಯಬಹುದೇ?
ಕೇಂದ್ರ ಸರಕಾರದ ವ್ಯವಸ್ಥೆಯ ಪ್ರಕಾರ, ನೀವು 45+ ಆಗಿದ್ದರೆ ದೇಶದ ಯಾವುದೇ ಲಸಿಕೆ ಕೇಂದ್ರದಲ್ಲಿ ಲಸಿಕೆ ಪಡೆಯಬಹುದು. ಆದರೆ 18-44 ವರ್ಷದೊಳಗಿದ್ದ ವರಿಗೆ ಇನ್ನೂ ಖಚಿತವಾಗಿಲ್ಲ. ಈ ವಯಸ್ಸಿನವರಿಗೆ ಲಸಿಕೆ ನೀಡುವುದು ರಾಜ್ಯ ಸರಕಾರಗಳ ಜವಾಬ್ದಾರಿ. ಹಾಗಾಗಿ ಈ ಬಗ್ಗೆ ಪ್ರತ್ಯೇಕ ನೀತಿ ರೂಪಿಸಲಾಗುತ್ತಿದೆ.

ಲಸಿಕೆ ಯಾರು ಪಡೆಯಬಾರದು?
– ಮೊದಲ ಡೋಸ್‌ ಪಡೆದು ತೀವ್ರ ಅಲರ್ಜಿಯಾದವರು
– ಗರ್ಭಿಣಿಯಾಗಿದ್ದರೆ ಅಥವಾ ಶಿಶುಗಳಿಗೆ ಎದೆಹಾಲು ಉಣಿಸುತ್ತಿದ್ದರೆ
– ಕೊರೊನಾ ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೆ
– ನೀವು ಬೇರೆ ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ವೈದ್ಯರನ್ನು ಸಲಹೆ ಪಡೆದು ನಿರ್ಧರಿಸಿ

ಯಾವ ಲಸಿಕೆ ಉತ್ತಮ?
ಸದ್ಯ ಬಳಸುತ್ತಿರುವ ಎಲ್ಲ ಲಸಿಕೆಗಳ ಉದ್ದೇಶ ಕೊರೊನಾದಿಂದ ರಕ್ಷಿಸುವುದು. ಆದರೆ ಇವುಗಳು ವಿಭಿನ್ನ ಪರಿಣಾಮಕತ್ವವನ್ನು ಹೊಂದಿವೆ. ಶೇ. 66ರಿಂದ 95ರಷ್ಟು ಪರಿಣಾಮಕಾರಿಯಾಗಿರಲಿವೆ. ಈ ಲಸಿಕೆಗಳನ್ನು ಪಡೆದ ಬಳಿಕ ಸೋಂಕು ಉಲ½ಣಗೊಂಡು ಗಂಭೀರ ಸ್ಥಿತಿ ತಲುಪುವುದನ್ನು ತಡೆಯಬಲ್ಲದು. ಈ ಎಲ್ಲ ಲಸಿಕೆಗಳು ತೀವ್ರವಾದ ರೋಗಲಕ್ಷಣಗಳಿಂದ ರಕ್ಷಿಸಲು ಪರಿಣಾಮಕಾರಿಯಾಗಿವೆ. ಈ ಕಾರಣದಿಂದಾಗಿ ಎಲ್ಲರೂ ಲಸಿಕೆ ಪಡೆಯಬೇಕು.

ಭಾರತದಲ್ಲಿ ಯಾವ ಲಸಿಕೆ ನೀಡಲಾಗುತ್ತಿದೆ?
ಕೊವಿಶೀಲ್ಡ್ ಅನ್ನು ಪ್ರಸ್ತುತ ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದಲ್ಲಿ ಹಾಗೂ ಕೊವ್ಯಾಕ್ಸಿನ್‌ ಅನ್ನು ಹೈದರಾಬಾದ್‌ನ ಭಾರತ್‌ ಬಯೋಟೆಕ್‌ನಲ್ಲಿ ತಯಾರಿಸಲಾಗುತ್ತಿದೆ. ಜತೆಗೆ ಕೇಂದ್ರ ಸರಕಾರವು ರಷ್ಯಾದ ಲಸಿಕೆ “ಸ್ಪುಟ್ನಿಕ್‌ ವಿ’ ಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಲಸಿಕೆ ಮೇ ತಿಂಗಳಲ್ಲಿ ಲಭ್ಯವಾಗಲಿದೆ. ಇದನ್ನು ಭಾರತದ ಡಾ| ರೆಡ್ಡಿ ಅವರ ಪ್ರಯೋಗಾಲಯ ಮತ್ತು ಇತರ ಕೆಲವು ಔಷಧೀಯ ಕಂಪೆನಿಗಳು ಅಭಿವೃದ್ಧಿಪಡಿಸುತ್ತಿವೆ. ರಷ್ಯಾದ ಲಸಿಕೆಗಾಗಿ ಯಾವುದೇ ರಾಜ್ಯ ಸರಕಾರದಿಂದ ಒಪ್ಪಂದವಾಗಿಲ್ಲ. ಇದಲ್ಲದೇ ಕೆಲವು ಷರತ್ತುಗಳೊಂದಿಗೆ ಯುಎಸ್‌, ಜಪಾನ್‌, ಯುಕೆ, ಯುರೋಪ್‌ (ಇಯು)ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳಿಂದ ಅನುಮೋದನೆ ಪಡೆದ ಲಸಿಕೆಗೆ ತುರ್ತು ಅನುಮೋದನೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಫೈಜರ್‌, ಮಾಡರ್ನಾ, ಜಾನ್ಸನ್‌ ಮತ್ತು ಜಾನ್ಸನ್‌ ನಂತಹ ಕಂಪೆನಿಗಳ ಲಸಿಕೆಯೂ ಲಭ್ಯವಾಗುವಂತೆ ಕ್ರಮ ಕೈಗೊಳ್ಳುತ್ತಿದೆ. ಈ ಲಸಿಕೆಗಳು ಮೇ-ಜೂನ್‌ನಲ್ಲಿ ನಮ್ಮಲ್ಲೂ ಲಭ್ಯವಾಗಬಹುದು.

ಹೊಸ ರೂಪಾಂತರದ ಮೇಲೆ ಲಸಿಕೆ ಪರಿಣಾಮಕಾರಿಯೇ?
ಹೌದು. ಇದುವರೆಗೆ ವರದಿಯಾದ ಎಲ್ಲ ರೂಪಾಂತರಗಳ ಮೇಲೆ ಇದು ಪರಿಣಾಮಕಾರಿ ಯಾಗಿದ್ದು, ತೀವ್ರ ರೋಗಲಕ್ಷಣಗಳಿಂದ ಎರಡೂ ಲಸಿಕೆಗಳು ರಕ್ಷಿಸುತ್ತವೆ ಎಂದಿದ್ದಾರೆ ಪರಿಣಿತರು. ಯಾವುದೇ ಹಿಂಜರಿಕೆ ಬೇಡ. ಈ ಲಸಿಕೆಗಳು ನಿಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಕೊರೊನಾ ಸೋಂಕು ಅಷ್ಟು ಬೇಗ ತಗಲದಂತೆ ತಡೆಯುತ್ತದೆಯೇ ವಿನಾ ಇವು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಔಷಧವಲ್ಲ. ಇದು ಎಲ್ಲರ ಗಮನದಲ್ಲಿರಲಿ. ಲಸಿಕೆ ಪಡೆದ ಬಳಿಕ ಈ ಹಿಂದಿನಂತೆಯೇ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.